ನಮಸ್ಕಾರಗಳು.

ನನ್ನ ಹೆಸರು ಮನಸ್ವಿ.ಎನ್. ನಾನು ಪ್ರಸ್ತುತವಾಗಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ. ನಾನು ಮೇ ಹನ್ನೊ೦ದು , ಎರಡು ಸಾವಿರನೇಯ ವರ್ಷದಲ್ಲಿ ಜನಿಸಿದೆ. ನಾನು ಬೆ‍ಂಗಳೂರಿನಲ್ಲಿ ಜನಿಸಿದೆ. ನಾನು ನಮ್ಮ ತಂದೆ-ತಾಯಿಗಳಿಗೆ ಒಬ್ಬಳೇ ಮಗಳು. ನನ್ನ ತಂದೆಯ ಹೆಸರು ಎಂ.ಬಿ.ನಾಗರಾಜು ಮತ್ತು ನನ್ನ ತಾಯಿಯ ಹೆಸರು ಆರ್.ಮಂಜುಳ. ನನ್ನ ತಂದೆಯವರ ಊರು ಕ್ರಷ್ಣಗಿರಿ ಜಿಲ್ಲೆಯ ಮನವಾರನಪಲ್ಲಿ ಎಂಬ ಗ್ರಾಮ. ನನಗೆ ರಜೆಗಳಲ್ಲಿ ಅಲ್ಲಿಗೆ ಹೋಗುವುದು ಎಂದರೆ ಬಹಳ ಇಷ್ಟ. ನನಗೆ ಚಿಕ್ಕಂದಿಂದಲೂ ಹಳ್ಲಿಯ ವಾತಾವರಣ ಎಂದರೆ ತುಂಬಾ ಮೆಚ್ಚು. ಅಲ್ಲಿ ನಮ್ಮ ದೊಡ್ಡಪ್ಪನವರ ಮನೆಯಿದೆ. ರಜೆಗಳು ಬಂದರೆ ನಮ್ಮ ಬಂದುಗಳು ಎಲ್ಲರೂ ಮನೆ ತುಂಬಾ ಇರುತ್ತಾರೆ. ಮತ್ತು ನನ್ನ ತಾಯಿಯವರ ಊರು ಗುಂಜೂರು. ಅಲ್ಲಿಗೂ ನಾನು ನನ್ನ ರಜೆಗಳಲ್ಲಿ ಹೋಗುತ್ತಿದೆ. ಅಲ್ಲಿ ನನ್ನ ಮಾವನ ಮನೆಯದೆ. ನನ್ನ ತಂದೆ ಈಸನ್ ರೆಯರೋಲ್ ಎಂಬ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗು ನನ್ನ ತಾಯಿ ಗ್ರಹಿಣಿಯಾಗಿದ್ದಾರೆ.ನನಗೆ ನನ್ನ ಅಣ್ಣ ಎಂದರೆ ಉಸಿರು. ಅವನು ನನಗಾಗಿ ಏನನ್ನು ಬೇಕಾದರು ಮಾಡುತ್ತಾನೆ ಎಂಬ ನಂಬಕೆ.

ನಾನು ಹೋಸೂರಿನಲ್ಲಿ ವಾಸವಿದ್ದೇನೆ. ನಾನು ಹೋಸುರಿನಲ್ಲಿರುವ ಮರ್ಹಷಿ ವಿದ್ಯಾ ಮಂದಿರ ಎಂಬ ಶಾಲೆಯಲ್ಲಿ ಎಲ್.ಕೆ.ಜಿಯಿಂದ ಹನ್ನೆರಡೆನೆಯ ತರಗತಿಯವರೆಗೆ ಓದಿದೆ. ನಾನು ಹತ್ತನೆ ತರಗತಿಯಲ್ಲಿ ಟೆಂನ್ ಸಿ.ಜಿ.ಪಿ.ಎ ಯನ್ನು ಪಡೆದೆ. ಮತ್ತು ನನ್ನ ಹನ್ನೆರಡೆನೆಯ ತರಗತಿಯಲ್ಲಿ ನಾನೂರ ನಳವತ್ತು ನಾಳಕ್ಕು ಅಂಕಗಳನ್ನು ಐನೂರು ಅಂಕಗಳಿಗೆ ಪಡೆದೆ. ನನಗೆ ಓದುವುದೆಂದರೆ ಬಹಳ ಇಷ್ಟ. ನಾನು ಶಾಲೆಯಲ್ಲಿ ಓದುತ್ತಿರುವಾಗ ಸಾಕಷ್ಟು ಸಂಗೀತ, ಚಿತ್ರ ಬಡಿಸುವ ಮೊದಲಾದ ಸ್ಪರ್ದೆಗಳಲ್ಲಿ ಭಾಹವಹಿಸುತ್ತಿದ್ದೆ. ನಾನು ನನ್ನ ಶಾಲೆಯ ದಿನಗಳಲ್ಲಿ ಬಹಳ ಖುಷಿಯಾಗದ್ದೆ. ನನಗೆ ಸಾಕಷ್ಟು ಒಳ್ಳೆಯ ಗೆಳಯರು ದೊರೆತರು. ನಮ್ಮ ಶಿಕ್ಷಕರು ನಮಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಅವರು ನೀಡಿದ ಮಾರ್ಗದರ್ಶನದಿಂದಲೇ ನಾನು ಈಗ ಈ ಸಮಾಜ್ರ್ರದಲ್ಲಿ ಯಾವದು ಕೆಟ್ಟದ್ದು, ಒಳ್ಳೆಯದು ಎಂಬ ಅರಿವಿದೆ. ನನಗೆ ನನ್ನ ಶಾಲೆಯೆಂದರೆ ಬಹಳ ಇಷ್ಟ. ನಾನು ಎಂದಿಗೂ ನನ್ನ ಶಾಲೆಯ ದಿನಗಳನ್ನು ಎಂದಿಗೂ ಮರೆಯುವುದಿಲ್ಲ.ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ. ನಾನು ಕಾಲೆಜಿಗೆ ಬಂದ ಮೇಲೆ ಸಾಕಷ್ಟು ವಿಶಯ ವಿಚಾರಗಳನ್ನು ಗಳಿಸಿದೆ. ನನಗೆ ಒಳ್ಳೆಯ ಸ್ನೇಹಿತರು ದೊರೆತರು. ಇಲ್ಲಿ ಕಲಿಯಲು ಸಾಕಷ್ಟು ವಿಶಯಗಳು ಇವೆ. ನಾನು ಇದಾದ ನಂತರ ಯು.ಪಿ.ಎಸ್.ಸಿ ಪರೀಕ್ಷೆಗೆ ತಯಾರಾಗಳಿದ್ದೇನೆ. ನನಗೆ ಚೆನ್ನಾಗಿ ಓದಿ ಒಂದು ಒಳ್ಳೆಯ ಹಾಗು ಗೌರವಾನ್ವಿತ ಪದವಿ ಪಡೆಯಬೇಕೆಂಬ ಆಸೆ.

