ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಶಿವ ಸಾಯುಜ್ಯ: ಮುಂದುವರೆಸಿದೆ
೨೦ ನೇ ಸಾಲು:
:ಜೀವಿಗಳು ಮೂರು ಬಗೆ . ಉತ್ತಮ ಆಣವ ಮಲ ಮಾತ್ರವಿರುವವರು- '''ವಿಜ್ಞಾನಾಕಲರು''' ಆಣವ ಮತ್ತು ಕಾರ್ಮಣ ಮಲದವರು - ಪ್ರಳಯಾಕಲರು : ಮಲತ್ರಯದವರು -ಸಕಲರು ; ಮುಕ್ತಿ ಪಡೆಯಲು ಮಲತ್ರಯದಿಂದ ಬಿಡುಗಡೆಯಾಗಬೇಕು. ಅದು ಶಿವಾನುಗ್ರಹದಿಂದ ಮಾತ್ರಾ ಸಾಧ್ಯ.
== ಶಿವ ಸಾಯುಜ್ಯ ==
ಪಾಶಗಳಿಂದ ಬಿಡುಗಡೆಯಾದ ಮೇಲೆ ಜೀವನು ಶಿವನೊಂದಿಗೆ ಸೇರುತ್ತಾನೆ ಸೃಷ್ಟಿ, ಸ್ಥಿತಿ ಲಯ , ತಿರೋಧಾನ ಅನುಗ್ರಹವುಳ್ಳ ಶಿವನಲ್ಲಿ ದೇರಿದರೂಸೇರಿದರೂ ,ಅದೈತವಿಲ್ಲ. ಬಂಧಗಳಿಂದ ಬಿಡುಗಡೆಯಾಗಿ ಶಿವಾನುಭವಾಗುವುದು. ಜೀವಂತವಿರುವಾಗಲೂ , ಮುಕ್ತಿಯನ್ನು ಪಡೆಯಬಹುದು. ಶಿವನನ್ನು ಪ್ರೀತಿಸಿದಂತೆ ಲೋಕವನ್ನುಈ ಲೋಕವನ್ನೂ ಪ್ರೀತಿಸುವುದು ಅಗತ್ಯ ಮತ್ತು ಅವಶ್ಯ. ಪ್ರತ್ಯಭಿಜ್ಞಾನ ದರ್ಶನ .
== ಪ್ರತ್ಯಭಿಜ್ಞಾ ದರ್ಶನ ಅಥವಾ ಅಭಾಸ ವಾದ ==
;ಇದು ಕಾಶ್ಮೀರ ಶೈವ , ಶಿವಾದ್ವೈತ , ಎಂಬ ಹಸರುಗಳುಳ್ಳ, ಉತ್ತರದ ದರ್ಶನ .
:'''ವಸುಗುಪ್ತನ ಶಿವ ಸೂತ್ರ''' (೮ನೇ ಶತಮಾನ) ಮೊದಲಾದ ಗ್ರಂಥಗಳು ಆಧಾರ . ಅದಕ್ಕೆ ಆಗಮವೇ ಆಧಾರವೆಂಬ ಮತ. ಇದು ಅದ್ವತವನ್ನು ಪ್ರತಿಪಾದಿಸುತ್ತದೆ. '''ಇಲ್ಲಿ ಪರಮ ತತ್ವ ಶಿವ''' . ಶಿವ -ಶಕ್ತಿಯರ ಸಾಮರಸ್ಯ. ಶಿವನನ್ನು ಹೊರತುಪಡಿಸಿ ಮತ್ತಾವ ತತ್ವವೂ ಇಲ್ಲ. ವಿಶ್ವ ಅವನ ಅಭಾಸ. ಅವನ ವಿಶ್ವಾತ್ಮಕ ರೂಪದಲ್ಲಿ ಸರ್ವಾಂತರ್ಯಾಮಿ . ವಿಶ್ರ್ವೇತ್ತೀರ್ಣ ರೂಪದಲ್ಲಿ ವಿಶ್ವವನ್ನು ಮ್ಭಿರಿದ್ದಾನೆ. ಅವನೇ ವಿಶ್ವವಾಗಿ ಸ್ಪುರಿಸುತ್ತಾನೆ. ಅದು ತನ್ನ ಇಚ್ಛಾಶಕ್ತಿಯಿಂದ. ಅವನೇ ಕತೃ . ಶಂಕರರ ಅದ್ವೈತದಲ್ಲಿ ಬ್ರಹ್ಮನಿಗೆ ಕತೃತ್ವವಿಲ್ಲ - ನಿರ್ಗುಣ. '''ಶಿವಾದ್ವೈತದಲ್ಲಿ ಜಗತ್ತು ಸತ್ಯ''' - ಶಿವನ ಅವಿಭಾವ - ಆದರೆ ಕನ್ನಡಿಯಲ್ಲಿ ಬಿಂಬದಂತೆ ಶಿವನಲ್ಲಿ ಅಭಾಸದಿಂದ (ವಸ್ತುವಿಲ್ಲದಿದ್ದರೂ) ಜಗತ್ತು ಕಾಣಿಸಿಕೊಳ್ಳುವುದು. ಇದಕ್ಕೆ '''ಅಭಾಸವಾದ''' ವೆಂದೂ ಹೆಸರಿದೆ.
== ಶಿವ -ಶಕ್ತಿ ==
:ಶಿವನಲ್ಲಿ ಇಚ್ಛೆಯಾದಾಗ '''ಸ್ಪಂದನ'''ವುಂಟಾಗುವುದು. ಅದೇ ಶಕ್ತಿ . ಹಾಗೆ '''ಶಿವ- ಶಕ್ತಿ''' ಎಂದು ಎರಡು ರೂಪ ಹೊಂದುವುದು. ಶಕ್ತಿ ವಿಮರ್ಶರೂಪದ್ದು - ಅಹಂ ಭಾವನೆಯದು ; ಸೃಷ್ಟಿಯಲ್ಲಿ ಅದು ವಿಶ್ವಾಕಾರ ; ಸ್ಥಿತಿಯಲ್ಲಿ ವಿಶ್ವಪ್ರಕಾರ ; ಸಂಹಾರದಲ್ಲಿ ವಿಶ್ವ ಸಂಹರಣ ರೂಪ ತಾಳುವುದು. ಈ ಶಕ್ತಿಯ ಸ್ಪುರಣವಿಲ್ಲದಿದ್ದರೆ , ಶಿವನಲ್ಲಿ ತನ್ನ ಪ್ರಕಾಶದ ಅರಿವಾಗದು ಅದು ಶಾಂತ ರೂಪ ತಾಳುವುದು. ಆದರೂ ಶಿವ ಶಕ್ತಿಯರು ಒಂದೇ -ಚಂದ್ರ -ಚಂದ್ರಿಕೆಯಂತೆ ;. ಶಿವ ಶಕ್ತಿಯರ ಅಂತರ ನಿವೇಶಕ್ಕೆ (ಒಂದುಗೂಡುವಿಕೆಗೆ ) ಸದಾಶಿವವೆಂದೂ, ಬಾಹ್ಯನಿವೇಶಕ್ಕೆ ಈಶ್ವರನೆಂದೂ ಹೆಸರು. ಇವರಿಂದ ಐದು ಶಕ್ತಿ ತತ್ವಗಳು ಉಂಟಾಗುತ್ತವೆ ; ಅವು '''ಚಿತ್ , ಆನಂದ , ಇಚ್ಛಾ , ಜ್ಞಾನ , ಕ್ರಿಯಾ .''' ಇದಕ್ಕೆ ತತ್ವಗಳು (ಹೆಸರು) ಶಿವ , ಶಕ್ತಿ , ಸದಾಶಿವ , ಈಶ್ವರ , ಶುದ್ಧವಿದ್ಯಾ (ಐದು) .
== ಮಾಯೆ ==
:'''ಮಾಯೆಯು ಪರಮೇಶ್ವರನ ಶಕ್ತಿ''' . ಶರೀರೇಂದ್ರಿಯಗಳನ್ನು ನಾನು ಎಂದು ತಿಳಿಯುವುದು ಮಾಯೆಯಿಂದ. ಶಿವನ ಸರ್ವ ಕರ್ತೃತ್ವ , ಸರ್ವಜ್ಞತ್ವ , ಪ್ರರ್ಣತ್ವ , ನಿತ್ಯತ್ವ , ವ್ಯಾಪಕತ್ವ ; ಸಂಕೋಚಗೊಂಡು , ಕಲಾ, ವಿದ್ಯಾ , ರಾಗ, ಕಾಲ ಮತ್ತು ನಿಯತಿಗಳೆಂಬ ಪಂಚ ಕಂಚುಕಗಳಾಗಿ ಜೀವನನ್ನು ಆವರಿಸಿರುವುದು ಮಾಯೆಯ ಪ್ರಭಾವದಿಂದ.
