ಹೇಮಲತಾ ಮಹಿಷಿಯವರು ವೃತ್ತಿಯಲ್ಲಿ ವಕೀಲರು ಮತ್ತು ಪ್ರವೃತ್ತಿಯಲ್ಲಿ ಸಾಹಿತಿಗಳು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಲಕ್ಷ್ಮಣ ರಾವ್ ಸಿರ್ಸಿ ಮತ್ತು ಶಾಂತಾಬಾಯಿ ದಂಪತಿಗಳ ಮಗಳಾಗಿ ದಿನಾಂಕ ೨೩-೧೦-೧೯೪೪ ರಂದು ಜನಿಸಿದರು.ಎ.ಎ ಮತ್ತು ಎಲ್. ಎಲ್.ಬಿ ಪದವಿಗಳನ್ನು ಪಡೆದಿರುವ ಇವರು ಕನ್ನಡ ಕಾನೂನು ಪತ್ರಿಕೆಯ ಸಂಪಾದಕಿ ಕೂಡ. ಶ್ರೀ. ನಾರಾಯಣ ಮಹಿಷಿಯ ಪತ್ನಿಯಾದ ಇವರು ಸಧ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕೃತಿಗಳು

ಬದಲಾಯಿಸಿ

ಕಥಾ ಸಂಕಲನ

ಬದಲಾಯಿಸಿ
  • ಜಾಯಮಾನ(೧೯೭೬)
  • ತ್ರಿಶಂಕು(೧೯೮೦)

ಕಿರುನಾಟಕ

ಬದಲಾಯಿಸಿ
  • ಅನುಕೂಲಕ್ಕೊಬ್ಬ ಹೆಂಡತಿ (೧೯೭೬)

ಕಾನೂನು ಸಾಹಿತ್ಯ

ಬದಲಾಯಿಸಿ

ಕಾನೂನು-ಮಹಿಳೆ(೧೯೮೧) ಹಿಂದೂ ವಿವಾಹ(೧೯೮೫)