೧೯೧೪ ರಲ್ಲಿ ಬ್ರಿಟಿಷ್ ರಾಸಾಯನ ಶಾಸ್ತ್ರಜ್ಞರಾದ 'ಪ್ರೊ.ಜೆ.ಎಲ್.ಸೈಮನ್ ಸನ್' ಮತ್ತು 'ಪ್ರೊ.ಐ.ಎಸ್.ಮ್ಯಾಕ್ ಮೋಹನ್' ಭಾರತೀಯ ವಿಜ್ಞಾನಿಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ 'ಸೂಕ್ತ ವೇದಿಕೆ'ಯೊಂದನ್ನು ನಿರ್ಮಾಣಮಾಡಲು ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆ, (Indian Science Congress Association-ISCA)ಯನ್ನು ಕಲ್ಕತ್ತಾದಲ್ಲಿ ಹುಟ್ಟುಹಾಕಿದರು. ಈ ಮೊಟ್ಟಮೊದಲ ಸಮಾವೇಶದಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದ ಆಗಿನ ಕುಲಪತಿ' ಅಶುತೋಷ್ ಮುಖರ್ಜಿ ಯವರು ಅಧ್ಯಕ್ಷತೆ ಪಹಿಸಿದ್ದರು. ಪ್ರಸ್ತುತ ಪಡಿಸಿದ ಒಟ್ಟು ಪ್ರಬಂಧಗಳು, ೩೫. ಯಾವುದೇ ವಿಭಾಗದಲ್ಲಿ ಪದವಿಗಳಿಸಿದ ಭಾರತೀಯರಿಗೆಲ್ಲಾ ಸದಸ್ಯತ್ವ ತೆರೆದಿದೆ. ಸಾಮಾನ್ಯ ಸದಸ್ಯತ್ವಕ್ಕೆ ತಗಲುವ ಹಣ ವರ್ಷಕ್ಕೆ ೨೦೦ ರೂಪಾಯಿಗಳು. ಸದಸ್ಯತ್ವಕ್ಕೆ ಅರ್ಜಿ ದಾಖಲಿಸಿದಾಗ ಪ್ರತ್ಯೇಕವಾಗಿ ೫೦ ರೂಪಾಪಾಯಿಗಳನ್ನು ನೋಂದಾಯಿಸಿಕೊಳ್ಳಲು ಕೊಡಬೇಕು. ಅಜೀವ ಸದಸ್ಯತ್ವಕ್ಕೆ ೨,೦೦೦ ರೂಪಾಯಿಗಳು. ಮತದಾನ ಮಾಡುವ ಹಕ್ಕು ಹಾಗೂ ಪ್ರಬಂಧ ಮಂಡಿಸಲು ಸದಸ್ಯತ್ವ ಅತಿ ಪ್ರಮುಖವಾದದ್ದು.

ಈ ಸಂಸ್ಥೆಯ ಮೂಲ ಉದ್ದೇಶಗಳು ಬದಲಾಯಿಸಿ

  • ಅಧಿವೇಶನಗಳನ್ನು ಪ್ರತಿವರ್ಷವೂ ಆಯೋಜಿಸುವ ಜೊತೆಗೆ ಭಾರತದಲ್ಲಿ ವಿಜ್ಞಾನಕ್ಕೆ ಪ್ರೋತ್ಸಾಹ ನೀಡುವುದು
  • ವೈಜ್ಞಾನಿಕ ಸಂಶೋಧನೆಗಳನ್ನು ಜನಪ್ರಿಯಗೊಳಿಸುವುದು

ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆ ಯ, ಮೊದಲ ಸಮಾವೇಶ, ಕಲ್ಕತ್ತಾದಲ್ಲಿ ಜನವರಿ,೧೫-೧೭ ರವರೆಗೆ ೧೯೧೪ ರಲ್ಲಿ ಜರುಗಿತು. ಆಗ ಇದ್ದ ವಿಜ್ಞಾನಿಗಳ ಸದಸ್ಯತ್ವ, ೧೦೫. ಸನ್, ೧೯೪೭ ರಲ್ಲಿ ಆಗಿನ ಭಾರತದ ಪ್ರಧಮ ಪ್ರಧಾನಿ, ಪಂ. ಜವಹರ್ ಲಾಲ್ ನೆಹ್ರೂ ರವರ ನೇತೃತ್ವದಲ್ಲಿ ವಿದೇಶಿ ವಿಜ್ಞಾನಿಗಳೂ ಭಾಗವಹಿಸುವಂತೆ ಅನುಕೂಲಗಳನ್ನು ಕಲ್ಪಿಸಲಾಯಿತು. ಸನ್, ೧೯೭೬ ರಲ್ಲಿ ಹೆಸರಾಂತ ಕೃಷಿ ವಿಜ್ಞಾನಿ, ಡಾ.ಎಮ್.ಎಸ್.ಸ್ವಾಮಿನಾಥನ್ ರವರು, 'ರಾಷ್ಟ್ರೀಯ ವಿಜ್ಞಾನ ಕಾರ್ಯ ನೀತಿ'ಗಳನ್ನು ಬಲಪಡಿಸಿ, ಸಂಸ್ಥೆ ನೆರವಾಗುವಂತೆ ಶ್ರಮಿಸಿದರು. ಹೀಗೆ ಶ್ರಮಿಸಿದವರಲ್ಲಿ ಡಾ.ಶಾಂತಿ ಸ್ವರೂಪ್ ಭಟ್ನಾಗರ್, ಡಾ. ಭಗವಂತಮ್, ಡಾ. ಎಮ್.ಜಿಕೆ.ಮೆನನ್, ಡಾ.ಕಸ್ತೂರಿರಂಗನ್ ಪ್ರಮುಖರು. ಯುವ-ವಿಜ್ಞಾನಿಗಳಿಗೆ ಪ್ರೋತ್ಸಾಹ ಧನ, ಮಹಿಳಾ ವಿಜ್ಞಾನಿಗಳಿಗೆ ಉತ್ತೇಜನ ಇವೇ ಮೊದಲಾದ ಕಾರ್ಯಕ್ರಮಗಳು ಸಧೃಢಗೊಂಡವು.

ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ ಬದಲಾಯಿಸಿ

ಡಾ.ಗೀತಾ ಬಾಲಿ, 'ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರದ', ಉಪಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚಿನ ವಿಜ್ಞಾನಿಗಳ ಸದಸ್ಯತ್ವ ಹೊಂದಿರುವ ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆಯ ೯೯ ನೆಯ ಮಹಾ ಅಧಿವೇಶನದ ಆಯ್ಕೆಯ ಸಮಿತಿ, ಹಿರಿಯ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ, ಡಾ.ಗೀತಾ ಬಾಲಿಯವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆಮಾಡಿದೆ. ಗೀತಾರವರು, ವಿಜ್ಞಾನ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದ ನಂತರ, 'ನರಶರೀರ ದಲ್ಲಿ ಡಾಕ್ಟರೇಟ್ ಪದವೀಧರೆ'ಯಾದರು. ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಯಾಗುವ ಮೊದಲು, ಅವರು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಕರಾಗೆ ಸೇವೆ ಸಲ್ಲಿಸುತ್ತಿದ್ದರು. ಅವರು, ಅಮೆರಿಕದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ವಿವಿಧ ಸಂಶೋಧನಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೆಸರಾಂತ ವಿಜ್ಞಾನ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಅಮೆರಿಕ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ತರಪೇತಿ, ಮತ್ತು ಸಂಶೋಧನಾ ಕಾರ್ಯಗಳಿಗೆ ವಿದ್ಯಾರ್ಥಿಗಳ ವಿನಿಮಯ, ಅಧ್ಯಯನ ಯೋಜನೆಗಳಿಗೆ ಕಾರ್ಯರೂಪ ಕೊಟ್ಟಿದ್ದಾರೆ. ಯುವವಿದ್ಯಾರ್ಥಿಗಳಿಗೆ ಯು.ಜಿ.ಸಿ ಯಿಂದ ಪುರಸ್ಕಾರಗಳೂ ಲಭಿಸಿವೆ. ಗೀತಾರವರು, ಆಸ್ಟ್ರಿಯಾ, ಜರ್ಮನಿ ಮುಂತಾದ ದೇಶಗಳ ವಿದ್ಯಾ ಸಂಸ್ಥೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು ಬದಲಾಯಿಸಿ

