ಕರ್ನಾಟಕ ವಿಧಾನ ಪರಿಷತ್ ಚುನಾವಣೆ ೨೦೧೩ ರಿಂದ ೨೦೧೬

ಮೇಲ್ಮನೆ ಬದಲಾಯಿಸಿ

  • ಕರ್ನಾಟಕ ವಿಧಾನ ಪರಿಷತ್' ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರಿಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.
  • ಗಂಭೀರ ಚರ್ಚೆಗಳು ನಡೆಯಬೇಕು ಎನ್ನುವ ಕಾರಣಕ್ಕಾಗಿಯೇ ವಿಧಾನ ಪರಿಷತ್‌ ಅನ್ನು ವಿಶಿಷ್ಟವಾಗಿ ರಚಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞರಾದವರು, ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ.11 ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.
  • ಭಾರತದಲ್ಲಿ ಒಟ್ಟು ೭ (೬?) ರಾಜ್ಯಗಳಲ್ಲಿ ವಿಧಾನ ಪರಿಷತ್ ಕಾರ್ಯ ನಿರ್ವಹಿಸುತ್ತಿವೆ. ತಮಿಳು ನಾಡು ರಾಜ್ಯದಲ್ಲೂ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್'ನ ಒಟ್ಟು ಸದಸ್ಯರ ಸಂಖ್ಯೆ ೭೫. ಸದಸ್ಯರ ಕಾರ್ಯಾವದಿ ೬ ವರ್ಷ. ಇದರಲ್ಲಿ ೧/೩ ನೇ ಭಾಗದಷ್ಟು ಸದಸ್ಯರು ಪ್ರತಿ ೨ ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ಈ ಕಾರಣದಿಂದ, ವಿಧಾನ ಪರಿಷತನ್ನು ಸ್ಥಿರ ಅಥವಾ ಖಾಯಂ ಸಭೆ ಎಂದು ಕರೆಯಲಾಗುತ್ತದೆ

ಆಯ್ಕೆ ಬದಲಾಯಿಸಿ

  • ವಿಧಾನಪರಿಷತ್ತಿಗೆ ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ.
  • ಪರಿಷತ್ ಬಲಾಬಲ : ವಿಧಾನಪರಿಷತ್ತಿನ ಒಟ್ಟು ಸದಸ್ಯ ಬಲ 75. ಸದಸ್ಯರ ಅವಧಿ 6 ವರ್ಷಗಳು. ಇವರಲ್ಲಿ 3/1 ಭಾಗದಷ್ಟು ಸದಸ್ಯರು ಪ್ರತಿ 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ಸದ್ಯ, ವಿಧಾನಸಭೆಯಿಂದ ಆಯ್ಕೆಯಾದ 7 ಸದಸ್ಯರು ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
  • ಸದಸ್ಯರ ಆಯ್ಕೆ * ವಿಧಾನಸಭೆಯಿಂದ 25 * ಸ್ಥಳೀಯ ಸಂಸ್ಥೆಗಳ ಸದಸ್ಯರು, ಕ್ಷೇತ್ರದ ಎಂಪಿಗಳು, ಎಂಎಲ್‌ಎಗಳು 25 * ಶಿಕ್ಷಕ ಕ್ಷೇತ್ರದಿಂದ 7 * ಪದವೀಧರ ಕ್ಷೇತ್ರದಿಂದ 7 * ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ.[೧]

ಕರ್ನಾಟಕ ವಿಧಾನ ಪರಿಷತ್ ೨೦೧೩ ಬದಲಾಯಿಸಿ

  • ೨೦೧೩ ಆಗಸ್ಟ್ ಕೊನೇ ವಾರದ ಲ್ಲಿ ನೆಡೆದ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ) ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಒಬ್ಬ ಪಕ್ಷೇರ ಅಭ್ಯರ್ಥಿ ಜಯ ಗಳಿಸಿದ್ದಾರೆ ( ಎಣಿಕೆ ೨೬-೮-೨೦೧೩). ಅದಕ್ಕೆ ಒಂದು ವಾರದ ಮೊದಲು ಮಂಡ್ಯ ,ಬೆಂಗಳೂರು ಗ್ರಾಮಾಂತರ , ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಲೋಕಸಭೆಯ ಕ್ಷೇತ್ರ ಗೆದ್ದಿತ್ತು . ದಿನಾಂಕ ೨೭-೮-೨೦೧೩ ಕ್ಕೆ ವಿಧಾನ ಪರಿಷತ್ತಿನಲ್ಲಿ ಪಕ್ಷಗಳ ಬಲಾಬಲ ಈ ರೀತಿ ಇದೆ :
  • ಒಟ್ಟು -----೭೫ ಸ್ಥಾನಗಳು
  • ಕಾಂಗ್ರೆಸ್ ---- -೧೯ ,
  • ಬಿಜೆಪಿ -------೩೯ ,
  • ಜೆಡಿಎಸ್ ------೧೨ ,,
  • ಪಕ್ಷೇತರರು -----೨
  • ಸಭಾಪತಿ -------೧ ;;
  • ಖಾಲಿ --------೨
  • ಒಟ್ಟು -------೭೫
  • ೨೦೧೪ ಜೂನ್ ನಲ್ಲಿ ಬಿಜೆಪಿ ಯ ೧೦, ಜೆಡಿಎಸ್ ನ ೩ ಕಾಂಗ್ರೆಸ್ ನ ಒಬ್ಬರು ನಿವೃತ್ತಿ ಹೊಂದಲಿದ್ದಾರೆ . ಅದರಲ್ಲಿ ೭ ಮಂದಿ ವಿಧಾನ ಸಭೆಯಿಂದ ಆಯ್ಕೆ ಆಗುವರು; ಉಳಿದವರು ೫ ನಾಮ ಕರಣ (೫) ಒಬ್ಬರಿ ಶಿಕ್ಷಕರ ಕ್ಷೇತ್ರದಿಂದ , ಒಬ್ಬ ಪಧವೀ ಧರ ಕ್ಷೇತ್ರದಿಂದ ಆಯ್ಕೆ ಆಗುವರು. ಆಗ್ ಪುನಹ ಪಕ್ಷಗಳ ಬಲಾಬಲ ಬದಲಾಯಿಸುವುದು.

