ಎಚ್.ಎನ್.ಹೂಗಾರರು ೧೯೩೨ರಲ್ಲಿ ಗದಗಿನಲ್ಲಿ ಜನಿಸಿದರು. ಉತ್ತರ ಕರ್ನಾಟಕದ ಎಲ್ಲಾ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡಿವೆ. ಇವರ ನಾಟಕಗಳ ಯಶಸ್ಸಿನಿಂದಾಗಿ ಇವರು ‘ಜ್ಯುಬಿಲೀ ಕವಿ’ ಎಂದೇ ಹೆಸರಾಗಿದ್ದಾರೆ. ಇವರ ಕೆಲವು ಪ್ರಸಿದ್ಧ ನಾಟಕಗಳು:

  • ಭಕ್ತಿಜ್ಯೋತಿ
  • ಕುಲಪುತ್ರ
  • ಕೊಂಡು ತಂದ ಗಂಡ
  • ಬೂದಿ ಮುಚ್ಚಿದ ಕೆಂಡ
  • ಸತಿಯೇ ಸೌಭಾಗ್ಯ
  • ಮನ ಗೆದ್ದ ಮಡದಿ
  • ಸಂಗೊಳ್ಳಿ ರಾಯಣ್ಣ
  • ಬಂಗಾರ ಗಂಡು
  • ವಾತ್ಸಲ್ಯ
  • ನಾಟ್ಯರಾಣಿ
  • ದಸರಾ
  • ಪುತ್ಥಳಿ
  • ಕಂಕಣ ಬಲ
  • ಸುನಂದಾ
  • ಮಕ್ಕಳ ಮದುವೆ
  • ಸಂಸಾರ ಸಮರ