ಅಶ್ವಘೋಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Wikipedia python library |
Manjappabg (ಚರ್ಚೆ | ಕಾಣಿಕೆಗಳು) ಅಕ್ಷರದೋಷ ಟ್ಯಾಗ್: 2017 source edit |
||
೧ ನೇ ಸಾಲು:
'''ಅಶ್ವಘೋಷ''' ಸು. 1ನೆಯ ಶತಮಾನ. [[ಸಂಸ್ಕೃತ ಸಾಹಿತ್ಯ]]ದ ಪ್ರಾಚೀನ [[ಕವಿ]]. ಉತ್ತಮ ಕಾವ್ಯಗಳ ಮೂಲಕ ಭಗವಾನ್ ಬುದ್ಧನ ಕರುಣೆ, ಜ್ಞಾನ, ತ್ಯಾಗ ಮತ್ತು ಧರ್ಮವಾಣಿಗಳನ್ನು ಪ್ರಪಂಚಕ್ಕೆ ಸಾರಿದವನು. ಬೌದ್ಧ ದಾರ್ಶನಿಕ ಗ್ರಂಥಕರ್ತೃವಾಗಿ, ನಾಟಕಕಾರನಾಗಿ, ಸಂಸ್ಕೃತ ಮಹಾಕವಿಗಳ ಪರಂಪರೆಯಲ್ಲಿ ಉನ್ನತಸ್ಥಾನವನ್ನು ಪಡೆದಿದ್ದಾನೆ. ಇವರ ರಮಣೀಯ ಕೃತಿಗಳಲ್ಲಿ ಆಕರ್ಷಕ ಶೈಲಿಯನ್ನೂ ಆರ್ಷ ಕಾವ್ಯಗಳ ಸಾಮೀಪ್ಯವನ್ನೂ ಉಕ್ತಿವೈಚಿತ್ಯವನ್ನೂ ಗಾನಯೋಗ್ಯವಾದ ಮನೋಹರವಾದ ಪದ್ಯಗಳ ವಿನ್ಯಾಸವನ್ನೂ ಕಾಣಬಹುದು. ಬೌದ್ಧದರ್ಶನದ ಪ್ರಚಾರಕ್ಕೆ ಹೆಸರಾದ ಈ ಕವಿ ನಾಟಕಕಾರನೂ ಆಗಿದ್ದನೆಂಬುದು 1911ರಲ್ಲಿ ಜರ್ಮನ್ ವಿದ್ವಾಂಸ ಲೂಡರ್ಸ್ ಪ್ರಕಟಿಸಿದ ಕೆಲವು ನಾಟಕ ತುಣುಕುಗಳಿಂದ ಕಂಡುಬರುತ್ತದೆ.
ಈತನದೆಂದು ಹೇಳಲಾಗುವ ಗ್ರಂಥಗಳಿವು :
ಇತರ ಪ್ರಾಚೀನ ಸಂಸ್ಕೃತ ಕವಿಗಳಂತೆ ಅಶ್ವಘೋಷನ ಕಾಲದ ವಿಷಯದಲ್ಲೂ ನಿರ್ಣಾಯಕವಾದ ಅಭಿಪ್ರಾಯಕ್ಕೆ ಬರುವುದು ವಿಮರ್ಶಕರಿಗೆ ಸಾಧ್ಯವಾಗಿಲ್ಲ. ಸ್ಥೂಲವಾಗಿ ಮಾತ್ರ ನಾವು ಕೆಲವು ಅಂಶಗಳನ್ನು ಗಮನಿಸಬಹುದಾಗಿದೆ. ಚೀನ ದೇಶದಲ್ಲಿ ಬಳಕೆಯಲ್ಲಿರುವ ಒಂದು ಪ್ರತೀತಿಯಂತೆ ಅಶ್ವಘೋಷ ಕನಿಷ್ಕನಿಗೆ ಗುರುವಾಗಿದ್ದ. ಕನಿಷ್ಕ 125ರ ವೇಳೆಗೆ ಪೆಷಾವರ್ ನಗರದಲ್ಲಿ ಆಳುತ್ತಿದ್ದ ಸಿಥಿಯನ್ ರಾಜ. ಸಾರಾನಾಥದ ಅಶೋಕಸ್ತಂಭ ಶಾಸನದಲ್ಲಿ ಅಶ್ವಘೋಷ ರಾಜನ ನಿರ್ದೇಶನವಿದೆ. ಬಹುಶಃ ಇದು ಈ ಕವಿಯನ್ನೇ ಕುರಿತಿದ್ದಿರಬಹುದು. ಹಿಂದಿನ ಕಾಲದಲ್ಲಿ ಗುರುಗಳು, ಮಠಾಧಿಪತಿಗಳು, ಜ್ಞಾನಿಗಳು, ಕವಿಗಳು ಮೊದಲಾದ ಸಮಾಜದ ಉನ್ನತ ಪುರುಷರನ್ನು ರಾಜರೆಂದು ಕರೆಯುವುದು ವಾಡಿಕೆಯಲ್ಲಿತ್ತು. ಬೌದ್ಧಗುರು ಗಳ ಸಾಲಿನಲ್ಲಿ ಅಶ್ವಘೋಷ ಪಾರ್ಶ್ವನಾದ ಮೇಲೆ ನಾಗಾರ್ಜುನನಿಗಿಂತ ಹಿಂದೆ ಬರುತ್ತಾನೆ. ನಾಗಾರ್ಜುನನ ಕಾಲ 2ನೆಯ ಶತಮಾನದ ಕೊನೆ. ಅಶ್ವಘೋಷನ ನಾಟಕಗಳಲ್ಲಿ ಬರುವ ಪ್ರಾಕೃತದ ಪ್ರಾಚೀನತೆಯಿಂದ ಇವನ ಕಾಲ ಒಂದನೆಯ ಶತಮಾನವೆಂದು ತಿಳಿಯಬಹುದು.
ಇವನ ಗ್ರಂಥಗಳ ಕೊನೆಯಲ್ಲಿ ಬರುವ ಸಮಾಪ್ತಿ ವಾಕ್ಯಗಳಲ್ಲಿ ಕವಿಯ ಜೀವನದ ವಿಷಯ ಪ್ರಸ್ತಾಪಿಸಲ್ಪಟ್ಟಿದೆ. ತಾಯಿ ಸುವರ್ಣಾಕ್ಷೀ. ಸ್ಥಳ ಸಾಕೇತ. ಇವನನ್ನು ಭಿಕ್ಷು, ಆಚಾರ್ಯ, ಭದಂತ, ಮಹಾಕವಿ, ಮಹಾಪಂಡಿತ, ಮಹಾವಾದಿ ಎಂದು ವಿಶೇಷ ಗೌರವದಿಂದ ಜನ ಕರೆಯುತ್ತಿದ್ದರು. ಹಸಿದು ಎದುರಿಗಿದ್ದ ಆಹಾರವನ್ನು ಮುಟ್ಟದೆ ನಿಂತಿದ್ದ ಕುದುರೆಗಳು ಇವನ ಧರ್ಮವಾಣಿಯನ್ನು ಲಾಲಿಸಿ ಆಹಾರ ತಿಂದವಂತೆ. ಅದಕ್ಕೇ ಅವನಿಗೆ ಅಶ್ವಘೋಷನೆಂದು ಹೆಸರಾಯಿತಂತೆ. ಜಾತಿಯಲ್ಲಿ ಹುಟ್ಟು ಬ್ರಾಹ್ಮಣನಾಗಿದ್ದು ಮೊದಲು ಬೌದ್ಧಧರ್ಮದ ಸರ್ವಾಸ್ತಿವಾದಕ್ಕೆ ವಾಲಿ ಅನಂತರ ಬುದ್ಧನ ಮೇಲಿನ ಅವ್ಯಾಜನಂಬಿಕೆ ಯಿಂದಲೇ ಉದ್ಧಾರ ಸಾಧ್ಯವೆಂದರಿತು ಮಹಾಯಾನ ಪಂಥದ ಪ್ರಥಮಾಚಾರ್ಯರಲ್ಲಿ ಒಬ್ಬನಾದ. ವೇದ, ಶಾಸ್ತ್ರ, ಪುರಾಣ, ಇತಿಹಾಸ, ರಾಮಾಯಣ, ಮಹಾಭಾರತ-ಇವುಗಳ ಸೂಕ್ಷ್ಮ ಪರಿಚಯ ಇವನಿಗಿತ್ತೆಂದು ಇವನ ಕಾವ್ಯಗಳಿಂದ ತಿಳಿದುಬರುತ್ತದೆ.