೨೦೧೪/2014ಪರಿಷತ್ ಚುನಾವಣೆ ಬದಲಾಯಿಸಿ

ತೆರವಾದ ಏಳು ಸ್ಥಾನಗಳಿಗೆ ವಿಧಾನ ಸಭೆಯಿಂದ ಅವಿರೋಧ ಆಯ್ಕೆ :ಕಾಂ ೪; ಬಿಜೆಪಿ. ೧;ಜೆಡಿ.ಎಸ್ ೧; ಪಕ್ಷೇತರ ೧:

  • ಡಾ.ಜಿ. ಪರಮೇಶ್ವರ್. ಕಾಂಗ್ರೆಸ್
  • ಎಹ್.ಎಂ. ರೇವಣ್ಣ -ಕಾಂಗ್ರೆಸ್
  • ಎನ್.ಎಸ್.ಬೋಸರಾಜು.-ಕಾಂಗ್ರೆಸ್
  • ಜಯಮ್ಮ ಬಾಲರಾಜು. -ಕಾಂಗ್ರೆಸ್
  • ಕೆ.ಎಸ್. ಈಶ್ವರಪ್ಪ -ಬಿಜೆಪಿ
  • ಟಿ.ಎ.ಶರವಣ -ಜೆಡಿಎಸ್.
  • ಡಿ.ಯು.ಮಲ್ಲಿಕಾರ್ಜುನ -ಪಕ್ಷೇತರ.
  • ಕಾಂಗ್ರೆಸ್ ---- -೧೯ ,೨೪-೬-೨೦೧೪ +೧ -ಚುನಾವಣೆ
  • ಬಿಜೆಪಿ -------೩೯ ,೨೪-೬-೨೦೧೪ + ೧ -ಚುನಾವಣೆ
  • ಜೆಡಿಎಸ್ ------೧೨ ,,೨೪-೬-೨೦೧೪ + ೧ -ಚುನಾವಣೆ
  • ದಿ.12-6-2014/ ಕರ್ನಾಟಕ ಚುನಾವಣಾ ಕಮಿಶನ್ ರಿಂದ ಅಧಿಕೃತ ಘೋಷಣೆ -ವರದಿ ಪ್ರಜಾವಾಣಿ
  • ೨೪-೬-೨೦೧೪ ಶಿಕ್ಷಕರ ಕ್ಷೇತ್ರಗಳು ಗೆದ್ದವರು: +ಚುನಾವಣೆ ಎಣಿಕೆ ಈಶಾನ್ಯ ಶರಣಪ್ಪ ಮಟ್ಟೂರು, ಕಾಂಗ್ರೆಸ್ +೧/1-;; ಪ್ರೊ.ಎಸ್`ವಿ.ಸಂಕನೂರ.ಬಿಜೆಪಿ+೧/1-;; + ಜೆಡಿಎಎಸ್`++2 ಬೆಂಗಳೂರು ಕ್ಷೇತ್ರ ಪುಟ್ಟಣ್ಣ ೩ನೇಬಾರಿ ಜಯ ಆಗ್ನೇಯಪಧವೀಧರ ಕ್ಷೇತ್ರ ಜೆಡಿಎಸ್`ಚೌಡರೆಡ್ಡಿ ಗೆಲವು,;; ??ಜೆಡಿಎಸ್`ನ ಎಂ.ಬಿ.ಅಂಬಲಗಿ ಗೆಲವು;

೨೪-೬-೨೦೧೪ ದಿ ೨೩ರಂದು ಕಾಂಗ್ರೆಸ`ನ ೫/5 ಜನರನ್ನು ನಾಮಕರಣ ಮಾಡಲಾಗಿದೆ ವಿ.ಎಸ್.ಉಗ್ರಪ್ಪ, ಇಕ್ಬಾಲ್ ಸರಡಗಿ; ಅಬ್ದುಲ್` ಜಬ್ಬಾರ್`, ಜಯಮಾಲಾ, ಐವನ್`ಡಿಸೋಜಾ.;(ಪ್ರಜಾವಾಣಿ ೨೪-೬-೨೦೧೪)ಈ ಪೈಕಿ ಪ್ರೊ| ಮುಮ್ತಾಜ್‌ ಅಲಿಖಾನ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಹಿಂದೆಯೇ ಆಯ್ಕೆಯಾಗಿದ್ದ ಅಬ್ದುಲ್‌ ಜಬ್ಟಾರ್‌ ಅವರನ್ನು ಮುಂದುವರೆಸಲಾಗಿದೆ. ಇನ್ನು ಬಿಜೆಪಿಯ ಎಸ್‌.ಆರ್‌.ಲೀಲಾ, ಡಾ| ದೊಡ್ಡರಂಗೇಗೌಡ, ಎಂ.ಆರ್‌.ದೊರೆಸ್ವಾಮಿ ಹಾಗೂ ಬಿ.ಬಿ.ಶಿವಪ್ಪ ಅವರ ಸ್ಥಾನಗಳಿಗೆ ಉಳಿದ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯ ನಾಲ್ವರು ಸದಸ್ಯರ ಅಧಿಕಾರಾವಧಿ ಜು.30ಕ್ಕೆ ಕೊನೆಗೊಳ್ಳಲಿದ್ದು, ಅನಂತರ ಹೊಸ ಸದಸ್ಯರು ಅಧಿಕಾರ ಪಡೆಯುವರು'

ದಿ.7-7-2014 ರ ಬಲಾಬಲ
  • ಬಿಜೆಪಿ ---೩೦./30/
  • ಕಾಂ.----೨೮./28
  • ಜಡಿಎಸ್ ---೧೨./12
  • ಪಕ್ಷೇತರರು --೪/4
  • ಸಭಾಪತಿ (ಬಿಜೆಪಿ)-೧ ಒಂದು/1
  • ಒಟ್ಟು -----೭೫/ 75

ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆ 2015/೨೦೧೫ ಬದಲಾಯಿಸಿ

  • ರಾಜ್ಯದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಭಾನುವಾರ, 2015 ಡಿಸೆಂಬರ್‌ 27ರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆದಿದೆ.
  • ಈಗಿನ ಒಟ್ಟು ಬಲಾಬಲ : ವಿಧಾನಪರಿಷತ್ ಸದಸ್ಯರ ಬಲಾಬಲ 75 (ಸಭಾಪತಿಗಳು ಸೇರಿ). ಸದ್ಯ ಕಾಂಗ್ರೆಸ್‌ 28, ಬಿಜೆಪಿ 30, ಜೆಡಿಎಸ್ 12 ಸದಸ್ಯ ಬಲ ಹೊಂದಿವೆ. 4 ಪಕ್ಷೇತರ ಸದಸ್ಯರಿದ್ದಾರೆ.
  • ವಿಧಾನ ಪರಿಷತ್ ಚುನಾವಣೆ 2015 ಮತದಾರರು : 1,07,123. (Dec 27, 2015/deccanherald)
  • ದ್ವಿಸದಸ್ಯ ಕ್ಷೇತ್ರಗಳು ಸೇರಿ ಒಟ್ಟು 20 ಕ್ಷೇತ್ರಗಳಿಂದ 25 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕಣದಲ್ಲಿದ್ದ ಅಭ್ಯರ್ಥಿಗಳು-125.

