ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
→ತತ್ವಚಿಂತನೆ: ಕೊಂಡಿಗಳು, ಚರ್ಚೆ ಪುಟದಲ್ಲಿ ಹೇಳಿದ ಹಾಗೆ, citations |
ಅನುವಾದಗೊಂಡ_ಲೇಖನಗಳ_ಸಂವರ್ಧನಾ_ಯೋಜನೆ - ಕೆಲಸ ೩, ೧೧ |
||
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
[[ವೇದ|ವೇದಗಳ]] ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು '''ಉಪನಿಷತ್ಗಳು''' ([[ದೇವನಾಗರಿ]]: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) ಎಂದು ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ [[ಸಂಹಿತೆ|ಸಂಹಿತೆಗಳು]], [[ಬ್ರಾಹ್ಮಣ (ವೇದ)|ಬ್ರಾಹ್ಮಣಗಳು]], [[ಆರಣ್ಯಕ|ಆರಣ್ಯಕಗಳು]]. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, [[ಋಷಿ]]ಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, [[ಆತ್ಮ]] [[ಪರಮಾತ್ಮ]] ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ.
Line ೧೯ ⟶ ೧೮:
== ಪದಮೂಲ ==
==ಕಾಲ{{citation needed|date=February ೨೦೧೬}}==
Line ೩೩ ⟶ ೩೨:
::::''ಯಾರು ಎಲ್ಲಾ ಜೀವಿಗಳನ್ನು ಆತ್ಮನಲ್ಲಿ ಕಾಣುತ್ತಾರೋ ಮತ್ತು ಆತ್ಮವನ್ನು ಎಲ್ಲಾ ಜೀವಿಗಳಲ್ಲಿ ಕಾಣುತ್ತಾರೋ...'' <br />''ಯಾರು ಇವೆರಡರಲ್ಲಿರುವ ಐಕ್ಯತೆಯನ್ನು ಕಾಣುತ್ತಾರೋ ಅವರಿಗೆಲ್ಲಿದೆ ದುಖಃ ಮತ್ತು ಭ್ರಾಂತಿ?'' <br />''ಅದು ಎಲ್ಲವನ್ನೂ ತುಂಬಿದೆ. '' ''ಅದು ಪ್ರಜ್ವಲ, ನಿರಾಕಾರ, ಅಮರ, ಅವಧ್ಯ...'' <br />''ಸರ್ವಜ್ಞ, ಚುರುಕು ಬುದ್ಧಿಯ, ಸರ್ವವ್ಯಾಪಿ, ಸ್ವಯಂಭುವ, '' <br />''ಇದು ಅನಂತಕಾಲದವರೆಗೆ ಸೃಷ್ಠಿಯನ್ನು ನಿಯಂತ್ರಿಸುತ್ತದೆ. ''
[[File:AUM symbol, the primary (highest) name of the God as per the Vedas.svg |thumb|ಓಂ ಕಾರ]]
ಉಪನಿಷದ್ಗಳು ಮೊಟ್ಟ ಮೊದಲ ಹಾಗೂ ಅತ್ಯಂತ ಸ್ಪುಟವಾಗಿ ಪವಿತ್ರ ಅಕ್ಷರವಾದ [[ಅಉಮ್]] ಅಥವಾ ಓಂಕಾರವನ್ನು ವಿವರಿಸುತ್ತವೆ. ಇದು ಎಲ್ಲಾ ಸೃಷ್ಠಿಯ ಮೂಲಾಧಾರವಾದ ವಿಶ್ವಕಂಪನ ನಾದವಾಗಿದೆ. "''ಓಂ
