ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೯ ನೇ ಸಾಲು:
ಸನ್.೧೯೯೭ ರ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಮೊಣಕಾಲು ಚಿಪ್ಪಿನ ನೋವು ಹೆಚ್ಚಾಯಿತು. ಬಹಳ ಕಾಲದಿಂದ ಅದರ ನೋವನ್ನು ಅನುಭವಿಸುತ್ತಿದ್ದಾರೆ. 'ವೀಲ್ ಛೇರ್' ನಲ್ಲೇ ಕುಳಿತು ಕೆಲವು ಚಿತ್ರಗಳಲ್ಲಿ ಅತಿಥಿನಟನಾಗಿ ನಟಿಸಿದ್ದಾರೆ. ಅವರಿಗೆ ಈಗಾಗಲೇ ಸಂದಿರುವ ಚಿತ್ರರಂಗದ ಶ್ರೇಷ್ಠ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಸನ್. ೨೦೧೩ ರ, ಮೇ ತಿಂಗಳ ೩ ರಂದು ;ಭಾರತೀಯ ಚಲನಚಿತ್ರರಂಗದ ನೂರನೆಯ ವರ್ಷದ ಆಚರಣೆಯ ಶುಭ ಸಂದರ್ಭ;ದಲ್ಲಿ ದೆಹಲಿಗೆ ಪ್ರಯಾಣಿಸಿ, 'ರಾಷ್ಟ್ರಪತಿ ಪ್ರಣಬ್ ಮುಖರ್ಜಿ'ಯವರ ಹಸ್ತದಿಂದ ಪಡೆಯಲು ಸಾಧ್ಯವಾಗಲಿಲ್ಲ. ೨೦೧೩ ರ, ಮೇ, ೧೦, ಶುಕ್ರವಾರ, ದೆಹಲಿಯಿಂದ 'ವಾರ್ತೆ ಹಾಗೂ ಪ್ರಸಾರಾಂಗ ಖಾತೆಯ ಮಂತ್ರಿ, ಮನೀಷ್ ತಿವಾರಿ, ಸಚಿವ ಉದಯಕುಮಾರ್ ವರ್ಮಾ ಹಾಗೂ ಸಚಿವಾಲಯದ ಫಿಲ್ಮೋತ್ಸವದ ಡೆಲಿಗೇಶನ್ ಜೊತೆ, ನವದೆಹಲಿಯಿಂದ ಮುಂಬೈನ 'ಪ್ರಾಣ್ ರವರ ನಿವಾಸಕ್ಕೆ ಬಂದು ಈಗಾಗಲೇ ಘೋಶಿಸಿರುವ 'ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು. ಪುತ್ರಿ, 'ಪಿಂಕಿ ಭಲ್ಲಾ' ಮತ್ತು ಮನೆಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಪ್ರಥಮಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಮಾಡಿರುವುದು ಒಂದು ದಾಖಲೆಯಾಗಿದೆ. 'ಸ್ವರ್ಣ ಕಮಲ', 'ಸ್ಮೃತಿ ಫಲಕ', 'ಶಾಲು', ಹಾಗೂ '೧೦ ಲಕ್ಷ ರೂಗಳ ನಕದು ಬಹುಮಾನ'ವೂ ಇದರ ಜೊತೆ ಸೇರಿದೆ.
==ವಿದಾಯ==
ಸನ್. ೨೦೧೩ ರ, ಜುಲೈ ೧೨, ಶುಕ್ರವಾರದಂದು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹಿಂದಿ ಚಿತ್ರರಂಗದ ಖಳನಾಯಕ ಪ್ರಾಣ್, ಕೊನೆಯುಸಿರೆಳೆದರು. ಅವರ ಅಂತ್ಯ ಕ್ರಿಯೆ, ಮುಂಬೈನ ಶಿವಾಜಿಪಾರ್ಕ್ ನಲ್ಲಿರುವ ಚಿತಾಗಾರದಲ್ಲಿ ಬಾಲಿವುಡ್ ನ, ಅಪಾರ ಸ್ನೇಹಿತರು, ಬಂಧುವರ್ಗ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ೨೦೧೩ ರ ಜುಲೈ, ೧೩, ಶನಿವಾರ, ಮಧ್ಯಾನ್ಹ ಜರುಗಿತು.
 
 
* ಚಿತ್ರಕೃಪೆ : ಉದಯವಾಣಿ ಕನ್ನಡ ದಿನಪತ್ರಿಕೆ [[http://www.udayavani.com/news/294462L15-%E0%B2%B9-%E0%B2%B0-%E0%B2%AF-%E0%B2%A8%E0%B2%9F-%E0%B2%AA-%E0%B2%B0-%E0%B2%A3--%E0%B2%97--%E0%B2%AE%E0%B2%A8-%E0%B2%AF%E0%B2%B2-%E0%B2%B2--%E0%B2%AB-%E0%B2%B2-%E0%B2%95--%E0%B2%97-%E0%B2%B0%E0%B2%B5-%E0%B2%AA-%E0%B2%B0%E0%B2%A6-%E0%B2%A8.html,]]
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