ಸದಸ್ಯ:Sushmitha gowda 1995/ನನ್ನ ಪ್ರಯೋಗಪುಟ

ಕಕ್ಕೆ ಬದಲಾಯಿಸಿ

ಸಂ; ಅರಗ್ವಧ

ಹಿಂ;ಅಮಲತಾಸ್

ಮ;ಬಹವಾ

ಗು: ಗರಮಾಲ

ತೆ; ರೇಲಚೆಟ್ಟು

ತ:ಕೊರೈಕಾಯ್,ಕೊಂಡೆ

ವರ್ಣನೆ ಬದಲಾಯಿಸಿ

ಶುಭ ಶಕುನವುಳ್ಳ ಸುಂದರವಾದ ಮಧ್ಯಮ ಗಾತ್ರಾದ ಮರ 5ರಿಂದ 8ಮೀ. ಉದ್ದ ಬೆಳೆಯುತ್ತಾದೆ ಕಾಂಡವು ನುಣುಪು ಮತ್ತು ನೇರವಾಗಿರುವುದು ಕವಲುಗಳು ಸುತ್ತಾ ಹರಡಿರುವುವು ಮರದ ತೊಗಟೆ ತಿಳಿ ಹಸಿರು ವರ್ಣದ್ದಾಗೊರುವುದು. ಬಲಿತ ಮರದಲ್ಲಿ ನಸು ಕಂದು ಬಣ್ಣವಿರುವುದು.ಎಲೆಗಳಲ್ಲ ಸಂಪೂರ್ಣವಾಗಿ ಉದುರಿ ಮೈ ತುಂಬಾ ಹಳದಿ ಹೂಗಳು ಬಿಡುವುವು ಹೂ ಮಾಲೆಯಂತೆ ಶೋಭಿಸುವುದು. ಮತ್ತು ಹಳದಿ ಮುಡಿಯುಟ್ಟು ಅಪ್ಸರೆಯಂತಿರಿವುದು,ಎಲೆಗಳು ಎದುರು ಬದಿರಾಗಿರುವುದು. ನೇರಳೆ ಮರದ ಎಲೆಗಳನ್ನು ಹೋಲುವುವು.ಕಾಯಿ ಉದ್ದವಾಗಿ ಬಿಡುವುದು ಕಾಯಿಯ ಒಳಗಡೆ ಮಾಸು ಕೆಂಪು ಅಥವಾ ಕಪ್ಪು ಬಣ್ಣದ ಬೀಜಗಳಿರುವುದು ಈ ಬೀಜಗಳು ತೀರ ಸಣ್ಣದಾದ ತೊಟ್ಟುಗಳಿಂದ ಕಾಯಿಗೆ ಅಂಟಿ ಕೊಂಡಿರುವುವು. ಫ್ರೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಹೂ ಕಾಯಿ ಬಿಡುವುದು

ಕಕ್ಕೆ ಮೂಲಿಕೆಯಿಂದಾಗುವ ಉಪಯೋಗಗಳು ಬದಲಾಯಿಸಿ

ಬಹುಮೂತ್ರ ಮತ್ತು ಬಾಯಾರಿಕೆ ಬದಲಾಯಿಸಿ

ಕಕ್ಕೆ ಗಿಡದ ಎಲೆ .ತಿರುಳು ಕಾಯಿ ಹೂವು ಬೇರು ಸಮತೂಕ ತಂದು ನೆರಳಿನಲ್ಲಿ ಒಣಗಿಸಿ ನಯವಾಗಿ ಚೂರ್ಣಿಸುವುದು.2ಗ್ರಾಂ ಈ ಚೂರ್ಣಕ್ಕೆ 2ಗ್ರಾಂ ನೆಲ್ಲಿಚೆಟ್ಟಿನ ಚೂರ್ಣ. 2 1\2 ಗ್ರಾಂ ಅರಿಶಿಣದ ಚೂರ್ಣ ಸೇರಿಸಿ ಚೂರ್ಣ ಸೇರಿಸಿ ಚೂರ್ಣ ಮಾಡುವುದು 2ಗ್ರಾಂ ಚೂರ್ಣವನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕದಡಿ ಕುಡಿಸುವುದು.ಹೀಗೆ5-7ದಿವಸಗಳ ಮುಂದುವರಿಸಬೇಕು.

ವರೇಚಕವಾಗಿ ಮತ್ತು ಕೆಮ್ಮಿಗೆ ಬದಲಾಯಿಸಿ

ಸುಮರು 5ಗ್ರಾಂ ಕಕ್ಕೆ ಗಿಡದ ಅಂಟನ್ನು ತಂದು ಎರಡು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕುವುದು ಬೆಳಿಗ್ಗೆ ಈ ಅಂಟನ್ನು ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ ಕೊಳ್ಳುವುದು ,5ಗ್ರಾಂ ಕೆಂಪು ಕಲ್ಲು ಸಕ್ಕರೆ ಪುದಿ ಸೇರಿಸಿ ಸೇವಿಸುವುದು ಇದರಿಂದ ಒಂದೆರಡು ಸುಖ ಬೇದಿ ಆಗಿ .ಅಜೀರ್ಣ ಹೊಟ್ಟೆಯುಬ್ಬರ ಮಲಬದ್ದತೆ ಪರಿಹಾರವಾಗುತ್ತಾದೆ.

