ತಮಿಳುನಾಡು ವಿಧಾನಸಭೆ ಚುನಾವಣೆ, 2016

ವಿಧಾನಸಭೆ ಚುನಾವಣೆ 2016 ಬದಲಾಯಿಸಿ

 
ತಮಿಳುನಾಡು ವಿಧಾನಸಭೆ ಚುನಾವಣೆ 2016
  • ಭಾರತದಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ಮೇ 16, 2016 ರಂದು ರಾಜ್ಯದ ವಿಧಾನಸಭೆಯ 234 ಸ್ಥಾನಗಳಿಗೆ ನಡೆಯಲಿದೆ. [1] 2011 ರ ಹಿಂದಿನ ಚುನಾವಣೆಯಲ್ಲಿ, ಎಐಎಡಿಎಂಕೆ, ಜಯಲಲಿತಾ ನೇತೃತ್ವದಲ್ಲಿ ಬಹುಮತವನ್ನು ಪಡೆದು ಸರ್ಕಾರ ರಚಿಸಿತ್ತು. [೧]

ಹಿನ್ನೆಲೆ ಬದಲಾಯಿಸಿ

 
ಭಾರತ -ತಮಿಳುನಾಡು (ಕೆಂಪು ಬಣ್ಣದ ಪ್ರದೇಶ
  • ತಮಿಳುನಾಡಿನ ಹದಿನಾಲ್ಕನೆಯ ಅಸೆಂಬ್ಲಿ ಅಧಿಕಾರವಧಿ ಮೇ 2016 22 ಯಲ್ಲಿ ಕೊನೆಗೊಳ್ಳುತ್ತದೆ. ಮತದಾರರ ಪಟ್ಟಿಗಳಲ್ಲಿ 5,79 ಕೋಟಿ ಅಧಿಕೃತ ಮತದಾರರು ಇದ್ದಾರೆ. ತಮಿಳುನಾಡಿನಲ್ಲಿ 65,616 ಮತದಾನ ಕೇಂದ್ರಗಳಿವೆ.[೨]
  • ತಮಿಳುನಾಡು ಸೇರಿದಂತೆ 15 ಮತ್ತು 29 ಫೆಬ್ರವರಿ 2016 ನಡುವೆ ಮತದಾರರ ಅಧಿಕೃತ ಪಟ್ಟಿಗಳ ಎಲ್ಲಾ ಸಮೀಕ್ಷೆಯಲ್ಲಿ ಹೊರಟ ರಾಜ್ಯದ ವಿಶೇಷ ಶುದ್ಧೀಕರಣ ಚಾಲನೆ, ಬಾಗಿಲು ಯಾ ಬಾಗಿಲು ಪರಿಶೀಲನೆ, ಮತಗಟ್ಟೆ ಮಟ್ಟದ ಏಜೆಂಟ್ (ಅಭ್ಯರ್ಥಿ-ಪ್ರತಿನಿಧಿ) ಒಳಗೊಂಡ, ಎಲ್ಲಾ ಕೈಗೊಳ್ಳಬಹುದಾದ ಪರಿಶೀಲನಾ ಕ್ರಿಯೆಗಳು ನಡೆಯುವುವು.
  • ಫೆಬ್ರವರಿ 2016, 12 ರಂದು ಭಾರತದ ಚುನಾವಣಾ ಆಯೋಗ ತಮಿಳುನಾಡಿನಲ್ಲಿ 17 ವಿಧಾನಸಭಾ ಕ್ಷೇತ್ರಗಳು ಮತದಾರರ-ಪರಿಶೀಲಿಸಿದ ಕಾಗದದ ಆಡಿಟ್ ಟ್ರಯಲ್ ಗಳನ್ನು ಘೋಷಿಸಿತು (ಜೊತೆಗೆ ಜೋಡಿಸಲಾದ ಯಂತ್ರಗಳು). ಮತದಾರರ-ಪರಿಶೀಲಿಸಿದ ಕಾಗದದ ಆಡಿಟ್ ಟ್ರಯಲ್ (VVPAT) ಯಂತ್ರಗಳನ್ನು 4,000 ಬೂತ್ಗಳಲ್ಲಿ ಇರುತ್ತದೆ ಇರಿಸಲಾಗುವುದು.[೩]

ಜನಸಂಖ್ಯಾ ವಿವರ ಬದಲಾಯಿಸಿ

2011 ರ ಭಾರತ ಜನಗಣತಿಯ ಪ್ರಕಾರ, ತಮಿಳುನಾಡು 7,21,47,030 ಜನಸಂಖ್ಯೆ ಹೊಂದಿತ್ತು. ಒಟ್ಟು ಜನಸಂಖ್ಯೆಯ ಪರಿಶಿಷ್ಟ ಜಾತಿಯವರು- 20,01% -ಒಟ್ಟು 1,44,38,445 ನಷ್ಟು, ಮತ್ತು ಜನಸಂಖ್ಯೆಯ 1.10% -7,94,697 ಜನ ಪರಿಶಿಷ್ಟ ಪಂಗಡಗಳು (ಎಸ್ .ಟಿ). ಇತರ ಹಿಂದುಳಿದ ವರ್ಗಗಳು (ಒಬಿಸಿ) ಸುಮಾರು 68%. [12] 2011 ರ ಧಾರ್ಮಿಕ ಜನಗಣತಿ ಅನ್ವಯ, ತಮಿಳುನಾಡು 87.6% ಹಿಂದೂಗಳು 5.9% ಮುಸ್ಲಿಮರು, 6.1% ಕ್ರಿಶ್ಚಿಯನ್ನರು, 0.1% ಜೈನರು ಮತ್ತು 0.3% ಇತರ ಧರ್ಮಗಳು ಅಥವಾ ಯಾವುದೇ ಧರ್ಮ ಸೇರಿದವರು. [೪] [೫]


