ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ವಳಲಂಬೆ ಶಂಖಪಾಲ ದೇವಸ್ಥಾನ |
|||
೧ ನೇ ಸಾಲು:
==ವಳಲಂಬೆ ಶಂಖಪಾಲ ಸುಬ್ರಮಣ್ಯ ದೇವಸ್ಥಾನ==
ದಕ್ಷಿಣ ಕನ್ನಡದಲ್ಲಿ ನಾಗರಾಧನೆ ದೇವಸ್ಥಾನಗಳು ಹಲವಾರಿವೆ. ಅಂತೆಯೆ ಸರ್ಪವನ್ನು ಪೂಜಿಸುವ ದೇವಸ್ಥಾನವು ಕೆಲವೇ ಕೆಲವು.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಶಂಖಪಾಲ ದೇವಸ್ಥಾನವನ್ನು ಕಾಣಬಹುದು. ಕುಕ್ಕೆ ಸುಬ್ರಮಣ್ಯ ಕ್ಷೇತ್ರದಿಂದ 20 ಕಿ.ಮೀ ದೂರದಲ್ಲಿರುವ ದೇವಸ್ಥಾನವು ಭಾರತದಲ್ಲಿ ಸರ್ಪವನ್ನು ಪೂಜಿಸುವ ದೇವಸ್ಥಾನಗಳು ಎರಡರಲ್ಲಿ ಇದು ಒಂದಾಗಿದೆ . ಸುಮಾರು ಒಂದು ಸಾವಿರ ವರ್ಷದ ಇತಿಹಾಸವಿರುವ ಈ ದೇವಸ್ಥಾನವು ಅತ್ಯಂತ ಪ್ರಸಿಧ್ಧಿಯನ್ನು ಪಡೆದಿದೆ.
*'''ದೇವಸ್ಥಾನದ ಮಹಿಮೆ:'''
ಶಂಖಪಾಲ ಸುಬ್ರಮಣ್ಯ ದೇವಸ್ಥಾನದಲ್ಲಿ ಮುಖ್ಯ ದೇವರು ‘ಸುಬ್ರಮಣ್ಯ’. ವಿಶೇಷವೆಂದರೆ ಇಲ್ಲಿ ನಾಗರೂಪದಲ್ಲಿ ಸುಬ್ರಮಣ್ಯನನ್ನು ಆರಾಧಿಸಲಾಗುತ್ತದೆ. ದೈವತ್ವ ಪಡೆದ ಹಾವುಗಳಲ್ಲಿ ಶಂಖಪಾಲ ಅತ್ಯಂತ ಶಕ್ತಿಶಾಲಿ ಸರ್ಪವಾಗಿದ್ದು ಅನಂತ, ವಾಸುಕಿ, ತಕ್ಷಕ, ತಾರಕೋಟಕ, ಪದ್ಮ, ಮಹಾ ಪದ್ಮ, ಗುಳಿಗ ಶಂಖಪಾಲನಾಗಿ ಆರಾಧ್ಯಗ್ಯೊತ್ತಾನೆ.
ದೇವಸ್ಥಾನವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಕುಕ್ಕೆ ಯಿಂದ ಆಗಮಿಸಿದ ಭಗವಂತನ ಸಾನಿಧ್ಯವು ವಳಲಂಬೆಯಲ್ಲಿ ಶಂಖಪಾಲನಾಗಿ ನೆಲೆನಿಂತನೆಂದು ಪ್ರತೀತಿ.
*'''ವಿಶೇಷತೆ:'''
ಕ್ಷೇತ್ರವು ಉತ್ತರಾಭಿ ಮುಖಮಾಡಿ ನೆಲೆಗೊಂಡಿದ್ದು ಗರ್ಭಗುಡಿಯಲ್ಲಿ ಹುತ್ತವನ್ನು ಕಾಣಬಹುದು. ವಿಶೇಷ ಮಹಿಮೆಯಿರುವ ಈ ದೇವಸ್ಥಾನಕ್ಕೆ ಭಕ್ತರು ತಮ್ಮ ಕಷ್ಟನಿವಾರಣೆಗಾಗಿ ಪಾರ್ಥನೆ ಸಲ್ಲಿಸಲು ಬರುತ್ತಾರೆ. ಶನಿದೋಷ, ರಾಹುದೋಷ, ಸರ್ಪದೋಷ, ಅವಿವಾಹಿತರಿಗೆ ವಿವಾಹ, ಸಂತತಿ ಮತ್ತು ಚರ್ಮರೋಗ ನಿವಾರಣೆಗಾಗಿ ಪ್ರಾರ್ಥನೆ ಮತ್ತು ಬೇಡಿಕೆಗಳು ನೆರವೇರುತ್ತದೆ. ಸಂಕಷ್ಟವನ್ನು ಪಾರುಮಾಡುವ ಶಂಖಪಾಲನು ದಿನದ ಮೂರು ಹೊತ್ತು ಆರಾಧ್ಯಗೊಳ್ಳುತ್ತಾನೆ.
|