ಮಂಗಳೂರು ವಿಶ್ವವಿದ್ಯಾನಿಲಯ

ಸಾರ್ವಜನಿಕ ಶಿಕ್ಷಣ ಸಂಸ್ಥೆ, ಮಂಗಳೂರು, ಕರ್ನಾಟಕ


ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ ದಕ್ಷಿಣ ಕನ್ನಡ, ಮತ್ತು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.

ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳೂರು ವಿಶ್ವವಿದ್ಯಾನಿಲಯ
ಸ್ಥಾಪನೆ೧೯೮೦
ಪ್ರಕಾರಸಾರ್ವಜನಿಕ
ಕುಲಪತಿಗಳುಥಾವರ್ ಚಂದ್ ಗೆಹ್ಲೋಟ್(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ)
ಉಪಕುಲಪತಿಗಳುಪ್ರೊ.ಪಿ.ಎಲ್‌. ಧರ್ಮ
ಆವರಣಗ್ರಾಮಾಂತರ

ಹಿನ್ನೆಲೆ ಬದಲಾಯಿಸಿ

ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ ಕೊಡಗು ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು.

ಕ್ಯಾಂಪಸ್/ಆವರಣ ಬದಲಾಯಿಸಿ

೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.

ಸಂಯೋಜಿತ ಕಾಲೇಜುಗಳು ಬದಲಾಯಿಸಿ

  1. ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು
  2. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ
  3. ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು.
  4. ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಬದಲಾಯಿಸಿ

ಕುಲಪತಿಗಳಾಗಿದ್ದ ಕಾಲ/ವರ್ಷ ಕುಲಪತಿಗಳ ಹೆಸರು ವಿಭಾಗ ಅವಧಿ
೧೯೮೦-೧೯೮೫ ಪ್ರೊ. ಬಿ. ಶೇಖ್ ಅಲಿ ಇತಿಹಾಸ
೧೯೮೫-೧೯೮೯ ಪ್ರೊ.ಶಫಿಯುಲ್ಲಾ ಸಸ್ಯಶಾಸ್ತ್ರ
೧೯೮೯-೧೯೯೫ ಪ್ರೊ.ಎಂ.ಐ ಸವದತ್ತಿ ಭೌತಶಾಸ್ತ್ರ
೧೯೯೫-೨೦೦೧ ಪ್ರೊ.ಎಸ್. ಗೋಪಾಲ ಭೌತಶಾಸ್ತ್ರ
೨೦೦೧-೨೦೦೫ ಪ್ರೊ.ಬಿ. ಹನುಮಯ್ಯ[೧] ರಸಾಯನ ಶಾಸ್ತ್ರ
೨೦೦೫-೨೦೦೬ ಪ್ರೊ.ತಿಮ್ಮೇಗೌಡ[೨] ರಸಾಯನಶಾಸ್ತ್ರ ೩ ತಿಂಗಳು (acting, three months)
೨೦೦೬-೨೦೧೦ ಪ್ರೊ.ಕೆ.ಎಂ.ಕಾವೇರಪ್ಪ[೩] ಸಸ್ಯಶಾಸ್ತ್ರ
೨೦೧೦ ಪ್ರೊ.ಕೆ.ಕೆ.ಆಚಾರ್ಯ ಭೌತಶಾಸ್ತ್ರ ೨ ತಿಂಗಳು (acting, two months)
೨೦೧೦-೨೦೧೪ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ[೪] ಭೌತಶಾಸ್ತ್ರ
೨೦೧೪ ಪ್ರೊ.ಕೆ.ಭೈರಪ್ಪ ಭೌತಶಾಸ್ತ್ರ
೨೦೧೮ ಡಾ.ಕಿಶೋರ್ ಕುಮಾರ್. ಸಿ.ಕೆ. ದೈಹಿಕ ಶಿಕ್ಷಣ ೬ ತಿಂಗಳು (ಹಂಗಾಮಿ)
೨೦೧೮ ಡಾ. ಈಶ್ವರ ಪಿ. ೬ ತಿಂಗಳು (ಹಂಗಾಮಿ)
೨೦೧೮ ಡಾ.ಕಿಶೋರಿ ನಾಯಕ್ ಆಂಗ್ಲ ಭಾಷೆ ೬ ತಿಂಗಳು (ಹಂಗಾಮಿ)
೨೦೧೯ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ[೫] ವಾಣಿಜ್ಯ ಜೂನ್ ೩ ರಿಂದ

ವಿಭಾಗಗಳು ಬದಲಾಯಿಸಿ

  1. ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ.

ಹೊರಗಿನ ಸಂಪರ್ಕಗಳು ಬದಲಾಯಿಸಿ

  1. "Hanumaiah is new Mangalore varsity V-C". ದಿ ಟೈಮ್ಸ್ ಆಫ್‌ ಇಂಡಿಯಾ. 29 October 2001. Archived from the original on 2012-07-07. Retrieved 2017-07-16.
  2. "Thimme Gowda is acting VC". ದಿ ಹಿಂದೂ. 30 October 2005. Archived from the original on 1 ನವೆಂಬರ್ 2005. Retrieved 16 ಜುಲೈ 2017.
  3. "K.M. Kaveriappa appointed Executive Director of Higher Education Council". ದಿ ಹಿಂದೂ. 1 November 2010.
  4. "Prof T C Shivashankara Murthy Appointed Vice Chancellor of Mangalore University". daijiworld.com. Daijiworld News Network. 2 March 2010. Archived from the original on 4 ಮಾರ್ಚ್ 2016. Retrieved 16 ಜುಲೈ 2017. {{cite web}}: Cite has empty unknown parameter: |3= (help)
  5. .P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms