ಮೂಲತಹ ಕೊಪ್ಪಳ ಜಿಲ್ಲೆ ಯಲಬುರ್ಗಾತಾಲ್ಲೂಕಿನ ರ್ಯಾವಣಕಿ ಗ್ರಾಮದ ಷಣ್ಮುಖಯ್ಯ ಮತ್ತು ಸರ್ವಮಂಗಳಾ ಅವರ ಉದರದಲ್ಲಿ ೧೯೭೧ ರಲ್ಲಿ ಜನನ ಜನಿಸಿದ ವಿಜಯ ಅಮೃತರಾಜ್  ಸದ್ಯ   ಕೊಪ್ಪಳ ನಿವಾಸಿ, ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕೊಪ್ಪಳದಲ್ಲಿ , ನಂತರ ಕಾನೂನು ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಈ ನಡುವೆ ಎರಡು ವರ್ಷ ಮಂಡಲಗೇರಿಯಲ್ಲಿ ಐ.ಟಿ.ಐ. ಫಿಟ್ಟರ್ ಹಾಗೂ ಜೆ.ಓ.ಡಿ.ಸಿ. ಎಲೆಕ್ಟ್ರಿಕಲ್ ಕೊಪ್ಪಳದಲ್ಲಿ  , ಮತ್ತು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಅಭ್ಯಸಿಸಿದರು ವೃತ್ತಿಯಿಂದ ನ್ಯಾಯವಾದಿ ಪ್ರವೃತ್ತಿಯಿಂದ ಸಾಹಿತ್ಯ ಕೃಷಿ , ವಿದ್ಯಾರ್ಥಿದೆಸೆಯಿಂದಲೇ ಚಳುವಳಿಯಲ್ಲಿ ಭಾಗವಹಿಸಿ ಕಾಲೇಜು ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸೇವೆ ,  ನಂತರದ ವರ್ಷಗಳಲ್ಲಿ ಸಾಹಿತ್ಯ ಕೃಷಿ ಮತ್ತು ವಕಾಲತ್ತಿಗೆ ಬದುಕನ್ನು ಸೀಮಿತ.

ಸಂಘಟನೆ:- ರಾಜ್ಯ ವಕೀಲರ ಸಾಹಿತ್ಯ ಪರಿಷತ್. ಸಂಸ್ಥಾಪಕ ರಾಜ್ಯಾಧ್ಯಕ್ಷರು.

ಕೃತಿಗಳು

ಹುರಿಗಾಳು , ಒಡೆದ ಹೃದಯಕ್ಕೆ ಔಷಧಿ, ಕವನ ಸಂಕಲನ, ಅವ್ವಳ ನಗು , ಎನ್ನುವ ಭಾವಗೀತೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಲಾವಣಿ ಸಿ.ಡಿಗಳು . ಹಾಗು ಅಪ್ಪ , ಅವ್ವ , ಚಿಟಿಕೆ, ನಿಮಗಾಗಿ ಡಿಜಿಟಲ್ ಕವನ ಸಂಕಲನಗಳು, ಮತ್ತು ಶಾಂತಿಯೆಡೆಗೆ ಕಿರುಚಿತ್ರ , ಮೂರು ಬಿಟ್ಟವರು ಸಿನಿಮಾದಲ್ಲಿ ಅಭಿನಯ. 

ಪ್ರಮುಖ ಕವಿಗೋಷ್ಠಿಯಲ್ಲಿ ಕವನ ವಾಚನ.