ಎಂ.ಅಬ್ದುಲ್ ರೆಹಮಾನ್ ಪಾಶಾ


'ಮಾಹಿತಿ ತಂತ್ರಜ್ಞಾನ,' 'ಬಯೋಟೆಕ್ನಾಲಜಿ,' ಮತ್ತು 'ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ,'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್,' ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ವಿಷನ್ ಗ್ರೂಪ್ ಖ್ಯಾತ ವಿಜ್ಞಾನಿ 'ಪ್ರೊ.ಸಿ ಎನ್ ಆರ್ ರಾವ್' ಅವರ ಅಧ್ಯಕ್ಷತೆಯಲ್ಲಿ ೨೦೦೮ ರಲ್ಲಿ ಸ್ಥಾಪಿತವಾಯಿತು. ಕರ್ನಾಟಕ ಸರಕಾರ ವಿಜ್ಞಾನ ಸಂವಹಕರಿಗೆ ಪ್ರಶಸ್ತಿ ನೀಡುತ್ತಿರುವುದು ಇದು ಮೊದಲನೆಯ ಬಾರಿ. ೨೦೧೦-೧೧ ಸಾಲಿಗೆ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಏಳು ಜನ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು, 'ಕರ್ನಾಟಕ ಸರಕಾರ ನೀಡುತ್ತಿರುವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಕರ್ನಾಟಕ ಸರಕಾರದ 'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್' ನ ಉಪ-ಸಮಿತಿ ಕೆಳಗಡೆ ನಮೂದಿಸಲಾಗಿರುವ ಸಾಧಕರಿಗೆ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಶಸ್ತಿ ೫೦ ಸಾವಿರ ರು.ನಗದನ್ನು ಒಳಗೊಂಡಿರುತ್ತದೆ