ಎಚ್. ವೈ.ಶಾರದಾಪ್ರಸಾದ

ಹೊಳೆನರಸೀಪುರ ಯೋಗನರಸಿಂಹ ಶಾರದಾ ಪ್ರಸಾದರು,ಅವರ ಗೆಳೆಯರಿಗೆ ಸಾಹಿತ್ಯಾಭಿಮಾನಿಗಳಿಗೆ ಡಾ.ಎಚ್.ವೈ.ಶಾರದಾಪ್ರಸಾದ, ರೆಂದು ಚಿರಪರಿಚಿತರಾಗಿದ್ದಾರೆ. ಅವರು ಪ್ರಧಾನಮಂತ್ರಿಯ ಕಾರ್ಯಾಲಯದಲ್ಲಿ ೨೨ ವರ್ಷಗಳವರೆಗೆ ಪ್ರೆಸ್ ಇನ್ಫರ್ಮೇಶನ್ ಅದಿಕಾರಿಯಾಗಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ, ಹಾಗೂ ರಾಜೀವ ಗಾಂಧಿಯವರಿಗೆ ಇವರು ಮಾಧ್ಯಮ ಸಲಹೆಗಾರರಾಗಿದ್ದರು.[೧]. ಇವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇವರು ಶಿವರಾಮ ಕಾರಂತರು ಬರೆದ ಈ ಕಾದಂಬರಿಗಳನ್ನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ್ದಾರೆ:

  1. ಕುಡಿಯರ ಕೂಸು (Headman of the Little Hill)
  2. ಮೈಮನಗಳ ಸುಳಿಯಲ್ಲಿ (The woman of Basrur)
  3. ಹುಚ್ಚು ಮನಸ್ಸಿನ ಹತ್ತು ಮುಖಗಳು (The faces of a crazy mind)
  4. ಆರ್.ಕೆ.ನಾರಾಯಣರವರ Swami and his friends ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಂಗ್ಲಾ ಭಾಷಾ ಕೃತಿಗಳು ಬದಲಾಯಿಸಿ

  • ಶಾರದಾಪ್ರಸಾದರವರ ಸ್ವತಂತ್ರ ಕೃತಿ: Exploring Karnataka
  • Selected Works of Jawaharlal Nehru: 18 November 1955 - 31 January 1956 (Second Series, 31)

ಉಲ್ಲೇಖಗಳು ಬದಲಾಯಿಸಿ

  1. ವಿಶ್ವೇಶ್ವರ ಭಟ್ಇವರು ದಿ:೦೭-೦೭-೦೭ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಲೇಖನ