• ಬಂಡಾಯ ಕಾವ್ಯಕ್ಕೆ ಉದಾಹರಣೆ ಯಾಗಿ ಕೆಳಗೆ ಒಂದೆರಡು ಕವನಗಳನ್ನು ಕೊಟ್ಟಿದೆ


೨೦೦೦ ಮೇ ೧೧ ಬದಲಾಯಿಸಿ


  • ಉದಾ:
  • ( ೨೦೦೦ ಮೇ ೧೧ಕ್ಕೆ ಭಾರತದ ಜನಸಂಖ್ಯೆ ೧೦೦ಕೋಟಿತಲುಪಿದೆ )
  • (ವಿಶ್ವದಲ್ಲಿ ಭಾರತಕ್ಕೆ ಭ್ರಷ್ಟತೆಗೆ ಮೊದಲ ಸ್ಥಾನವೆಂದು ಪತ್ರಿಕಾವರದಿ ಬಂದಿದೆ)
  • ರಚನೆ (ಚಂ)
  • ಏಸುವಿಗೆ ಎರಡು ಸಾವಿರ ವರ್ಷ,
  • ಭಾರತ ಮಾತೆಗೋ ನೂರು ಕೋಟಿ ಸಂತಾನ,
  • ಬೇಂದ್ರೆ ಕಣ್ಣೀರಿಟ್ಟು ಬರೆದಾಗ
  • ಕೇವಲ ಮೂವತ್ಮೂರು ಕೋಟಿ
  • ಹೆಳವರೆಷ್ಟೋ, ಕುರುಡರೆಷ್ಟೋ,-ಅವರೆಂದದ್ದು. ||೧||
  • ಮತ್ತೆ ಅದೇ ಕಥೆ ; ಇತಿಹಾಸ ಪುನರಾವರ್ತನೆ,
  • ಬರಗಾಲದಲಿ ಬೆಂದವರೆಷ್ಟೋ,
  • ಬಿರುಗಾಳಿಯಲಿ ಸತ್ತವರೆಷ್ಟೋ,
  • ಬಡತನದ ಬೇಗೆಯಲಿ ನೋಯುವವರ-
  • ಲೆಖ್ಖ ತೆಗೆಯ ಬೇಕಷ್ಟೆ ! ||೨||
  • ಬಿಡುಗಡೆಯ ಭಾಷ್ಪ ಬಿದ್ದು ಐವತ್ತು ವರ್ಷ,
  • ಅಷ್ಟರಲಿ ಬೆಳದದ್ದು ಸರ್ವತೋಮುಖ,
  • ಎದ್ದು ಕಾಣುವುದು -ಸಂತಾನ ಭಾಗ್ಯ.
  • ಅದರೊಳಗೆ ಭ್ರಷ್ಟರದೇ - ಸಾಮ್ರಾಜ್ಯ
  • ಅದಕ್ಕೆ ವಿಶ್ವದಲಿ ನಮಗೇ ಮೊದಲ ಸ್ಥಾನ. ||೩||
  • ಧರ್ಮ ಜಾಗ್ರತಿಯ ಚಳವಳಿಯೋ,
  • ಸಂಸ್ಸೃತಿಯ ಮೆರುಗು ಪ್ರವಚನವೊ,
  • ಕೇರಿಕೇರಿಯಲಿ ಗಂಟೆ ಮೊಳಗು - ದೇವರೆಷ್ಟೋ !
  • ಕೂಗಿ ಕರೆವರೆಷ್ಟೋ ,ಮೌನದಲಿ ಮೊರೆಯೆಷ್ಟೋ!
  • ಕೇಳಿಸಿಕೊಂಡಿದ್ದಕ್ಕೆ ಪ್ರಮಾಣವೆಲ್ಲಿ ? ||೪||
  • ಕಂದಾಚಾರ, ಬಯಲಾಡಂಬರದ ಪಾದದಡಿ,
  • ಸತ್ಯ , ಪ್ರಾಮಾಣಿಕತೆ, ಶಾಂತಿ ಸೊರಗಿ,
  • ಭ್ರಷ್ಠತೆಯ ಮಸಿ ನುಂಗಿ ಬಣ್ಣಗಳೆಲ್ಲ ಶೂನ್ಯ.
  • ಅಂಧಶ್ರದ್ಧೆ, ಗುಂಡು-ರಕ್ತದೋಕುಳಿಯಲ್ಲಿ
  • ರಾಮ ರಾಜ್ಯದ ಕನಸು ಕನಸಾಗಿಯೇ ಹೋಯ್ತು! ||೫||

ನೋಡಿ ಬದಲಾಯಿಸಿ

ಕನ್ನಡ ಸಾಹಿತ್ಯ ಪ್ರಕಾರಗಳು | ಕನ್ನಡ ಕಾವ್ಯ ಪ್ರಕಾರಗಳು | ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ

ಆಧಾರ ಬದಲಾಯಿಸಿ