ನಾಲ್ವಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{copyedit}}
 
[[ಚಿತ್ರ:Nalvadi Krishnaraja Wodeyar 1881-1940.jpg|thumb|right|ನಾಲ್ವಡಿ ಕೃಷ್ಣರಾಜ ಒಡೆಯರು]]
'''ನಾಲ್ವಡಿ ಕೃಷ್ಣರಾಜ ಒಡೆಯರು''' ([[ಜೂನ್ ೪]], [[೧೮೮೪]] - [[ಆಗಸ್ಟ್ ೩]], [[೧೯೪೦]]) [[ಮೈಸೂರು ಸಂಸ್ಥಾನ|ಮೈಸೂರು ಸಂಸ್ಥಾನದ]] [[ಒಡೆಯರ್| ಒಡೆಯರ್ ರಾಜಸಂತತಿಯ]] ೨೪ನೇ ರಾಜರು. ಇವರ ಆಳ್ವಿಕೆ [[೧೯೦೨]] ರಿಂದ [[೧೯೪೦]]ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು [[೧೮೯೫]]ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ [[ವಾಣಿ ವಿಲಾಸ ಸನ್ನಿಧಾನ]]ದವರು [[ರೀಜೆಂಟ]]ರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ , ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.