ಮತ ಚಲಾವಣೆಯ ವಿಧಾನ: ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ‘ಪ್ರಾಶಸ್ತ್ಯ’ದ ಮತಗಳನ್ನು ಚಲಾಯಿಸ ಬೇಕು. ಮೊದಲ ಪ್ರಾಶಸ್ತ್ಯದ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು ನಮೂದಿಸಬೇಕು. ಉಳಿದ ಅಭ್ಯರ್ಥಿಗಳಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಅವರ ಹೆಸರಿನ ಮುಂದೆ 2, 3, 4, ಇತ್ಯಾದಿ ಅಂಕಿಗಳಲ್ಲಿ ನಮೂದಿಸಬಹುದು. ಒಬ್ಬ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಉಳಿದ ಅಭ್ಯರ್ಥಿಗಳಿಗೆ ಮತ ನೀಡದೆಯೂ ಇರಬಹುದು. ಯಾವುದೇ ಅಭ್ಯರ್ಥಿ (ನೋಟಾ ಸೇರಿದಂತೆ) ಹೆಸರಿನ ಮುಂದೆ ‘1’ ಎಂದು ಸೂಚಿಸದಿದ್ದರೆ ಅಥವಾ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ‘1’ ಎಂದು ನಮೂದಿಸಿದರೆ ಮತ ಅಸಿಂಧು ಆಗಲಿದೆ. ಮತವನ್ನು ಅಂಕಿಗಳಲ್ಲಿಯೇ ನಮೂದಿಸಬೇಕು.

ಅಸಿಂಧು ಮತಗಳ ನಿಯಮ:
  • ಅಂಕಿಗಳನ್ನು ಅಕ್ಷರ ರೂಪದಲ್ಲಿ ನಮೂದಿಸಿದರೆ ಮತ ಅಸಿಂಧು ಆಗಲಿದೆ.
  • ಮತಪತ್ರದಲ್ಲಿ ಮತದಾರ ಹೆಸರು ಬರೆದರೆ, ಸಹಿ ಮಾಡಿದರೆ, ಹೆಬ್ಬೆಟ್ಟು ಹಾಕಿದರೆ ಅದು ಅಸಿಂಧು ಆಗಲಿದೆ
  • ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಒಂದು ಅಂಕಿಯನ್ನು ಮಾತ್ರ ನಮೂದಿಸಬೇಕು. ಒಂದಕ್ಕಿಂತ ಹೆಚ್ಚು ಅಂಕಿಗಳನ್ನು ನಮೂದಿಸಿದರೂ ಮತ ಅಸಿಂಧು ಆಗಲಿದೆ.
  • ಮತಪತ್ರದಲ್ಲಿ ಅಂಕಿಗಳನ್ನು ಗುರುತಿಸಲು ಚುನಾವಣಾಧಿಕಾರಿ ನೀಡಿದ ನೇರಳೆ ಬಣ್ಣದ ಸ್ಕೆಚ್‌ ಪೆನ್‌ ಮಾತ್ರ ಬಳಸಬೇಕು. ಅದರ ಬದಲು ಬೇರೆ ಪೆನ್ ಬಳಸಿದರೂ ಮತ ಅಸಿಂಧು ಆಗಲಿದೆ.
ಈ ಬಾರಿ ನೋಟಾಗೆ ಅವಕಾಶ

ನೋಟಾ ಆಯ್ಕೆಯ ಎದುರು 1 ಅಂಕಿಯನ್ನು ಬರೆದು ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದು.[೨]

ಫಲಿತಾಂಶ ಬದಲಾಯಿಸಿ

  • 25 ಸ್ಥಾನಗಳಿಗೆ ಚುನಾವಣೆ : ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನ 12, ಬಿಜೆಪಿಯ 7, ಜೆಡಿಎಸ್‌ 5, ಒಬ್ಬರು ಪಕ್ಷೇತರ ಸದಸ್ಯರು 2016ರ ಜನವರಿ 5ರಂದು ನಿವೃತ್ತರಾಗಲಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
  • ಚುನಾವಣೆ ಕ್ಷೇತ್ರ : ವಾಯುವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ. ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗ
  • ಕಾಂಗ್ರೆಸ್ ಮತ್ತು ಬಿ.ಜೆ.ಪಿ. ತಲಾ 20 ಸ್ಥಾನಗಳಿಗೆಸ್ಪರ್ದಿಸಿದ್ದವು ; ಜೆ.ಡಿ.(ಎಸ್) 18 ಸ್ಥಾನಗಳಿಗೂ , ಇತರ ಅಭ್ಯರ್ಥಿಗಳು ಸೇರಿ 125 ಸ್ಪರ್ಧಿಗಳಿದ್ದರು
  • ದ್ವಿಸದಸ್ಯ ಕ್ಷೇತ್ರಗಳು ಸೇರಿ ಒಟ್ಟು 20 ಕ್ಷೇತ್ರಗಳಿಂದ 25 ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು. ಕಣದಲ್ಲಿದ್ದ ಅಭ್ಯರ್ಥಿಗಳು-125.
  • 2015 ಡಿಸೆಂಬರ್ 27ರಂದು ಚುನಾವಣೆ ನಡೆದಿದ್ದು, ಡಿಸೆಂಬರ್ 30ರಂದು ಎಣಿಕೆಯಾಗಿ ಫಲಿತಾಂಶ ಪ್ರಕಟಗೊಂಡಿದೆ.
  • ಒಟ್ಟು ಮತದಾನ ಶೇ 99.6 ಆಗಿದೆ
ಪಕ್ಷ 30-12-2015 ರಲ್ಲಿ ಗೆಲವು ಜನವರಿ 2016 ಕ್ಕೆ ಬಲಾಬಲ (75)
ಕಾಂಗ್ರೆಸ್ 13 (+1) 29
ಭಾ.ಜ.ಪ 6 (-1) 29
ಜನತಾ ದಳ (ಸೆ) 4 (-1) 10
ಪಕ್ಷೇತರ 2 (+1) 5
ಖಾಲಿ 1
ಸಭಾಪತಿ (ಭಾ.ಜ.ಪ) 1