ಗಂಟಲು ಬೇನೆ ಬದಲಾಯಿಸಿ

ಒಳಗಡೆ ಗಂಟಲು ಊದಿಕೊಂಡಿರುವುದು ಮತ್ತು ನುಂಗಲು ಕಷ್ಟವಾಗಿರುವುದು.10ಗ್ರಾಂ ಕಕ್ಕೆ ಅಂಟನ್ನು ಒಂದು ಲೋಟ ನೀರಿಗೆ ಹಾಕಿ ಕಷಾಯ ಮಾಡಿ ತಣ್ಣಗಾದ ಮೇಲೆ ಬಾಯಿ ಮುಕ್ಕಳಿಸುವುದು ಪ್ರತಿ ದಿನ 3ರಿಂದ 4ಬಾರೀ ಅಥಾವ ಅರ್ಧ ಲೀಟರ್ ಹಸುವಿನ ಹಾಲಿನಲ್ಲಿ 10ಗ್ರಾಂ ಕಕ್ಕೆ ಅಂಟನ್ನು ಹಾಕಿ ಚೆನ್ನಾಗಿ ಮರಳಿಸುವುದು. ಬಿಸಿಯಾದಾಗ ಬರುವ ಆವಿಯನ್ನು ಬಾಯಲ್ಲಿ ಸ್ವಲ್ಪ ಸೇದಿ ಗಂಟಲಿಗೆ ತಾಗಿಸುವುದು ಬಿಸಿಯಾದಾಗ ಬರುವ ಆವಿಯನ್ನು ಬಾಯಲ್ಲಿ ಸ್ವಲ್ಪ ಸೇದಿ ಗಂಟಲಿನಲ್ಲಿ ತಾಗಿಸುವುದು.ಕಂಟಕಾರಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ ರಸವನ್ನು ಗಂಟಲಿನ ಮೇಲೆ ಮಂದವಾಗಿ ಲೇಪಿಸುವುದು

ಕೆಮ್ಮಿನಲ್ಲಿ ಬದಲಾಯಿಸಿ

ಕಕ್ಕೆ ಕಾಯಿಯನ್ನು ಚೆನ್ನಾಗಿ ಒಣಗಿಸಿ ಸುಟ್ಟು ಬೂದಿ ಮಾಡುವುದು ಕಾಲು ಟೀ ಚಮಚ ಈ ಬೂದಿಯೊಂದಿಗೆ ಒಂದು ಚಿಟಿಕೆ ಉಪ್ಪಿನ ಪುಡಿ ಮತ್ತು ಒಂದು ಟೀ ಚಮಚ ಜೇನು ಕಲಸಿ ನೆಕ್ಕುವುದು. ದಿವಸಕ್ಕೆ 2 ರಿಂದ 3 ಬಾರಿ. ಮಲಬದ್ಧತೆ. 5ಗ್ರಾಂ ಕಕ್ಕೆ ಕಾಯಿಯ ಒಳಗಡೆಯ ತಿರುಳನ್ನು ರಾತ್ರಿ ಶುದ್ಧವಾದ ಒಂದು ಬಟ್ಟಲು ನೀರಿನಲ್ಲಿ ನೆನೆಹಾಕುವುದು. ಬೆಳಗ್ಗೆ ಶೋಧಿಸಿದ ಈ ನೀರಿಗೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಒಂದೆರಡು ಬೇದಿ ಆಗಿ ಪರಿಸ್ಥಿತಿ ಸುಧಾರಿಸುವುದು. ಹೀಗೆ ಪರಿಹಾರ ಸಿಗುವವರೆಗೂ ಸೇವಿಸುವುದು.

ರಕ್ತ ಪಿತ್ತಕ್ಕೆ ಬದಲಾಯಿಸಿ

ಕಕ್ಕೆ ಅಂಟು ಮತ್ತು ನೆಲಿ ಚೆಟ್ಟು ಚೂರ್ಣವನ್ನು ಸಮಭಾಗ ಚೂರ್ಣಿಸಿ 10ಗ್ರಾಂ ಚೂರ್ಣವನ್ನು ಕಾಲು ಲೀಟರು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಅಷ್ಟಾಂಶ ಕಷಾಯ ಮಾಡುವುದು. ಒಂದು ಟೀ ಚಮಚ ಕಷಾಯಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಪುಡಿ ಮತ್ತು ಜೇನು ಸೇರಿಸಿ ಸೇವಿಸುವುದು. ಹೀಗೆ 7 ದಿವಸ.

ಕುಷ್ಟರೋಗಕ್ಕೆ ಬದಲಾಯಿಸಿ

ಕಕ್ಕೆಯ ಅಂಟು, ಆಡುಸೋಗೆ, ಅಮೃತಬಳ್ಳಿ ಸಮತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಚತುಷ್ಟಾಂಶ ಕಷಾಯ ಮಾಡುವುದು. ಕಾಲು ಬಟ್ಟಲು ಕಷಾಯಕ್ಕೆ ಸ್ವಲ್ಪ ಹರಳೆಣ್ಣೆ ಸೇರಿಇ ಸೇವಿಸಲು ಕೊಡುವುದು. ಕೆಲವು ವಾರಗಳು ಚಿಕಿತ್ಸೆಯನ್ನು ಮುಂದುವರಿಸುವುದು.

ಕೊರಳು ಬಾವಿನಲ್ಲಿ ಬದಲಾಯಿಸಿ

ಅಕ್ಕಿ ಕ್ಕಚ್ಚಿನಲ್ಲಿ ಬಲಿತ ಕಕ್ಕೆ ಗಿಡದ ಬೇರನ್ನು ತೇದು ಕೊರಳಬವಿಗೆ ಮಂದವಾಗಿ ಲೇಪಿಸುವುದು.