ಚುನಾವಣೆ ವೇಳಾಪಟ್ಟಿ ಬದಲಾಯಿಸಿ

  • ತಮಿಳುನಾಡು ಅಸೆಂಬ್ಲಿ ಚುನಾವಣೆ 16 ಮೇ 2016 ರಂದು ನಡೆಯುತ್ತದೆ. ಮತಗಳನ್ನು ಮೇ 19 ರಂದು ಎಣಿಕೆ ನಡೆಯಲಿದೆ.(ಎಲ್ಲಾ 234 ಸ್ಥಾನಗಳಿಗೆ)
ದಿನಾಂಕ
ನಾಮನಿರ್ದೇಶನಗಳು ಆರಂಭವಾಗುವ ದಿನ : 22 ಏಪ್ರಿಲ್, 2016
ನಾಮನಿರ್ದೇಶನಗಳ ಫೈಲಿಂಗ್' ಕೊನೆಯ ದಿನಾಂಕ: 29 ಏಪ್ರಿಲ್, 2016
ನಾಮನಿರ್ದೇಶನಗಳ ಪರಿಶೀಲನೆ ದಿನಾಂಕ: 30 ಏಪ್ರಿಲ್, 2016
ಅಭ್ಯರ್ಥಿಗಳು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ: 2 ಮೇ, 2016
ಮತದಾನ ದಿನಾಂಕ: 16 ಮೇ, 2016
ಎಣಿಕೆ ದಿನಾಂಕ: 19 ಮೇ, 2016
ಚುನಾವಣೆ ಪೂರ್ಣಗೊಳ್ಳುವ ದಿನಾಂಕ: 21 ಮೇ, 2016

[೬]

ಚುನಾವಣಾ ಆಯೋಗ ಬದಲಾಯಿಸಿ

  • ಮತದಾರರು ಮತ ತಮ್ಮ ಹಕ್ಕು ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು, ಭಾರತದ ಚುನಾವಣಾ ಆಯೋಗ ತಮಿಳುನಾಡಿನಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಿತು. ತಮಿಳುನಾಡು ವಿಧಾನಸಭೆಗೆ ಚುನಾವಣೆ ಮುಖ್ಯ ಚುನಾವಣಾ ಆಯುಕ್ತ ರಾಜೇಶ್ ಲಖೋನಿ ತಮಿಳುನಾಡಿನ ಒಂದು ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಚಿತ್ರಗಳಲ್ಲಿ ಸುತ್ತ ಹಾಕಿದ ಮೇಮ್ಸ್ ಮತ್ತು ಟ್ವಿಟ್ಗಳು, ರಚಿಸುವ ಮೂಲಕ ಸಾಮಾಜಿಕ ಮಾಧ್ಯಮಗಳ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ಹೆಚ್ಚುವರಿಯಾಗಿ, ಚುನಾವಣಾ ಆಯೋಗ ಸಹ ಮಾಧ್ಯಮ ವ್ಯಕ್ತಿಗಳ ಸೂರ್ಯ, ರವಿಚಂದ್ರನ್ ಅಶ್ವಿನ್ ಮತ್ತು . ದಿನೇಶ್ ಕಾರ್ತಿಕ್, ಅವರನ್ನು ಪ್ರಚಾರಕ್ಕೆ ಬಳಸಿಕೊಂಡಿದೆ. ಅವರ ಮೂಲಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗಿದೆ.
  • ಜನತಾ ಕಲ್ಯಾಣ ಫ್ರಂಟ್ (ಪಕ್ಷಗಳು ಡಿಎಂಡಿಕೆ, ಎಂಡಿಎಮ್ ಕೆ, ಸಿಪಿಎಂ, ಸಿಪಿಐ ಮತ್ತು ವಿಸಿಕೆ ಒಳಗೊಂಡಿರುವ) ಮಧುರೈ ಜನವರಿ 2016 26 ತನ್ನ ಅಭಿಯಾನವನ್ನು ಆರಂಭಿಸಿತು [೭]

ಪಕ್ಷ ಮತ್ತು ಮೈತ್ರಿಗಳು ಬದಲಾಯಿಸಿ

  • 19-5-2016 -ಆವರಣಗಳಲ್ಲಿ ಫಲಿತಾಂಶಗಳು
 
ಜೆ.ಜಯಲಲಿತಾ-ಎಡಿಎಮ್'ಕೆ ನಾಯಕಿ
ಎಡಿಎಮ್'ಕೆ ADMK ಒಕ್ಕೂಟ
  1. * ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (133+1?) (41.6%)
  2. * ಅಖಿಲ ಭಾರತ ಫಾರ್ವರ್ಡ್ ಬ್ಲಾಕ್
  3. * ಭಾರತೀಯ ಗಣತಂತ್ರವಾದಿ ಪಕ್ಷ
  4. * ಸಮತುವ ಮಕ್ಕಳ್ ಕಚ್ಚಿ
  5. * ತಮಿಳುನಾಡು ಕೊಂಗು ಇಲೈನಾರ್ ಪರವೈ(Ilaignar Peravai)
  6. * ತಮಿಝಂಗ ವಜುವರಿಮೈ ಕಚ್ಚಿ(Tamizhaga Vazhvurimai ಕಚ್ಚಿ)
 
