ನನ್ನ ಹೆಸರು ಅಶ್ವಿನ್ ಶೆಣೈ.ನನ್ನ ಊರು ಉಡುಪಿ ಜಿಲ್ಲೆಯ ಸಾಲಿಗ್ರಾಮ.ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಾಸ್ತಾನದಲ್ಲಿ ಇರುವ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಡಿದ್ದೆನೆ.ಪದವಿ ಪೂರ್ವ ಶಿಕ್ಷಣವನ್ನು ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಮಾಡಿದ್ದೆನೆ. ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಸಿಎ ಮಾಡುತ್ತಿದ್ದೆನೆ.

 ಸಾಲಿಗ್ರಾಮದಲ್ಲಿ ಗುರು ನರಸಿಂಹ ದೇವಸ್ಥಾನವು ಪ್ರಸಿದ್ಧವಾಗಿದೆ.೧೮ ಪೇಟೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಇಷ್ಟ ದೇವರಾದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವು ಚೇಂಪಿಯಲ್ಲಿದೆ.ನಮ್ಮ ಊರು ಒಂದು ಸಣ್ಣ ಊರು. ಊರಿನಲ್ಲಿ ಅನೇಕ ದೇವಸ್ಥಾನವಿದೆ. ಹೆಚ್ಚಿನ ಜನರು ಬೆಸಾಯದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವು ಜನರು ತಮ್ಮ ಸ್ವಂತ ವ್ಯವಹಾರದಲ್ಲಿ ತೊಡಗಿದ್ದಾರೆ.