  • 'ಸ್ಟಾರ್ ನ್ಯೂಸ್ ಬಿ ಸ್ಕೂಲ್ ಪ್ರಶಸ್ತಿ'
  • 'ಅಕಾಡೆಮಿಯ ಫೆಲೊ'

ತಾಂತ್ರಿಕ ಉದ್ಯಾನವನದ ಸ್ಥಾಪನೆ ಬದಲಾಯಿಸಿ

'ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ'ದಲ್ಲಿ 'ವಿಜ್ಞಾನ ಮತ್ತು ತಂತ್ರಜ್ಞಾನ'ದಲ್ಲಿ ಮಹಿಳೆಯರಿಗೆ ತಿಳುವಳಿಕೆ ಹಾಗೂ ಸೂಕ್ತ ತರಪೇತಿನೀಡಲು 'ತಾಂತ್ರಿಕ ಉದ್ಯಾನವನ' ವನ್ನು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಪ್ರಾಯೋಜಿಕ ಯೋಜನೆಯೆಂದು ಪ್ರಸಿದ್ಧವಾಗಿದೆ..

ಕರ್ನಾಟಕದಿಂದ ಅಧ್ಯಕ್ಷರಾಗಿದ್ದವರು ಬದಲಾಯಿಸಿ

  • ಸರ್.ಎಂ.ವಿಶ್ವೇಶ್ವರಯ್ಯ,
  • ಪ್ರೊ.ಸಿ.ಎನ್.ಆರ್.ರಾವ್,
  • ಪ್ರೊ.ಯು.ಆರ್.ರಾವ್,
  • ಡಾ. ಗೀತಾ ಬಾಲಿಯವರು (ಮಹಿಳೆಯರಲ್ಲಿ ನಾಲ್ಕನೆಯವರು).

ಇತರ ಮಹಿಳಾ ಅಧ್ಯಕ್ಷೆಯರು ಬದಲಾಯಿಸಿ

  • ಅಶಿಮಾ ಚಟರ್ಜಿ
  • ಅರ್ಚನಾ ಶರ್ಮ
  • ಡಾ.ಮಂಜು ಶರ್ಮ

ವರ್ಷ ೨೦೧೨ ರ, ೯೯ ನೆಯ ಅಧಿವೇಶನ ಬದಲಾಯಿಸಿ

ಚಿತ್ರ:2011-12-04~bhec05edu1 ns.jpg
'ಭಾರತೀಯ ವಿಜ್ಞಾನ ಸಮಾವೇಶ ಸಂಸ್ಥೆಯ ೯೯ ನೆಯ ಅಧಿವೇಶನ, ಭುವನೇಶ್ವರದಲ್ಲಿ'

ವೈಜ್ಞಾನಿಕ ಸಂಶೋಧನೆಗಳ ವಿಚಾರ ವಿನಿಮಯ, ಹೊಸ-ಹೊಸ ಆವಿಷ್ಕಾರಗಳು, ಅವುಗಳ ಉಪಯುಕ್ತತೆ, ಹೀಗೆ ಹಲವಾರು ವಿಷಯಗಳನ್ನು ಸಮಾಲೋಚಿಸಲು,ವಿಜ್ಞಾನ ಸಮಾಲೋಚನೆ, ಜನವರಿ ೩-೭ ರವರೆಗೆ ಒಡಿಶಾ ರಾಜ್ಯದ ರಾಜಧಾನಿ, ಭುವನೇಶ್ವರ ದಲ್ಲಿ ನಡೆಯಿತು. ಡಾ.ಮನಮೋಹನ ಸಿಂಗ್ ಉದ್ಘಾಟಿಸಿದರು. ಅಮೆರಿಕದ ಭಾರತದ ರಾಯಭಾರಿಯಾಗಿರುವ ನಿರುಪಮಾ ರಾವ್ ಮತ್ತು ಮಕ್ಕಳ ವಿಜ್ಞಾನ ಸಮಾವೇಶವನ್ನು ಮಾಜಿ ರಾಷ್ಟ್ರಪತಿ, ಡಾ. ಎ ಪಿಜೆ ಅಬ್ದುಲ್ ಕಲಾಮ್ ಉದ್ಘಾಟಿಸಿದರು.

ಬಾಹ್ಯ ಸಂಪರ್ಕಗಳು ಬದಲಾಯಿಸಿ