'''ಭಗವಂತನಿಗೆ ನಿಷ್ಠೆ''' (ಸಂಸ್ಕೃತ: [[ಭಕ್ತಿ]]): ಸರಳ ಅರ್ಥದಲ್ಲಿ ಭಕ್ತಿಯು ಉಪನಿಷತ್ಗಳ ಸಾಹಿತ್ಯದ ಮುಂಚೂಣಿಯಾಗಿದ್ದು ಮತ್ತು ನಂತರ ಅದನ್ನು ''[[ಭಗವದ್ಗೀತೆ]]'' ಯಂತಹ ಗ್ರಂಥಗಳು ಕಂಡುಕೊಂಡವು.<ref>ಕ್ಯಾಥೆರಿನ್ ರಾಬಿನ್ಸನ್, ''Interpretations of the Bhagavad-Gītā and Images of the Hindu Tradition: The Song of the Lord.'' ರೌಟ್ಲೆಡ್ಜ್ ಪ್ರೆಸ್, 1992, ಪುಟ 51.</ref> ಉಪನಿಷತ್ತುಗಳನ್ನು ಪರಮ ಪ್ರಮಾಣವಾದ ಅಪೌರುಷೇಯ [[ಮಂತ್ರ]]ಗಳೆಂಬ ದೃಷ್ಟಿಯಿಂದ ಪರಿಶೀಲಿಸಿದಾಗ ಅವೆಲ್ಲವೂ ಒಂದೇ ತತ್ತ್ವವನ್ನು ಪ್ರತಿಪಾದಿಸುವುವು{{citation needed|date=February ೨೦೧೬}} ಎಂದು ಒಪ್ಪಿಕೊಳ್ಳಬೇಕಾಗುತ್ತದಾದರೂ ಭಾಷ್ಯಕಾರರ ದೃಷ್ಟಿಯಲ್ಲಿ ಅವುಗಳಲ್ಲಿ ಭಿನ್ನ ಭಿನ್ನ ಸಿದ್ಧಾಂತಗಳ ನಿರೂಪಣೆ ಇದೆ. [[ಬಾದರಾಯಣ|ಬಾದರಾಯಣರು]]
'''ಬ್ರಹ್ಮತತ್ವ
ಉಪನಿಷತ್ಕಾರರ ಮೊದಲ ಪ್ರಶ್ನೆ ಜಗತ್ತು ಮತ್ತು ನಾವು ಎಲ್ಲಿಂದ ಬಂದೆವು ? ನಮ್ಮ ಮುಂದಿನ ಗತಿಗೂ ಸುಖದುಃಖಗಳಿಗೂ ಕಾರಣರಾರು ? ಎಂಬುದೇ ಆಗಿದೆ. ಉತ್ತರವಾಗಿ ಸತ್, ಆತ್ಮ, ಬ್ರಹ್ಮ, ಅಕ್ಷರ, ಆಕಾಶ ಶಬ್ದಗಳಿಂದ ಜಗತ್ಕಾರಣವಾದ ಪರವಸ್ತುವನ್ನು ಹೇಳಲಾಗಿದೆ. ಬ್ರಹ್ಮನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತಕಾರಣ ಎರಡೂ. ಬ್ರಹ್ಮ ಹೊರತು ಮತ್ತಾವುದೂ ಮೊದಲು ಇರಲಿಲ್ಲವಾದ್ದರಿಂದ ಜಗತ್ತು ಬ್ರಹ್ಮಮಯ. ಸಂಕಲ್ಪ ಮಾತ್ರದಿಂದ ಜಗತ್ತನ್ನು ಸೃಷ್ಟಿಸಿ ಅದರಲ್ಲಿ ಬ್ರಹ್ಮ ಅಂತರ್ಯಾಮಿಯಾಗಿದೆ. ಸರ್ವಭೂತಗಳಿಗೂ ಅಂತರಾತ್ಮನಾದ ಬ್ರಹ್ಮವೊಂದೇ ಶಾಶ್ವತ, ಸರ್ವಶಕ್ತ, ಅನಂತ, ಪೂರ್ಣಕಾಮ. ಸರ್ವರಿಗೂ ಅಂತರಾತ್ಮನಾದ ಬ್ರಹ್ಮನಲ್ಲಿ ಸರ್ವ ಆತ್ಮಗಳೂ ಚಕ್ರದ ನೇಮಿ ಮತ್ತು ನಾಭಿಯಲ್ಲಿ ಅರೆಕಾಲುಗಳು ಹೇಗೋ ಹಾಗೆ ಅಡಕವಾಗಿದ್ದಾರೆ. [[ಲವಣ]] ನೀರಿನಲ್ಲಿ ಕರಗಿ ವ್ಯಾಪಿಸುವಂತೆ ಬ್ರಹ್ಮ ಸರ್ವವನ್ನೂ ವ್ಯಾಪಿಸಿದ್ದಾನೆ. [[ಅಗ್ನಿ]]ಯಿಂದ ಅಗ್ನಿಕಣಗಳೂ ಜೇಡರ ಹುಳುವಿನಿಂದ ಬಲೆಯ ಎಳೆಗಳೂ ವೇಣುವಿನಿಂದ ನಾದದ ಅಲೆಗಳೂ ಉದ್ಭವಿಸುವಂತೆ ಎಲ್ಲ ಭೂತಜಾತಗಳೂ ಬ್ರಹ್ಮನಿಂದಲೇ ಉದ್ಭವಿಸುತ್ತವೆ. ಎಲ್ಲ ಭೂತ ಜಾತಗಳಿಗೂ ಬ್ರಹ್ಮ ಏಕಾಯನನಾಗಿದ್ದಾನೆ.
