ನೆಕ್ಟರ್ ಇನ್ ಸ್ಟೋನ್

ನೆಕ್ಟರ್ ಇನ್ ಸ್ಟೋನ್ - ಬೆಂಗಳೂರು ದೂರದರ್ಶನ ಕೇಂದ್ರ ಪ್ರಸ್ತುತ ಪಡಿಸಿದ ಮೊದಲ ರಾಷ್ಟ್ರೀಯ ಪ್ರಸಾರದ ಕಾರ್ಯಕ್ರಮ.

ಕರ್ನಾಟಕದ ಶಿಲ್ಪಕಲೆಯ ವೈಭವವನ್ನು ನಿರೂಪಿಸುವ ಆಂಗ್ಲ ಭಾಷೆಯ ಕಾರ್ಯಕ್ರಮವಾದ ನೆಕ್ಟರ್ ಇನ್ ಸ್ಟೋನ್(ಅರ್ಥ: ಕಲ್ಲಿನಲ್ಲಿ ಮಕರಂದ) ಹಲವು ಬಾರಿ ರಾಷ್ಟ್ರೀಯ ವಾಹಿನಿಯಲ್ಲಿ ಮರುಪ್ರಸಾರವಾಗಿ ಜನಪ್ರಿಯವಾಗಿತ್ತು. ರಾಷ್ಟ್ರ ಕವಿ ಕುವೆಂಪು ವಿರಚಿತ ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಕವಿತೆಯನ್ನು ಈ ಕಾರ್ಯಕ್ರಮಕ್ಕೆ ಹಿನ್ನೆಲೆ ಗೀತೆಯನ್ನಾಗಿ ಅಳವಡಿಸಿಕೊಳ್ಳಲಾಗಿತ್ತು.