ಎಂ.ಕರಣಾನಿಧಿ -ಡಿಎಂಕೆ ನಾಯಕ.
ಡಿಎಂಕೆ ಒಕ್ಕೂಟ
  1. * ದ್ರಾವಿಡ ಮುನ್ನೇತ್ರ ಕಳಗಂ (90)DMK+(40.2%)
  2. * ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (8)
  3. * ಮಣಿತನಯ ಮಕ್ಕಳ್ ಕಚ್ಚಿ (1)
  4. * ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್' (1)
  5. * ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
  6. * ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ
  7. * ಭಾರತೀಯ ಜನತಾ ಪಕ್ಷ
ಪೀಪಲ್ಸ್ ಕಲ್ಯಾಣ ಫ್ರಂಟ್
(People's Welfare Front):
  1. ದೇಶೀಯ ಮುರಪೊಕ್ಕು ದ್ರಾವಿಡ ಕಳಗಂ
  2. ಭಾರತದ ಕಮ್ಯುನಿಸ್ಟ್ ಪಕ್ಷ
  3. ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)
  4. ಮರುಮಳರ್ಚಿ ದ್ರಾವಿಡ ಮುನ್ನೇತ್ರ ಕಳಗಂ
  5. ವಿದುತಲೈ ಚಿರುತೈಗಲ್(Chiruthaigal) ಕಚ್ಚಿ
ಅಲಿಪ್ತ
  1. ಕೊಂಗನಾಡು ಮಕ್ಕಳ್ ದೇಶೀಯ ಕಚ್ಚಿ
  2. ಕೊಂಗನಾಡು ಮುನ್ನೇತ್ರ ಕಳಗಂ
  3. ನಾಮ್ ತಮಿಳರ್ ಕಚ್ಚಿ
  4. ಪಟ್ಟಲಿ ಮಕ್ಕಳ್ ಕಚ್ಚಿ (4)
  5. ತಮಿಳು ಮಾಣಿಲ ಕಾಂಗ್ರೆಸ್
  6. ಪುಥಿಯಾ (Tamilagam) (1)
  7. ಆಮ್ ಆದ್ಮಿ ಪಾರ್ಟಿ ಪೀಪಲ್ ವೆಲ್ಫೇರ್ ಫ್ರಂಟ್ ಚುನಾವಣೆಯಲ್ಲಿ ಸ್ಪರ್ಧಿಸುವಂತೆ. ಇತರೆ ಸಣ್ಣ ಒಕ್ಕೂಟಗಳು ಪುಥಿಯಾ ಸಕ್ತಿ ಫ್ರಂಟ್ ಸೇರಿವೆ.

[೮][೯][೧೦]

ಮುನ್ನೋಟ ಬದಲಾಯಿಸಿ

ಇಂಡಿಯಾ ಟಿ.ವಿ– ಸಿ ವೋಟರ್‌ ಸಮೀಕ್ಷೆ
೨-೪-೨೦೧೬
  • ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟ 130 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯಲಿದೆ. ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟ 70 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಬಿಜೆಪಿ ಮೈತ್ರಿಕೂಟ ಇಲ್ಲಿ ಯಾವುದೇ ಸ್ಥಾನ ಪಡೆಯದು. ಇತರರು 34 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.[೧೧]
  • ೧೪-೫-೨೦೧೬ರ ಸಮೀಕ್ಷೆ
  • ತಮಿಳುನಾಡು ಸಿಎಂಗೆ ಉತ್ತಮ ಆಯ್ಕೆ ಜಯಲಲಿತಾ - ಶೇ. 32.63% ಎಂ ಕೆ ಸ್ಟಾಲಿನ್ - ಶೇ.18.88% ಎಂ ಕರುಣಾನಿಧಿ - ಶೇ.15.21% ವಿಜಯಕಾಂತ್ - ಶೇ. 6.54% ರಾಮದಾಸ್ - ಶೇ. 4.30% ವೈಕೋ - ಶೇ. 4.04% ಪಿ. ಚಿದಂಬರಂ - ಶೇ. 1.28%
  • ತಮಿಳುನಾಡು ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸ್ಥಾನ (ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ) ಒಟ್ಟು ಸ್ಥಾನ: 234 ಡಿಎಂಕೆ ಮೈತ್ರಿಕೂಟ - 66 (31) ಎಐಡಿಎಂಕೆ ಮೈತ್ರಿಕೂಟ - 164 (203) ಇತರರು - 04[೧೨]
  • ದಿ೧೬-೫-೨೦೧೬:ತಮಿಳು ನಾಡಿನ ಮತದಾನ 70% - 2011 (ಚುನಾವಣೆಗೆ 8 ಶೇಕಡಾ ಕಡಿಮೆ).

