ಮಲ್ಲಿಕಾರ್ಜುನ
ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ. ಕಾಲ ಸು. ೧೨೪೦ .ಕೃತಿ:-ಸೂಕ್ತಿಸುಧಾರ್ಣವ ಎಂಬ ಸಂಕಲನ ಗ್ರಂಥದ ಸಂಯೋಜನೆ.೧೯ಆಶ್ವಾಸಗಳು ಇವೆ.ಮಲ್ಲಿಕಾರ್ಜುನ ಈ ಸಂಕಲನದೊಡನೆ ಬಸರಾಳು ಶಾಸನವನ್ನು ರಚಿಸಿದಂತೆ ತಿಳಿದುಬಂದಿದೆ.ಮಗ ಕೇಶಿರಾಜ. ಮಲ್ಲಿಕಾರ್ಜುನ ಹೊಯ್ಸಳರ "ವೀರ ಸೋಮೇಶ್ವರ"ನ ಆಶ್ರಿತ ಕವಿ.
ಬಿರುದು ಸಂಪಾದಿಸಿ
ಚಿದಾನಂದ ,ಮಲ್ಲಪ ,ಚಿದಾನಂದ ಮಲ್ಲಿಕಾರ್ಜುನ.
ಸಂಕಲನ ಗ್ರಂಥ ಸಂಪಾದಿಸಿ
ಸೂಕ್ತಿ ಸುಧಾರ್ಣವ -
ಕನ್ನಡ ಸಾಹಿತ್ಯದಿಂದ ಉತ್ತಮ ಪದ್ಯಗಳನ್ನಾಯ್ದುಕೊಂಡು ಈ ಸಂಕಲನ ಗ್ರಂಥವನ್ನು ರಚಿಸಿದ್ದಾನೆ. ಈ ಗ್ರಂಥವು ಕನ್ನಡದ ಮೊಟ್ಟ ಮೊದಲ ಸಂಕಲನ ಕೃತಿ.
ಇದಕ್ಕೆ ಕಾವ್ಯಸಾರ ಎಂಬ ಹೆಸರೂ ಇದೆ.ಈ ಗ್ರಂಥ ಕನ್ನಡ ಸಾಹಿತ್ಯದಲ್ಲಿ ಕವಿಗಳ ಕಾಲ ನಿರ್ಣಾಯಕ್ಕೆ ಕರ್ತೃತ್ವ ನಿರ್ಣಯಕ್ಕೆ ಉಪಯುಕ್ತ ಗ್ರಂಥವಾಗಿದೆ.ಈ ಕಾವ್ಯಸಾರದಲ್ಲಿ ಹೊಯ್ಸಳರ ವಂಶದ ಸ್ಥಾಪನೆಯಾದ ವಿಷಯ, ವಂಶವೃಕ್ಷ, ವೀರ ಸೋಮೇಶ್ವರನ ಶೌರ್ಯ ಪ್ರತಾಪಗಳು ವಿವರವಾಗಿ ಚಿತ್ರಿಸಲಾಗಿದೆ.
ಚದುರರ ಮೆಚ್ಚು, ಭಾವುಕರ ಕೈಪಿಡಿ, ಜಾಣರ ಬಯ್ಕೆ,ಸತ್ಕಲಾವಿದರ ವಿಲಾಸಮ್,ಅಕ್ಕರಿಗರಾಭರಣಂ,ಬುಧರಿಚ್ಚೆಯಚ್ಫು,ವೀರದ ಕಣಿ,ಕೂರ್ತುಕೂರಿಸಿದ ನಲ್ಲಳ ಮೈಸಿರಿ.(೧-೨೫) ಎಂದು ಪೀಠಿಕೆ ಪ್ರಕರಣದಲ್ಲಿ ಕವಿ ತನ್ನ ಆತ್ಮ ಪ್ರಶಂಸೆ ಮಾಡಿಕೊಂಡಿದ್ದಾನೆ.