ಕನಕಾಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಹೊಸ ಪುಟ: ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ <ref>https://www.vijayavani.net/a-sculptor-kanaka-murt... ಟ್ಯಾಗ್: 2017 source edit |
( ಯಾವುದೇ ವ್ಯತ್ಯಾಸವಿಲ್ಲ )
|
೦೫:೩೭, ೮ ಜೂನ್ ೨೦೨೧ ನಂತೆ ಪರಿಷ್ಕರಣೆ
ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ [೧] ಕನಕಾಮೂರ್ತಿ (೧೯೪೨-೨೦೨೧) ಕೈಯಲ್ಲಿ ಅರಳಿದ್ದ ೨೦೦ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತಗೊಂಡಿವೆ.
ವೈಯಕ್ತಿಕ ಜೀವನ
೧೯೪೨ರಲ್ಲಿ[೨], ಜಮೀನ್ದಾರ್ ಮುತ್ತತ್ತಿ ಸುಬ್ಬರಾಯ ಮತ್ತು ಸುಂದರಮ್ಮ ದಂಪತಿಗಳಿಗೆ ಜನಿಸಿದರು. ತಾಯಿ ಸುಂದರಮ್ಮ ಗಮಕ ಕಲಾವಿದರಾಗಿದ್ದರು.
ನಾರಾಯಣ ಮೂರ್ತಿಯವರನ್ನು ಮದುವೆಯಾಗಿದ್ದರು.
ಶಿಕ್ಷಣ ಮತ್ತು ಕಲೆ
ಬಾಲ್ಯದಲ್ಲಿಯೇ ರಂಗೋಲಿ ಕಲೆಯಲ್ಲಿ ಆಸಕ್ತಿ ಹೊಂದಿದ್ದರು.[೩] ಬಿ. ಎಸ್ಸಿ. ಪದವಿ ನಂತರ, ತಮ್ಮ ಸಹೋದರನೊಂದಿಗೆ ಚಿತ್ರಕಲೆ ಕಲೆಯುವ ಉದ್ದೇಶದಿಂದ ಭೇಟಿಕೊಟ್ಟಿದ್ದ ಬೆಂಗಳೂರಿನ ಕಲಾಮಂದಿರ ಕಲಾ ಶಾಲೆಯಲ್ಲಿ[೪] ೧೯೬೨ರಲ್ಲಿ, ಮೃತ್ತಿಕಾ (ಮಣ್ಣಿನ) ಪ್ರತಿಮಾಗರಿಕೆಯಲ್ಲಿ ಡಿಪ್ಲೊಮಾ ಗಳಿಸಿದರು. ಅಲ್ಲಿಯೇ ಕರ್ನಾಟಕದ ಹಲವಾರು ಶಿಲ್ಪಕಲಾ ಶೈಲಿಗಳನ್ನು ಅಭ್ಯಸಿಸಿದರು. [೫] ಗುರುಗಳಾದ ಡಿ. ವಾದಿರಾಜರು (ಸಾಂಪ್ರದಾಯಿಕ ಭಾರತೀಯ ಶಿಲ್ಪಶಾಸ್ತ್ರ) ಮತ್ತು ಎ. ಎನ್. ಸುಬ್ಬರಾಯರು (ರೇಖಾಚಿತ್ರ), ಕನಕಾಮೂರ್ತಿಯವರ ಆಸಕ್ತಿಗೆ ನೀರೆರೆದರು. [೬]
ಹಲವಾರು ಶಿಲ್ಪ ಕಲಾಶಿಬಿರಗಳಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಶಿಲ್ಪ ಕಲಾಕೃತಿಗಳಿಗಳು
ಲೋಹಶಿಲ್ಪ, ಕಾಷ್ಠಶಿಲ್ಪ ಮತ್ತು ಶಿಲಾಶಿಲ್ಪಗಳಲ್ಲಿ ಪರಿಣಿತಿ ಹೊಂದಿ, ಬಹುಬೇಡಿಕೆಯ ಶಿಲ್ಪಿಯಾಗಿದ್ದ ಇವರ ೨೦೦ಕ್ಕೂ ಹೆಚ್ಚು ಕೆತ್ತನೆಯ ಕಲಾಕೃತಿಗಳು ನಾಡಿನಾದ್ಯಂತ ಪ್ರತಿಷ್ಠಾಪನೆಗೊಂಡಿವೆ.
- ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ೯ ಅಡಿ ಕಲ್ಲಿನ ಗಣಪ
- ಭಾರತೀಯ ವಿದ್ಯಾಭವನದ ಗಣೇಶ ಮತ್ತು ಸರಸ್ವತಿಯರ ವಿಗ್ರಹ
- ಉಡುಪಿಯ ಸಾಲಿಗ್ರಾಮದ ಸಂಗ್ರಹಾಲದಲ್ಲಿ ಇರಿಸಿರುವ ಶಿವರಾಮ ಕಾರಂತರ ಎದೆ ವಿಗ್ರಹ
- ಚಿಕ್ಕ ಗುಬ್ಬಿಯ ತಪೋವನ ಆಶ್ರಮದಲ್ಲಿ, ಕುಳಿತ ಭಂಗಿಯಲ್ಲಿರುವ ಸಪ್ತಋಷಿಗಳ ಶಿಲಾಶಿಲ್ಪ
- ಚಿಕ್ಕ ಗುಬ್ಬಿಯ ತಪೋವನ ಆಶ್ರಮದಲ್ಲಿ, ವಿಶ್ವಾಮಿತ್ರರ ಮಹಋಷಿ ೭ ಅಡಿ ಶಿಲಾಶಿಲ್ಪ
- ಚಿಕ್ಕ ಗುಬ್ಬಿಯ ತಪೋವನ ಆಶ್ರಮದಲ್ಲಿ ೧೦ ಅಡಿಯ ಹನುಮಂತನ ಶಿಲಾಶಿಲ್ಪ
- ಗುಲ್ಬರ್ಗದ ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ
- ೬ ಅಡಿ ಎತ್ತರದ ಸಮುದ್ರ ಮಂಥನದ ಶಿಲಾಶಿಲ್ಪ
- ಮನಿಪಾಲ್ ವಿಶ್ವವಿದ್ಯಾಲಯರಲ್ಲಿರುವ ಫ಼ೈಬರ್ ಗ್ಲಾಸ್ನಲ್ಲಿ ರಚಿಸಿದ ಪಿ. ಎಂ. ಎ. ಪೈರವರ ಶಿಲ್ಪ
- ಆರ್. ವಿ. ದಂತ ವಿದ್ಯಾಲಯದಲ್ಲಿರುವ ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ
- ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರಾದ ಪ್ರೊ. ಎಂ. ಪಿ. ಎಲ್. ಶಾಸ್ತ್ರಿರವರ ಫ಼ೈಬರ್ ಗ್ಲಾಸ್ ಶಿಲ್ಪ
- ಇಂದಿರಾನಗರ ಸಂಗೀತ ಸಭಾದಲ್ಲಿಯ ಪುರಂದರದಾಸರ ವಿಗ್ರಹ
- ಲಾಲ್ಭಾಗ್ ಪಶ್ಚಿಮ ದ್ವಾರದಲ್ಲಿರುವ ಕುವೆಂಪು ಪ್ರತಿಮೆ
- ಸರ್ ಎಂ. ವಿಶ್ವೇಶ್ವರಯ್ಯ
- ವೀಣೆ ದೊರೆಸ್ವಾಮಿ ಅಯ್ಯಂಗಾರ್
- ಗಂಗೂಬಾಯಿ ಹಾನ್ಗಲ್
ಪ್ರಶಸ್ತಿಗಳು
- ೧೯೭೦ - ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ
- ೧೯೮೮ - ನಾಗಪುರದಲ್ಲಿ ಜರುಗಿದ ಶಿಲ್ಪಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ
- ೧೯೯೬ - ಕನ್ನಡ ರಾಜ್ಯೊತ್ಸವ ಪ್ರಶಸ್ತಿ (ಕರ್ನಾಟಕ ಸರ್ಕಾರ)
- ೧೯೯೯ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- ೨೦೧೦ - ಜಕಣಾಚಾರಿ ಪ್ರಶಸ್ತಿ (ಕರ್ನಾಟಕ ಸರ್ಕಾರ)
- ೨೦೧೬ - ಶ್ರೀ ವನಮಾಲಿ ಸೇವಾ ಪ್ರಶಸ್ತಿ
ಬರವಣಿಗೆ
ಲೇಖನಗಳು
ಶಿಲ್ಪಕಲೆ ಕುರಿತು ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ
- ಡೆಕ್ಕನ್ ಹೆರಾಲ್ಡ್
- ಇಂಡಿಯನ್ ಎಕ್ಸ್ಪ್ರೆಸ್
- ತರಂಗ
- ವಿಜಯವಾಣಿ
- ಪ್ರಜಾವಾಣಿ
- ಉದಯವಾಣಿ
ಪುಸ್ತಕಗಳು
- "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ
- "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- "ಹೌದೇ? ಇದು ನಾನೇ?" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ
ನಿಧನ
ಮೇ ೧೩, ೨೦೨೧ ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.[೭]
- ↑ https://www.vijayavani.net/a-sculptor-kanaka-murthy-is-no-more/
- ↑ https://www.thehindu.com/news/national/karnataka/kanaka-murthy-passes-away/article34561711.ece
- ↑ https://www.youtube.com/watch?v=tHeQZD4djGQ
- ↑ https://www.youtube.com/watch?v=yfj9sRv-rfE
- ↑ https://www.youtube.com/watch?v=yfj9sRv-rfE
- ↑ https://www.youtube.com/watch?v=rjy9EtU2PjI
- ↑ https://www.prajavani.net/artculture/art/lifestyle-of-sculpture-artist-kanaka-murthy-834383.html