ಚರ್ಚೆಪುಟ:ಶಬ್ದಮಣಿದರ್ಪಣ

"ಸ್ವಾರಸ್ಯವಾದ" ಬದಲಾಯಿಸಿ

"ಸ್ವಾರಸ್ಯವಾದ ವ್ಯಾಕರಣ ಗ್ರಂಥ" ಎಂದರೆ ತಪ್ಪು. "ಸ್ವಾರಸ್ಯಕರವಾದ ವ್ಯಾಕರಣ ಗ್ರಂಥ" ಎನ್ನಬಹುದು

ವಿಸ್ತೃತವಾದ ವ್ಯಾಖ್ಯಾನ ಬದಲಾಯಿಸಿ

  • ನಾನು ನೋಡಿದ,ಶ್ರೀ ಕೇಶೀರಾಜರ ಶಬ್ದ ಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೬/1975 ರಲ್ಲಿ ಬರೆದು ಪ್ರಕಟಿಸಿದ ವಿಷಯವನ್ನು ಬಾಕ್ಸಿನಲ್ಲಿ ಪ್ರತ್ಯೇಕವಾಗಿ ಹಾಕಿದ್ದೇನೆ.
  • ಶ್ರೀ ಜಿ. ನಾರಾಯಣ ಅವರ ಅಭಿಪ್ರಯವನ್ನೂ ಹಾಕಿದ್ದೇನೆ. ಅಗತ್ಯ ಕಂಡರೆ ಉಳಿಸಿ.ಅದರ ಒಂದುಪದ್ಯದ ವಿಸ್ತೃತ ವ್ಯಾಖ್ಯಾನ ಹಾಕಬಹುದಿತ್ತು -ನಿಯಮದಲ್ಲಿ ಅವಕಾಶವಿದೆಯೋ ಇಲ್ಲವೋ ಗೊತ್ತಿಲ್ಲ(ಕಾಪ ರೈಟ್ ಸಮಸ್ಯೆ).೧೬:೩೪, ೨೩ ಜೂನ್ ೨೦೧೪ (UTC)//ಸದಸ್ಯ:Bschandrasgr/ಪರಿಚಯ

--ಕೆ.ಸೌಭಾಗ್ಯವತಿ (talk) ೦೩:೨೦, ೨ ಜುಲೈ ೨೦೧೪ (UTC)ಶಬ್ದಮಣಿದರ್ಪಣದ ಕೃತಿಯ ಬಗ್ಗೆ ಹೇಳುವಾಗ ಸಂಕ್ಷಿಪ್ತವಾಗಿ ಕರ್ತೃವಿನ ಚರಿತ್ತೆಯನ್ನು ಹೇಳಬೇಕಾಗುತ್ತದೆ. ಈಗಾಗಲೇ 'ಕೇಶಿರಾಜ'ನೆಂಬ ಲೇಖನ ಇರುವುದರಿಂದ ಅದನ್ನು ಶಬ್ದಮಣಿದರ್ಪಣದಲ್ಲಿ ಹಾಕುವುದು ಅಗತ್ಯವಿಲ್ಲವೆಂದು ಹೇಳಲಾಗುವುದಿಲ್ಲ. ನೀವು ಒಮ್ಮೆ ವಿದ್ವಾಂಸರನ್ನು ಕೇಳಿ ನೋಡಿ. ತಪ್ಪೇನಿಸಿದರೆ ಆ ಭಾಗವನ್ನು ತೆಗೆದು ಹಾಕಿ.

ಕೇಶಿರಾಜನ ವೈಯಕ್ತಿಕ ಪರಿಚಯ "ಶಬ್ದಮಣಿದರ್ಪಣದ ಭಾಗವಲ್ಲ. ಕೇಶಿರಾಜನ ಕುರಿತಾದ ಸ್ವತಂತ್ರ ಲೇಖನದಲ್ಲಿ ಆ ವಿವರಗಳನ್ನು ನೀಡಲಾಗಿದೆ. ಕೇಶಿರಾಜನ ಕುರಿತಾದ ಮುಖ್ಯ ಲೇಖನ ಎಂದು "ಶಬ್ದಮಣಿದರ್ಪಣ ಲೇಖನದಿಂದ ಕೊಂಡಿ ಕೊಡುವುದರಲ್ಲಿ ತಪ್ಪಿಲ್ಲ. ಬೇಕಾದರೆ ಇಂಗ್ಲೀಷ್ ವಿಕಿಪೀಡಿಯವನ್ನು ಒಂದು ಸಲ ಗಮನಿಸಿ ನೋಡಬಹುದು. ಅದೇ ವಿವರಗಳು ಆವರ್ತನಗೊಳ್ಳುವುದರಿಂದ ಕನ್ನಡ ವಿಕಿಪೀಡಿಯ ಬಡವಾಗುತ್ತದೆ. ಮಲೆಯಾಳ ವಿಕಿಪೀಡಿಯಕ್ಕಾಗಿ ಕನ್ನಡದ ಲೇಖನಗಳನ್ನು ಬರೆಯುತಿದ್ದೇನೆ. ಅಲ್ಲಿ ಸಿಕ್ಕಿದ ಪ್ರತ್ಯಾದಾನಗಳನ್ನು ಕನ್ನಡದ ಒಳ್ಳಿತಿಗಾಗಿ ಉಪಯೋಗಿಸಿಕೊಳ್ಳುವ ಉದ್ದೇಶ ನನ್ನದು.Kpbolumbu (talk) ೦೬:೫೬, ೩ ಜುಲೈ ೨೦೧೪ (UTC)
Return to "ಶಬ್ದಮಣಿದರ್ಪಣ" page.