ಇಬ್ರಾಹಿಂ ಎನ್. ಸುತಾರ್

(ಇಬ್ರಾಹಿಂ ಸುತಾರ್ ಇಂದ ಪುನರ್ನಿರ್ದೇಶಿತ)

ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (೧೦ ಮೇ ೧೯೪೦ - ೦೫ ಫೆಬ್ರವರಿ ೨೦೨೨[೩]) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.[೪]

ಇಬ್ರಾಹಿಂ ಸುತಾರ್
ಜನನ (1940-05-10) ೧೦ ಮೇ ೧೯೪೦ (ವಯಸ್ಸು ೮೩)
ಮಹಾಲಿಂಗಪುರ[೧]
ಮರಣ5 February 2022(2022-02-05) (aged 81)
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆತರಗತಿ 3[೧]
ಉದ್ಯೋಗನೇಕಾರ[೧]
ಇದಕ್ಕೆ ಖ್ಯಾತರುಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆದ 40 ವರ್ಷಗಳಿಂದ ತಮ್ಮ ಹಾಡುಗಳು ಮತ್ತು ಭಜನೆಗಳ ಮೂಲಕ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ಹೆಸರುವಾಸಿಯಾಗಿದ್ದಾರೆ[೧]
ಜೀವನ ಸಂಗಾತಿಮಾರೆಂಬಿ[೧]
ಮಕ್ಕಳುಹುಮಾಯೂನ್ ಸುತಾರ್ ಮತ್ತು ಇತರ ಇಬ್ಬರು ಮಕ್ಕಳು[೧][೨]
ಜಾಲತಾಣwww.ibrahimsutar.com

ಬದುಕು ಬದಲಾಯಿಸಿ

ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್ , ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.

ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು , ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ , ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ , ಭಗವದ್ಗೀತೆಗಳ ಅಧ್ಯಯನ ಮಾಡಿದರು.

ದೇವರು , ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು

ಸಾಧನೆಗಳು ಬದಲಾಯಿಸಿ

ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ.

ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ.

ಪ್ರಶಸ್ತಿಗಳು ಬದಲಾಯಿಸಿ

  • ೧೯೯೫ ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
  • ೨೦೧೮ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ

ಇದನ್ನು ಸಹ ನೋಡಿ ಬದಲಾಯಿಸಿ

  1. 'ಶ್ರೀ ಇಬ್ರಾಹೀಮ ಸುತಾರ ವೆಬ್ ಸೈಟ್'

ಉಲ್ಲೇಖ ಬದಲಾಯಿಸಿ

  1. ೧.೦ ೧.೧ ೧.೨ ೧.೩ ೧.೪ ೧.೫ "Two from Karnataka get Padma honour". Deccan Herald (in ಇಂಗ್ಲಿಷ್). 26 January 2018. Retrieved 17 December 2019.
  2. "For this Sufi saint, harmony begins at home". The New Indian Express. Retrieved 17 December 2019.
  3. "ಹೃದಯಾಘಾತದಿಂದ ಪ್ರವಚನಕಾರ ಇಬ್ರಾಹಿಂ ಸುತಾರ ನಿಧನ". ಪ್ರಜಾವಾಣಿ. ಪ್ರಜಾವಾಣಿ. Retrieved 5 February 2022.
  4. "Two from Karnataka get Padma honour". www.deccanherald.com. Retrieved 23 February 2018.