ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯನ್ನು ಆಯೋಜಿಸಿದ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್(ರಿ)ಬೆಂಗಳೂರು. ಪ್ರಕಟಿತ ಕೃತಿಗಳನ್ನು ೨೦೧೩ ರಲ್ಲಿ ಆಹ್ವಾನಿಸಿದ್ದರು. ೨೦೧೪ ರಲ್ಲಿ ಫಲಿತಾಂಶಗಳು ಪ್ರಕಟವಾಗಿವೆ. ಮುಂಬೈನಗರದ ೭ ಸಾಹಿತಿಗಳ ಕೃತಿಗಳು ಪ್ರಶಸ್ತಿಗೆ ಪಾತ್ರವಾಗಿವೆ. ೨೦೧೦-೧೧-೧೨ ಮತ್ತು ೧೩ ಹೀಗೆ ೪ ವರ್ಷಗಳ ಕೃತಿಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. ಈ ಪ್ರಶಸ್ತಿಯು ೩ ಸಾವಿರ ನಗದು ಬಹುಮಾನವನ್ನು ಹೊಂದಿದೆ.

ಬಹುಮಾನಿತರೆಂದು ಘೋಷಿತರಾದ ಸಾಹಿತಿಗಳ ಹೆಸರುಗಳು ಬದಲಾಯಿಸಿ

  1. . ಶ್ರೀ ಶ್ರೀನಿವಾಸ ಜೋಕಟ್ಟೆಯವರ 'ಅಂಡರ್ ವರ್ಲ್ಡ್' (ತನಿಖಾ ವಿಭಾಗದಲ್ಲಿ)
  2. . ಡಾ. ಜಿ. ಎನ್. ಉಪಾಧ್ಯ-'ಕರ್ನಾಟಕ ಸಂಸ್ಕೃತಿ ಚಿಂತನೆ'(ಶೋಧನಾ ವಿಭಾಗ)
  3. . ಡಾ. ವಿಶ್ವನಾಥ ಕಾರ್ನಾಡ್- ’ಯಾಜ್ಞ ಸೇನಿ’ ಕಾದಂಬರಿ ವಿಭಾಗ)
  4. . ರತ್ನಾಕರ ಶೆಟ್ಟಿ-’ಮರಾಠಿ ಕಥಾ ಸಂಹಿತ’(ಅನುವಾದ ವಿಭಾಗ)
  5. . ಡಾ. ಜಿ .ಡಿ. ಜೋಶಿ ’ಕನ್ನಡ ಕುಲ ರಸಿಕರು' (ಪರಿಚಯ ವಿಭಾಗ)
  6. . ಡಾ. ಕರುಣಾಕರ ಶೆಟ್ಟಿ-'ವಿಚಾರ ವಿಮರ್ಶೆ'(ವಿಚಾರ ವಿಭಾಗ)
  7. . ಶ್ರೀ ವಿದ್ಯಾಧರ ಮುತಾಲಿಕ ದೇಸಾಯಿ-’ದಾಸಾಮೃತವಾಣಿ-ಒಂದು ಒಳನೋಟ'(ದಾಸ ಸಾಹಿತ್ಯ ವಿಭಾಗದಲ್ಲಿ)

'ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ'ಗೆ ಸುಮಾರು ೪೦೦ ರಷ್ಟು ಕೃತಿಗಳನ್ನು ಪರಿಗಣಿಸಲಾಗಿತ್ತು. ಅವುಗಳಲ್ಲಿ ಚುನಾಯಿತ ೭೫ ಕೃತಿಗಳನ್ನು ತೀರ್ಪುಗಾರರ ಆಯ್ಕೆಗಾಗಿ ನೀಡಲಾಗಿತ್ತು.

ತೀರ್ಪುಗಾರರು ಬದಲಾಯಿಸಿ

೧. ಕಂ.ನಾಡಿಗ ನಾರಾಯಣ್, ೨. ಡಾ.ವೀರೇಶ್ ಬಳ್ಳಾರಿ, ೩. ನಾಗಲಕ್ಷ್ಮೀ ವೀರೇಶ್, ೪. ಪದ್ಮಾ ಕೃಷ್ಣ ಮೂರ್ತಿ, ೫. ಡಾ. ರಾಜೇಂದ್ರ ಗಡಾದ್, ೬. ಜ್ಯೋತಿ ಲೋನಿ


ಕೃಪೆ : -’ಕರ್ನಾಟಕ ಮಲ್ಲ’-೧೮-೦೩-೨೦೧೪, ಪು.೪