೪೪ ನೇ ಸಾಲು:
ನಾಮರೂಪ ಜಗತ್ತಿನ ಸೃಷ್ಟಿಕ್ರಮವನ್ನು ಉಪನಿಷತ್ತುಗಳು ಹೇಳುವಾಗ ಚೇತನ, ಅಚೇತನ ಎಂಬ ಭೇದವನ್ನು ಹೇಳಿವೆ. ಅಚೇತನ ಜಗತ್ತು ಚೇತನ ಜೀವಗಳಿಗೆ ಸಾಧನಸಾಮಗ್ರಿ ಮಾತ್ರ. ಅದು ಪಂಚಭೂತಗಳಿಂದ ಕೂಡಿದೆ. [[ಪೃಥ್ವಿ]], ಅಪ್, ತೇಜಸ್, [[ವಾಯು]], [[ಆಕಾಶ]] ಎಂಬುವೇ ಇವು. ಛಾಂದೋಗ್ಯೋಪನಿಷತ್ತಿನಲ್ಲಿ ಅಗ್ನಿ, ಜಲ, ಪೃಥ್ವಿ ಎಂಬುವು ಬ್ರಹ್ಮನಿಂದ ಕ್ರಮವಾಗಿ ಸೃಷ್ಟಿಯಾದುವೆಂದು ಹೇಳಲಾಗಿದೆ. ತೇಜಸ್ಸು, ಜಲ, ಅನ್ನಗಳೇ ಇತರ ಸಕಲ ಭೂತಜಾತಗಳಿಗೆ ಮೂಲಕಾರಣ. ಈ ಮೂರನ್ನು ಸೃಷ್ಟಿಸಿದ ಮೇಲೆ ಇದನ್ನು ಒಂದುಗೂಡಿಸಿ ಅವುಗಳೊಂದಿಗೆ ಜೀವನಸಹಿತ ಪ್ರವೇಶಿಸಿ ನಾಮರೂಪಾತ್ಮಕವಾದ ಜಗತ್ತನ್ನು ಸೃಜಿಸಲು ಬ್ರಹ್ಮ ಸಂಕಲ್ಪಿಸಿತು. ಹೀಗೆ ಜಗತ್ತಿಗೆ ಬ್ರಹ್ಮವೇ ಉಪಾದಾನಕಾರಣ, ನಿಮಿತ್ತಕಾರಣ ಎರಡೂ ಆಗಿದೆ. ಐತರೇಯ, ತೈತ್ತಿರೀಯ ಉಪನಿಷತ್ತುಗಳಲ್ಲಿಯೂ ಪರಮಾತ್ಮಸಂಕಲ್ಪದಿಂದ ಸೃಷ್ಟಿ ಯೆಂದೂ ಅದರೊಳಗೆ ಬ್ರಹ್ಮನೇ ಅಂತಃಪ್ರವೇಶ ಮಾಡಿದನೆಂದೂ ಭಾವವಿದೆ. ಕಾರಣರೂಪಿ ಯಾದ ಬ್ರಹ್ಮನನ್ನು ತಿಳಿದವ ಅದರಿಂದಾದ ಪಂಚಭೌತಿಕ ಜಗತ್ತನ್ನೂ ಅರಿಯುತ್ತಾನೆ.