ಬುದ್ಧಚರಿತ[ಬದಲಾಯಿಸಿ]
ಈ ಕಾವ್ಯ ಮೊದಲು 28 ಸರ್ಗಗಳನ್ನು ಒಳಗೊಂಡಿದ್ದು ಚೀನಿ ಭಾಷೆಗೆ ಸು. 420ರಲ್ಲಿ ಧರ್ಮರಕ್ಷನಿಂದ ಅನುವಾದವಾಯಿತು. 8ನೆಯ ಶತಮಾನದಲ್ಲಿ ಟಿಬೆಟನ್ ಭಾಷೆಗೂ ಭಾಷಾಂತರವಾಯಿತು. ಈಗ ಸಂಸ್ಕೃತದಲ್ಲಿ ಉಪಲಬ್ಧವಿರುವುದು 13 ಸರ್ಗಗಳು ಮಾತ್ರ. ಕಳೆದ ಶತಮಾನದಲ್ಲಿ ಅಮೃತಾನಂದ ಎನ್ನುವ ವಿದ್ವಾಂಸ ಇನ್ನೂ ನಾಲ್ಕು ಸರ್ಗಗಳನ್ನು
ಇಕ್ಷ್ವಾಕು ವಂಶದ, ಶಾಕ್ಯರ ದೊರೆ ಶುದ್ಧೋದನನಿಗೆ ಅಪಗತ ಮಾಯೆಯಾದ ಮಾಯಾದೇವಿ ರಾಣಿ. ಕಪಿಲವಸ್ತು ರಾಜಧಾನಿ. ಒಮ್ಮೆ ಮಾಯಾದೇವಿಗೆ ಸ್ವಪ್ನದಲ್ಲಿ ಶ್ವೇತಗಜವೊಂದು ಹೊಟ್ಟೆಯನ್ನು ಹೊಕ್ಕಂತೆ ಭಾಸವಾಗುತ್ತದೆ. ಇದು ನಿಜವೋ ಎಂಬಂತೆ ಗರ್ಭವತಿಯಾಗುತ್ತಾಳೆ. ಕೆಲವು ದಿನಗಳು ಕಳೆಯಲು, ವನ ವಿಹಾರಕಾಲದಲ್ಲಿ
ಕಥೆ ಹೀಗೆ ಮುಂದುವರಿಯುತ್ತದೆ: ದೇಶದಲ್ಲಿ ಸುಭಿಕ್ಷೆ-ರಾಜನ ಸಮೃದ್ಧಿ-
ವಿಹಾರಯಾತ್ರೆ-ಸ್ವರ್ಣರಥದಲ್ಲಿ ಕುಮಾರನ ಮೆರವಣಿಗೆ-ಶುದ್ಧಾತ್ಮರಾದ ದೇವತೆಗಳ ಪ್ರಭಾವದಿಂದ ವೃದ್ಧ, ರೋಗಿ, ಶವ ಇವುಗಳ ನೋಟದಿಂದ ಕುಮಾರನಿಗೆ ಮನಸ್ಸು ಕದಡುವುದು-ಪದ್ಮವನ ಪ್ರವೇಶ. ಚೆಲುವೆಯರು ತಮ್ಮ ಹಾವ, ಭಾವ, ವಿಲಾಸ, ಲೀಲೆಗಳಿಂದ ಕುಮಾರನನ್ನು ವಶಗೊಳಿಸಲು ಪ್ರಯತ್ನಿಸುವುದು-ಮರಣ ಭಯದಿಂದ ಆವೃತನಾದ ಕುಮಾರನಿಗೆ ಯಾವುದೂ ರುಚಿಸದಿರುವುದು-ಅವರಲ್ಲಿ ಅವನಿಗೆ ಕನಿಕರವೇ ಉಂಟಾಗುವುದು-ಸ್ತ್ರೀಯರೆಲ್ಲ ಮನೋರಥರಾಗುವುದು.
ರಾಜಾಶ್ವ ಕಂಥಕನನ್ನೇರಿ ಮಿತ್ರರೊಡನೆ ಕುಮಾರ ವನಭೂಮಿಯ ದರ್ಶನಕ್ಕಾಗಿ ಹೊರಡುವುದು-ದಾರಿಯಲ್ಲಿ ಒಂದು ನೇರಳೆ ಮರದ ಬುಡದಲ್ಲಿ ವಿಶ್ರಾಂತಿ-ಭಿಕ್ಷುರೂಪದ ಸಂನ್ಯಾಸಿಯ ಆಗಮನ ಮತ್ತು ಸಂಭಾಷಣೆ-ಅವನಂತೆಯೇ ಮೋಕ್ಷಕ್ಕಾಗಿ ಶ್ರಮಿಸಬೇಕೆಂಬ ಇಚ್ಛೆ ಬೇರೂರಿದ್ದು-ತಂದೆಗೆ ವಿಷಯನಿವೇದನೆ-ರಾಜನ ಕಳವಳ-ರಾಜ ಮಗನಿಗೆ ಐಹಿಕ ಭೋಗದ ಆಸೆಯನ್ನು ಹೆಚ್ಚಿಸಲೆತ್ನಿಸಿದುದು-ರಾತ್ರಿ ಛಂದಕನಿಂದ ಕಂಥಕನನ್ನು ತರಿಸಿ ಅದರ ಮೇಲೆ ಪುರದ ಹೊರಕ್ಕೆ ಬಂದು `ಜನನ ಮರಣಗಳ ಕೊನೆಗಾಣುವವರೆಗೆ ಕಪಿಲವಸ್ತುವನ್ನು ಮತ್ತೆ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದು-ಬಲುದೂರ ಪ್ರಯಾಣ.
