ಬಿ.ಆರ್.ಲಕ್ಷ್ಮಣರಾವ್
ಬಿ.ಆರ್.ಲಕ್ಷ್ಮಣರಾವ್, ಅವರು ಕನ್ನಡದ ಸಿಟ್ರಿಕ್ ಕವಿ , ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿ, ಭಾವಗೀತೆಗಳ ಕವಿ. ಲಕ್ಷ್ಮಣರಾಯರ ‘ಸುಬ್ಭಾಭಟ್ಟರ ಮಗಳೇ’,‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು', 'ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗು’ ಅಂತಹ ಕವಿತೆಗಳು ಜನಪ್ರಿಯವಾಗಿವೆ. ಈ ಪದ್ಯಗಳು, ಹಲವು ವೇಳೆ ಕೆ.ಎಸ್.ನ ಅವರ ‘ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆ’ ಪದ್ಯಗಳಿಗೆ ಸರಿಹೋಲಿಕೆಯಂತಿವೆ.

ಜನನ,ವಿದ್ಯಾಭ್ಯಾಸ ಸಂಪಾದಿಸಿ
ಬಿ.ಆರ್.ರಾಜಾರಾವ್ ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ 'ಲಕ್ಷ್ಮಣ್,' ಚಿಕ್ಕಬಳ್ಳಾಪುರ ಜಿಲ್ಲೆಯ 'ಚೀಮಂಗಲ'ದಲ್ಲಿ ೧೯೪೬ ರ ಸೆಪ್ಟಂಬರ್ 9ರಂದು ಜನಿಸಿದರು. ಲಕ್ಷ್ಮಣರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ; ಮತ್ತು ಬಿ.ಎಡ್. ಪದವಿಗಳನ್ನೂ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ; ಪದವಿಯನ್ನೂ ಗಳಿಸಿದರು.
ಬರವಣಿಗೆ ಚಿಕ್ಕವಯಸ್ಸಿನಲ್ಲೇ ಸಂಪಾದಿಸಿ
ಇನ್ನು ಕಾಲೇಜಿನಲ್ಲಿ ಓದುತ್ತಿರುವಾಗಲೇ, ಲಕ್ಷ್ಮಣರಾವ್, ಹಲವಾರು ಕವನಗಳನ್ನು ಬರೆದರು. ಅವೆಲ್ಲಾ 'ಲಹರಿ', 'ಗೋಕುಲ', 'ಸಂಕ್ರಮಣ' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ನವ್ಯ ಸಾಹಿತ್ಯದ ಚಳವಳಿ ಮೊದಲುಗೊಂಡು, 'ಚುಟುಕು', 'ವಿಡಂಬನೆ', 'ಸ್ವಗತ', 'ಭಾವಗೀತೆ' ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. ಅವರ ಕವಿತೆಯ ಕೆಲವು ಸಾಲುಗಳು :
- ಕೆಂಪು ಸಾಗರವೀಜಿ, ಕಾಡುಮೇಡು ದಾಟಿ
- ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು,
- ಸುಲಭವಲ್ಲ!
- “ಕೊನೆಗೆ
- ಮಾರನೆ ಸಂಜೆ,
- ಅವರವರ ಫೋಟೋಗಳನ್ನು ಅವರವರಿಗೆ
- ಒಪ್ಪಿಸಿ,
- ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
- ಬಿಕ್ಕಿ, ನಕ್ಕು,
- ಅವರವರ ಊರುಗಳಿಗೆ ಅವರೆಲ್ಲಾ ಹೊರಟು
- ಬಿಟ್ಟಮೇಲೆ,
- ನನ್ನ ಬಳಿ ಉಳಿಯುವುದು
- ಅದರೆಲ್ಲರ ಮಾಸುವ ನೆನಪು
- ನೆಗೆಟಿವ್ ಗಳು
- ಮಾತ್ರ”.
ಕವನ ಸಂಕಲನಗಳು ಸಂಪಾದಿಸಿ
- ಗೋಪಿ ಮತ್ತು ಗಾಂಡಲೀನ (ಅಬ್ಸರ್ಡ್ ಮಾದರಿ)(೧೯೭೬)
- ಟುವಟಾರ (೧೯೭೮)
- ಲಿಲ್ಲಿ ಪುಟ್ಟಿಯ ಹಂಬಲ(೧೯೮೧)
- ಶಾಂಗ್ರಿ-ಲಾ (೧೯೮೭)
- ಅಪರಾಧಂಗಳ ಮನ್ನಿಸೊ(೧೯೯೨)
- ನನ್ನಮಟ್ಟಿಗೆ
- ಮತ್ತೆ ಲೋಲೀಟ
- ನವೋನ್ಮೇಷ
- ಕೋಲಂಬಸ್
- ಎಡೆ ಮತ್ತು ಇವಳು ನದಿಯಲ್ಲ.