ಬ್ರಹ್ಮಜ್ಞಾನವನ್ನು ಪಡೆಯುವ ಕ್ರಮವನ್ನು ಕುರಿತು ಪರಾವಿದ್ಯೆ, ಅಪರಾವಿದ್ಯೆಗಳ ಭೇದವನ್ನು ಹೇಳಿದೆ. ಬ್ರಹ್ಮನನ್ನು ತಿಳಿಯುವುದು ಪರಾವಿದ್ಯೆ. ನಾಮರೂಪವಾದ ಜಗತ್ತನ್ನು ತಿಳಿಯುವುದು ಅಪರಾವಿದ್ಯೆ. ಮಣ್ಣನ್ನು ತಿಳಿಯುವುದರಿಂದ ಮಣ್ಣಿನಿಂದಾದುವೆಲ್ಲವನ್ನೂ ತಿಳಿಯುವಂತೆ, ಬ್ರಹ್ಮನನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ, ಇದಕ್ಕಿಂತ ಹೆಚ್ಚಿನ ವಿದ್ಯೆ ಯಾವುದೂ ಇಲ್ಲ. ಹೀಗೆಂದು ಮುಂಡಕೋಪನಿಷತ್ ಹೇಳುತ್ತದೆ. ಆದರೆ ಈಶೋಪನಿಷತ್ ಬ್ರಹ್ಮನನ್ನು ಅರಿಯಲು ಸಾಧ್ಯವಿಲ್ಲವೆಂದು ಬ್ರಹ್ಮಸ್ವರೂಪವನ್ನು ಹೇಳುವಾಗ ಸೂಚಿಸುತ್ತದೆ. ‘ಚಲಿಸುತ್ತದೆ, ಚಲಿಸುವುದಿಲ್ಲ, ದೂರದಲ್ಲಿದೆ, ಸಮೀಪದಲ್ಲಿದೆ, ಒಳಗೂ ಇದೆ, ಹೊರಗೂ ಇದೆ.’ ಹೀಗೆಯೇ ಬೃಹದಾರಣ್ಯಕದಲ್ಲಿ ಅಕ್ಷರರೂಪಿಯಾದ ವಿಶ್ವಾತ್ಮನನ್ನು ಕುರಿತು `ಸ್ಥೂಲನಲ್ಲ, ಅಣುವಲ್ಲ, ಹ್ರಸ್ವನಲ್ಲ, ದೀರ್ಘನಲ್ಲ, ಅಗ್ನಿಯಂತೆ ಕೆಂಪಾಗಿಲ್ಲ, ಜಲದಂತೆ ಹರಿಯುವುದಿಲ್ಲ. ನೆರಳಲ್ಲ, ಕತ್ತಲೆಯಲ್ಲ, ವಾಯುವಾಗಲೀ ಆಕಾಶವಾಗಲೀ ಅಲ್ಲ, ಸಂಸರ್ಗವುಳ್ಳದ್ದಲ್ಲ, ರಸವಲ್ಲ, ಗಂಧವಲ್ಲ. ಅದಕ್ಕೆ ಕಣ್ಣುಗಳಿಲ್ಲ, ಅದು ಅಳತೆಗೊಳಗಾದುದಲ್ಲ, ಒಳಗಿಲ್ಲ, ಹೊರಗಿಲ್ಲ’ ಎಂಬ ವಿವರಣೆ ಇದೆ. ಕೊನೆಯಲ್ಲಿ ಅರಿಯಲ್ಪಡುವವನೂ ನೋಡುವವನೂ ಮನನಮಾಡು ವವನೂ ಅರಿಯುವವನೂ ಅದಲ್ಲದೆ ಬೇರೆಯಲ್ಲ. ಈ ಅಕ್ಷರನಲ್ಲಿ ಎಲ್ಲವೂ ಓತಪ್ರೋತವಾಗಿದೆ. ಯಾವನು ಈ ಅಕ್ಷರನನ್ನು ತಿಳಿದು, ಈ ಲೋಕವನ್ನೇ ಬಿಡುವನೋ ಅವನು ಬ್ರಹ್ಮಜ್ಞನೆನಿಸುವನು ಎಂದು ಹೇಳಿದ್ದರೂ ವಾಕ್ಕಿಗೂ ಮನಸ್ಸಿಗೂ ದೂರನಾಗಿರುವನೆಂಬ ಸೂಚನೆ ಇದೆ. ಇದು
