ಶಬರಶಂಕರ ವಿಳಾಸವು ಷಡಕ್ಷರದೇವ ಬರೆದ ಐದು ಆಶ್ವಾಸಗಳುಳ್ಳ ಚಿಕ್ಕ ಕಾವ್ಯ. ವನವಾಸದ ಸಮಯದಲ್ಲಿ ಅರ್ಜುನನು ಒಂಟಿಯಾಗಿ ಕಾನನದಲ್ಲಿ ಇದ್ದುಕೊಂಡು , ತಪಸ್ಸು ಮಾಡಿ ಈಶ್ವರನನ್ನು ಒಲಿಸಿಕೊಂಡು, ಶಬರವೇಷದಿಂದ ಬಂದ ಈಶ್ವರನೊಡನೆ ಕಾಳಗ ಮಾಡಿ , ಅವನಿಂದ ಪಾಶುಪತಾಸ್ತ್ರವನ್ನು ಪಡೆದದ್ದು ಈ ಕಾವ್ಯದ ಕಥೆ.