ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೬ ನೇ ಸಾಲು:
ಉಪೇಂದ್ರ ಕುಮಾರ್ ಅವರಿಗೆ "ಕಟಾರಿ ವೀರ "ಚಿತ್ರದ ಮೂಲಕ ಸ್ವತಂತ್ರ್ಯ ಸಂಗಾತ ನಿರ್ದೇಶಕನಾಗುವ ಅವಕಾಶ ಸಿಕ್ಕಿತು.ಚಿತ್ರದ ಗೀತೆಗಳು ಜನಪ್ರೀಯವಾಗುವುದರೊಂದಿಗೆ ಅವರ ಸ್ಥಾನವೂ ಗಟ್ಟಿಯಾಯಿತು.ರಾಜ್ಕುಮಾರ್ ಅವರ ಜೊತೆಗಿನ ಬಾಂದವ್ಯವೂ ನಿಕತವಾಯಿತು."ಹಸಿರು ತೋರಣ"ದ "ಒಂದು ದಿನ ಎಲ್ಲಿಂದಲೋ "ಹಾಡಿನಲ್ಲಿ ಇವರು ಗಮಕ ಬಳಸಿದ ಕ್ರಮವು ವಿಶಿಷ್ಟವಾಗಿತ್ತು."ಪರೋಪಕಾರಿ" ಚಿತ್ರದ "ಗುಟ್ಟೊಂದು ಹೇಳುವೆ","ಕಣ್ಣರೆಪ್ಪೆ ಒಂದನೊಂದು" , "ಜೋಕೆ ನಾನು ಬಳ್ಳಿಯ ಮಿಂಚು"ಉಪೇಂದ್ರ ಕುಮಾರರ ವ್ಯಾಪ್ತಿಗೆ ನಿದರ್ಶನವಾದವು."ಸಿಪಾಯಿ ರಾಮು" ಚಿತ್ರದಲ್ಲಿ ಅವರು ಇನ್ನಷ್ಟು ವಿಶಿಷ್ಟ ಗೀತಗಳನ್ನು ಸಂಯೋಜಿಸಿದರು."ವಹರೇ ಮೇರೆ ಮುರುಗ"ದಲ್ಲಿ ಅವರು ಹೊಸತನದ ಅಲೆಯನ್ನೇ ಎಬ್ಬಿಸಿದ್ದರು.ಹಾಗೇ "ತ್ರಿವೇಣಿ "ಚಿತ್ರದ "ನೀನಾ ಭಗವಂತ "ಮತ್ತು "ಕವಿಯ ಮಧುರ ಕಲ್ಪನಾ" ಕಡಿಮೆ ವಾದ್ಯಗಳಲ್ಲಿ ಸಂಗೀತ ಶ್ರೀಮಂತಿಕೆ ತುಂಬಿಕೊಂಡ ಗೀತೆಗಳು.
"ಪ್ರೇಮದ ಕಾಣಿಕೆ" ಚಿತ್ರದಲ್ಲಿ ಉಪೇಂದ್ರ ಕುಮಾರ್ ಅವರ ಸಂಯೋಜನೆಯ ಪಕ್ವ ಫಲಗಳನ್ನು ಹೊಂದಿದ ಚಿತ್ರ.ಇದರಲ್ಲಿಯ ಕಾಪಿರಾಗದ "ಇದು ಯಾರೋ ಬರೆದ ಕತೆಯೂ "ವಿಶಿಷ್ಟ ಗೀತೆ.
"ಶಂಕರ್ ಗುರು " ಚಿತ್ರದಲ್ಲಿಯೂ ಕೆಲವು ವಿಶಿಷ್ಟ ರಚನೆಗಳಿವೆ .ಕಾಶ್ಮೀರಿ ಪಲುಕು ಬಳಸಿ ಚಿಮ್ಮಿಸಿದ "ಏನೇನೋ ಆಸೆ" ಒಂದು ಸುಂದರವಾದ ಸಂಯೋಜನೆ."ಧರ್ಮ ಸೆರೆ" ಚಿತ್ರದ "ಮೂಕ ಹಕ್ಕಿಯೂ ಹಾಡುತಿದೆ"ಅನ್ನು ಬಹಳ ಭಿನ್ನವಾಗಿ ಬಳಸಿದ್ದರು."ದೃವತಾರೆ "ಚಿತ್ರದ 'ಆರತಿಯೇ ಧರೆಗಿಳಿದಂತೆ"ಒಂದು ಪ್ರಯೋಗ ಶೀಲ ಗೀತೆ.ಇದರಲ್ಲಿ ಮೂರು ಸಮುಚ್ಚಯಗಳಿವೆ.ಕಲ್ಯಾಣಿ ಮತ್ತು ಷಣ್ಮುಗ ಪ್ರಿಯ ಒಂದೇ ಸ್ವರ ಪ್ರಕಾರದಲ್ಲಿ ಸಾಗುವ ಧಾಟಿಯೇ ಸೊಗಸು.
"ರಥ ಸಪ್ತಮಿಯ""ಶಿಲೆಗಳು ಸಂಗೀತವ "ಹಾಡು ಶಾಸ್ರೀಯತೆಯ ವಿಸ್ತಾರದ ಸೊಬಗನ್ನು ಭಾವ ತೀರ್ವತೆಗೆ ಬಳಸಿದ ಪಕ್ವ ಸಂಯೋಜನೆ."
"ಜೋಕೆ ನಾನು ಬಳ್ಳಿಯ ಮಿಂಚು"ವಿನಿಂದ ಕನ್ನಡದಲ್ಲಿ ಕ್ಯಾಬರೆ ಗೀತೆಗಳಿಗೆ ಮಾದರಿ ಸೃಷ್ಟಿಸಿದ್ದ ಉಪೇಂದ್ರ ಕುಮಾರ್ ಹಲವು ದಶಕದ ನಂತರ "ನಂಜುಂಡಿ ಕಲ್ಯಾಣ" ಚಿತ್ರದ "ಒಳಗೆ ಸೇರಿದರೆ ಗುಂಡು " ಹಾಡಿನ ಮೂಲಕ ಇನ್ನೊಂದು ಟ್ರೆಂಡ್ ಸೃಷ್ಟಿಸಿದ್ದು ಗಮನಾರ್ಹ ಸಂಗತಿ.
|