[[ಜ್ಞಾನಮಾರ್ಗ]]ವನ್ನಷ್ಟೇ ಅಲ್ಲದೆ, ಉಪನಿಷತ್ತುಗಳು ಭಕ್ತಿ ಮತ್ತು [[ಕರ್ಮಮಾರ್ಗ]]ಗಳನ್ನೂ ಅನುಮೋದಿಸಿವೆ. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳಲ್ಲಿ ನಾಲ್ಕನೆಯದರಲ್ಲಿ ಯೋಗಶಕ್ತಿಯಿಂದ [[ಬ್ರಹ್ಮಜ್ಞಾನ]] ಉಂಟಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಆದರೂ ಈ ಜ್ಞಾನಮಾರ್ಗದಲ್ಲಿ ಕರ್ಮಕ್ಕೂ ಭಕ್ತಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ತೈತ್ತಿರೀಯೋಪನಿಷತ್ತಿನಲ್ಲಿ ಸತ್ಯನಿಷ್ಠೆ, ತಪಸ್ಸು, ವೇದಾಧ್ಯಯನಗಳಿಂದ ಅಮೃತತ್ವವುಂಟಾಗುತ್ತದೆ ಎಂದು ಹೇಳಲಾಗಿದೆ. ಅಹಂಕಾರನಿವೃತ್ತಿಯಾದಾಗಲೇ ಬ್ರಹ್ಮಜ್ಞಾನ ಪ್ರಾಪ್ತಿ. [[ಬ್ರಹ್ಮಚರ್ಯ]], ಗೃಹಸ್ಥ, [[ವಾನಪ್ರಸ್ಥ]] ಎಂಬ ಮೂರು ಆಶ್ರಮಗಳಲ್ಲಿದ್ದು ಮಾನವ ಸರ್ವಸಂಗ ಪರಿತ್ಯಾಗ ಭಾವನೆಯಿಂದ ವೈರಾಗ್ಯವನ್ನು ಅಭ್ಯಾಸ ಮಾಡಿದರೆ ಸಂನ್ಯಾಸಾಶ್ರಮ, ಅದರೊಂದಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತವೆ ಎಂದು ತಿಳಿಸಲಾಗಿದೆ. ಹೀಗೆ ಮೋಕ್ಷಕ್ಕೆ ಅಂದರೆ ಬ್ರಹ್ಮಸಾಕ್ಷಾತ್ಕಾರಕ್ಕೆ ಪೂರ್ವಭಾವಿಯಾಗಿ ಸಾಧನೆಯೂ ಅಗತ್ಯ. ಬೃಹದಾರಣ್ಯಕದಲ್ಲಿ ಪ್ರಜಾಪತಿಯ ಮಕ್ಕಳನ್ನು ದೇವ, ಮನುಷ್ಯ, ಅಸುರ ಎಂದು ವರ್ಗೀಕರಿಸಿ ಅವರಿಗೆ ಪ್ರಜಾಪತಿ ಕರ್ತವ್ಯವನ್ನು ವಿಧಿಸುವಾಗ ಅಸುರರಿಗೆ ದಯಧ್ವಂ ಎಂದೂ ಮನುಷ್ಯರಿಗೆ ದತ್ತ ಎಂದೂ ದೇವತೆಗಳಿಗೆ ದಾಮ್ಯತ ಎಂದೂ ವಿಧಿಸಿರುವ ಸಂಗತಿ ಇದೆ. ಅಂದರೆ ಮಾನವರು ಸಮಾಜದಲ್ಲಿ ಪರಹಿತವನ್ನು ಆಚರಿಸತಕ್ಕದ್ದು, ಲೋಕವನ್ನು ತ್ಯಜಿಸಿ ಒಂಟಿಯಾಗಿದ್ದರೆ ಮಾತ್ರ ಮೋಕ್ಷಪ್ರಾಪ್ತಿಯಲ್ಲ ಎಂಬುದೇ ಸಾರಾಂಶ.
