ಹಣಮಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೨೭ ನೇ ಸಾಲು:
'''[[ಹಣಮಸಾಗರ]]''' ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ವಿಜಯಪುರ]] ತಾಲ್ಲೂಕಿನಲ್ಲಿದೆ. ಇದು ಒಂದು '''ಚಿಕ್ಕ ಹಳ್ಳಿ''' ಹಾಗೂ '''ಪುಣ್ಯಕ್ಷೇತ್ರ'''. [[ಹಣಮಸಾಗರ]] ಗ್ರಾಮವು [[ಬಬಲೇಶ್ವರ]] - [[ಯರಗಟ್ಟಿ]] ರಾಜ್ಯ ಹೆದ್ದಾರಿ - 55 ರಲ್ಲಿದೆ. ಜಿಲ್ಲಾ ಕೇಂದ್ರ [[ವಿಜಯಪುರ]]ದಿಂದ ಸುಮಾರು 40 ಕಿ. ಮಿ. ದೂರದಲ್ಲಿದೆ.
==
[[File:Sadashiv Murthy,Babaladi,Bijapur.JPG|100|thumb|ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ, ಬಬಲಾದಿ]]
೩೩ ನೇ ಸಾಲು:
ಗ್ರಾಮದ '''ಶ್ರೀ ಕರಿಗಿರಿ ಮಹಾಸ್ವಾಮಿಗಳು''' ಕಳೆದ ಶತಮಾನದಲ್ಲಿ ಇದ್ದರು ಎಂಬ ಪ್ರತೀತ ಇದೆ. ಅವರದು ಕೇವಲ ಒಂದು ಭಾವಚಿತ್ರವಿದೆ. ಪ್ರತಿವರ್ಷ ಜುಲೈ/ಅಗಸ್ಟ್ ತಿಂಗಳಿನಲ್ಲಿ ಜಾತ್ರೆ ಜರುಗುವುದು. ಇತಿಹಾಸ ಪ್ರಸಿದ್ದ '''ಬಬಲಾದಿ ಶ್ರೀ ಸದಾಶಿವ ಮಠ'''ವನ್ನು 1995ರಲ್ಲಿ ಸ್ಥಾಪಿಸಲಾಗಿದೆ.
==
ಗ್ರಾಮದಲ್ಲಿ '''ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ'''ಗಳ ಶಾಖಾ ಮಠವಿದೆ.
==
ಗ್ರಾಮವು ಭೌಗೋಳಿಕವಾಗಿ 16* 32' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.
==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ '''43 ಡಿಗ್ರಿ'''ವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ '''9 ಡಿಗ್ರಿ''' ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
೫೭ ನೇ ಸಾಲು:
[http://www.onefivenine.com/india/villages/Bijapur-District/Bijapur/Hanamasagar ಹಣಮಸಾಗರ ಗ್ರಾಮದ ಹವಾಮಾನದ ಬಗ್ಗೆ ತಿಳಿಯಲು ಈ ತಾಣಕ್ಕೆ ಸಂಪರ್ಕಿಸಿ]
==
ಗ್ರಾಮದಲ್ಲಿ ಜನಸಂಖ್ಯೆ ಸುಮಾರು '''1500''' ಇದೆ. ಅದರಲ್ಲಿ 800 ಪುರುಷರು ಮತ್ತು 700 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.
೬೩ ನೇ ಸಾಲು:
[http://ceokarnataka.kar.nic.in/ElectionFinalroll2014/PCROLL_2014/Kannada/WOIMG/AC029/AC0290176.pdf ಹಣಮಸಾಗರ ಗ್ರಾಮದಲ್ಲಿರುವ ಮತದಾರರ ಪಟ್ಟಿ]
==
ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವುಗಳು ಗ್ರಾಮದ ಕಲೆಯಾಗಿದೆ.
==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''ಇಲಕಲ್ಲ ಸೀರೆ'''ಗಳನ್ನು ಧರಿಸುತ್ತಾರೆ.
==
ಪ್ರಮುಖ ಆಹಾರ ಧಾನ್ಯ '''ಜೋಳ'''. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಹಾಗೂ ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.
==
ಗ್ರಾಮದ ಪ್ರತಿಶತ '''90''' ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ '''ಕಬ್ಬು''', ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
==
'''[[ಕೃಷ್ಣಾ]]''' ನದಿಯ [[ಆಲಮಟ್ಟಿ ಆಣೆಕಟ್ಟು]]ಯಿಂದ '''ಮುಳವಾಡ ಏತ ನೀರಾವರಿ ಕಾಲುವೆ'''ಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
==
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ '''90%''' ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.
==
'''ಆಹಾರ ಬೆಳೆಗಳು'''
೧೦೧ ನೇ ಸಾಲು:
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
==
ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.
==
ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.
==
ಗ್ರಾಮದಲ್ಲಿ ಪ್ರತಿವರ್ಷ ಪೌರಾಣಿಕ ಅಥವಾ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಗ್ರಾಮದ ಕಲಾವಿದರಾದ '''ಚಿಕ್ಕಯ್ಯ ಮಠಪತಿ'''ಯವರು ಪ್ರಮುಖ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದರು.
==
ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
==
ಗ್ರಾಮದ ಪ್ರಮುಖ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು [[ಹಿಂದಿ]] ಮಿಶ್ರಿತ ವಿಶಿಷ್ಠವಾದ ಕನ್ನಡ.
೧೨೭ ನೇ ಸಾಲು:
ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
==
* '''ಶ್ರೀ ಸಂಗಮೇಶ್ವರ ದೇವಾಲಯ, ಹಣಮಸಾಗರ'''
೧೩೫ ನೇ ಸಾಲು:
* '''ಶ್ರೀ ಹಣಮಂತ ದೇವಾಲಯ, ಹಣಮಸಾಗರ'''
==
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ '''ಖಾಜಾ ಬಂದೇನವಾಜ ದರ್ಗಾ''' ಹಾಗೂ ಮಸೀದಿ ಇದೆ.