ವಿಜೇತರು ಬದಲಾಯಿಸಿ

ಕ್ರಮಸಂಖ್ಯೆ ಕ್ಷೇತ್ರ ಜಯ ಸಾಧಿಸಿದವರು ಕಣದಲ್ಲಿರುವ ಅಭ್ಯರ್ಥಿಗಳು : ೧ಮತ್ತು ೨ನೇ ಸ್ಥಾನ
1 ಬಳ್ಳಾರಿ *ಕೆ.ಸಿ.ಕೊಂಡಯ್ಯ *ಕೆ.ಸಿ.ಕೊಂಡಯ್ಯ (ಕಾಂಗ್ರೆಸ್)3098; , ಚನ್ನಬಸವನ ಗೌಡ (ಬಿಜೆಪಿ)1500.
2 ಶಿವಮೊಗ್ಗ ಆರ್.ಪ್ರಸನ್ನ ಕುಮಾರ್ *ಆರ್.ಪ್ರಸನ್ನ ಕುಮಾರ್ (ಕಾಂಗ್ರೆಸ್)2320, ಆರ್.ಕೆ.ಸಿದ್ದರಾಮಣ್ಣ (ಬಿಜೆಪಿ)1293;, ಎಚ್.ಎನ್.ನಿರಂಜನ (ಜೆಡಿಎಸ್)1557.
3 ಬೆಂಗಳೂರು ನಗರ ಎಂ.ನಾರಾಯಣ ಸ್ವಾಮಿ *ಎಂ.ನಾರಾಯಣ ಸ್ವಾಮಿ (ಕಾಂಗ್ರೆಸ್)1384;, ದೊಡ್ಡ ಬಸವರಾಜು (ಬಿಜೆಪಿ)1302, ಬಿ.ದಯಾನಂದ ರೆಡ್ಡಿ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ)19.
4 ಬೆಂಗಳೂರು ಗ್ರಾಮಾಂತರ ಬಿ.ರವಿ * ಬಿ.ರವಿ (ಕಾಂಗ್ರೆಸ್)2267;, ಇ.ಕೃಷ್ಣಪ್ಪ (ಜೆಡಿಎಸ್)1889, ಹನುಮಂತೇಗೌಡ (ಬಿಜೆಪಿ)170.
5 ಕೋಲಾರ ಸಿ.ಆರ್.ಮನೋಹರ್ ಎಂ.ಎಲ್.ಅನಿಲ್ ಕುಮಾರ್ (ಕಾಂಗ್ರೆಸ್)2278;, ಸಿ.ಆರ್.ಮನೋಹರ್ (ಜೆಡಿಎಸ್)3221;, ಜಿ.ಇ.ರಾಮೇಗೌಡ (ಬಿಜೆಪಿ)210.
6 ತುಮಕೂರು ಬೆಮೆಲ್ ಕಾಂತರಾಜು ಆರ್.ರಾಜೇಂದ್ರ (ಕಾಂಗ್ರೆಸ್)1801;, ಬೆಮೆಲ್ ಕಾಂತರಾಜು (ಜೆಡಿಎಸ್)2880;, ಹುಲಿ ನಾಯ್ಕರ್ (ಬಿಜೆಪಿ)1435.
7 ಮೈಸೂರು (ದ್ವಿ ಸದಸ್ಯ ಕ್ಷೇತ್ರ ಆರ್.ಧರ್ಮಸೇನ *ಆರ್.ಧರ್ಮಸೇನ (ಕಾಂಗ್ರೆಸ್)3037;, ಸಂದೇಶ್ ನಾಗರಾಜ್ (ಜೆಡಿಎಸ್)2257, ಆರ್.ರಘು (ಬಿಜೆಪಿ)1828, ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ)11.
8 ಹಾಸನ ಎಂ.ಎ.ಗೋಪಾಲಸ್ವಾಮಿ ಪಟೇಲ್ ಶಿವರಾಂ (ಜೆಡಿಎಸ್)1823, *ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್)2037;, ರೇಣುಕುಮಾರ್ (ಬಿಜೆಪಿ)114.
9 ಮಂಡ್ಯ ಅಪ್ಪಾಜಿ ಗೌಡ ಎಲ್.ಆರ್.ಶಿವರಾಮೇಗೌಡ (ಕಾಂಗ್ರೆಸ್)1660;, ಅಪ್ಪಾಜಿ ಗೌಡ (ಜೆಡಿಎಸ್)2302, ಕೆ.ನಾಗಣ್ಣ ಗೌಡ (ಬಿಜೆಪಿ)139.
10 ಕೊಡಗು) ಸುನೀಲ್ ಸುಬ್ರಮಣಿ ಎಚ್.ಎಸ್.ಚಂದ್ರಮೌಳಿ (ಕಾಂಗ್ರೆಸ್)627;, ಸುನೀಲ್ ಸುಬ್ರಮಣಿ (ಬಿಜೆಪಿ)683;, ಸಂಕೇತ್ ಪೂವಯ್ಯ (ಜೆಡಿಎಸ್)29.
11 ಚಿಕ್ಕಮಗಳೂರು ಎಂ.ಕೆ.ಪ್ರಾಣೇಶ್ ಗಾಯತ್ರಿ ಶಾಂತೇಗೌಡ (ಕಾಂಗ್ರೆಸ್)923;, ಎಂ.ಕೆ.ಪ್ರಾಣೇಶ್ (ಬಿಜೆಪಿ)1238, ರಂಜನ್ ಅಜಿತ್ ಕುಮಾರ್ (ಜೆಡಿಎಸ್)425.
12 ರಾಯಚೂರು-ಕೊಪ್ಪಳ) ಬಸವರಾಜ್ ಪಾಟೀಲ್ ಇಟಗಿ ಸಿ.ವಿ.ಚಂದ್ರಶೇಖರ್ (ಬಿಜೆಪಿ)3113;, *ಬಸವರಾಜ್ ಪಾಟೀಲ್ ಇಟಗಿ (ಕಾಂಗ್ರೆಸ್)3441.
13 ಕಲಬುರಗಿ-ಯಾದಗಿರಿ) ಬಿ.ಜಿ.ಪಾಟೀಲ್ ಬಿ.ಜಿ.ಪಾಟೀಲ್ (ಬಿಜೆಪಿ)3845;, ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್)3041;, ದೇವೇಗೌಡ ತೆಲ್ಲೂರ (ಜೆಡಿಎಸ್) Shobha Bani-37.
14 ಬೀದರ್) ವಿಜಯಸಿಂಗ್ ಧರ್ಮಸಿಂಗ್ ಸಂಜಯ ಖೇಣಿ (ಬಿಜೆಪಿ)959;, *ವಿಜಯಸಿಂಗ್ ಧರ್ಮಸಿಂಗ್ (ಕಾಂಗ್ರೆಸ್)2329;, ಸುಬ್ಬಾರೆಡ್ಡಿ (ಜೆಡಿಎಸ್)30.
15 ಬೆಳಗಾವಿ (ದ್ವಿ ಸದಸ್ಯ ಕ್ಷೇತ್ರ)) ಮಹಾಂತೇಶ ಕವಟಗಿಮಠ ಮಹಾಂತೇಶ ಕವಟಗಿಮಠ (ಬಿಜೆಪಿ)2292;, ವೀರಕುಮಾರ ಪಾಟೀಲ (ಕಾಂಗ್ರೆಸ್)1582;, ಡಿ.ಬಿ.ನಾಯ್ಕ (ಜೆಡಿಎಸ್) ವಿವೇಕ್‌ ರಾವ್‌ ಪಾಟೀಲ್‌ 3981-ID
16 ದಕ್ಷಿಣ ಕನ್ನಡ-ಉಡುಪಿ (ದ್ವಿ ಸದಸ್ಯ ಕ್ಷೇತ್ರ) ಕೋಟ ಶ್ರೀನಿವಾಸ ಪೂಜಾರಿ (2) ಪ್ರತಾಪಚಂದ್ರ ಶೆಟ್ಟಿ ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ)2977;, *ಪ್ರತಾಪಚಂದ್ರ ಶೆಟ್ಟಿ (ಕಾಂಗ್ರೆಸ್)2237, ಪ್ರವೀಣಚಂದ್ರ ಜೈನ್ (ಜೆಡಿಎಸ್), ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ)-872.
17 ಚಿತ್ರದುರ್ಗ ರಘು ಆಚಾರ್ *ರಘು ಆಚಾರ್ (ಕಾಂಗ್ರೆಸ್), ಕೆ.ಎಸ್.ನವೀನ್ (ಬಿಜೆಪಿ)., ಎಲ್.ಸೋಮಣ್ಣ (ಜೆಡಿಎಸ್)
18 ಉತ್ತರ ಕನ್ನಡ ಎಸ್‌.ಎಲ್.ಘೋಟ್ನೇಕರ *ಎಸ್‌.ಎಲ್.ಘೋಟ್ನೇಕರ (ಕಾಂಗ್ರೆಸ್)1742;, ಗಣಪತಿ ಉಳ್ವೇಕರ (ಬಿಜೆಪಿ)1005, ಡಿ.ರವಿಕುಮಾರ (ಜೆಡಿಎಸ್), ರವೀಂದ್ರ ನಾಯ್ಕ (ಕಾಂಗ್ರೆಸ್ ಬಂಡಾಯ)199.
19 ಧಾರವಾಡ-ಹಾವೇರಿ-ಗದಗ (ದ್ವಿ ಸದಸ್ಯ ಕ್ಷೇತ್ರ) ಪ್ರದೀಪ್ ಶೆಟ್ಟರ (2) ಶ್ರೀನಿವಾಸ ಮಾನೆ

