ಕ್ರಿ ಶ ೧೯೩೪ರಲ್ಲಿ೧೮೩೪ರಲ್ಲಿ ಲಿಂಗಾಯತ ಅರಸರ ಆಳ್ವಿಕೆಯು ಕೊನೆಗೊಂಡಿತು. ಚಿಕ್ಕವೀರರಾಜನನ್ನು ಮೊದಲಿಗೆ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಅವನೊಡನೆ ಚೆಪ್ಪುಡಿರ ಪೊನ್ನಪ್ಪ ದಿವಾನ, ಪ್ರಮುಖ ಕಾರ್ಯಕಾರ ಬಿದ್ದಂಡ ಸೋಮಯ್ಯ, ಮತ್ತಿತರನ್ನು ಜತೆಯಲ್ಲಿ ಕಳುಹಿಸಲಾಯಿತು. ಕೊಡಗಿನ ಮೊದಲ ಕಮಿಶನರ್ ಆಗಿ ನೇಮಕಗೊಂಡ ಫ್ರೇಸರನು ಕೊಡಗಿನಲ್ಲಿ ಪೊನ್ನಪ್ಪನಿಗಿರುವ ಪ್ರಭಾವವನ್ನರಿತು ಅವನನ್ನು ಕೊಡಗಿಗೆ ತಿರುಗಿ ಕರೆಸಿಕೊಂಡು ದಿವಾನನನ್ನಾಗಿ ನೇಮಿಸಿದನು. ಅಪ್ಪಾರಂಡ ಬೋಪಣ್ಣನೂ ದಿವಾನನಾಗಿ ಮುಂದುವರೆದನು. ಚಿಕ್ಕವೀರರಾಜನ ಪತನದ ನಂತರ ಕೊಡಗಿನಲ್ಲಿ ಕೆಲವರು ದಂಗೆಯೆದ್ದರು. ಬೋಪಣ್ಣನು ಸುಮಾರು ಮೂವತ್ತು ಮಂದಿ ಕೊಡವರ ಸೈನ್ಯಬಲದಿಂದ ದಂಗೆಯನ್ನು ಪರಿಣಾಮಕಾರಿಯಾಗಿ ಅಡಗಿಸಿದನು.