ನಾಗವರ್ಮ

ಬದಲಾಯಿಸಿ

ಬಾಣಕವಿಯ ಸಂಸ್ಕೃತದ ಗದ್ಯಕೃತಿಯಾದ ಕಾದಂಬರಿಯನ್ನು ಕನ್ನಡಕ್ಕೆ ಚಂಪೂ ಸ್ವರೂಪದಲ್ಲಿ ಕರ್ಣಾಟಕ ಕಾದಂಬರಿ ಎಂಬ ಹೆಸರಿನಲ್ಲಿ ತಂದವನು ಮೆಾದಲನೆಯ ನಾಗವರ್ಮನೆಂಬ ಕವಿಯು. ಕವಿಚರಿತೆಗಾರರ ಅಭಿಪ್ರಾಯದಂತೆ ಈತನ ಕಾಲ ಸು. 990.ಛಂಧೋಂಭುಧಿ ಎಂಬ ಹೆಸರಿನ ಒಂದು ಛಂಧೋಗ್ರಂಥದ ಕತೃವೂ ಈತನೇ ಎಂಬುದು ಕವಿತಚರಿತೆಗಾರರ ಅಭಿಪ್ರಾಯವಾಗಿದೆ.ಸಂಸ್ಕೃತದ ಗದ್ಯಕೃತಿಯನ್ನು ಚಂಪೂಕೃತಿಯಾಗಿ ಪರಿವರ್ತಿಸಿದ್ದು ಪುರಾಣೇತಿಹಾಸಗಳ ಪ್ರಸಿದ್ಧವಾದ ಕಥಾವಸ್ತುವನ್ನು ಬಿಟ್ಟು ಕಾಲ್ಪಾನಿಕವಾದ ವಸ್ತುವಿನ ಕಥೆಯನ್ನು ರಮ್ಯವಾದ ಕಾವ್ಯವಾಗಿ ರಚಿಸಿರುವುದೂ ಇಲ್ಲಿಯ ವಿಶೇಷ. Nikitha Lobo (ಚರ್ಚೆ) ೧೧:೨೪, ೨೭ ಜನವರಿ ೨೦೧೭ (UTC)