ವಿಶ್ವಬಂಧು ಮರುಳಸಿದ್ಧ

ವಿಶ್ವಬಂಧು ಮರುಳಸಿದ್ಧ ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಡ್ಯತೆ ಹಾಗೂ ಧಾರ್ಮಿಕ ಶೋಷಣೆಯನ್ನು ಪ್ರತಿರೋಧಿಸಿ ಜನರಲ್ಲಿ ಜಾಗೃತಿಯನ್ನುಂಟುಮಾಡಲು ಬಸವಾದಿ ಶರಣರು ಶ್ರಮಿಸಿದರು. ಸಾಮಾಜಿಕ ಬದಲಾವಣೆಗೆ ಏಕಾಂಗಿಯಾಗಿ ಪ್ರಯತ್ನಿಸಿದ ವ್ಯಕ್ತಿ ‘ಮರುಳಸಿದ್ಧ’. ಅವರ ಬದುಕು ಬವಣೆ ಸಾಧನೆಗಳ. ಅವರು ರಚಿಸಿದ್ದರು ಎನ್ನಲಾದ ಯಾವ ವಚನಗಳೂ ಈಗಿಲ್ಲ. ಮರುಳಸಿದ್ಧರ ಕುರಿತು ನಿಖರವಾದ ಮಾಹಿತಿಗಳಿಲ್ಲ. ಆದರೆ ಮರುಳಸಿದ್ದರು ಲೋಕಕಲ್ಯಾಣಕ್ಕಾಗಿ ಸ್ಥಾಪಿಸಿದ ತರಳಬಾಳು ಸದ್ಧರ್ಮ ಪೀಠ ಅವರ ಇರುವಿಕೆಗೆ ಸಾಕ್ಷಿಯಾಗಿದೆ. ರಾಜಯ್ಯನ ರಗಳೆಯಲ್ಲಿ ಅವರು ಅಕ್ಕಮಹಾದೇವಿಗೆ ಶರಣದೀಕ್ಷೆ ಕೊಟ್ಟ ಬಗ್ಗೆ ಪ್ರಸ್ಥಾಪ ಇದೆ. ಮಹಾದೇವ ಬಣಕಾರರು ಕಳೆದ ಶತಮಾನದಲ್ಲಿ ರಚಿಸಿದ ‘ಮರುಳಸಿದ್ಧ ಕಾವ್ಯ’ದಲ್ಲಿ ಮರುಳಸಿದ್ಧರ ಜೀವನ ಕುರಿತು ವಿವರಗಳಿವೆ. ಅವರ ಕುರಿತ ನಾಟಕ ‘ವಿಶ್ವಬಂಧು ಮರುಳಸಿದ್ಧ’."ವಿಶ್ವಾದ್ಯಂತ ಸಂಬಂಧಿ" ಎಂಬ ಅರ್ಥವನ್ನು ನೀಡುವ ವಿಶ್ವವಂದೂ ಅಥವಾ ವಿಶ್ವಾಬಂದೂ ಎಂಬ ಹೆಸರನ್ನು ಅವರಿಗೆ ನೀಡಲಾಗಿದೆ.[೧][೨]

Marulasiddha
ಕುಡಲಸಂಗಮದಲ್ಲಿರುವ ಮರುಳಸಿದ್ಧರ ಪ್ರತಿಮೆ
ವೃತ್ತಿತತ್ವಜ್ಞಾನಿ, ಮಾಂಕ್

ಇಂದು ಅವರ ಅನುಯಾಯಿಗಳು ಕರ್ನಾಟಕದ ಸಮುದಾಯಗಳಲ್ಲಿ ಒಂದನ್ನು ರೂಪಿಸುತ್ತಾರೆ, ಇವರನ್ನು ಸಾಧು ಲಿಂಗಾಯತರು ಅಥವಾ ಸಾದರ್ ಲಿಂಗಾಯತರು ಎಂದು ಕರೆಯುತ್ತಾರೆ. ಬಹುಪಾಲು ಕೇಂದ್ರ ಕರ್ನಾಟಕದ ದಾವಣಗೆರೆ, ರಾಣೇಬೆನ್ನೂರು ಚಿತ್ರದುರ್ಗ ಶಿವಮೊಗ್ಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇದ್ದಾರೆ.[೩]

ತರಳಬಾಳು ಸಂಸ್ಥಾನ ಚಿತ್ರದುರ್ಗ ಜಿಲ್ಲೆಯ ಸಿರಿಗರೆ ಹಳ್ಳಿಯಲ್ಲಿರುವ ಸಾಧು ಲಿಂಗಾಯತರ ಮುಖ್ಯ ಮಠವಾಗಿದೆ.

 ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ವಿಶ್ವಬಂಧು_ಮರುಳಸಿದ್ಧ , 6 August 2017". Archived from the original on 21 ಜುಲೈ 2011. Retrieved 6 ಆಗಸ್ಟ್ 2017.
  2. "A `unique' drama festival in the offing". www.thehindu.com , 6 August 2017.
  3. Sri Taralabalu Jagadguru Brihanmath