ಜೀವನ ಚಿತ್ರಣ ಬದಲಾಯಿಸಿ

ಚಾಣಕ್ಯ ಎಂದೇ ಹೆಸರು ವಾಸಿಯಾಗಿರುವ ಕೌಟಿಲ್ಯ ಪ್ರಾಚೀನ ಭಾರತದ ರಾಜಕೀಯ ಚಿಂತಕರಲ್ಲಿ ಪ್ರಮುಖರು. ಭಾರತದ ಒಬ್ಬ ಶ್ರೇಷ್ಠ ರಾಜನೀತಿಜ್ಞ. ಈತನು ಗ್ರೀಕ್ ತತ್ವಜ್ಞಾನಿ ಹಾಗೂ ರಾಜ್ಯಶಾಸ್ತ್ರದ ಪಿತಾ ಅರಿಸ್ಟಾಟಲ್ ಮತ್ತು ಇಟಲಿಯ ರಾಜನೀತಿಜ್ಞ ಮ್ಯಾಕಿಯವೆಲ್ಲಿ ಇವರುಗಳಿಗೆ ಸಮನಾದ ರಾಜನೀತಿ ನಿಪುಣನಅಗಿದ್ದ. ಇವರು ಸಾಮಾನ್ಯವಾಗಿ (ಕ್ರಿ. ಪೂ ೩೫೦)ರಲ್ಲಿ ತಕ್ಷಿಲದಲ್ಲಿ ಜನಿಸಿದರು. ಚಣಕನ ಮಗನಾದ ಕಾರಣ ಅವರಿದೆ ಚಾಣಕ್ಯ ಎಂಬ ಹೆಸರು ಬಂತು.ಇತ ಚಾಣಕ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಸಿದ್ಧ. ಇವರ ಆರಂಭಿಕ ಶಿಕ್ಷಣವನ್ನು ವಿಶ್ವ ವಿಖ್ಯಾತ ನಳಂದ ಮಹಾವಿದ್ಯಾಲಯದಲ್ಲಿ ಪಡೆದರು. ಅವರ ಚಂತನೆಗಳು ವಾಸ್ತವಿಕತೆಗೆ ಅತಿ ಸನಿಹವಾಗುದ್ದು ಅನುಭವ ಮತ್ತು ಅವಲೋಕನವನ್ನು ಆಧಾರಿಸಿತ್ತು. ಆದುದರಿಂದಲೇ "ರಾಜಕೀಯ ವಾಸ್ತವವಾದಿ" ಎಂದು ಕರೆಯುತ್ತಾರೆ. ಅವರ ವಿಷಯ ವಿಶ್ಲೇಷಣೆಯಲ್ಲಿ ಸಿದ್ಧಾಂತ ಮತ್ತು ಸಾಧ್ಯತೆಗೆ ಸಮಾನ ಪ್ರಾಶಸ್ತ್ಯ ನೀಡಿದ್ದರಿಂದ ಅವರನ್ನು "ರಾಜ ರುಷಿ" ಎಂದು ಕರೆಯುತ್ತಾರೆ. ತಮ್ಮ ವಿದ್ಯಾಬ್ಯಾಸದ ಸಮಯದಲ್ಲಿ ಚಂದ್ರಗುಪ್ತ ಮೌರ್ಯನ ಪರಿಚಯವಾಗಿ ಮೆಚ್ಚಿ ಅವನನ್ನು ಮಗಧ ಸಾಮ್ರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿದರು ಚಾಣಕ್ಯ ಪಾಟಲಿಪುತ್ರದ ರಾಜ ಧನನಂದನ ಆಸ್ಥಾನಕ್ಕೆ ಭೇಟಿ ನೀಡಿ ರಾಜ್ತಕ್ಕೆ ಸೇವೆ ಮಾಡಲು ಅವಕಾಶ ಯಾಚಿಸಿದರು. ಆದರೆ ರಾಜನು ಕೌಟಿಲ್ಯನನ್ನು ಕುರೂಪಿ ಎಂದು ಹಿಯಾಳಿಸಿ ಸುಂದರ ಅಸ್ಥಾನಕ್ಕೆ ಸರಿಹೊಂದುವುದಿಲ್ಲವೆಂದು ಅವಮಾನಿಸಿ ಹೊರಗಟ್ಟಿದನು. ಕುಡಿತದ ಅಮಲಿನಲ್ಲಿ ನಂದರಾಜರಿಂದ ಅವಮಾನಕೊಳ್ಳಗಾಗಿದ್ದ ತಮ್ಮ ಸೇಡು ತೀರಿಸಿಕೊಳ್ಳಲು ಚಂದ್ರಗುಪ್ತನಲ್ಲಿ ಸಮರ್ಥ ವ್ಯಕ್ತಿಯನ್ನು ಕೌಟಿಲ್ಯ ಗುರುತಿಸಿದರು. ಅವಮಾನಕ್ಕೆ ಗುರಿಯಾಗಿದ್ದ ಚಾಣಕ್ಯ, ತಾನು ನಂದರ ನಿರ್ಮೂಲ ಮಾಡುವವರೆಗೂ ಕುದಲಿನ ಜಡೆಯನ್ನು ಕಟ್ಟುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದರು. ಚಮದ್ರಗುಪ್ತನನ್ನು ಮಗಧ ರಾಜ್ಯದ ಸಾಮ್ರಾಜ್ಯಾದಧಿಪತಿಯನ್ನಾಗಿ ಸ್ಥಾಪಿಸುವ ಮೂಲಕ ಚಾಣಕ್ಯ ತಮ್ಮ ಪ್ರತಿಜ್ಞೆ ನೇರವೇರಿಸಿದ್ದರು. ಆ ಪ್ರತಿಜ್ಞೆಯು 'ಚಾಣಕ್ಯ ಶಪಥ' ಎಂದೇ ಪ್ರಸಿದ್ಥಿ. ಕೌಟಿಲ್ಯ ತಮ್ಮ ಶೇಷ ಜೀವಿತವನ್ನು ಚಂದ್ರಗುಪ್ತನಿಗೆ ಆಪ್ತ ಸಲಹಾಗಾ, ರಣವ್ಯೂಹ ರಚನಾಕಾರರಅಗಿ ಕಳೆದರು. ಚಾಣಕ್ಯನ ರಾಜತಾಂತ್ರಿಕ ನೈಪುಣ್ಯ ಹಾಗು ರಾಜಕೀಯ ಪಾಂಡಿತ್ಯವನ್ನು ಮೆಚ್ಚಿ ಕೌಟಿಲ್ಯರನ್ನು "ಪೂರ್ವದ ಮೆಕೆವೆಲ್ಲಿ" ಎಂದು ಕರೆಯುತ್ತಾರೆ. ಬದಲಾಗಿ, ಮೆಕೆವೆಲ್ಲಿಯನ್ನು "ಪಶ್ಚಿಮದ ಕೌಟಿಲ್ಯ" ಎನ್ನಬಹುದು.

ಕೃತಿಗಳು ಬದಲಾಯಿಸಿ

  • ಅರ್ಥಶಾಸ್ತ್ರ