==
ಪ್ರತಿವರ್ಷ '''ಶ್ರೀ ಕರಿಗಿರಿ ಸಂಗಮ ಶಿವಲಿಂಗೇಶ್ವರರ ಪಾರಮಾರ್ಥೀಕೋತ್ಸವ, ಶ್ರೀ ಸಂಗಮೇಶ್ವರ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ)''', ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
==
'''ಹಣಮಸಾಗರ ಗ್ರಾಮದಲ್ಲಿರುವ ಸಂಘಟನೆಗಳು'''
೧೫೧ ನೇ ಸಾಲು:
* '''ನೇತಾಜಿ ಸುಭಾಸ್ ಚಂದ್ರ ಬೋಸ್ ಯುವಕ ಮಂಡಳಿ, ಹಣಮಸಾಗರ'''
==
'''ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಣಮಸಾಗರ ಶಾಲೆಯ ಪಕ್ಷಿನೋಟ'''
೧೬೫ ನೇ ಸಾಲು:
[http://www.schoolsworld.in/schools/showschool.php?school_id=29030505702 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಣಮಸಾಗರ]
==
ಗ್ರಾಮದ '''ಸಾಕ್ಷರತೆ ಪ್ರಮಾಣ'''ವು ಸುಮಾರು '''75%'''. ಅದರಲ್ಲಿ '''65% ಪುರುಷರು''' ಹಾಗೂ '''55% ಮಹಿಳೆಯರು''' ಸಾಕ್ಷರತೆ ಹೊಂದಿದೆ.
==
ಗ್ರಾಮವು '''[[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]''' ಮತ್ತು '''[[ವಿಜಯಪುರ ಲೋಕಸಭಾ ಕ್ಷೇತ್ರ]]'''ದ ವ್ಯಾಪ್ತಿಯಲ್ಲಿ ಬರುತ್ತದೆ. '''ಶ್ರೀ ಮಹಾದೇವಪ್ಪ ಬಾಳಪ್ಪ ಮದರಖಂಡಿ'''ಯವರು [[ವಿಜಯಪುರ]] ತಾಲ್ಲೂಕ ಪಂಚಾಯತಿಯ ಮಾಜಿ ಸದಸ್ಯರು. ಗ್ರಾಮವು [[ಕಂಬಾಗಿ]] ಗ್ರಾಮ ಪಂಚಾಯತಿ ಹಾಗೂ [[ಬಬಲೇಶ್ವರ]] ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ.
==
*'''ಪರಮ ಪೂಜ್ಯ ಶ್ರೀ ಶಿವಯೋಗೇಶ್ವರ ಸೌಹಾರ್ದ ಸಹಕಾರಿ ನಿಯಮಿತ, ಹಣಮಸಾಗರ'''
==
ಗ್ರಾಮದಲ್ಲಿ ಕೆ.ಎಮ್.ಎಫ್.(ನಂದಿನಿ)(ಕರ್ನಾಟಕ ಹಾಲು ಒಕ್ಕೂಟ)ನ ಸಹಾಯದೊಂದಿಗೆ '''ಹಾಲು ಉತ್ಪಾದಕ ಸಹಕಾರಿ ಸಂಘ''' ಸ್ಥಾಪಿತವಾಗಿದೆ.
==
ಮುಖ್ಯ ದೂರವಾಣಿ ಕೇಂದ್ರವು [[ಬಬಲೇಶ್ವರ]] ಗ್ರಾಮದಲ್ಲಿದೆ.
೧೮೭ ನೇ ಸಾಲು:
* ಬಬಲೇಶ್ವರ - '''08355'''
==
ಮುಖ್ಯ ಅಂಚೆ ಕಚೇರಿಯು [[ಸಾರವಾಡ]] ಗ್ರಾಮದಲ್ಲಿದೆ.
೧೯೩ ನೇ ಸಾಲು:
* ಸಾರವಾಡ - '''586125'''
==
ಗ್ರಾಮವು ಜಿಲ್ಲಾ ಕೇಂದ್ರ [[ವಿಜಯಪುರ]]ದಿಂದ ಸುಮಾರು 40 ಕಿ.ಮೀ. ದೂರವಿದ್ದು, ಗ್ರಾಮದ ರಸ್ತೆಯು [[ಕಂಬಾಗಿ]] ಮಾರ್ಗವಾಗಿ [[ವಿಜಯಪುರ]] ನಗರವನ್ನು ತಲಪುತ್ತದೆ.
==
ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿ '''ರಾಜ್ಯ ಹೆದ್ದಾರಿ - 55''' ಹಾದೂಹೋಗಿದೆ.
೨೦೩ ನೇ ಸಾಲು:
'''ರಾಜ್ಯ ಹೆದ್ದಾರಿ - 55''' => [[ಬಬಲೇಶ್ವರ]] - [[ಕಂಬಾಗಿ]] - [[ಗಲಗಲಿ]] - [[ಮುಧೋಳ]] - [[ಯಾದವಾಡ]] - [[ಯರಗಟ್ಟಿ]]
==
ಗೂಗಲನಲ್ಲಿ ಹಣಮಸಾಗರ ಗ್ರಾಮದ ನಕ್ಷೆ
೨೧೩ ನೇ ಸಾಲು:
* [http://wikimapia.org/#lang=kn&lat=16.535311&lon=75.522777&z=17&m=b ವಿಕಿಮ್ಯಾಪಿಯಾ ನಕಾಶೆಯಲ್ಲಿ ಹಣಮಸಾಗರ]
==
<References/>
|