'''ಹೀಗೆ ಮಾಯೆಯಿಂದಾವರಿಸಲ್ಪಟ್ಟವನೇ ಪುರುಷ''' . ತಾನು ಶಿವನೇ ಆಗಿದ್ದರೂ, ವಿಸ್ಮೃತಿಯಿಂದ ಜೀವನಾಗಿದ್ದಾನೆ. ಪುರುಷ ಹನ್ನೆರಡನೆಯ ತತ್ವ. ; ದೇಹೇಂದ್ರಿಯಗಳನ್ನು ಕೊಡುವ ಪ್ರಕೃತಿ ಹದಿಮೂರನೆಯ ತತ್ವ . ಅನಂತರ ಬುದ್ಧಿ ಅಹಂಕಾರ ಇತ್ಯಾದಿ ಸೇರಿ '''ಒಟ್ಟು ೨೩ ತತ್ವಗಳು .'''
== ಪ್ರತ್ಯಭಿಜ್ಞಾ - ಉಪಸಂಹಾರ ==
:ಪರುಷನು (ಜೀವನು) ತಾನೇ ಶಿವನೆಂದು ಅರಿತುಕೊಳ್ಳುವುದು -ಪ್ರತ್ಯಭಿಜ್ಞೆ. . ಗುರೂಪದೇಶದಿಂದ ಅಹಂ ಮಹೇಶ್ವರ ಎಂಬ ಅರಿವಾದಾಗ - ಜ್ಞಾನ ದೊರಕಿತೆಂದು ಅರ್ಥ. ಅದೇ ಮೋಕ್ಷ. ಮುಕ್ತಿ ಪಡೆಯಲು ಜ್ಞಾನ -ಭಕ್ತಿಗಳೆರಡೂ ಅವಶ್ಯ.
:'''ಜಗತ್ತು :'''
:ಈ ಜಗತ್ತು ಶಿವ - ಶಕ್ತಿಯರ ಸ್ಪಂದನದಿಂದಾಗಿದೆ. (ಇದೊಂದು ಅದ್ಭುತ ಕಲ್ಪನೆ) . ಶಂಕರರ ಅದ್ವೈತಕ್ಕೆ ವಿರೋಧವಾಗಿ ಇದರಲ್ಲಿ ಶಿವನು ಮಾಯಾತೀತನೂ , ಮಾಯಾಸಹಿತನೂ ಸ್ವತಂತ್ರನೂ , ಆಗಿದ್ದು ಕರ್ತೃವಾಗಿದ್ದಾನೆ . ಮುಕ್ತಿಯ ನಂತರವೂ ಆನಂದದ ಅನುಭವ ಇರುವುದೆಂದು ಹೇಳಲು ಭಕ್ತಿಯನ್ನು ಹೇಳಿದೆ ( ?).
:ಶಂಕರರ ಅದ್ವೈತಕ್ಕೂ ಶಿವಾದ್ವೈತಕ್ಕೂ ಸಾಕಷ್ಟು ಸಾಮ್ಯಗಳಿವೆ. ಅದ್ವೈತದ ಮಾಯಾವಾದವನ್ನು ಇದು ಒಪ್ಪುವುದಿಲ್ಲ. ಮಾಯೆ ಈಶ್ವರನ ಶಕ್ತಿ ಮತ್ತು ಸತ್ಯ. . ಆತ್ಮನಿಗೆ ಪಂಚ ಕರ್ತೃತ್ವವನ್ನು ಅದ್ವೈತ ಒಪ್ಪುವುದಿಲ್ಲ.
== ವೀರ ಶೈವ -ಶಕ್ತಿ ವಿಶಿಷ್ಟಾದ್ವೈತ : ==
:ವೀರ ಶೈವ
 
 
 
:ಮುಂದುವರೆಯುವುದು/ಮೂದುವರೆಸಿದೆಮುಂದುವರೆಸಿದೆ-[[ಸದಸ್ಯ:Bschandrasgr/ಪರಿಚಯ|ಚ]]
 
== ನೋಡಿ ==
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