ನನ್ನ ಪರಿಚಯ

ನಾನು ಬಿ. ವೈಶಾಲಿ ಶೆಣೈ ಪ್ರಸ್ತುತ ಸೈಂಟ್ ಆಲೋಸಿಯಸ್ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ.


ನಾನು ನೀರುಮಾರ್ಗ ಗ್ರಾಮದಲ್ಲಿ ವಾಸವಾಗಿರುವ ದಿ. ಲಕ್ಷ್ಮಣ ಶೆಣೈ ಹಾಗೂ ಶ್ರೀ ಮತಿ ವಿಜಯಲಕ್ಷ್ಮೀ ಶೆಣೈಯವರ ಎರಡು ಮಕ್ಕಳಲ್ಲಿ ಕಿರಿಯವಳು ಅವಿಭಕ್ತ ಕುಟುಂಬದಲ್ಲಿ ಜನಿಸಿದ ನಾನು. ನಮ್ಮ ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಮೂವರು ಅಣ್ಣಂದಿರಿಗೆ ಒಬ್ಬಳೇ ತಂಗಿಯಾಗಿ ಮುದ್ದಿನಿಂದ ಬೆಳೆದೆನು.


ನನ್ನ ವಿಧ್ಯಾಭ್ಯಾಸವು L.K.G ಹಾಗೂ U.K.G ಯು ನೀರುಮಾರ್ಗದ ನವಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯಿತು.ಮುಂದೆ ನಾನು 1 ನೇ ತರಗತಿಯಿಂದ 7ನೇ ತರಗತಿವರೆಗೆ ICSE ಮಾಧ್ಯಮದಲ್ಲಿ ಹಾಗೂ ಮುಂದೆ 8ನೇ ತರಗತಿಯಿಂದ 10ನೇ ತರಗತಿವರೆಗೆ ನೀರುಮಾರ್ಗ ಕುಂಟಿಡ್ಕ ಗ್ರಾಮದಲ್ಲಿರುವ ಪ್ರೆಸಿಡೆಂನ್ಸಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಯಲ್ಲಿ ಉನ್ನತ್ತ ಶ್ರೇಣಿಯಲ್ಲಿ ಪಾಸಾದೆನು.ಮುಂದೆ ಪ್ರೆಸಿಡೆಂನ್ಸಿ ಶಾಲೆಯಲ್ಲಿ ಕಾಲೇಜು ಶಿಕ್ಷಣ ಇದ್ದರೂ ನಾನು ವಾಣಿಜ್ಯ ವಿಭಾಗ ಆಯ್ಕೆ ಮಾಡಿದ ಕಾರಣ ನನ್ನ ಕೆಲವು ಬಾಲ್ಯದ ಸ್ನೇಹಿತರನ್ನು ಬಿಟ್ಟು ಮನಸ್ಸಿಲ್ಲದ ಮನಸ್ಸಿನಿಂದ ಪದವಿ ಪೂರ್ವ ಶಿಕ್ಷಣ ಪಡೆಯಲು ಕೆನರಾ ಕಾಲೇಜನ್ನು ಆಯ್ಕೆ ಮಾಡಿಕೊಂಡೆನು.


ಕೆನರಾ ಕಾಲೇಜಿನಲ್ಲಿ ನನ್ನ ಶಾಲೆಯ ಯಾವುದೇ ಮಕ್ಕಳು ಇಲ್ಲದಿದ್ದರೂ ಅದೇ ಕಾಲೇಜಿನಲ್ಲಿ ನನ್ನ ಹೊಸ ಸ್ನೇಹಿತರ ಪರಿಚಯದೊಂದಿಗೆ ೨ ವರ್ಷಗಳ ಕಾಲ ಅವರೊಡನೆ ಬೆರೆತು ನಾನು ಆಯ್ಕೆ ಮಾಡಿಕೊಂಡ ವಿಷಯಗಳಾದ Business- Studies, Economics, Strustics ಹಾಗೂ Accountancy ಉತ್ತಮ ಅಂಕಗಳನ್ನು ಪಡೆದು Distinction ನಲ್ಲಿ ತೇರ್ಗಡೆಯಾದೆನು.


ನನಗೆ ಚಿಕ್ಕಂದಿನಿಂದಲೂ ಪುಸ್ತಕ ಓದುವುದೆಂದರೆ ಬಹಳ ಇಷ್ಟ. ಚೇತನ ಭಗತ ಅವರು ಬರೆದ ಪುಸ್ತಕಗಳನ್ನು ನಾನು ಸಾಧಾರಣವಾಗಿ ಎಲ್ಲವನ್ನು ಓದಿರುವೆನು. ಬಿಡುವಿನ ವೇಳೆ ಟಿ.ವಿ. ನೋಡುವುದು ಹಾಗೂ ಸಂಗೀತ ಕೇಳುವುದು, ಚಲನಚಿತ್ರ ವೀಕ್ಷಣೆ ಇವೆಲ್ಲಾ ನನಗೆ ತುಂಬಾ ಖುಷಿ.


ನಾನು ಮುಂದೆ ಬಿ.ಕಾಂ ಮಾಡಿ ಅದರೊಟ್ಟಿಗೆ Company Secretary ಮುಗಿಸಿ L.L.B ಕಲಿತು ನ್ಯಾಯವಾದಿ ಆಗಬೇಕೇಂದು ನನ್ನ ಕನಸಾಗಿದೆ. ನನ್ನ ಕನಸನ್ನು ಸಾಕಾರ ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿರುವೆನು ಹಾಗೂ ದೇವರಲ್ಲಿ ನನಗೆ ಒಳ್ಳೆಯ ಧೈರ್ಯ ಕೊಟ್ಟು ನನ್ನನ್ನು ಹರಿಸಲು ಪ್ರಾರ್ಧಿಸುತ್ತಿರುವೆನು.



 Accountancy  Distinction Company Secretary Course L.L.B