ಕೆನರಾ ಬ್ಯಾಂಕ್ ೧೯೦೬ರಲ್ಲಿ ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಸ್ಥಾಪಿತವಾಯಿತು. ಅಮ್ಮೆಂಬಾಳ್ ಸುಬ್ಬರಾವ್ ಪೈ ಇದರ ಸ್ಥಾಪಕರು. ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೆನರಾ ಬ್ಯಾಂಕ್ ಸಹ ಒಂದು. ಸಂಸ್ಥೆಯ ಹೆಸರನ್ನು ಕೆನರಾ ಬ್ಯಾಂಕ್ ಎಂದು ೧೯೧೦ರಲ್ಲಿ ಬದಲಾಯಿಸಲಾಯಿತು. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು. ೨೦೦೫ರ ಇಸವಿಯಂತೆ, ಬ್ಯಾಂಕ್ ೨೫೦೮ ಶಾಖೆಗಳನ್ನು ಹೊಂದಿದೆ. ಭಾರತವಲ್ಲದೇ ಲಂಡನ್, ಮಾಸ್ಕೋ, ಹಾಂಗ್‌ಕಾಂಗ್, ದೋಹಾ, ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ.

ಕೆನರಾ ಬ್ಯಾಂಕ್
ಸಂಸ್ಥೆಯ ಪ್ರಕಾರಬ್ಯಾಂಕ್
ಸ್ಥಾಪನೆಮಂಗಳೂರು, ೧೯೦೬(ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ)
ಮುಖ್ಯ ಕಾರ್ಯಾಲಯಜಿ.ಸಿ. ರೋಡ್
ಬೆಂಗಳೂರು - ೫೬೦ ೦೦೨
ಪ್ರಮುಖ ವ್ಯಕ್ತಿ(ಗಳು)ಕೆ. ಸತ್ಯನಾರಾಯಣ ರಾಜು (ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ )
ಉದ್ಯಮಬ್ಯಾಂಕ್
ಉತ್ಪನ್ನಸಾಲ
ಆದಾಯIncrease ₹೧೧೧,೨೦೯.೭೬ ಕೋಟಿ (೨೦೨೩)
ನಿವ್ವಳ ಆದಾಯIncrease ೧೦,೮೦೭.೮೦ ಕೋಟಿ (೨೦೨೩)
ಒಟ್ಟು ಆಸ್ತಿIncrease ೧,೩೮೧,೦೨೯.೫೬ ಕೋಟಿ(೨೦೨೩)
ಉದ್ಯೋಗಿಗಳು೮೬,೯೧೯
ಜಾಲತಾಣwww.canarabank.com

ಇದನ್ನೂ ನೋಡಿ ಬದಲಾಯಿಸಿ