ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 115 interwiki links, now provided by Wikidata on d:q872 (translate me)
ಚು clean up, replaced: → using AWB
೧ ನೇ ಸಾಲು:
[[File:TeslaWirelessPower1891.png|right|thumb|200px|[[ನಿಕೊಲಾ ಟೆಸ್ಲಾ]] ೧೮೯೧ರಲ್ಲಿ ತಮ್ಮ ರೇಡಿಯೊ ತಂತ್ರಜ್ಞಾನ ಪ್ರದರ್ಶಿಸುತ್ತಿರುವುದು.]]
'''ರೇಡಿಯೋ''' ದೃಷ್ಟಿ ಮಟ್ಟದ [[ಬೆಳಕು|ಬೆಳಕಿಗಿಂತ]] ಹೆಚ್ಚಿನ [[ತರಂಗಾಂತರ]]ದ [[ವಿದ್ಯುತ್ ಕಾಂತೀಯ ತರಂಗ]]ಗಳಲ್ಲಿ ಸಂಜ್ಞೆಗಳನ್ನು ಪ್ರಸರಿಸುವ ತಂತ್ರಜ್ಞಾನ. ಈ ತರಂಗಗಳು ಬಹಳ ದೂರದವರೆಗೆ ಪ್ರಸಾರವಾಗುವುದರಿಂದ ದೂರಪ್ರಸರಣಗಳಿಗೆ ಈ ತಂತ್ರಜ್ಞಾನ ಅತ್ಯಂತ ಸಹಾಯಕಾರಿ.
 
ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಆಕಾಶವಾಣಿ ಎಂಬ ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ ಆಕಾಶದಿಂದ ಬರುವ ದನಿ ಎಂದರ್ಥ. ಕೆಲವರು [[ರವೀಂದ್ರನಾಥ ಠಾಗೋರ್]] ಅವರು ೧೯೩೦ ರಲ್ಲಿ ರೇಡಿಯೋ ಪದಕ್ಕೆ ಆಕಾಶವಾಣಿ ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು ೧೯೨೦ ರಲ್ಲಿ ಕನ್ನಡದ ಬರಹಗಾರರಾದ [[ನಾ. ಕಸ್ತೂರಿ]]ಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ.
೧೧ ನೇ ಸಾಲು:
ಮನೆಯಲ್ಲಿ ೩೦ ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ ಮೀಟರ್ )ವೊಂದನ್ನು ಸ್ಥಾಪಿಸಿ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ ೬ ರಿಂದ ೮.೩೦ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ ಇದನ್ನು ೨೫೦ ವ್ಯಾಟ್ ಸಾಮರ್ಥ್ಯದ ಪ್ರೇಷಕವಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಇದರಿಂದ ಮೈಸೂರಿನ ಸುತ್ತಮುತ್ತ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗುತ್ತಿತ್ತು. ಶಾರ್ಟ್ ವೇವ್ ನಲ್ಲಿನ ಪ್ರಸಾರವನ್ನು ವಾತಾವರಣ ಉತ್ತಮವಿರುವ ಸಮಯದಲ್ಲಿ ಶ್ರೀಲಂಕಾದಲ್ಲಿ, ಹಾಗೆಯೇ ಉತ್ತರ ಭಾರತದಲ್ಲಿಯೂ ಕೇಳಲಾಗುತ್ತಿತ್ತಂತೆ. ಈ ಬಾನುಲಿ ಕೇಂದ್ರವು ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸುವುದರ ಜೊತೆಗೆ ‘ಆಕಾಶವಾಣಿ’ ಎಂಬ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು. ಕರ್ನಾಟಕದ ಹೆಮ್ಮೆಯೆನಿಸಿರುವ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸ್ಥಾಪಕ ನಿರ್ದೇಶಕರೂ ಗೋಪಾಲಸ್ವಾಮಿಯವರು ಇದನ್ನು ಜನಪ್ರಿಯಗೊಳಿಸಿದರು ಎಂಬುದು ಬಹುಮಂದಿಗೆ ಗೊತ್ತೇ ಇರದ ಸತ್ಯ.
 
ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು ೧೯೩೨ ರಲ್ಲಿ ಬರೆದ ‘ಆಕಾಶವಾಣಿ ’ಎಂಬ ಹೆಸರಿನಿಂದ ಬರೆದ ಪುಸ್ತಕದಿಂದ ಪ್ರೆರಿತವಾದ ಹೆಸರು.ಮುಂದೆ ಇದೇ ಪದವನ್ನು ಮೈಸೂರಿನ ಆಕಾಶವಾಣಿ ಸಹಾಯಕ ನಿರ್ದೇಶಕ ಸಾಹಿತಿ ನಾ.ಕಸ್ತೂರಿಯವರು ಸೂಚಿಸಿದರು. ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು ೧೯೪೨ ಜನವರಿ ಒಂದರಂದು ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು. ನಂತರ 'ವಿಠಲವಿಹಾರ' ದಿಂದ ನಿಲಯವನ್ನು ಇಂದಿನ ಹಳೆಯ ವಸ್ತು ಪ್ರದರ್ಶನದ ಪ್ರಾಧಿಕಾರದ ಕಟ್ಟಡದ ಮೊದಲನೆಯ ಮಹಡಿಗೆ ಸ್ಥಳಾಂತರ ಮಾಡುತ್ತಾರೆ.ನಂತರ ವಾಣಿ ವಿಲಾಸಮೊಹಲ್ಲಾ ದ ಹೊಸ ಸುಸಜ್ಜಿತ ಕಟ್ಟಡಕ್ಕೆ ಆಕಾಶವಾಣಿಯನ್ನು ವರ್ಗಾಯಿಸಲಾಯಿತು. ಸ್ವಾತಂತ್ರ್ಯ ನಂತರ ೧೯೫೦ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು.೧೯೫೦ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಮಾತ್ರ.
 
ಆಕಾಶವಾಣಿಯಲ್ಲಿ ತಮ್ಮದೇ ಕಾರ್ಯಕ್ರಮ ಕೇಳಿದ ಕುವೆಂಪು ಅವರು 'ಇದು ಆಕಾಶವಾಣಿಯಲ್ಲ, ಪಿಶಾಚವಾಣಿ' ಎಂದು ಹೇಳಿ ಎಲ್ಲರನ್ನೂ ನಗಿಸಿದ್ದರಂತೆ.ಹೀಗೆ ವಿದ್ವಾನ್ ಹೊಸಬೆಟ್ಟು ರಾಮರಾವ್‌ ಅವರ ೧೯೩೨ ರಲ್ಲಿ ಹೆಸರಿಲ್ಲದೆ ಪ್ರಕಟವಾದ ಪುಸ್ತಕದ ಹೆಸರಾದ " ಆಕಾಶವಾಣಿ" ಪದವನ್ನು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲೇಖಕರೂ ಆಗಿದ್ದ ನಾ,ಕಸ್ತೂರಿ ಅವರು ಸೂಚಿಸಿದರು,ಇದನ್ನು ಡಾ.ಎಂ.ವಿ.ಗೋಪಾಲಸ್ವಾಮಿಯವರು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದರು.ಕೇಂದ್ರ ಸರಕಾರವು ಇದನ್ನು ೧೯೪೩ ರಲ್ಲಿ ಮಾನ್ಯ ಮಾಡಿ "ಮೈಸೂರು ಆಕಾಶವಾಣಿ "ಎಂದು ನಾಮಕರಣ ಮಾಡಿತು.ಮುಂದೆ "ಆಲ್ ಇಂಡಿಯಾ ರೇಡಿಯೋ"ಗೆ ಕೂಡ ೧೯೫೬ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರಿಡಲಾಯಿತು. ''ನಮನ''
೧೭ ನೇ ಸಾಲು:
 
=== ಆಕಾಶವಾಣಿ ರಾಮರಾಯರು. ===
ರೇಡಿಯೊ ಎಂಬ ಒಂದು ಅದ್ಭುತವು ಜನತೆಯ ಮುಂದೆ ಬಂದಾಗ ಅದಕ್ಕೆ ‘ಆಕಾಶದಿಂದ ಬರುವ ವಾಣಿ’, ‘ಆಕಾಶವಾಣಿ ’ಎಂಬ ಹೆಸರಿನಿಂದ ಕರೆದು ಪೂರ್ತಿ ವಿವರಗಳನ್ನೊಳಗೊಂಡ ಪುಸ್ತಕವೊಂದು ೧೯೩೨ ಅಚ್ಚಾದಾಗ ವಿಸ್ಮಯ ಹಾಗೂ ಬೆರಗಿನಿಂದ ಜನತೆ ಅದನ್ನು ಸ್ವೀಕರಿಸಿದರು. ಇದನ್ನು ಬರೆದವರು "ಆಕಾಶವಾಣಿ ರಾಮರಾಯರು" ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು.
 
