ಬಿಳಿಕಲ್ಲು ರಂಗಸ್ವಾಮಿ ಬೆಟ್ಟ

ಬಿಳಿಕಲ್ಲು ರಂಗಸ್ವಾಮಿ ಬೆಟ್ಟ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇದು ಕನಕಪುರದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿದೆ. ಬೆಟ್ಟದ ತುದಿಯವರೆಗೂ ರಸ್ತೆ ಇದ್ದರೂ ಕೊನೆಯ ನಾಲ್ಕು ಕಿಲೋಮೀಟರ್ ಮಣ್ಣು ರಸ್ತೆಯಾಗಿದೆ. ಬೆಟ್ಟದ ತುದಿಯಲ್ಲಿ ರಂಗಸ್ವಾಮಿಯ ದೇವಸ್ಥಾನವಿದ್ದು, ಇದಕ್ಕೆ ಪ್ರತಿ ಶನಿವಾರ ಮಾತ್ರ ಪೂಜೆ ನಡೆಯುತ್ತದೆ.

ಬಿಳಿಕಲ್ಲು ರಂಗಸ್ವಾಮಿ ಬೆಟ್ಟದ ಮೇಲಿರುವ ಗುಡಿ