೬೪ ನೇ ಸಾಲು:
== ಉಪನಿಷದ್ಗಳ ಪಟ್ಟಿ ==
{{wikisourcelang|oldwikisource|उपनिषद्|उपनिषद्}}
ಪ್ರತಿಯೊಂದು ಉಪನಿಷತ್ತೂ ವೇದವೊಂದಕ್ಕೆ ಸಂಬಂಧಿಸಿದೆ. ಮುಖ್ಯ ಉಪನಿಷತ್ತುಗಳು ಈ ಕೆಳಗೆ ತಿಳಿಸಿದಂತೆ ವೇದಗಳಿಗೆ ಸಂಬಂಧಿಸಿವೆ:
[[ಋಗ್ವೇದ]]ಕ್ಕೆ [[ಐತರೇಯೋಪನಿಷತ್|ಐತರೇಯ]], [[ಕೌಷೀತಕಿ ಉಪನಿಷತ್| ಕೌಷೀತಕಿ]] ಉಪನಿಷತ್ತುಗಳೂ ಸಾಮವೇದಕ್ಕೆ [[ಛಾಂದೋಗ್ಯೋಪನಿಷತ್|ಛಾಂದೋಗ್ಯ]] ಮತ್ತು[[ಕೇನೋಪನಿಷತ್ |ಕೇನ]] ಉಪನಿಷತ್ತುಗಳೂ ಕೃಷ್ಣ ಯಜುರ್ವೇದಕ್ಕೆ [[ಕಠೋಪನಿಷತ್|ಕಠ]],[[ಶ್ವೇತಾಶ್ವತರೋಪನಿಷತ್| ಶ್ವೇತಾಶ್ವತರ]],[[ಮೈತ್ರಾಯಣಿ ಪನಿಷತ್| ಮೈತ್ರಾಯಣೀಯ]],[[ತೈತ್ತಿರೀಯೋಪನಿಷತ್ |ತೈತ್ತಿರೀಯ]] ಮತ್ತು ಮಹಾ ನಾರಾಯಣೀಯ ಉಪನಿಷತ್ತುಗಳೂ ಶುಕ್ಲಯಜುರ್ವೇದಕ್ಕೆ [[ಬೃಹದಾರಣ್ಯಕೋಪನಿಷತ್| ಬೃಹದಾರಣ್ಯಕ]] ಮತ್ತು [[ಈಶಾವಾಸ್ಯೋಪನಿಷತ್| ಈಶಾವಾಸ್ಯೋಪನಿಷತ್ತುಗಳೂ]] ಅಥರ್ವವೇದಕ್ಕೆ [[ಮುಂಡಕೋಪನಿಷತ್| ಮುಂಡಕ]], ಪ್ರಶ್ನ,[[ಮಾಂಡೂಕ್ಯೋಪನಿಷತ್| ಮಾಂಡೂಕ್ಯ]] ಉಪನಿಷತ್ತುಗಳೂ ಸೇರಿವೆ. ಉಪನಿಷತ್ತುಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಕ್ತಿಕೋಪನಿಷತ್ತಿನಲ್ಲಿ ಇವು 108 ಎಂದು ತಿಳಿಸಲಾಗಿದೆ. ಬೇರೆ ಬೇರೆ ವೇದಶಾಖೆಗಳಿಗೆ ಸೇರಿದ ಅನೇಕ ಉಪನಿಷತ್ ಗಳಿದ್ದರೂ ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದವೆನ್ನಿಸಿಕೊಂಡಿರುವವು 13. ಅವುಗಳಲ್ಲಿ ದಶೋಪನಿಷತ್ತುಗಳೆಂದು ಸುಪ್ರಸಿದ್ಧವಾಗಿರುವವು ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕಗಳು. ಉಳಿದವು ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ. ಈ 13 ಉಪನಿಷತ್ತುಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ; ಮತ್ತು ಇವನ್ನು ಕುರಿತು ಭಾಷ್ಯ ಬರೆದಿದ್ದಾರೆ. ▼