Line ೨೪ ⟶ ೨೩:
೧೯೩೨ ರಲ್ಲಿ ರಾಮರಾಯರ ಪುಸ್ತಕ ಅಚ್ಚಾಗಿ ೧೯೪೩ ರ ಹೊತ್ತಿಗೆ ಬಹಳ ಸಮಯವೇ ಸಂದು ಹೋಗಿತ್ತು.ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಯೊಂದು ಹೀಗೆ ಹೇಳುತ್ತದೆ. the name akashavani was taken from an article by can unknown writer ಹೆಸರು ಹಾಕದೆ ಬರೆದ ರಾಮರಾಯರೇ ಆಕಾಶವಾಣಿ ಪದದ ಜನಕ ಎಂದು ಸ್ಪಷ್ಟವಾಗಿ ಹೇಳಿತು. ೧೯೪೧ ಹಾಗೂ ೧೯೪೫ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯು ಇದೇ ಆಕಾಶವಾಣಿ ಲೇಖನವನ್ನು ಕನ್ನಡ ಸಾಹಿತ್ಯ ಕೃತಿಗಳು ಎಂಬ ಶಾಲಾ ಪಠ್ಯಪುಸ್ತಕದಲ್ಲಿ ರಾಮರಾಯರ ಹೆಸರು ಹುದ್ದೆಗಳೊಂದಿಗೆ ಪ್ರಕಟಿಸಿತು. ಇದರ ಪ್ರತಿಯು ಅವಗಾಹನೆಗೆ ಲಭ್ಯವಿರುತ್ತದೆ.
 
1945ರಲ್ಲಿ ಈ ಲೇಖನ ರಾಮರಾಯರ ಹೆಸರು ಹುದ್ದೆಗಳೊಂದಿಗೆ (ಹೊಸಬೆಟ್ಟು ರಾಮರಾಯರು, ಜಿಲ್ಲಾ ಶಿಕ್ಷಣಾಧಿಕಾರಿ) ಕನ್ನಡದ ಸಾಹಿತ್ಯ ಕೃತಿಗಳು ಎಂಬ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಲು ಮದ್ರಾಸಿನ ಪಠ್ಯಪುಸ್ತಕ ಸಮಿತಿಯಿಂದ ಶಿಫಾರಸು ದೊರಕಿತು. ಹೊಸಬೆಟ್ಟು ರಾಮರಾಯರಿಂದ ಸೃಷ್ಟಿಗೊಂಡ ಈ ಹೆಸರು ರೇಡಿಯೊದ ಜೊತೆಗೆ ಖಾಯಂ ಆಗಿ ಉಪಯೋಗ ವಾಗಲು ತೊಡಗಿದ್ದಲ್ಲದೇ ಸರ್ವರಿಗೂ ಈ ಹೊಸ ಹೆಸರು ಪರಿಚಯವಾಯಿತು. ಮುಂದೆ ಇದೇ ಪದವನ್ನು ಮೈಸೂರಿನಲ್ಲಿ ಗೋಪಾಲಸ್ವಾಮಿಯವರ ರೇಡಿಯೊ ಕೇಂದ್ರಕ್ಕೆ ೧೯೪೩ ರಲ್ಲಿ ನಾ.ಕಸ್ತೂರಿಯವರು ಸೂಚಿಸಿದರು.೧೯೩೨ ರಲ್ಲಿ ಜನಿಸಿದ ಆಕಾಶವಾಣಿ ಪದವನ್ನು ೧೧ ವರ್ಷದ ಬಳಿಕ ಮೈಸೂರಿನ ಓರ್ವರು ಪುಸ್ತಕದ ಮರು ಮುದ್ರಣ ಮಾಡಿದರು. ಈ ಪುಸ್ತಕದ ಹಿಂಭಾಗ ಅಥವಾ ಮುಂಭಾಗದಲ್ಲಿ ರಾಮರಾಯರ ಹೆಸರು ಇತ್ತು. ಈ ಮೂಲಕ ೧೯೪೧ -೧೯೪೩ ರ ವರ್ಷಗಳ ನಂತರ ೧೯೩೨ ರ ಅಜ್ಞಾತ ಜನಕ ಯಾರೆಂಬ ಸತ್ಯವು ಹೊರಗೆ ಬಿತ್ತು. ೧೯೩೨ ರ ಕಿರುಪುಸ್ತಕದ ಮುಖಪುಟವನ್ನು ಆಕರ್ಷಕವಾಗಿ ಮುದ್ರಿಸಲಾಗಿತ್ತು. ನಾಲ್ಕು ಕಡೆಗಳ ಬದಿಯಲ್ಲಿ ಕಪ್ಪುರೇಖೆಗಳು. ಮೇಲ್ಬಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ , ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ‘ಆ ’ಮತ್ತು ‘ಣಿ’ ದೊಡ್ಡದಾಗಿ ಒಳಗಿನ ಅಕ್ಷರಗಳು ಕಿರಿದಾಗುತ್ತಾ ಬಲ ಭಾಗದಲ್ಲಿ ಕೆಳಗಿನಿಂದ ಒಂದು ರೇಡಿಯೊದ ಚಿತ್ರಣವನ್ನು ಕೈಯಲ್ಲಿ ಬಿಡಿಸಲಾಗಿತ್ತು."ನಮನ"
 
[[ವರ್ಗ:ರೇಡಿಯೋ|*]]
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