ಸಿ ಓಟರ್ ಸಮೀಕ್ಷೆ ಬದಲಾಯಿಸಿ

  • ೧೭-೫-೨೦೧೬Tamil Nadu
  • ೧೯-೫-೨೦೧೬ ಫಲಿತಾಂಶ :ಎಐಎಡಿಎಂಕೆ ಅಲೈಯನ್ಸ್ =133+1 ಸ್ಥಾನಗಳನ್ನು (57.4%); ಡಿಎಂಕೆ ಅಲೈಯನ್ಸ್ 99 ಸ್ಥಾನಗಳನ್ನು (42.7%)ಪಡೆದಿವೆ.
  • ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಾ ..133+1; ದ್ರಾವಿಡ ಮುನ್ನೇತ್ರ KazhagamIndian 90; ರಾಷ್ಟ್ರೀಯ Congress 8; Pattali ಮಕ್ಕಳ್ Katchi 4; Indian ಯೂನಿಯನ್ ಮುಸ್ಲಿಂ ಲೀಗ್ 1 ; Manithaneya ಮಕ್ಕಳ್ ಕಚ್ಚಿ 1; ಪುಥಿಯಾ Tamilagam 1.
  • ಶೇಕಡಾವಾರು ಮತ ಗಳಿಕೆ:ಎಐಎಡಿಎಂಕೆ ADMK {40.8% 17617060.; ಡಿಎಂಕೆ {31.6%, 13670511.; ರಾಷ್ಟ್ರೀಯ ಕಾಂಗ್ರೆಸ್ {6.4%, 2774075} PMK {5.3% 2300775} ಬಿಜೆಪಿ {2.8%, 1228692} ಡಿಎಂಡಿಕೆ {2.4%, 10343 ... {1.4% 617907} ntk {1.1% 458104} MDMK {0.9%, 373713} ಸಿಪಿಐ {0.8%, 340290
2011 % ಪಾರ್ಟಿ / ಅಲೈಯನ್ಸ್ ಫಲಿತಾಂಶ News Nation India Today-Axis Times Now-CVoter chanakfya
150/38.4 ಎಐಎಡಿಎಂಕೆ 134 95-99 89-101 139 81-99
23/22.4 ಡಿಎಂಕೆ 89+ಕಾಂಗ್ರೆಸ್ 8 114-118 124-140 78 129-151
28/7.9 ಡಿಎಂಡಿಕೆ 14 -- -- --
00 ಬಿಜೆಪಿ 04 00-03 00 00
10cpi+13/28.9 ಇತರೆ/ಮುಸ್ಲಿಂ ಲೀಗ್ 1 09 04-08 17 02-06
ಒಟ್ಟು ಸ್ಥಾನ 232 234 234 234 234

[೧೩][೧೪][೧೫]

ಜಯಲಿತಾ ಪುನಃ ಅಧಿಕಾರಕ್ಕೆ ಬದಲಾಯಿಸಿ

  • ಸೋಮವಾರ, 23/05/2016: ಮದ್ರಾಸ್ ವಿವಿಯ ಸೆನೆಟರಿ ಆಡಿಟೋರಿಯಂನಲ್ಲಿ ಸತತವಾಗಿ ಎರಡನೆ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೆ. ಜಯಲಲಿತಾ ಅವರು ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನ ರಾಜ್ಯಪಾಲ ಕೆ. ರೋಸಯ್ಯ ಅವರು ಜಯಲಲಿತಾ ಅವರಿಗೆ ಪ್ರಮಾಣವಚನವನ್ನು ಬೋಧಿಸಿದರು. ಜಯಲಲಿತಾ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಜೆ. ಜಯಲಲಿತಾ ಅವರ ಜೊತೆ 28 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.[೧೬]

ಉಪ ಚುನಾವಣೆ ಬದಲಾಯಿಸಿ

  • ಎಐಎಡಿಎಂಕೆ ತಮಿಳುನಾಡಿನಲ್ಲಿ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದಿದೆ. ಎಐಎಡಿಎಂಕೆ ಅಭ್ಯರ್ಥಿಗಳು ಎಂ ರಂಗಸ್ವಾಮಿ, ವಿ.ಸೆಂತಿಲ್ ಬಾಲಾಜಿ ಮತ್ತು ಎ ಕೆ ಬೋಸ್ ತಮಿಳುನಾಡಿನಲ್ಲಿ ತಂಜಾವೂರು, ಅರವಕುರುಚಿ ಮತ್ತು ತಿರುಪ್ಪರಂಕುಂದರಂ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮತದಾನ 19 ನವೆಂಬರ್ 2016 ರಂದು ನಡೆಯಿತು ಮತ್ತು ಮತಗಳನ್ನು ಮಂಗಳವಾರ ಎಣಿಸಲಾಯಿತು.[೧೭]

ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್‌ಸೆಲ್ವಂ ಪ್ರಮಾಣ ವಚನ ಬದಲಾಯಿಸಿ

  • 6 Dec, 2016;
  • ದಿ.5-12-2016 ರಂದು ಜಯಲಲಿತಾ ನಿಧನದ ಬಳಿಕ ಒ.ಪನ್ನೀರ್‌ ಸೆಲ್ವಂ ಅವರು ದಿ.5-12-2016 ಸೋಮವಾರ ಮಧ್ಯರಾತ್ರಿ 1.30ಕ್ಕೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒ.ಪನ್ನಿರ್‌ ಸೆಲ್ವಂ ಅವರು ಎಐಎಡಿಎಂಕೆ ಶಾಸಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.[೧೮]
  • 29 Dec, 2016
  • ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಅವರನ್ನು 29 Dec, 2016 ರಂದು ಆಯ್ಕೆ ಮಾಡಲಾಗಿದೆ.[೧೯]

ಎಡಪ್ಪಾಡಿ ಕೆ. ಪಳನಿಸ್ವಾಮಿಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಬದಲಾಯಿಸಿ

  • ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾದ ನಂತರ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಒ.ಪನ್ನಿರ್‌ ಸೆಲ್ವಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಚೆನ್ನೈನಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ದಿ.೧೬-೨-೨೦೧೭ ಗುರುವಾರ ಪ್ರಮಾಣವಚನ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸಮತ ಕೋರಲಿದ್ದಾರೆ.

ವಿಶ್ವಾಸಮತ ಯಾಚನೆ ಬದಲಾಯಿಸಿ

  • ಕೊನೆಯ ಕ್ಷಣದಲ್ಲಿ ಯಾವುದೇ ನಾಟಕೀಯ ಬೆಳವಣಿಗೆ ನಡೆಯದಿದ್ದರೆ ಪಳನಿಸ್ವಾಮಿ ಅವರು ವಿಶ್ವಾಸಮತ ಗೆಲ್ಲುವುದು ಖಚಿತ. ಆದರೆ, ವಿಶ್ವಾಸಮತದ ವಿರುದ್ಧ ಮತ ಹಾಕುವುದಾಗಿ ಈತನಕ ಶಶಿಕಲಾ ಬಣದಲ್ಲಿದ್ದ ಶಾಸಕ ಆರ್‌. ನಟರಾಜ್‌ ಹೇಳಿರುವುದು ಪಳನಿಸ್ವಾಮಿ ಅವರಲ್ಲಿ ಸ್ವಲ್ಪಮಟ್ಟಿನ ಆತಂಕ ಮೂಡಿಸಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ 124 ಸದಸ್ಯರ ಬೆಂಬಲ ತಮಗೆ ಇದೆ ಎಂದು ಪಳನಿಸ್ವಾಮಿ ಹೇಳಿಕೊಂಡಿದ್ದಾರೆ. ಈಗ ಅದು 123ಕ್ಕೆ ಇಳಿದಿದೆ. ವಿಶ್ವಾಸಮತ ಪಡೆಯಲು 117 ಸದಸ್ಯರ ಬೆಂಬಲ ಬೇಕಾಗುತ್ತದೆ. ನಟರಾಜ್‌ ಅವರು ಪನ್ನೀರ್‌ಸೆಲ್ವಂ ಬಣಕ್ಕೆ ಸೇರಿದ್ದಾರೆ. ‘ಕ್ಷೇತ್ರದ ಜನರ ಜತೆ ಮಾತನಾಡಿದ್ದೇನೆ. ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಜನರ ಭಾವನೆಗಳನ್ನು ವಿಧಾನಸಭೆಯಲ್ಲಿ ಬಿಂಬಿಸುವುದು ನನ್ನ ಜವಾಬ್ದಾರಿ’ ಎಂದು ನಟರಾಜ್‌ ಹೇಳಿದ್ದಾರೆ. ಈಗ ಪನ್ನೀರ್‌ಸೆಲ್ವಂ ಅವರಿಗೆ 11 ಶಾಸಕರ ಬೆಂಬಲ ಮಾತ್ರ ಇದೆ.[೨೦]

ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿ ಪಕ್ಷದಿಂದಉಚ್ಛಾಟನೆ ಬದಲಾಯಿಸಿ

  • ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಮುಂದುವರಿದಿವೆ. ಸುಪ್ರೀಂಕೋರ್ಟ ತೀರ್ಮಾನದಂತೆ ಅಧಿಕಸಂಪತ್ತು ಕೇಸಿನಲ್ಲಿ ಜೈಲು ಸೇರಿದ ಅವರು ಶಶಿಕಲಾ ಅವರನ್ನು ಪನ್ನೀರ್‌ ಸೆಲ್ವಂ ಬಣವು ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿದೆ. ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಇ. ಮಧುಸೂದನನ್‌ ಶಶಿಕಲಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ. ಶಶಿಕಲಾ ಅವರ ಜತೆಗೆ ಅವರ ಸಂಬಂಧಿಗಳಾದ ಟಿ.ಟಿ.ವಿ. ದಿನಕರನ್‌ ಮತ್ತು ಎಸ್‌. ವೆಂಕಟೇಶ್‌ ಅವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ.[೨೧]

ಶಶಿಕಲಾ ನಾಯಕಿಯಾಗಿ ಆಯ್ಕೆ ಬದಲಾಯಿಸಿ

೬-೨-೨೦೧೭

  • ಭಾನುವಾರ ಓ. ಪನ್ನೀರ್‌ಸೆಲ್ವಂ ರಾಜೀನಾಮೆ ನೀಡಿದ್ದಾರೆ. ಎಐಎಡಿಎಂಕೆ ಪಕ್ಷ ಶಾಸಕರು ಶಶಿಕಲಾ ಅವರನ್ನು ತಮ್ಮ ಮುಂದಿನ ನಾಯಕಿಯಾಗಿ ಆಯ್ಕೆ ಮಾಡಿಯಾಗಿದೆ. ಈ ಸಮಯದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ದಿಲ್ಲಿಯಲ್ಲಿ ಕೇಂದ್ರ ಸಚಿವರೊಬ್ಬರ ಪತ್ರನ ಮದುವೆ ಸಮಾರಂಭದಲ್ಲಿದ್ದರು. ಹೀಗಾಗಿ ಅವರ ನಡೆ ಏನಿರಲಿದೆ ಎಂಬುದು ಅಸ್ಪಷ್ಟ. ಇದರ ಜತೆಗೆ, ಯಾವುದೇ ಚುನಾವಣೆಗಳನ್ನು ಎದುರಿಸದ ಶಶಿಕಲಾ ಮುಂದಿನ 6 ತಿಂಗಳ ಒಳಗಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ. ಸಧ್ಯವೇ ಈ ತಿಂಗಳಿನಲ್ಲಿ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತೀರ್ಪು ಹೊರಬೀಳಲಿದೆ. [೨೨]

ಚುನಾವನೆ ಆಯೋಗದ ನೋಟಿಸ್ ಬದಲಾಯಿಸಿ

  • ೧೮-೨-೨೦೧೭;
  • ಶಶಿಕಲಾ en:V. K. Sasikala ಅವರನ್ನು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಕ್ರಮ ಸರಿಯಿಲ್ಲ’ ಎಂದು ಪನ್ನೀರ್‌ಸೆಲ್ವಂ ಬಣ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಶಶಿಕಲಾ ಅವರಿಗೆ ಸೂಚಿಸಿದೆ.[೨೦]

ಶಶಿಕಲಾ ಅಪರಾಧಿ ಬದಲಾಯಿಸಿ

  • ೧೪-೨-೨೦೧೭

ಶಶಿಕಲಾ ವಿರುದ್ಧ ಆದಾಯ ಮೀರಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಶಶಿಕಲಾ ಅಪರಾಧಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಇಬ್ಬರು ನ್ಯಾಯಮೂರ್ತಿಗಳ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾ.ಪಿನಾಕಿ ಚಂದ್ರ ಘೋಷ್ ಮತ್ತು ನ್ಯಾ.ಅಮಿತಾಬ್ ರಾಯ್ ಪೀಠ ತೀರ್ಪು ನೀಡಿದೆ. ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. 4 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ. ದಂಡವನ್ನು ವಿಧಿಸಿದ ಸುಪ್ರೀಂ ಕೋರ್ಟ್ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿದೆ.[೨೩]

ಎಡಪ್ಪಾಡಿ ಕೆ. ಪಳನಿಸ್ವಾಮಿ ಶಾಸಕಾಂಗ ಪಕ್ಷದ ಹೊಸ ನಾಯಕ ಬದಲಾಯಿಸಿ

  • Wednesday, February 15th, 2017
  • ಸೋಮವಾರ ರಾತ್ರಿ ರೆಸಾರ್ಟ್‌ನಲ್ಲೇ ಉಳಿದಿದ್ದ ಶಶಿಕಲಾ ಅವರು “ಪ್ಲಾನ್‌ ಬಿ’ ಯನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರು. ಅದರಂತೆ, ಮಂಗಳವಾರ ಬೆಳಗ್ಗೆ ತೀರ್ಪು ಪ್ರಕಟವಾಗುತ್ತಿದ್ದಂತೆ, ರೆಸಾರ್ಟ್‌ನಲ್ಲೇ ಶಾಸಕರ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ ಶಶಿಕಲಾ, ತನ್ನ ಅತ್ಯಾಪ್ತ ಹಾಗೂ ಸಚಿವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ಹೊಸ ನಾಯಕನನ್ನಾಗಿ ಆಯ್ಕೆ ಮಾಡಿದರು. ಶಶಿಕಲಾ ಜೈಲು ಸೇರುವ ಕಾರಣ, ಸಿಎಂ ಪಟ್ಟವನ್ನು ಸುಲಭವಾಗಿ ಪಡೆಯಬಹುದು ಎಂದು ಕನಸು ಕಂಡಿದ್ದ ಹಂಗಾಮಿ ಸಿಎಂ ಪನ್ನೀರ್‌ ಸೆಲ್ವಂ ಬಣಕ್ಕೆ ನಿರಾಸೆ.

ಪನ್ನೀರ್‌ ಸೆಲ್ವಂ ಬಣದಿಂದಲೂ ಭೇಟಿ ಬದಲಾಯಿಸಿ

  • ಪಳನಿಸ್ವಾಮಿ ಅವರು ರಾಜ್ಯಪಾಲರ ಭೇಟಿಯಾದ ಬೆನ್ನಲ್ಲೇ ಪನ್ನೀರ್‌ ಸೆಲ್ವಂ ಬಣವೂ ವಿದ್ಯಾಸಾಗರ ರಾವ್‌ ಅವರನ್ನು ಭೇಟಿಯಾಗಿ, ಬಹುಮತ ಸಾಬೀತಿಗೆ ಅವಕಾಶ ಕೋರಿತು. ಇನ್ನೊಂದೆಡೆ, ಡಿಜಿಪಿ ಮತ್ತು ಚೆನ್ನೈ ಪೊಲೀಸ್‌ ಆಯುಕ್ತ ಎಸ್‌. ಜಾರ್ಜ್‌ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದರು.

ರಾಜ್ಯಪಾಲರ ಭೇಟಿಯಾದ ಪಳನಿಸ್ವಾಮಿ ಬದಲಾಯಿಸಿ

  • ಸಂಜೆ 5.30ರ ವೇಳೆಗೆ ಪಳನಿಸ್ವಾಮಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಚೆನ್ನೈಯ ರೆಸಾರ್ಟ್‌ನಲ್ಲಿ ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ಶಾಸಕರ ಬೆಂಬಲ ಪತ್ರವನ್ನೂ ಅವರು ರಾಜ್ಯಪಾಲರಿಗೆ ಹಸ್ತಾಂತರಿಸಿದರು. ಜತೆಗೆ, ತನಗೆ 135 ಶಾಸಕರ ಬೆಂಬಲ ವಿದ್ದು, ಸರಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.[೨೪]

ವಿಶ್ವಾಸ ಮತ ಬದಲಾಯಿಸಿ

  • 18 Feb, 2017;
  • ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಪಳನಿಸ್ವಾಮಿ ಅವರಿಗೆ ವಿಶ್ವಾಸ ಮತ ಲಭಿಸಿದೆ.ಸ್ಪೀಕರ್‌ ಧನಪಾಲ್‌ ಅವರು ಡಿಎಂಕೆ ಸದಸ್ಯರನ್ನ ಸದನದಿಂದ ಹೊರಗಿಟ್ಟು ವಿಶ್ವಾಸ ಮತಕ್ಕೆ ಅವಕಾಶ ಕಲ್ಪಿಸಿದರು. ಪಳನಿಸ್ವಾಮಿ ಅವರ ಪರ 122 ಮತ ಚಲಾವಣೆಯಾಗಿದ್ದು, ವಿರುದ್ಧವಾಗಿ 11 ಮತ ಚಲಾವಣೆಯಾಗಿವೆ.(ಡಿಎಂಕೆ ಹಾಗೂ ಕಾಂಗ್ರೆಸ್‌ ನಡೆಸಿದ ಗದ್ದಲದ ನಂತರ,ಡಿಎಂಕೆ ಸದಸ್ಯರನ್ನ ಸದನದಿಂದ ಹೊರಗಿಟ್ಟು ನಡೆಸಿದ 'ಹೌದು-ಯಾ-ಇಲ್ಲ' ಎಂಬ ಧ್ವನಿಮತ ಎಣಿಕೆ ಮಾಡಲಾಯಿತು)
  • ಎಡಪ್ಪಾಡಿ ಕೆ. ಪಳನಿಸ್ವಾಮಿ ಪಳನಿಸ್ವಾಮಿ ತಮಿಳುನಾಡು ಮುಖ್ಯಮಂತ್ರಿ.

[೨೫]

ಉಪಚುನಾವಣೆ ೨೦೧೭ ಬದಲಾಯಿಸಿ

  • ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರ್‌.ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಏ.12ರಂದು ಉಪಚುನಾವಣೆ ನಡೆಯಲಿದ್ದು, ಎಐಎಡಿಂಎಕೆಯ ಎರಡು ಬಣಗಳ ಪ್ರತಿಷ್ಠೆಯ ಕಣವಾಗಿದೆ.
  • ಚುನಾವಣಾ ಆಯೋಗ ಎಐಎಡಿಂಎಕೆ ಪಕ್ಷದ ಎರಡೂ ಬಣಗಳಿಗೆ ಹೊಸ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ನೀಡಿದೆ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರ್‌.ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಏ.12ರಂದು ಉಪಚುನಾವಣೆ ನಡೆಯಲಿದ್ದು, ಎಐಎಡಿಂಎಕೆಯ ಎರಡು ಬಣಗಳ ಪ್ರತಿಷ್ಠೆಯ ಕಣವಾಗಿದೆ.
  • ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಅವರ ಬಣದ ಪಕ್ಷಕ್ಕೆ ‘ಎಐಎಡಿಂಎಕೆ ಪುರತಚಿ ಥಲೈವಿ ಅಮ್ಮ’ ಎಂಬ ಹೆಸರು ಹಾಗೂ ‘ವಿದ್ಯುತ್‌ ಕಂಬ’ದ ಚಿಹ್ನೆ ನೀಡಲಾಗಿದೆ. ಜೈಲಿನಲ್ಲಿರುವ ಎಐಎಡಿಂಎಕೆ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರ ಬಣದ ಪಕ್ಷಕ್ಕೆ ‘ಟೋಪಿ’ ಚಿಹ್ನೆ ಹಾಗೂ ‘ಎಐಎಡಿಂಎಕೆ ಅಮ್ಮ’ ಹೆಸರನ್ನು ಅಂತಿಮಗೊಳಿಸಿದೆ.
  • ಚಿಹ್ನೆ ಬಳಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಳನಿ ಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಬಣಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು ಬುಧವಾರ ಮಧ್ಯಂತರ ಆದೇಶ ನೀಡಿತ್ತು. ಎಐಎಡಿಂಎಕೆ ಪಕ್ಷದ ಎರಡು ಎಲೆಗಳ ಚಿತ್ರವಿರುವ ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.[೨೬]
  • 2017ರ ಫೆ.16 ರಂದು 30 ಮಂತ್ರಿಗಳ ನೇತೃತ್ವದಲ್ಲಿ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಇ.ಕೆ. ಪಳನಿಸ್ವಾಮಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾದ ಬಳಿಕ ಪಳನಿಸ್ವಾಮಿ ಅವರು ನಿರುದ್ಯೋಗ ಕುರಿತು ಜಾಗೃತಿ, ಸ್ಕೂಟರ್ ಖರೀದಿಸುವ ಮಹಿಳೆಯರಿಗೆ ಸಬ್ಸಿಡಿ ನೀಡುವುದರ ಜತೆಗೆ 500ಕ್ಕೂ ಹೆಚ್ಚು ಮದ್ಯದ ಅಂಗಡಿಗಳನ್ನು ಮುಚ್ಚಿಸುವಲ್ಲಿ ಪ್ರಮುಖ ನಿರ್ಧಾರ ಕೈಗೊಂಡರು.
  • ನಂತರ ಎರಡೂ ಬಣಗಳು ಒಂದಾಗಿ ಒ.ಪನ್ನೀರ್‌ ಸೆಲ್ವಂ 21 ಆಗಸ್ಟ್ 2017 ರಿಂದ, ಉಪ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಪ್ರಸ್ತುತ ತಮಿಳುನಾಡಿನ ಉಪಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಯ ಸಂಯೋಜಕರಾಗಿಯೂ 21 ಆಗಸ್ಟ್ 2017 ರಿಂದಲೂ ಇದ್ದಾರೆ.[೨೭]