ಪ್ರದೀಪ್ ಶೆಟ್ಟರ (ಬಿಜೆಪಿ)3254, ನಾಗರಾಜ ಛಬ್ಬಿ (ಕಾಂಗ್ರೆಸ್), *ಶ್ರೀನಿವಾಸ ಮಾನೆ (ಕಾಂಗ್ರೆಸ್)3607, ವಾಗೀಶ ಪ್ರಸಾದ (ಜೆಡಿಎಸ್)224.

20 ವಿಜಯಪುರ-ಬಾಗಲಕೋಟೆ (ದ್ವಿಸದಸ್ಯ ಕ್ಷೇತ್ರ) ಎಸ್‌.ಆರ್.ಪಾಟೀಲ (2) ಬಸವರಾಜ್‌ ಪಾಟೀಲ್‌ ಯತ್ನಾಳ್‌ ಎಸ್‌.ಆರ್.ಪಾಟೀಲ (ಕಾಂಗ್ರೆಸ್)3362, ಜಿ.ಎಸ್.ನ್ಯಾಮಗೌಡ (ಬಿಜೆಪಿ)1899;, ಕಾಂತಪ್ಪ ಇಂಚಗೇರಿ (ಜೆಡಿಎಸ್) ಬಸವರಾಜ್‌ ಪಾಟೀಲ್‌ ಯತ್ನಾಳ್‌-2977

[೩][೪]

ಪರಿಷತ್ ಚುನಾವಣೆ ೨೦೧೬ ಬದಲಾಯಿಸಿ

  • ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಜೂನ್‌ 10ರಂದು ಚುನಾವಣೆ ನಡೆಯಲಿದೆ.
  • ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ ಈ ಬಾರಿ ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು. ಅಲ್ಲದೇ ಮೂವರು ನಾಮಕರಣ ಸದಸ್ಯರನ್ನು ನೇಮಿಸುವುದಕ್ಕೂ ಆಡಳಿತ ಪಕ್ಷಕ್ಕೆ ಅವಕಾಶ ಇದೆ.
  • ಚುನಾವಣೆ ವೇಳಾಪಟ್ಟಿ :
  • ಅಧಿಸೂಚನೆ ಪ್ರಕಟಣೆ ೨೪-೫-೨೦೧೬,
  • ನಾ,ಪತ್ರ ಸಲ್ಲಿಕೆ ಕೊನೇ ದಿನ :೩೧-೫-೨೦೧೬,
  • ನಾಮಪತ್ರ ಪರಿಶೀಲನೆ :೧-೬-೨೦೧೬,
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ : ೩-೬-೨೦೧೬,
  • ಮತದಾನ : ೧೦-೬-೨೦೧೬.
  • (ಆಕಾಂಕ್ಷಿಗಳು :ಕಾಂ:ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌, ಉದ್ಯಮಿ ಕೆ.ಪಿ.ನಂಜುಂಡಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್‌, ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಕಾರ್ಯದರ್ಶಿ ಎಂ.ಎಸ್‌.ಬಸವರಾಜು, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ರಾಮಚಂದ್ರಪ್ಪ, ಮಾಜಿ ಸಂಸದ ಮಂಜುನಾಥ ಕುನ್ನೂರು, ಜಯಪ್ರಕಾಶ ನಾರಾಯಣ ವೇದಿಕೆ ಅಧ್ಯಕ್ಷ ಮಳವಳ್ಳಿ ಶಿವಣ್ಣ;ಹಟ್ಟಿ ಚಿನ್ನದ ಗಣಿ ಅಧ್ಯಕ್ಷೆ ರಾಣಿ ಸತೀಶ್‌, ಮಾಜಿ ಸಂಸದೆ ರಮ್ಯಾ, ಚಿತ್ರನಟಿಯರಾದ ಭವ್ಯಾ ಹಾಗೂ ಬಾಲ ಭವನ ಸೊಸೈಟಿ ಅಧ್ಯಕ್ಷೆ ಭಾವನಾ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಲ್ಲಾಜಮ್ಮಾ)
  • (ಬಿಜಪಿ :ವಿ.ಸೋಮಣ್ಣ,ಕಟ್ಟಾ ಸುಬ್ರಹ್ಮಣ್ಯ ನಾಯ್ಡು)[೫]
  • ಚುನಾವಣೆ ಬಲಾಬಲ : ವಿಧಾನಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಲು 29 ಮತಗಳು ಬೇಕು. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 8 ಅಭ್ಯರ್ಥಿಗಳಿದ್ದಾರೆ.
  • ಕಾಂಗ್ರೆಸ್ ಬಲಾಬಲ : ಚುನಾವಣೆಗೆ ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ ಅವರು ಕಾಂಗ್ರೆಸ್ ಅಭ್ಯರ್ಥಿಗಳು. ಒಟ್ಟು 4 ಅಭ್ಯರ್ಥಿಗಳಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಸದಸ್ಯ ಬಲ ಹೊಂದಿದೆ. ತಲಾ 30 ರಂತೆ 123 ಮತಗಳನ್ನು ಹಂಚಿಕೆ ಮಾಡಿದರೆ ಎಲ್ಲರೂ ಗೆಲುವು ಸಾಧಿಸಲಿದ್ದಾರೆ.
  • ಬಿಜೆಪಿಯ (44) : ಬಿಜೆಪಿ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲನೇ ಅಭ್ಯರ್ಥಿ ವಿ.ಸೋಮಣ್ಣ, 2ನೇ ಅಭ್ಯರ್ಥಿ ಲೆಹರ್ ಸಿಂಗ್. ಸೋಮಣ್ಣ ಅವರಿಗೆ 29 ಮತಗಳು ಹಂಚಿಕೆಯಾದ ಬಳಿಕ 15 ಮತಗಳು ಉಳಿಯುತ್ತವೆ. ಜೆಡಿಎಸ್ ಮೈತ್ರಿ ಇದ್ದರೆ ಇಬ್ಬರು ಗೆಲ್ಲಬಹುದು.
  • ಜೆಡಿಎಸ್‌ ಪಕ್ಷದಿಂದ ನಾರಾಯಣ ಸ್ವಾಮಿ, ಡಾ.ವೆಂಕಟಪತಿ ಅವರು ಕಣದಲ್ಲಿದ್ದಾರೆ. .ವಿಧಾನಸಭೆಯಲ್ಲಿ ಜೆಡಿಎಸ್‌ನ 40 ಶಾಸಕರಿದ್ದಾರೆ. ಮೊದಲ ಅಭ್ಯರ್ಥಿ ನಾರಾಯಣ ಸ್ವಾಮಿ ಅವರಿಗೆ 29 ಮತಗಳು ಹಂಚಿಕೆಯಾದರೆ 11 ಮತಗಳು ಉಳಿಯುತ್ತವೆ. ಬಿಜೆಪಿ ಮತ್ತು ಜೆಡಿಎಸ್ ತಮ್ಮ ಬಳಿ ಉಳಿಯುವ ಮತಗಳನ್ನು ಹಂಚಿಕೆ ಮಾಡಿಕೊಳ್ಳುವರೇ?[೬]

