ಇವರು ೧೧೬ವಚನಗಳು ಲಭ್ಯವಾಗಿದೆ. ಅಕ್ಕಮನಂತೆ ಆಚಾರ ಶೀಲಳಾದ ಈಕೆಯ ವಚನಗಳಲ್ಲಿ ವಸ್ತುವೂ ಆಚಾರ ಪ್ರಧಾನವಾಗಿದೆ. ಸಮಾಜ ವಿಮರ್ಶೆ, ಹೆಚ್ಚು ತೀವ್ರವಾಗಿ, ಅಷ್ಟೇ ಕಟುವಾಗಿ ಬಂದಿದೆ.ಎನ್ನ ದೇಹದಗ್ಗವ ಮಾಡಯ್ಯ,ಎನ್ನ ಬಾವದಲ್ಲಿಪ್ಪ ಭ್ರಮೆಯ ಜರೆಯಯ್ಯಾ, ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ,ಹೆದರದಿರು ಮನವೆ ಹಿಮ್ಮೆಟ್ಟದಿರು ಮನವೆ ಹಿಡಿದ ಛಲವ ಬಿಡದಿರು ಮನವೆ" ಎಂದು ತನುಮನ ಭಾವಗಳನ್ನು ಶುದ್ಧಗೊಳಿಸಿಕೊಂಡು ಛಲದಿಂದ ಮುನ್ನಡೆದ ಈಕೆ ಸಾಧನೆಯಿಂದ ಆರಿವನ್ನೇ ಗುರುವನ್ನಾಗಿ ಮಾಡಿಕೊಂಡವಳು