ಸದಸ್ಯ:Vaishali M/ನನ್ನ ಪ್ರಯೋಗಪುಟ

ಶಾರದಾ ಶಾಸ್ತ್ರಿಯವರು ನಾಟಕ ಕರ್ತೃ ಮತ್ತು ನಿರ್ದೇಶಕಿಯಾಗಿದ್ದವರು. ಹಳೆಯ ತಲೆಮಾರಿನ ಲೇಖಕಿಯರಲ್ಲಿ ಒಬ್ಬರಾದ ಇವರು ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬೆಳೆದವರು.ಇವರು ನಲುವತ್ತನೆ ವಯಸ್ಸಿಗೆ ಬರವಣಿಗೆಯನ್ನು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ಹೆಣ್ಣುಮಗುವಿನ ಪರಿಸ್ಥಿತಿ ತುಂಬಾನೇ ಕಷ್ಟಕರದಾಯಕವಾಗಿತ್ತು. ಆ ಶತಮಾನಗಳಲ್ಲಿ ಮೊದಲನೆ ಇಪ್ಪತೈದು ವರ್ಷಗಳವರೆಗೆ ಹೆಣ್ಣುಮಕ್ಕಳಿಗೆ ವಿವಾಹವನ್ನು ಮಾಡಿಸುತ್ತಿದ್ದರು.ಅದಲ್ಲದೆ ವಿದ್ಯಾಭ್ಯಾಸ ಸಹ ದೊರೆಯುತ್ತಿರಲಿಲ್ಲ. ಸ್ವಾತಂತ್ರ್ಯವಿಲ್ಲದ ಜೀವನ ಹೆಣ್ಣುಮಕ್ಕಳದಾಗಿತ್ತು. ಇಂಥ ಸಂದರ್ಭದಲ್ಲೂ ಶಾರದಾ ಶಾಸ್ತ್ರಿಯವರು ನಾಟಕಗಳನ್ನು ನಿರ್ದೇಶಿಸಿ ಪಾತ್ರಗಳನ್ನು ರಂಗ ಪ್ರಯೋಗಕ್ಕೆ ತರುವುದರಲ್ಲಿ ಸಫಲರಾದರು.

ಜನನ ಮತ್ತು ಜೀವನ ಬದಲಾಯಿಸಿ

  • ಇವರು ೧೯-೩-೧೯೨೫ರಲ್ಲಿ ದಕ್ಷಿಣ ಕನ್ನಡದಲ್ಲಿ ಜನಿಸಿದರು.
  • ತಂದೆ ಶ್ರೀ ಕೃಷ್ಣ ಎಳಚಿತ್ತಾಯ.ತಾಯಿ ಜಲಜಾಕ್ಷಿ
  • ಇವರಿಗೆ ಮಂಗಳೂರು ನ್ಯಾಯವಾದಿಯಾದ ಅನಂತ ಶಾಸ್ತ್ರಿ ಅವರ ಜೊತೆ ವಿವಾಹವಾಯಿತು.ಅವರು ತಂಗಿಯ ಮಗ ರಾಧಾಕೃಷ್ಣವರನ್ನು ಸ್ವಂತ ಮಗನಂತೆ ಸಲಹಿದರು.
  • ಇವರು ಬಾಲಕಲಾ ಕಲ್ಪ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.ಮತ್ತು ವರ್ಣಶ್ರೀಕಲಾರಂಗ ಸ್ಥಾಪಕ ಅಧ್ಯಕ್ಷೆಯಾಗಿದ್ದರು.

ಕೃತಿಗಳು ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  • ನಾಟ್ಯ ರಾಣಿ ಶಾಂತಲಾ

ನಾಟಕಗಳು ಬದಲಾಯಿಸಿ

  • ರುಕ್ಮಿಣಿ ಸ್ವಯಂವರ
  • ಬೇಡರ ಕಣ್ಣಪ್ಪ
  • ಅಮರ ಅಭಿಮನ್ಯು
  • ಸುಧನ್ವ ಕಾಳಗ
  • ಏಕಲವ್ಯ
  • ಲವಕುಶ
  • ಹತಭಾಗ್ಯ ಕರ್ಣ
  • ಸೀತಾಪರಿತ್ಯಾಗ
  • ವಿಜಯ ಕೇಸರಿ ಎಚ್ಚಮ್ಮ
  • ಭಕ್ತ ಪ್ರಹ್ಲಾದ
  • ಶರವು ಮಹಾತ್ಮೆ
  • ರಕ್ತ ಸಂಬಂಧ
  • ನಾಟ್ಯ ರಾಣಿ ಶಾಂತಲಾ
  • ವೀರ ಬಭ್ರುವಾಹನ
  • ಸತ್ಯ ಪ್ರೇಮಿ ಹರಿಶ್ಚಂದ್ರ
  • ವೀರಪಾಂಡ್ಯ ಕಟ್ಟಬೊಮ್ಮನ್
  • ಹತಭಾಗ್ಯೆ ಕುಂತಿ
  • ವಿಕ್ಷಿಪ್ತ

ಶಾರದಾ ಶಾಸ್ತ್ರಿ ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ಗೌರವ ಮಾಸಾಶನವನ್ನು ನೀಡಿ ಗೌರವಿಸುತ್ತದೆ. ಇವರ ಮೊದಲ ಕೃತಿ ನಾಟ್ಯ ರಾಣಿ ಶಾಂತಲಾ ಸಂದೀಪ ಸಾಹಿತ್ಯ ಮಾಲೆಯ ೩೫ನೇ ಪುಸ್ತಕವಾಗಿ ಮುದ್ರಣಗೊಂಡಿದೆ.