ಫಲಿತಾಂಶ ಬದಲಾಯಿಸಿ

ದಿ:೧೦-೬-೨೦೧೬:ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌–4, ಬಿಜೆಪಿ–2, ಜೆಡಿಎಸ್‌ಗೆ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಜೆಡಿಎಸ್‌ನ ಡಾ.ವೆಂಕಟಪತಿ ಸೋತಿದ್ದಾರೆ.

[೭]

ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳು ಬದಲಾಯಿಸಿ

  • ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ವಿಧಾನಪರಿಷತ್ ಸದಸ್ಯರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ, ಅವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

[೮]

  • ವಾಯವ್ಯ ಪದವೀಧರ ಕ್ಷೇತ್ರ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟ
ಅಭ್ಯರ್ಥಿಗಳು
  • ೧.ಮಹಾಂತೇಶ ಶಿವಾನಂದ ಕೌಜಲಗಿ (ಬಣಜಿಗ ಲಿಂಗಾಯತ) ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವವರು
  • ೨.ಬಿಜೆಪಿಯಿಂದ ಹನುಮಂತ ನಿರಾಣಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. (ಪಂಚಮಸಾಲಿ ಲಿಂಗಾಯತ)
  • ೩.ಡಾ.ಎಂ.ಪಿ. ನಾಡಗೌಡ. ಜೆಡಿಯು ಅಭ್ಯರ್ಥಿ (ಪಂಚಮಸಾಲಿ ಲಿಂಗಾಯತ ಸಮುದಾಯ) ವಾಯವ್ಯ ಪದವೀಧರ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ
ಮತದಾರರು
ಜಿಲ್ಲೆ ಗಂಡು ಹೆಣ್ಣು ಒಟ್ಟು
ಬೆಳಗಾವಿ 77728 21656 99686
ಬಾಗಿಲಕೋಟ 34563 9803 44368
ವಿಜಯಪುರ 28821 6534+(7others) 35362
ಒಟ್ಟು 1,41.110 37994 1,79,111

ವಾಯವ್ಯ ಶಿಕ್ಷಕರ ಕ್ಷೇತ್ರ ಬದಲಾಯಿಸಿ

ಅಭ್ಯರ್ಥಿಗಳು
  • ೧.ಅರುಣ ಶಹಾಪೂರ =ಬಿಜೆಪಿ;ಕಳೆದ ಚುನಾವಣೆಯಲ್ಲಿ ಗೆಲುವು(2010) ಹಾಗೂ ದ್ವಿತೀಯ ಭಾರಿಯು ಗೆಲುವು(2016) (ಲಿಂಗಾಯತ ಬಣಜಿಗ)
  • ೨.ಬಿ.ಆರ್‌. ಪಾಟೀಲ =ಪಕ್ಷೇತರ ; ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದಕ್ಕೆ ಬಂಡಾಯ.
  • ೩.ಚಂದ್ರಶೇಖರ ಲೋಣಿ =ಪಕ್ಷೇತರ;
  • ೪.ಅರವಿಂದ ದಳವಾಯಿ =ಪಕ್ಷೇತರ; ಕುರುಬ ಸಮುದಾಯ
ಶಿಕ್ಷಕ ಮತದಾರರ ಸಂಖ್ಯೆ
ಜಿಲ್ಲೆ ಗಂಡು ಹೆಣ್ಣು ಒಟ್ಟು
ಬೆಳಗಾವಿ 10,114 2,264 12,378
ಬಾಗಿಲಕೋಟ 5,186 1,055 6,241
ವಿಜಯಪುರ 6,777 1,564 8,341
ಒಟ್ಟು 22,077 4,883 26,960

ಪಶ್ಚಿಮ ಶಿಕ್ಷಕರ ಕ್ಷೇತ್ರ ಬದಲಾಯಿಸಿ

  • ಮತದಾರರು :ಪ್ರೌಢಶಾಲಾ ಶಿಕ್ಷಕರು, ಪಿಯುಸಿ, ಪದವಿ ಮತ್ತು ವಿಶ್ವವಿದ್ಯಾಲಯಗಳ ಉಪನ್ಯಾಸಕರು ಶಿಕ್ಷಕರ ಕ್ಷೇತ್ರದ ಮತ ದಾರರು.
ಅಭ್ಯರ್ಥಿ
  • 1.ಬಸವರಾಜ ಹೊರಟ್ಟಿ :ಅವರಿಗೆ 7ನೇ ಬಾರಿ.
  • 2. ಮಾ.ನಾಗರಾಜ -ಬಿಜೆಪಿ ಅಭ್ಯರ್ಥಿ.
  • 3.ಟಿ.ಈಶ್ವರ್ ಕಾಂಗ್ರೆಸ್‌
ಜಿಲ್ಲೆಯಲ್ಲಿ ಮತ
  • ಧಾರವಾಡ - 9,322
  • ಹಾವೇರಿ - 5,306
  • ಗದಗ - 3,897
  • ಉತ್ತರ ಕನ್ನಡ - 3,866
  • ಒಟ್ಟು - 22,391

