ಅನಸೂಯಾದೇವಿ ಇವರು ಕನ್ನಡದ ಹೊಸ ಪೀಳಿಗೆಯ ಲೇಖಕಿಯರು. ಇವರು ೩೧-೧೦-೧೯೪೯ ರಂದು ಜನಿಸಿದರು. ದಕ್ಷಿಣ ಮೂಲದವರಾದ ತಂದೆ ತಮ್ಮಯ್ಯ ಅಡಿಗ. ತಾಯಿ ಕಾವೇರಮ್ಮ. ಇವರು ಬೆಂಗಳೂರಿನ ಬಿ.ಎಚ್.ಎಸ್.ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗು ರೀಡರ ಆಗಿದ್ದಾರೆ.ಅಲ್ಲದೆ ಗಾಯನ,ಕಾವ್ಯವಾಚನ ಹಾಗು ವ್ಯಾಖ್ಯಾನದಲ್ಲೂ ಸಹ ಪರಿಣತರಾಗಿದ್ದಾರೆ.[೧]

ಕೃತಿಗಳು ಬದಲಾಯಿಸಿ

ಇವರ ಕೆಲವು ಕೃತಿಗಳು ಇಂತಿವೆ:

ಕವನ ಸಂಕಲನ ಬದಲಾಯಿಸಿ

  • ಮಲ್ಲಿಗೆ ಹೂ
  • ಪ್ರಕೃತಿ-ಪುರುಷ
  • ಅಮ್ಮ…ನಿನ್ನ ನೆನಪಿಗೆ
  • ಕೇಶವ ನಮನ
  • ಅನನ್ಯ

ಕಥಾ ಸಂಕಲನ ಬದಲಾಯಿಸಿ

  • ಉರಿಯ ಬೇಲಿ

ಕಾದಂಬರಿ ಬದಲಾಯಿಸಿ

  • ಆಕಾಶದ ಹಾಡು

ಪ್ರಶಸ್ತಿಗಳು ಬದಲಾಯಿಸಿ

  • ಪ್ರಕೃತಿ-ಪುರುಷ ಕವನ ಸಂಕಲನಕ್ಕೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
  • ಉರಿಯ ಬೇಲಿ ಕಥಾಸಂಕಲನಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ
  • ವಿಶುಕುಮಾರ್ ಪ್ರಶಸ್ತಿ
  • ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ
  • ಕರ್ನಾಟಕದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
  • ಕುವೆಂಪುಶ್ರೀ ಪ್ರಶಸ್ತಿ

ಉಲ್ಲೇಖ ಬದಲಾಯಿಸಿ

  1. http://www.kanaja.in/dinamani/%E0%B2%85%E0%B2%A8%E0%B2%B8%E0%B3%82%E0%B2%AF%E0%B2%BE%E0%B2%A6%E0%B3%87%E0%B2%B5%E0%B2%BF/[ಶಾಶ್ವತವಾಗಿ ಮಡಿದ ಕೊಂಡಿ]