ಹಾನುಬಾಳು ಗ್ರಾಮದ ವಿಶೇಷತೆ
ಬದಲಾಯಿಸಿ
ಮಲೆನಾಡಿನ ಮಡಿಲಲ್ಲಿ ಸಕಲ ಐಶ್ವರ್ಯಾಗಳಿಂದ ಕೂಡಿದ ಹೇಮಾವತಿ ನದಿಯ ದಡದಲ್ಲಿರುವುದೇ ನಮ್ಮ ಸಕಲೇಶಪುರ .ಸಕಲೇಶಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಹೋಬಳಿ ಗ್ರಾಮವೇ ಹಾನುಬಾಳು.ಹಾನುಬಾಳು ಹಚ್ಚ ಹಸಿರಿನ ವನ ಸಿರಿಯನ್ನು ಹೊಂದಿರುವ ಗ್ರಾಮವಾಗಿದೆ. ಪ್ರವಾಸಿಗರನ್ನು ವಾರದ ಅಂತ್ಯದಲ್ಲಿ & ರಜ ದಿನಗಳಲ್ಲಿ ಪ್ರವಾಸಿಗರನ್ನು ತನ್ನತ್ತಾ ಕೈ ಬೀಸಿ ಕರೆಯುತ್ತದೆ.
ಗ್ರಾಮವು ಬಹು ಸಂಸ್ಕೃತಿಯನ್ನು ಹೊಂದಿರುವ ಗ್ರಾಮವಾಗಿದೆ.ಇಲ್ಲಿ ಹಲವಾರು ಹಬ್ಬಗಳ ಆಚರಣೆಯನ್ನು ಕಾಣಬಹುದಾಗಿದೆ.ನಮ್ಮ ಗ್ರಾಮದಲ್ಲಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯು ಪ್ರಮುಖವಾಗಿದ್ದು, ಈ ಸಂಧರ್ಭದಲ್ಲಿ ಜಾತ್ರಾ ಮಹೋತ್ಸವ ನಡೆಯುವುದನ್ನು ಕಾಣಬಹುದಾಗಿದೆ. ಈ ಜಾತ್ರೆಯನ್ನು ಗುಂಡು ಬ್ರಹ್ಮ ಜಾತ್ರಾ ಮಹೋತ್ಸವವೆಂದು ಕರೆಯುತ್ತೇವೆ. ಈ ಜಾತ್ರೆಯು ಉದ್ದಿ ಗುಡ್ಡ ಎಂಬ ಜಾಗದಲ್ಲಿ ನಡೆಯುತ್ತದೆ. ಈ ಸ್ಥಳದಲ್ಲಿ ಮೂರು ಗ್ರಾಮದ ದೇವರ ಮೂರ್ತಿಗಳು ಸೇರುತ್ತವೆ. ಮಕ್ಕಿಹಳ್ಳಿ, ಅಗನಿ & ಹಾನುಬಾಳು ಗ್ರಾಮದ ದೇವರುಗಳು ಸೇರುತ್ತವೆ. ಈ ಜಾತ್ರೆಯಲ್ಲಿ ಬಿದಿರಿನಿಂದ ಮಾಡಿದ "ಸತ್ತಿಗೆ" ಎಂಬುದು ವಿಶೇಷವಾಗಿದೆ.
ಹಾನುಬಾಳು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ತನ್ನ ಶತಮಾನೋತ್ಸವವನ್ನು ಆಚರಿಸಿದೆ.ಹಳೆಯ ಕಟ್ಟಡವು ಉತ್ತಮವಾಗಿಲ್ಲದೆ ಇರುವುದರಿಂದ ನೂತನ ಕಟ್ಟಡದ ಕಾರ್ಯರಂಭದಲ್ಲಿ ಸಾಗುತ್ತಿದೆ. ಈ ಕಟ್ಟಡದ ಕಾರ್ಯರಂಭದಲ್ಲಿ ಗ್ರಾಮಸ್ಥರು ,ದಾನಿಗಳು, ಹಳೆ ವಿದ್ಯಾರ್ಥಿಗಳ ಸಂಘದ ಕೊಡುಗೆಯಾಗಿದೆ. ಈ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜು ಕಲಾ & ವಾಣಿಜ್ಯ ವಿಭಾಗವನ್ನು ಹೊಂದಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆ ಕೊಡುಗೆ ನೀಡಿದ್ದಾರೆ. ಈ ಕಾಲೇಜಿನ ದ್ವಿತೀಯ ಪಿ.ಯು.ಸಿ.ಪಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ೯೮% ಮತ್ತು ವಾಣಿಜ್ಯ ವಿಭಾಗದಲ್ಲಿ ೧೦೦% ಫಲತಾಂಶ ನೀಡಿದೆ. ಈ ಕಾಲೇಜು ಉತ್ತಮ ಕ್ರೀಡಾಪಟುಗಳನ್ನು ಹೊಂದ್ಧಿದ್ದು,ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸತತವಾಗಿ ಎರಡು ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗವನ್ನು ಕಾಣಬಹುದಾಗಿದೆ