{| class="wikitable"
|+ ವೇದ - ಶಾಖೆ - ಉಪನಿಷತ್ತುಗಳ ಸಂಬಂಧ
|-
! ವೇದ!!ವಿಭಾಗ!![[ಶಾಖೆ]]!! ಮುಖ್ಯ ಉಪನಿಷತ್
|-
| [[ಋಗ್ವೇದ]]||ಒಂದೇ ವಿಭಾಗ||ಶಕಲ|| [[ಐತರೇಯೋಪನಿಷತ್|ಐತರೇಯ]]
|-
| rowspan=3|[[ಸಾಮವೇದ]]||rowspan=3|ಒಂದೇ ವಿಭಾಗ ||ಕೌತುಮ || [[ಛಾಂದೋಗ್ಯೋಪನಿಷತ್|ಛಾಂದೋಗ್ಯ]]
|-
| [[ಜೈಮಿನೀಯ]]|| [[ಕೇನೋಪನಿಷತ್ | ಕೇನ]]
|-
|ರಾಣಾಯನೀಯ
|-
|rowspan=7|[[ಯಜುರ್ವೇದ]]||rowspan=5|[[ಕೃಷ್ಣ ಯಜುರ್ವೇದ]]||ಕಠ ||[[ಕಠೋಪನಿಷತ್|ಕಠ]]
|-
|[[ತೈತ್ತಿರೀಯ ಶಾಖೆ|ತೈತ್ತಿರೀಯ]]||[[ತೈತ್ತಿರೀಯೋಪನಿಷತ್|ತೈತ್ತಿರೀಯ]] ಮತ್ತು [[ಶ್ವೇತಾಶ್ವತರೋಪನಿಷತ್|ಶ್ವೇತಾಶ್ವತರ]]{{sfn|Lal|1992||p=4090}}
|-
|ಮೈತ್ರಾಯಣಿ ||[[ಮೈತ್ರಾಯಣೀಯ]]
|-
|ಹಿರಣ್ಯಕೇಶಿ (ಕಪಿಸ್ಥಲ)||
|-
|ಕಾಠಕ
|-
|rowspan=2|[[ಶುಕ್ಲ ಯಜುರ್ವೇದ]]||ವಾಜಸನೇಯಿ ಮಧ್ಯಂದಿನ||[[ಈಶೋಪನಿಷತ್|ಈಶ]] ಮತ್ತು [[ಬೃಹದಾರಣ್ಯಕ ಉಪನಿಷತ್|ಬೃಹದಾರಣ್ಯಕ]]
|-
|[[ಕಾಣ್ವ ಶಾಖ]]
|-
|rowspan=2|[[ಅಥರ್ವವೇದ|ಅಥರ್ವ]]||rowspan=2|ಎರಡು ವಿಭಾಗಗಳು|| [[ಶೌನಕ]]||[[ಮಾಂಡೂಕ್ಯೋಪನಿಷತ್|ಮಾಂಡೂಕ್ಯ]] ಮತ್ತು [[ಮುಂಡಕೋಪನಿಷತ್|ಮುಂಡಕ]]
|-
||ಪೈಪ್ಪಲಾದ||[[ಪ್ರಶ್ನೋಪನಿಷತ್|ಪ್ರಶ್ನ]]
|}
▲
=== "೧೦೮" ಉಪನಿಷತ್ಗಳು ===
# [[ಈಶಾವಾಸ್ಯೋಪನಿಷತ್]] = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
Line ೧೭೬ ⟶ ೨೦೮:
=== "ಪ್ರಧಾನ" ಉಪನಿಷತ್ಗಳು ===
[[ಶೃತಿ]] (ವೇದಗಳ ಸಮ) ಎಂದು ಬಹಳಷ್ಟು ಹಿಂದುಗಳು ಮಾನ್ಯಮಾಡಿರುವ ಮತ್ತು [[ಶಂಕರಾಚಾರ್ಯ|ಶಂಕರರು]] ಭಾಷ್ಯ ಬರೆದಿರುವ [http://www.cs.memphis.edu/~ramamurt/u_intro1.html#NDAUTHOR ] "ಪ್ರಧಾನ"