- ಹನಿಗವಿತೆಗಳು
- ಮಧ್ಯಸ್ಥ
- ಕ್ಯಾಮೆರಾ ಕಣ್ಣು (ಸಮಗ್ರ ಕಾವ್ಯ)
ಕಥಾ ಸಂಕಲನಗಳು ಸಂಪಾದಿಸಿ
- ಜೆಸ್ಟರ್.
- ಕಬ್ಬೆಕ್ಕು.
- ನಿರಂತರ
- ಕವಿ(ತೆ)ಯ ಕತೆ
- ಪ್ರೀತಿಯ ಬೆಳಕು (ಸಮಗ್ರ ಕಥಾ ಸಂಕಲನ)
ಕಾದಂಬರಿ ಸಂಪಾದಿಸಿ
- ಹೀಗೊಂದು ಪ್ರೇಮಕಥೆ
ನಾಟಕಗಳು ಸಂಪಾದಿಸಿ
- ಭಲೇಮಲ್ಲೇಶಿ
- ನನಗ್ಯಾಕೋ ಡೌಟು
ಇತರೆ ಕೃತಿಗಳು ಸಂಪಾದಿಸಿ
- ಪಡಿಮಿಡಿತ (ಗದ್ಯ ಬರಹ)
- ಲಿಬಿಡೊ ಬಿಡುವುದಿಲ್ಲ (ಬಿಡಿ ಬರಹಗಳು)
ಅನುವಾದಗಳು ಸಂಪಾದಿಸಿ
- ಮೂರು ರಂಗ ರೂಪಾಂತರಗಳು. (ಜೇನ್ಸ್ ಬ್ಯಾರಿಯ ಪ್ರಸಿದ್ಧಿ ಇಂಗ್ಲೀಷ್ ನಾಟಕಗಳ ಅನುವಾದ)
- ರಜನೀಶ್ ನಿಜರೂಪ. (ಇಂಗ್ಲೀಷ್ ಮೂಲ ಹ್ಯೂಮಿಲೇನ್ ಅನುವಾದ)
ಭಾವಗೀತೆಗಳ ಕ್ಯಾಸೆಟಗಳು ಸಂಪಾದಿಸಿ
- ಸುಬ್ಬಾಭಟ್ಟರ ಮಗಳೇ (೨೦೦೫)
- ಹಾಡಿನ ಜಾಡು
- ಆಲಿಂಗನ
- ಹೇಳಿ ಹೋಗು ಕಾರಣ
ಅಂಕಣ ಬರಹಗಳು ಸಂಪಾದಿಸಿ
- ಒಡನಾಟ (ಮಯೂರ ಮಾಸ ಪತ್ರಿಕೆ)
ಸಂಪಾದನೆ ಸಂಪಾದಿಸಿ
- ಕನ್ನಡ ಕವಿಕಾವ್ಯ ಕುಸುಮ-೪೨(ಇತರರೊಂದಿಗೆ)
ಅಭಿನಂದನ ಗ್ರಂಥಗಳು ಸಂಪಾದಿಸಿ
- ಚಿಂತಾಮಣಿ
- ಹಿನ್ನೋಟದ ಕನ್ನಡಿ
ಪ್ರಶಸ್ತಿ,ಬಹುಮಾನಗಳು ಸಂಪಾದಿಸಿ
- ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ,
- ಗೊರೂರು ಸಾಹಿತ್ಯ ಪ್ರಶಸ್ತಿ,
- ಚುಟುಕು ರತ್ನ ಪ್ರಶಸ್ತಿ,
- ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ,
- ಡಾ.ಪು.ತಿ.ನ. ಕಾವ್ಯ ಪುರಸ್ಕಾರ,
- ಆರ್ಯಭಟ ಪ್ರಶಸ್ತಿ,
- ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು.
ಕಿರುತೆರೆಯ ಧಾರಾವಾಹಿಗಳಿಗೆ ಶೀರ್ಷಿಕೆ ಗೀತರಚನೆ ಸಂಪಾದಿಸಿ
- ಎದೆ ತುಂಬಿ ಹಾಡುವೆನು,
- ಮಂಥನ ,
- ನಮ್ಮಮ್ಮ ಶಾರದೆ,
- ಬೃಂದಾವನ,
- ಅಪ್ಪ,
- ಅನಾವರಣ