'''ಊರ್ಮಿಳೆ''' [[ರಾಮಾಯಣ]]ದ ಪ್ರಕಾರ [[ಮಿಥಿಲೆ]]ಯ ರಾಜ [[ಜನಕ]]ನ ಪುತ್ರಿ ಮತ್ತು [[ಸೀತೆ]]ಯ ತಂಗಿ. ತಂದೆಯ ವಚನದಂತೆ ಶ್ರೀರಾಮಚಂದ್ರನು ವನವಾಸಕ್ಕೆಂದು ತನ್ನ ಮಡದಿಯ ಜೊತೆ ಕಾಡಿಗೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯ ಪತಿ ಲಕ್ಷ್ಮಣನು ಸಹಾ ಕಾಡಿಗೆ ಹೋಗಲು ಇಚ್ಛಿಸಿದಾಗ ಶ್ರೀರಾಮಚಂದ್ರನು ತನ್ನ ನಾದಿನಿಯಾದ ಊರ್ಮಿಳೆಯ ಅಂತರಾಳದಲ್ಲಿನ ವ್ಯಾಕುಲತೆಯನ್ನು ಅರಿಯುವಲ್ಲಿ ವಿಫಲನಾಗಿ, ತನ್ನ ಜೊತೆ ಲಕ್ಷ್ಮಣನನ್ನು ಸಹಾ ಕಾಡಿಗೆ ಕರೆದೊಯ್ಯುತ್ತಾನೆ. ರಾವಣನಿಂದ ಅಪಹೃತಳಾಗುವ ಮುನ್ನ ಸೀತಾಮಾತೆ ತನ್ನ ಪತಿಯೊಂದಿಗೆ ಕಾನನದಲ್ಲಿ ವನ-ಚರ-ಪ್ರಾಣಿ-ಪಕ್ಷಿಗಳೊಂದಿಗೆ ಆನಂದದಿಂದ ಕಾಲಕಳೆಯುತ್ತಿದ್ದರೆ, ಇತ್ತ ತನ್ನ ಪತಿಯ ಬರುವಿಕೆಗಾಗಿಯೇ ಊರ್ಮಿಳೆ ಹದಿನಾಲ್ಕು ವರ್ಷಗಳ ಕಾಲ ಅರಮನೆಯಲ್ಲಿ ಕಾಯುತ್ತಿರುತ್ತಾಳೆ.