ಆತಕೂರು ಶಾಸನ ಕಾಲ ಕ್ರಿ.ಶ.950 ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಆತಕೂರಿನ ಚಲ್ಲೇಶ್ವರ ದೇಗುಲದ ಮುಂದಿದ್ದ ಈ ಶಾಸನ ಪ್ರಸ್ತುತ ಬೆಂಗಳೂರಿನ ವಸ್ತುಸಂಗ್ರಹಾಲಯದಲ್ಲಿದೆ.

ಇತಿವೃತ್ತ ಬದಲಾಯಿಸಿ

ರಾಷ್ಟ್ರಕೂಟರ ಮೂರನೇ ಕೃಷ್ಣ ,ಗಂಗರ ಬೂತುಗ ಮತ್ತು ಅವನ ಸೇವಕ ಮನಾಲರು ಚೋಳ ರಾಜಾದಿತ್ಯನ ಮೇಲೆ ಯುದ್ದ ಮಾಡಿದ ಮತ್ತು ಚೋಳ ರಾಜಾದಿತ್ಯನನ್ನು ಕೊಂದ ವಿಷಯವಿದೆ. ರಾಜಾದಿತ್ಯನನ್ನು ಕೊಂದವ ಭೂತುಗ ಎಂಬುದನ್ನು ಇದು ತಿಳಿಸುತ್ತದೆ. ಈ ಶಾಸನದಲ್ಲಿ ನಾಯಿ-ಹಂದಿ ಹೋರಾಡುತ್ತಿರುವ ಚಿತ್ರವಿದೆ. ವೀರ ಮನಾಲರಿಗೆ ಸಾಕುನಾಯಿಯ ಮೇಲಿದ್ದ ಪ್ರೀತಿ ಗೋಚರವಾಗುತ್ತದೆ. ಇವನ ಪ್ರತಾಪವನ್ನು ಮೆಚ್ಚಿದ ಕನ್ನರದೇವ ನಿನಗೇನು ಬೇಕು ಬೇಡಿಕೊ ಎಂದಾಗ ಮನಾಲರ 'ಕಾಳಿ'ಎಂಬ ನಾಯಿಯನ್ನು ಬೇಡಿ ಪಡೆಯುತ್ತಾನೆ. ಮುಂದೊಂದು ದಿನ ಆ ನಾಯಿ ತನ್ನ ಒಡೆಯನನ್ನು ಹಂದಿಯೊಂದರಿಂದ ರಕ್ಷಿಸಲು ಹೋಗಿ ತಾನು ಅಸು ನೀಗುತ್ತದೆ. ಆಗ ಮನಾಲ ಆ ನಾಯಿಯ ನೆನಪಿಗಾಗಿ ವೀರಗಲ್ಲನ್ನು ನೆಟ್ಟು, ಅದರ ಪೂಜೆಗಾಗಿ ಹೊಲವೊಂದನ್ನು ಬಿಟ್ಟುಕೊಡುತ್ತಾನೆ.[೧] ನಾಯಿಗಾಗಿ ವೀರ ಸ್ಮಾರಕವನ್ನು ಹಾಕಿರುವ ಏಕೈಕ ಶಾಸನ ಇದಾಗಿದೆ.

ಉಲ್ಲೇಖ ಬದಲಾಯಿಸಿ

  1. http://www.prajavani.net/article/ಕಾಳಿಯೊಡನೆ-ಕಳೆದ-ನೆನಪು