ನನಗೆ ಕಥೆಗಳು ‍ಹಾಗು ಕಾದಂಬರಿಗಳನ್ನು ಓದಲು ತುಂಬಾ ಆಸಕ್ತಿ. ನನಗೆ ಇಷ್ಟವಾದ ಲೇಖಕರು ಶ್ರೀಮತಿ.ಸುಧಾ ಮೂರ್ತಿ ಹಾಗು ಆರ್.ಕೆ.ನಾರಾಯನ್. ಮತ್ತೆ ನನಗೆ ಚಿತ್ರಗಳನ್ನು ಬಿಡಿಸಳು ಬಹಳ ಇಷ್ಟ. ನನಗೆ ಅಡುಗೆ ಮಾಡಲು ತುಂಬಾ ಆಸಕ್ತಿ.ನನಗೆ ನನ್ನ ಗೆಳೆಯರೊಡನೆ ಸಮಯ ಕಲೆಯಲು ಬಹಳ ಪ್ರಿಯ. ನಾನು ಅವರೊಡನೆ ಆಗಾಗ ಹೊರಗಡೆ ಹೋಗುತ್ತಿರುತ್ತೇನೆ. ಹಾಗು ನನಗೆ ಹಾಡುಗಳನ್ನು ಕೇಳಲು ಇಷ್ಟ. ನನಗೆ ಗಣಿತ ಹಾಗು ರಾಜಕೀಯ ಶಾಸ್ರ್ತ ಎಂದರೆ ಆಸಕ್ತಿ. ನನಗೆ ಕಪ್ಪು, ಹಸಿರು, ಹಳದಿ ಬಣ್ಣಗಳೆಂದರೆ ಇಷ್ಟ. ನಾನು ಒಳ್ಳೆಯ ಸ್ಥಾನಕ್ಕೆ ಹೋದ ಮೇಲೆ ಬಡ ಹಾಗು ಅನಾಥ ಮಕ್ಕಳ ಶಿಕ್ಷಣಕ್ಕೆ ದಾನ ಮಾಡಲು ನಿರ್ಧಾರ ಮಾಡಿದ್ದೇನೆ. ಮತ್ತು ನನಗೆ ಬಸವಣ್ಣ , ಅಕ್ಕಮಹಾದೇವಿಯವರ ವಚನಗಳು ಎಂದರೆ ಇಷ್ಟ. ಅದರಲ್ಲಿ ಅವರು ನೀಡಿರುವ ನೀತಿ ಪಾಠಗಳು ಇಂದಿಗೂ ಚಿರಸ್ಮರಣೀಯ. ನಾವು ನಮ್ಮ ಜೀವನದಲ್ಲೂ ಅವುಗಳನ್ನು ಅಳವಡಿಸಿಕೊಳ್ಳಬೇಕು. ನಾನು ಯಾವುದೇ ಸ್ಥಾನಕ್ಕೆ ಹೋದರು ಸತ್ಯ ಹಾಗು ಅಹಿಂಸ ಮಾರ್ಗದಲ್ಲಿಯೇ ನಡೆಯಬೇಕೆಂದು ನನ್ನ ತಂದೆ- ತಾಯಿ ಹೇಳಿಕೊಟ್ಟಿದ್ದಾರೆ. ನನಗೆ ದೇವರೆಂದರೆ ಬಹಳ ನಂಬಿಕೆ. ನಮ್ಮ ಎಲ್ಲರಿಗಿಂತ ಮಿಗಿಲಾದ ಶಕ್ತಿ ಇದೆ. ಅದುವೇ ದೇವರು. ಮತ್ತು ನನಗೆ ಕನ್ನಡ,ತೆಲುಗು,ತಮಿಳ್,ಹಿಂದಿ ಹಾಗು ಇಂಗ್ಲಿಷ್ ಸೇರಿ ಐದು ಭಾಷೆಗಳು ಬರುತ್ತದೆ.ಇದರಲ್ಲಿ ನನಗೆ ನಾಳ್ಕು ಭಾಷೆಗಳು ಬರೆಯಲು ಬರುವುದು. ಕೊನೆಯಾಗಿ ನಾವು ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೆ ನಡೆಯುತ್ತದೆ.