ಮಹಾಮೃತ್ಯುಂಜಯ ಮಂತ್ರ

ತ್ರ್ಯಂಬಕ ಮಂತ್ರ ಎಂದೂ ಪರಿಚಿತವಾದ ಮಹಾಮೃತ್ಯುಂಜಯ ಮಂತ್ರ ("ಸಾವನ್ನು ಜಯಿಸಬಲ್ಲ ಮಹಾ ಮಂತ್ರ") ಋಗ್ವೇದದ ಒಂದು ಪದ್ಯ. ಅದನ್ನು ರುದ್ರನ, ನಂತರ ಶಿವನೊಂದಿಗೆ ಗುರುತಿಸಲಾದ ಗುಣವಾಚಕವಾದ ತ್ರ್ಯಂಬಕನಿಗೆ ("ಮೂರು ಕಣ್ಣಿರುವವನು") ಸಂಬೋಧಿಸಲಾಗಿದೆ. ಈ ಪದ್ಯ ಯಜುರ್ವೇದದಲ್ಲೂ ಮರುಕಳಿಸುತ್ತದೆ.