'''ಏಕಾದಶ''' ಈ [[ಸಂಸ್ಕೃತ]] ಪದದ ಅರ್ಥ ಹನ್ನೊಂದು(೧೧).ಹಿಂದೂ ಪಂಚಾಂಗದ ೧೨ ಮಾಸಗಳ [[ ಕೃಷ್ಣಶುಕ್ಲ ಪಕ್ಷ|ಕೃಷ್ಣ ಶುಕ್ಲ ಪಕ್ಷದ]] ಮತ್ತು [[ಶುಕ್ಲ ಕೃಷ್ಣ ಪಕ್ಷ| ಶುಕ್ಲಕೃಷ್ಣ ಪಕ್ಷದ]] ಹನ್ನೊಂದನೆಯ ದಿನವನ್ನು ''ಏಕಾದಶಿ'' ಎನ್ನಲಾಗುತ್ತದೆ.ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನುಆಹಾರವನ್ನೂ ಸೇವಿಸದೆ,[[ ಉಪವಾಸ ]]ಮಾಡುವ ಸಂಪ್ರದಾಯವಿದೆ.ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ.ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ ೯ ಘಂಟೆಯೊಳಗಾಗಿ '''ಪಾರಣೆ'''(ಊಟ)ಮಾಡುವ ಸಂಪ್ರದಾಯವಿದೆ.
ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ.
'''ವೈಕುಂಠ ಏಕಾದಶಿ''' ಏಕಾದಶಿಗಳಲ್ಲಿ ವಿಶೇಷ ದಿನ.ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ [[ಸ್ವರ್ಗದ ಬಾಗಿಲು|ಸ್ವರ್ಗದ ಬಾಗಿಲಿನ]] ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ.