ಜತಿನ್ ಕನಕಿಯ ಭಾರತೀಯ ಟೆಲಿವಿಶನ್, ಹಾಗೂ ಚಲನಚಿತ್ರಗಳಲ್ಲಿ ಕಾಮೆಡಿ ಪಾತ್ರಗಳನ್ನು ಮಾಡುತ್ತಿದ್ದರು. ಗುಜರಾತ್ ನಲ್ಲಿದ್ದಾಗ, ಹೆಚ್ಚಾಗಿ ಗುಜರಾತಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ೧೯೮೦-೯೦ ರವರೆಗೆ 'ಜತಿನ್ ಕನಕಿಯ' ಅಭಿನಯಿಸಿದ ಹಾಸ್ಯಪಾತ್ರಗಳು ಭಿನ್ನವಾಗಿದ್ದು ಪ್ರೇಕ್ಷಕರನ್ನು ಸೆಳೆದವು.

ಜತಿನ್ ಕನಕಿಯ
ಜನನ(೧೯೫೩-೦೪-೦೬)೬ ಏಪ್ರಿಲ್ ೧೯೫೩ invalid year
ಮರಣError: Need valid death date (first date): year, month, day
ಮಕ್ಕಳುದ್ರುಪದ್ ಕನಕಿಯ

ಜನನ ಬದಲಾಯಿಸಿ

೧೯೫೨ ರಲ್ಲಿ 'ಜತಿನ್ ಕನಕಿಯ' ಗುಜರಾತಿನಲ್ಲಿ ಜನಿಸಿದರು. ಬೊಂಬಾಯಿಗೆ ಬಂದ'ಜತಿನ್ ಕನಕಿಯ'ರವರು ಟೆಲಿವಿಶನ್ ನಲ್ಲಿ ನಟಿಸಲು ಆರಂಭಿಸಿ ಒಂದು ಹೊಸ ಅಧ್ಯಾಯವನ್ನೇ ರಚಿಸಿದರು.

ಟೆಲಿವಿಶನ್ ಧಾರಾವಾಹಿ, ಶ್ರೀಮಾನ್ ಶ್ರೀಮತೀಜಿ, ಜತಿನ್ ರನ್ನು ಜನಪ್ರಿಯರನ್ನಾಗಿ ಮಾಡಿತು ಬದಲಾಯಿಸಿ

೧೯೯೪ ರಲ್ಲಿ ಟೆಲಿವಿಶನ್ ಧಾರಾವಾಹಿ, ’ಶ್ರೀಮಾನ್ ಶ್ರೀಮತೀಜಿ,’ ಯಲ್ಲಿ, ನಟಿಸಿದ ಕೇಶವ್ ಕುಲಕರ್ಣಿಯ ಪಾತ್ರ ಎಲ್ಲರ ಗಮನ ಸೆಳೆಯಿತು. ಈ ಧಾರಾವಾಹಿಯಲ್ಲಿ ಕೆಲಸಮಾಡುತ್ತಿರುವಾಗಲೇ, ಆಗಲೇ ಹೆಸರುಮಾಡಿದ ಕಲಾವಿದರಾದ, ರಾಕೇಶ್ ಬೇಡಿ, ಅರ್ಚನಾ ಪೂರನ್ ಸಿಂಗ್, ರೀಮ ಲಾಗು, ಹಾಗೂ ಅಂದಿನ ಜನಪ್ರಿಯ ಹಿಂದಿ ಕವಿ, ’ಶೈಲ್ ಚತುರ್ವೇದಿ'ಯವರ ಪರಿಚಯ ಹಾಗೂ ಒಡನಾಟ ಅವರ ವರ್ಚಸ್ಸನ್ನು ಪಸರಿಸಲು ಅನುಕೂಲವಾಯಿತು. ಹಾಸ್ಯಾಭಿನಯವನ್ನು ಮೆಚ್ಚಿಕೊಂಡ ರಸಿಕರು, ಅವರನ್ನು ಆ ತರಹದ ಪಾತ್ರಗಳಲ್ಲೇ ನೋಡಲು ಬಯಸಿದರು. ನಿರ್ಮಾಪಕರೂ ಸಹ ಅವರಿಗಾಗಿಯೇ ಸರಿಹೊಂದುವಂತಹ ಹಾಸ್ಯ ಪ್ರಧಾನವಾದ ಪಟಲೇಖನವನ್ನು ಬರೆದು ಸಹಕರಿಸುತ್ತಿದ್ದರು.

ಕ್ಯಾನ್ಸರ್ ಪೀಡಿತರಾದರೂ,'ಜತಿನ್ ಕನಕಿಯ' ತಮ್ಮ ಅಭಿನಯವನ್ನು ನಿಲ್ಲಿಸಲಿಲ್ಲ ಬದಲಾಯಿಸಿ

'ಜತಿನ್ ಕನಕಿಯ' ಕ್ಯಾನ್ಸರ್ ನಿಂದ ನರಳುತ್ತಿದ್ದರು, ೧೯೯೯ ರಲ್ಲಿ ನಿದನರಾದರು. ತಮಗೆ ಕ್ಯಾನ್ಸರ್ ಕಾಯಿಲೆಯಾಗಿದೆ ಎಂದು ಗೊತ್ತಾದಮೇಲೂ ನಟನೆಯನ್ನು ಮಾತ್ರ ನಿಲ್ಲಿಸಲೇ ಇಲ್ಲ.

ಪ್ರಶಸ್ತಿಗಳು ಬದಲಾಯಿಸಿ

'ಜತಿನ್ ಕನಕಿಯ' ರವರ ಅಭಿನಯ ಕೌಶಲ್ಯ ಹಾಗೂ ಹಾಸ್ಯದ ಪಾತ್ರಗಳಲ್ಲಿ ಅವರು ಪ್ರದರ್ಶಿಸುತ್ತಿದ್ದ ವೈವಿಧ್ಯತೆಗಳನ್ನು ಗುರುತಿಸಿ, ಅವರಿಗೆ ೨೦೦೧ ರಲ್ಲಿ ಮರಣೋತ್ತರ ಇಂಡಿಯನ್ ಟೆಲ್-ಅವಾರ್ಡ್ ನ್ನು ಪ್ರದಾನಮಾಡಲಾಯಿತು.