ನೋಡಿ ಬದಲಾಯಿಸಿ

ಹೊರಸಂಪರ್ಕ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. http://www.thehindu.com/news/national/election-dates-for-five-states-announced/article8313813.ece
  2. "ಆರ್ಕೈವ್ ನಕಲು". Archived from the original on 2015-11-14. Retrieved 2016-03-29.
  3. Voter Paper Audit at 4K Booths for Polls". The New Indian Express. 30 January 2016.
  4. SC/ST population in Tamilnadu 2011" (PDF).
  5. Population By Religious Community - Tamil Nadu (XLS). Office of The Registrar General and Census Commissioner, Ministry of Home Affairs, Government of India. 2011. Retrieved 13 September 2015.
  6. "ಆರ್ಕೈವ್ ನಕಲು". Archived from the original on 2016-03-31. Retrieved 2016-03-29.
  7. Sreedhar Pillai (11 March 2016). "Suriya, R Ashwin, Dinesh Karthik create awareness for upcoming Tamil Nadu elections". Firstpost.
  8. http://www.hindustantimes.com/static/election-maps/state/tamil-nadu/2016/index.html
  9. http://www.ibtimes.co.in/tamil-nadu-election-congress-dmk-form-alliance-fight-jayalalithaas-aiadmk-666847
  10. Source :TOI: Election Commission of India
  11. [[೧]]
  12. [[೨]]
  13. http://www.hindustantimes.com/static/election-maps/state/tamil-nadu/2016/index.html
  14. Source (TOI): Election Commission of India
  15. Source: Election Commission of India (Hindu [[೩]]
  16. www.prajavani.net/article/ಮುಖ್ಯಮಂತ್ರಿಯಾಗಿ-ಜಯಲಲಿತಾ-ಪ್ರಮಾಣ-ವಚನ-ಸ್ವೀಕಾರ
  17. ಎಐಎಡಿಎಂಕೆ ತಮಿಳುನಾಡಿನಲ್ಲಿ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದಿದೆ
  18. ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್‌ಸೆಲ್ವಂ ಪ್ರಮಾಣ ವಚನ6 Dec, 2016
  19. ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ
  20. ಪಳನಿ ಸರ್ಕಾರಕ್ಕೆ ಇಂದು ವಿಶ್ವಾಸಮತ ಪರೀಕ್ಷೆ;ಪಿಟಿಐ;18 Feb, 2017
  21. ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿದ ಪನ್ನೀರ್‌ ಸೆಲ್ವಂ ಬಣ;ಏಜೆನ್ಸಿಸ್‌;17 Feb, 2017
  22. "ಈಕೆ ಮುನ್ನಾರ್‌ಗುಡಿಯ 'ಚಿನ್ನಮ್ಮ': ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು 'ಅಮ್ಮ';Bysamachara;February 6, 2017". Archived from the original on ಫೆಬ್ರವರಿ 10, 2017. Retrieved ಮಾರ್ಚ್ 12, 2017.
  23. February 14, 2017 ದೇಶ, ಪ್ರಮುಖ ಸುದ್ದಿ, ಬ್ರೇಕಿಂಗ್ ನ್ಯೂಸ್, ವಾರ್ತೆ Comments ‘ಶಶಿಕಲಾ ಅಪರಾಧಿ’: ಸಿಎಂ ಕನಸು ಭಗ್ನ
  24. ಪಳನಿಸ್ವಾಮಿ ಎಂಬ ಹೊಸ ದಾಳ;Wednesday, February 15th, 2017[ಶಾಶ್ವತವಾಗಿ ಮಡಿದ ಕೊಂಡಿ]
  25. ಗದ್ದಲದ ನಡುವೆ ಪಳನಿಸ್ವಾಮಿಗೆ ವಿಶ್ವಾಸ ಮತ;18 Feb, 2017
  26. ಎರಡು ಪ್ರತ್ಯೇಕ ಪಕ್ಷಗಳಾಗಿ ಎಐಎಡಿಂಎಕೆ ಸ್ಪರ್ಧೆ; ಟೋಪಿ, ವಿದ್ಯುತ್‌ ಕಂಬ ಹೊಸ ಚಿಹ್ನೆ;ಏಜೆನ್ಸಿಸ್‌;23 Mar, 2017
  27. O Panneerselvam takes oath as Deputy Chief Minister of Tamil Nadu ೨೧-೮-೨೦೧೭