# [[ಐತರೇಯೋಪನಿಷತ್ ]]
Line ೧೯೦ ⟶ ೨೨೨:
# [[ಪ್ರಶ್ನೋಪನಿಷತ್ ]]
{{IAST|[[ಕೌಷಿಕಿ]]}} ಮತ್ತು {{IAST|[[ಮೈತ್ರಾಯಣಿ]]}} ಉಪನಿಷತ್ಗಳನ್ನು ಸೇರಿಸಲಾಗಿದೆ. ಇವೆಲ್ಲವೂ ಸಾಮಾನ್ಯವಾಗಿ ಕಾಲಗಣನಾ ಪದ್ಧತಿಗಿಂತಲೂ ಹಿಂದಿನವುಗಳು. ಭಾಷಾ ಶಾಸ್ತ್ರದ ಸಾಕ್ಷಿಗಳ ಆಧಾರದಲ್ಲಿ ಅವುಗಳಲ್ಲಿ ಬಹಳ ಹಿಂದಿನವು ಎಂದರೆ [[ಬೃಹದಾರಣ್ಯಕ ಉಪನಿಷತ್ |ಬೃಹದಾರಣ್ಯಕ ಉಪನಿಷತ್ ]]ಮತ್ತು
[[
▲[[ಮುತ್ತಿಕಾ ಉಪನಿಷತ್]]ನ ೧೦೮ ಉಪನಿಷತ್ಗಳ ಪೈಕಿ ಮೊದಲ ೧೦ ''[[ಮುಖ್ಯ]]'' "ಪ್ರಧಾನ" ಉಪನಿಷತ್ಗಳಾಗಿ ಪರಿಗಣಿಸಿದೆ. ೨೧ನ್ನು [[ಸಾಮಾನ್ಯ ವೇದಾಂತ]] "ಸಾಮಾನ್ಯ [[ವೇದಾಂತ]]"ವೆಂದು, ೨೩ನ್ನು [[ಸನ್ಯಾಸ]], ೯ [[ಶಾಕ್ತ]], ೧೩ನ್ನು [[ವೈಷ್ಣವ]], ೧೪ನ್ನು [[ಶೈವ]] ಮತ್ತು ೧೭ನ್ನು [[ಯೋಗ]] ಉಪನಿಷತ್ಗಳು.<ref>
{{cite web
|url=http://www.vedah.com/org/literature/upanishads/108Upanishads.asp
Line ೨೩೪ ⟶ ೨೬೩:
# ''ಸೌಭಾಗ್ಯ'' (RV)
# ''ಸರಸ್ವತಿರಹಸ್ಯ'' (KYV)
# ''
== ಭಾರತದಿಂದ ಹೊರಗೆ ವಿಖ್ಯಾತಿ ==
ಚಕ್ರವರ್ತಿಯಾದ [[ಅಕ್ಬರ್]] ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ [[ಸಂಸ್ಕೃತ]] ದಿಂದ ಮೊದಲು [[ಪರ್ಷಿಯನ್]] ಭಾಷೆಗೆ ಉಪನಿಷತ್ಗಳು ಅನುವಾದ ನಂತರ ಭಾರತದಿಂದ ಹೊರಗೆ [[ವೇದಗಳು]] ವಿಖ್ಯಾತವಾದವು. [[ಷಹಜಹಾನ್ |ಷಹಜಹಾನ]] ನು ಚಕ್ರವರ್ತಿಯಿಂದ ಪ್ರಭಾವಿತನಾಗಿದ್ದು ಅವನ ದೃಷ್ಠಿಕೋನವನ್ನು ಹಂಚಿಕೊಂಡಿದ್ದನು. ಷಹ ಜಹಾನನ ಹಿರಿಯ ಮಗ [[ದಾರಾ ಶಿಕೊಹ್]], ಒಬ್ಬ ಉದಾರ [[ಮುಸ್ಲಿಮ್ |ಮುಸ್ಲಿಮ]]ನಾಗಿದ್ದನು, ''ಎರಡು ಸಮುದ್ರಗಳ ಮಿಲನ'' ಎಂಬ ಅರ್ಥ ಬರುವ [[ಮಜ್ಮಾ-ಉಲ್-ಬಹ್ರೇನ್]] ಪುಸ್ತಕವನ್ನು ಬರೆದಿದ್ದು [[ಇಸ್ಲಾಂ]] ಮತ್ತು [[ಹಿಂದೂ ಧರ್ಮ]]ಗಳ ನಡುವೆ
=== ಯೂರೋಪಿನವರ ಪಾಂಡಿತ್ಯ ===
|