ದಕ್ಷಿಣ ಪದವೀಧರ ಕ್ಷೇತ್ರ ಬದಲಾಯಿಸಿ

ವಿಧಾನ ಪರಿಷತ್‌ ಅಭ್ಯರ್ಥಿ
  • ಕಾಂಗ್ರೆಸ್‌ನ ಡಾ.ಎಚ್.ಎನ್.­ರವೀಂದ್ರ, ವೈದ್ಯರ ಸಂಘದ ಅಧ್ಯಕ್ಷ
  • ಜೆಡಿಎಸ್‌ನ ಕೆ.ಟಿ.ಶ್ರೀಕಂಠೇ­ಗೌಡ, ಪ್ರಾಂಶುಪಾಲರ ಸಂಘದ exಅಧ್ಯಕ್ಷ
  • ಬಿಜೆಪಿ ಮೈ.ವಿ.ರವಿಶಂಕರ್
  • ಎಚ್‌.ಎನ್‌.­ಮಂಚೇ­ಗೌಡ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ.ಉಪನ್ಯಾಸಕ ವೃತ್ತಿಯಿಂದ ಸ್ವಯಂ ನಿವೃತ್ತಿ;ex ಸೆನೆಟ್ ಸದಸ್ಯ
  • ಪ್ರೊ. ಕೆ.ಎಸ್.­ಭಗವಾನ್, ಪ್ರಗತಿಪರ­.
  • ವಾಟಾಳ್ ನಾಗರಾಜ್ ;
ಜಿಲ್ಲೆಯಲ್ಲಿ ಮತ
  • ಮೈಸೂರು - 56,075
  • ಮಂಡ್ಯ - 31,709
  • ಹಾಸನ - 23,769
  • ಚಾಮರಾಜನಗರ - 8,832
  • ಒಟ್ಟು - 1,20,445

[೯][೧೦]

ಫಲಿತಾಂಶ ಬದಲಾಯಿಸಿ

  • 4 ಕ್ಷೇತ್ರಗಳ ಫಲಿತಾಂಶ:
ಕ್ಷೇತ್ರ ಗೆದ್ದ ಅಭ್ಯರ್ಥಿ ಪಕ್ಷ ಪಡೆದ ಮತ ಎರಡನೇ ಅಭ್ಯರ್ಥಿ ಪಡೆದ ಮತ
ದಕ್ಷಿಣ ಪದವೀಧರರ ಕ್ಷೇತ್ರ ಕೆ.ಟಿ.ಶ್ರೀಕಂಠೇಗೌಡ ಜೆಡಿಎಸ್ 23,619 ಮೈ.ವಿ.ರವಿಶಂಕರ್ (ಬಿಜೆಪಿ) 14753
ವಾಯುವ್ಯ ಪದವೀಧರ ಕ್ಷೇತ್ರ ಹನುಮಂತ ನಿರಾಣಿ ಬಿಜೆಪಿ 43605 ಮಹಂತೇಶ ಕೌಜಲಗಿ (ಕಾಂಗ್ರೆಸ್) 23518
ವಾಯುವ್ಯ ಶಿಕ್ಷಕರ ಕ್ಷೇತ್ರ ಅರುಣ ಶಹಾಪುರ ಬಿಜೆಪಿ 8796 ಎಸ್.ಆರ್.ಬನ್ನೂರ (ಕಾಂಗ್ರೆಸ್) 2198
ಪಶ್ಚಿಮ ಶಿಕ್ಷಕರ ಕ್ಷೇತ್ರ ಬಸವರಾಜ ಹೊರಟ್ಟಿ ಜೆಡಿಎಸ್ 7480 ಮಾ.ನಾಗರಾಜ (ಬಿಜೆಪಿ) 4371
  • ಪಶ್ಚಿಮ ಶಿಕ್ಷಕರ ಕ್ಷೇತ್ರ ಬಸವರಾಜ ಹೊರಟ್ಟಿ ಗೆಲುವು (ಜೆಡಿಎಸ್)(ಶೇ 50+1) ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತ.
  • ದಕ್ಷಿಣ ಪದವೀಧರ ಕ್ಷೇತ್ರ:ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯ ನಂತರ ಜೆಡಿಎಸ್ 17,161, ಬಿಜೆಪಿ 16,853, ಕಾಂಗ್ರೆಸ್ 8,245 ಮತ ಗಳಿಸಿದ್ದವು. ಪಕ್ಷೇತರ ಅಭ್ಯರ್ಥಿ ಪ್ರೊ.ಕೆ.ಎಸ್.ಭಗವಾನ್ 2,396 ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ 741 ಮತ ಗಳಿಸಿದರು. ಸ್ವೀಕೃತಗೊಂಡ 47,057 ಮತಗಳ ಪೈಕಿ ಶೇ 50ಕ್ಕಿಂತ ಹೆಚ್ಚಿನ ಮತಗಳು ಯಾರಿಗೂ ಲಭಿಸದ ಕಾರಣ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆಗೆ ನಡೆಯಿತು.
  • ಎಲ್ಲಾ ಅಭ್ಯರ್ಥಿಗಳ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಂಚಿಕೆ ಮಾಡಿದ ನಂತರ ಜೆಡಿಎಸ್‌ ಅಭ್ಯರ್ಥಿ 23,619 ಮತಗಳನ್ನು ಪಡೆದು ಗೆಲವು ಪಡೆದರು. ಬಿಜೆಪಿ ಗಳಿಸಿದ್ದ 16,853 ಮತಗಳು ಅಂತಿಮ ಸುತ್ತಿನಲ್ಲಿ ಜೆಡಿಎಸ್‌ಗೆ ಹಂಚಿಕೆಯಾದ ಕಾರಣ 14,753 ಮತಗಳಷ್ಟೆ ಉಳಿದವು.
  • 5743 ಮತಗಳು ತಿರಸ್ಕೃತ: ಚುನಾವಣೆಯಲ್ಲಿ ಮತ ಚಲಾಯಿಸಿದ 52,800 ಮತಗಳ ಪೈಕಿ 5,743 ಮತಗಳು ತಿರಸ್ಕೃತಗೊಂಡವು. ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮತ ಎಣಿಕೆ ಕೊನೆಗೊಂಡಿತು.

[೧೧][೧೨]

ಪರಿಷತ್ತಿನಲ್ಲಿ ಬಲಾಬಲ ಬದಲಾಯಿಸಿ

  • ದಿನಾಂಕ: 15-6-2016ರಲ್ಲಿ:(೨೫-೬-೨೦೧೬:ಪ್ರಜಾವಾಣಿ)
ಪಕ್ಷ/ಇತರೆ ಬಲ
ಬಿಜೆಪಿ 23 - 1
ಕಾಂಗ್ರೆಸ್ 30
ಜೆ ಡಿ (ಎಸ್) 12 + 1
ಇತರೆ 5
ಸಭಾಪತಿ 1
ಖಾಲಿ 3
ಒಟ್ಟು 75