ಭಾರ್ಗವನ ಆಶ್ರಮ-ಛಂದಕವಿಸರ್ಜನ ರತ್ನಾಭರಣಗಳೊಂದಿಗೆ ತಂದೆಗೆ ಸಂದೇಶ-ಸ್ವರ್ಣಖಡ್ಗದಿಂದ ಕೇಶಪಾಶಗಳನ್ನು ಕತ್ತರಿಸುವುದು-ವ್ಯಾಧನಿಂದ ಕಾಷಾಯ ವಸ್ತ್ರ ಸ್ವೀಕಾರ. ಮುನಿಗಳ ಸತ್ಕಾರ, ಸಂಭಾಷಣೆ-ತಪಸ್ಸಿನ ಪ್ರಕಾರಗಳ ಜ್ಞಾನ - ಅರಾಡ ಮುನಿ ದರ್ಶನಕ್ಕಾಗಿ ವಿಂಧ್ಯಕ್ಕೆ ಪ್ರಯಾಣ.
ಕಪಿಲವಸ್ತುವಿನಲ್ಲಿ ದುಃಖ-ಅಂತಃಪುರ ಜನರ ವಿಲಾಪ-ಅವನ ವಿಷಯದಲ್ಲಿ ಕೇಳಿದ ಅದ್ಭುತ ಸಂಗತಿಗಳ ಶ್ರವಣದಿಂದ ಎಲ್ಲರಿಗೂ ಸಮಾಧಾನ-ಯಶೋಧರೆಯ ಪ್ರಲಾಪ-ಶೋಕವಿಹ್ವಲನಾದ ರಾಜನನ್ನು ಸಂತೈಸುವುದು.
ಮಂತ್ರಿ ಪುರೋಹಿತರಿಂದ ಕುಮಾರಾನ್ವೇಷಣೆ-ಉಪದೇಶ-
ಅರಾಡಮುನಿಯಿಂದ ಸಾಂಖ್ಯದರ್ಶನ ತಿಳಿಯುವುದು-ಉದ್ರಕನ ದರ್ಶನಕ್ಕಾಗಿ ಪಯಣ-ಗಯನ ಆಶ್ರಮ-ಪಂಚತಪಸ್ವಿಗಳು-ಆರು ವರ್ಷಗಳ
ಮಾರನ ಅನೇಕ ಪ್ರಯತ್ನಗಳು ಮತ್ತು ಸೋಲು-ಧ್ಯಾನಮಗ್ನನಾದ ಕುಮಾರ ಬುದ್ಧತ್ವವನ್ನು ಕೊನೆಯ ಯಾಮದಲ್ಲಿ ಪಡೆಯುವುದು-ಬುದ್ಧನಾದಾಗ ಅರುಣೋದಯವಾಗುವುದು. ಇಲ್ಲಿಂದ ಮುಂದಿನ ಕಥೆಗೆ ಸಂಸ್ಕೃತ ಮೂಲ ದೊರಕಿಲ್ಲ. ಚೀನಿ ಮತ್ತು ಟಿಬೆಟನ್ ಭಾಷಾಂತರಗಳಲ್ಲಿ ಕಥೆ 28 ಸರ್ಗಗಳವರೆಗೂ ಓಡುತ್ತದೆ. ಇದರಲ್ಲಿ ಬುದ್ಧನ ಧರ್ಮಬೋಧೆ ಅವನ ದೈಹಿಕ ಅವಶೇಷಗಳ ವಿಚಾರವಾಗಿ ನಡೆದ ಕಲಹಗಳು ಮತ್ತು ಅಶೋಕ ಚಕ್ರವರ್ತಿಯ ವೃತ್ತಾಂತ ಇವೆಲ್ಲ ಉಕ್ತವಾಗಿವೆ.
ಸೌಂದರನಂದ[ಬದಲಾಯಿಸಿ]
|