ಉಪಚುನಾವಣೆ ೨೦೧೭ ಬದಲಾಯಿಸಿ

ಉಪ ಚುನಾವಣೆ ೨೦೧೭ ಬದಲಾಯಿಸಿ

  • ಆಗ್ನೇಯ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 21 ಸಾವಿರ.
  • ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪ್ತಿ ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ (ಫೆ.3) ಮತದಾನ ನಡೆದಿದೆ. ಈ ಕ್ಷೇತ್ರ ಪ್ರತಿನಿಧಿಸಿದ್ದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆ ಆಗಿದ್ದರಿಂದ ಅವಧಿಗೆ ಮೊದಲೇ ಈ ಚುನಾವಣೆ ಬಂದಿದೆ.
  • ಕಾಂಗ್ರೆಸ್‌ ಟಿ.ಎಸ್‌. ನಿರಂಜನ್‌, ಬಿಜೆಪಿ ಪಿ.ಆರ್‌. ಬಸವರಾಜು, ಜೆಡಿಎಸ್‌ ರಮೇಶ್‌ ಬಾಬು ಅವರನ್ನು ಕಣಕ್ಕಿಳಿಸಿದೆ. ಅಲ್ಲದೆ, ಜೆಡಿಎಸ್‌ಗೆ ಬಂಡಾಯದ ಹರಿಹರದ ಜೆಡಿಎಸ್‌ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವರ ಸಹೋದರ ಅರವಿಂದ ಅವರು ಸ್ಪರ್ಧೆಯಲ್ಲಿದ್ದಾರೆ.[೧೩]

ಫಲಿತಾಂಶ ಬದಲಾಯಿಸಿ

  • 8 Feb, 2017
  • ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್‌ಬಾಬು ಜಯಗಳಿಸಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ ಯಿಂದ ಜೆಡಿಎಸ್‌ ಕಸಿದುಕೊಂಡಿದೆ. ಜೆಡಿಎಸ್‌ನ ರಮೇಶ್ ಬಾಬು 1,611 ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ಬಿಜೆಪಿಯ ಪಿ.ಆರ್‌. ಬಸವರಾಜು (ಪೆಪ್ಸಿ) ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಿರಂಜನ್ ಠೇವಣಿ ಕಳೆದುಕೊಂಡರು. ರಮೇಶ್‌ ಬಾಬು 7,810 ಮತಗಳನ್ನು ಪಡೆದರೆ ಬಸವರಾಜು 6,199 ಮತ ಗಳಿಸಿದರು. ಮೊದಲ ಸುತ್ತಿನ ಪ್ರಾಶಸ್ತ್ಯ ಮತದಲ್ಲಿ ಯಾವ ಅಭ್ಯರ್ಥಿಯೂ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯದ ಕಾರಣ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಿತು.
  • ಅಂತಿಮವಾಗಿ ರಮೇಶ್ ಬಾಬು ಗೆಲುವು ಪಡೆದರು. ಮಂಗಳವಾರ ಬೆಳಗಿನ ಜಾವ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 1,237 ಮತಗಳು ಅಸಿಂಧುವಾದವು. 22 ನೋಟಾ ಮತಗಳು ಚಲಾವಣೆಯಾಗಿದ್ದವು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ರಮೇಶಬಾಬು 20 ವರ್ಷದಿಂದ ಜೆಡಿಎಸ್‌ನಲ್ಲಿದ್ದು, ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ಏಳು ವರ್ಷದಿಂದ ಪಕ್ಷದ ರಾಜ್ಯ ವಕ್ತಾರರಾಗಿ ಕೆಲಸ ಮಾಡುತ್ತಿರುವ ಅವರು, ಜೆಡಿಎಸ್‌ ವಿದ್ಯಾರ್ಥಿ ಘಟಕ, ಯುವ ಘಟಕ, ವಕೀಲರ ಘಟಕಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾ ಮಂಡಳದಲ್ಲಿ ನಿರ್ದೇಶಕರೂ ಆಗಿದ್ದಾರೆ.[೧೪]

ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. kannada.oneindia.comhttp://kannada.oneindia.com/news/karnataka/oneindia-explainer-how-members-are-elected-for-legislative-council-104077.html
  2. http://www.prajavani.net/article/ಪರಿಷತ್‌ಗೆ-ಇಂದು-ಮತದಾನ
  3. http://kannada.oneindia.com/news/karnataka/legislative-council-election-2015-winners-and-losers-099755.htm[ಶಾಶ್ವತವಾಗಿ ಮಡಿದ ಕೊಂಡಿ]
  4. http://www.prajavani.net/article/ಮೇಲ್ಮನೆ-ಗೆದ್ದ-ಅಭ್ಯರ್ಥಿಗಳ-ವಿವರ
  5. ಕಾಂಗ್ರೆಸ್‌ನಲ್ಲಿ-25ಕ್ಕೂ-ಹೆಚ್ಚು-ಆಕಾಂಕ್ಷಿಗಳು[೧]
  6. kannada.oneindia.com[೨]
  7. ೧೦-೬-೨೦೧೬-prajavaniw:prajavani.net/article/ಕಾಂಗ್ರೆಸ್‌–4-ಬಿಜೆಪಿ–2-ಜೆಡಿಎಸ್‌-1-ಸ್ಥಾನ-ಗೆಲುವು
  8. [೩]
  9. ಇಬ್ಬರ ಜಗಳದಲ್ಲಿ ಮೂರನೆಯವನ ಲಾಭ– ನಷ್ಟ | ಪ್ರಜಾವಾಣಿ-8-6-2016
  10. ಕಾಂಗ್ರೆಸ್‌ಗೆ ಪ್ರತಿಷ್ಠೆ, ಜೆಡಿಎಸ್‌ಗೆ .ಪ್ರಜಾವಾಣಿ-8-6-2016
  11. 14/06/2016 prajavaniw:prajavani.net/article/ಹೊರಟ್ಟಿ-7ನೇ-ಬಾರಿ-ಗೆಲುವು
  12. ದಕ್ಷಿಣ-ಪದವೀಧರ-ಕ್ಷೇತ್ರ-ಜೆಡಿಎಸ್‌ಗೆ-ಗೆಲುವುw:prajavani.net/article/ದಕ್ಷಿಣ-ಪದವೀಧರ-ಕ್ಷೇತ್ರ-ಜೆಡಿಎಸ್‌ಗೆ-ಗೆಲುವು
  13. ಆಗ್ನೇಯ ಶಿಕ್ಷಕರ ಕ್ಷೇತ್ರ: ಮೂರೂ ಪಕ್ಷಗಳಿಗೆ ಪ್ರತಿಷ್ಠೆ;ಹೊನಕೆರೆ ನಂಜುಂಡೇಗೌಡ;3 Feb, 2017
  14. ಆಗ್ನೇಯ ಶಿಕ್ಷಕರ ಕ್ಷೇತ್ರ: ರಮೇಶ್‌ ಬಾಬುಗೆ ಜಯ;ಪ್ರಜಾವಾಣಿ ವಾರ್ತೆ;8 Feb, 2017[ಶಾಶ್ವತವಾಗಿ ಮಡಿದ ಕೊಂಡಿ]

ಆಧಾರ ಬದಲಾಯಿಸಿ

ಉಲ್ಲೇಖ ಬದಲಾಯಿಸಿ