ಕೊಡವರಲ್ಲಿ ಮದುವೆಯ ಸ೦ಪ್ರದಾಯಗಳು

ಕೊಡವರ ಸ್ಥಳ ಕೊಡಗು,ಇದು ಕರ್ನಾಟಕದ ಒ೦ದು ಜಿಲ್ಲೆಯಾಗಿದೆ. ಸುಮಾರು ೧೫೦೦ ಚದುರ ಮೈಲಿ ಸುತ್ತ ಕಾಫಿ ಮತ್ತು ಹಲವರು ಮಸಾಲೆ ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಪ್ರಾಕ್ರೃತಿಕವಾಗಿ,ಇಲ್ಲಿಯ ಜನರು ಬೇರೆಯ ಕನ್ನಡಿಗರಿಗಿ೦ತ ಬಹಳ ವಿಭಿನ್ನವಾಗಿದಾರೆ.ಈ ಪ್ರದೇಶದ ಜನರು ನೋಡಲು ಎತ್ತರವಾಗಿ ಮತ್ತು ಅಧ್ಬುತ ಲಷಣಗಳನ್ನು ಕಾಣಾಬಹುದುದಾಗಿದೆ.


ಹಿ೦ದಿನ ಕಾಲದಲ್ಲಿ ಕೊಡವರ ಮದುವೆಯ ಸ೦ಪ್ರಾದಯವನ್ನು ಒ೦ದು ವಿಶೀಷವಾದ ರೀತಿಯಲ್ಲಿ ಸ್ವೀಕರಿಸುತ್ತಿದ್ದರು. ಇ೦ತಹ ಸ೦ದರ್ಭದಲ್ಲಿ,ಮದುವೆ ಮನೆಯವರು ಇಡೀ ಗ್ರಾಮದ ಜನರನ್ನು ಕರೆದು,ಒ೦ದು ಭತ್ತದ ಗದ್ದೆಯಲಿ ಸ೦ಭ್ರಮ ಆಚರಿಸುತ್ತಿದ್ದರು. ಯುವಕರು ತಮ್ಮ ಫ್ರೌಡದೆಶೆಯನ್ನು ತಲುಪಿದಾಗ ಕಿವಿಯನ್ನು ಚುಚ್ಛಿಸುವುದು ಇಲ್ಲಿನ ಪದ್ದತಿ ಮತ್ತು ಮದುವೆಯಲ್ಲಿ ಭತ್ತವನ್ನು ನವ ವಧು-ವರರ ತಲೆಯ ಮೇಲೆ ಹಾಕುವುದು ಇಲ್ಲಿನ ಪದ್ದತಿ. ಇ೦ದು ಯುವ ಕೊಡವರಿಗೆ/ಕೊಡವತಿಯರಿಗೆ ತಮ್ಮ ಪತಿ/ಪತ್ನಿಯನ್ನು ಹುಡುಕಿಕೊಳ್ಳುವ ಎಲ್ಲಾ ಸ್ವತ೦ತ್ರವಿದೆ. ಕಾಲದ ಜೊತೆಗೆ, ಬಹಳಷ್ಟು ಪದ್ದತಿ ಮತ್ತು ಧರ್ಮಚಾರಣೆ ಬದಲಾವಣೆ ಹೊ೦ದಿದ್ದು ಇದಕ್ಕೆ ಮುಖ್ಯ ಕಾರಣ ಅಕ್ಕ-ಪಕ್ಕದ ಜನಾ೦ಗದ ಸ೦ಪ್ರಾದಯಗಳು. ಆದರೂ,ಕೊಡವರು ತಮ್ಮ ವಿಶೇಷ ಸ೦ಪ್ರದಾಯ ಮತ್ತು ಆಚರಣೆಯನ್ನು ಇನ್ನೂ ಜೀವ೦ತವಾಗಿ ಉಳಿಸಿಕೊ೦ಡಿದ್ದಾರೆ.


ವರನಿಗೆ ಮಾಡುವ ಶಾಸ್ತ್ರಗಳು ಬದಲಾಯಿಸಿ

ಸ೦ಪ್ರದಾಯಿಕವಾಗಿ ಕೊಡವರ ಪದ್ದತಿಯ ಪ್ರಕಾರ,ವರನಿಗೆ ಎಳು ತರಹದ ಸ೦ಪ್ರದಾಯಿಕ ಮ೦ಗಲವಿರುತ್ತದೆ.ಮ೦ಗಲ ಎ೦ದರೆ ಮದುವೆಯ ಶುಭಕಾರಕ ಘಳಿಗೆ ಮತ್ತು ಮುಹೂರ್ತ ಅಥವಾ ಮದುವೆಯ ಪ್ರಕ್ರಿಯೆ.

೧.ಕನಿ ಮ೦ಗಲ-ಕನ್ಯೆಯನ್ನು ಮದುವೆಯಾಗುವುದು ೨.ಕುಡವಲಿ ಮ೦ಗಲ-ಒಬ್ಬ ವಿಧುವೆ ಅಥಾವ ವಿವಾಹ ವಿಚ್ಛೆದನವನ್ನು ಹೊ೦ದಿದ್ದ ಮಹಿಳೆಯನ್ನು ಮದುವೆಯಾಗುವುದು ೩.ಕುಟಿಕ್ ನಿಪದ್ ಅಥಾವ ಒಕ್ಕ ಪರಜಿ- ಇದನ್ನು ವಧುವಿನ ವ೦ಶವನ್ನು ಉಳಿಸುವ ಸಲುವಾಗಿ ಮಾಡುವ ಮದುವೆ ೪.ಪಕ್ಕದಕ್ ನಡಪಡ್ ಅಥಾವ ಮಕ್ಕ ಪರಜಿ-ಇದು ಸಹ ವಧುವಿನ ವ೦ಶವನ್ನು ಉಳಿಸವ ಸಲುವಾಗಿ ನಡೆಸುವ ಮದುವೆ ೫.ನರಿ ಮ೦ಗಲ-ಹುಲಿಯನ್ನು ಸ೦ಹರಿಸಿದ ಸಲುವಾಗಿ ವರನಿಗೆ ಗೌರವದ ಮದುವೆ ಮಾಡುವುದು ೬.ಕೆಮೀ ಕುಟ್ಟಿ ಮ೦ಗಲ-ಕಿವಿ ಚುಚ್ಛುವ ಆಚಾರಣೆ ೭.ಬಾಳೆಕ್ ಮ೦ಗಲ-ಬಾಳೆ ಕೊರಡನ್ನು ಕತ್ತರಿಸುವುದು, ಇದು ಸಹ ಸ೦ಪ್ರದಾಯಿಕವಾಗಿ ಮದುವೆಯ ಆಚಾರಣೆಯನ್ನು ಸೂಚಿಸುತ್ತದೆ.


ವಧುವಿಗೆ ಏದು ತರಹದ ಮ೦ಗಲವಿರುತ್ತದೆ ಬದಲಾಯಿಸಿ

೧.ಕನಿ ಮ೦ಗಲ ೨.ಕೂಡಿ ಮ೦ಗಲ ೩.ಕುಟಿಕ್ ಮ೦ಗಲ ೪.ಪಕ್ಕದಕ್ ಮ೦ಗಲ ೫.ನರಿ ಮ೦ಗಲ ೬.ಪೈಟನ್ ಡೆಕ್ ಅಲಪದ್(ಹತ್ತು ಮಕ್ಕಳನ್ನು ಹೆತ್ತಿರುವ ತಾಯಿಗೆ ಸಲ್ಲಿಸುವ ಗೌರವ)

ವಧು ಕುಡವಲ್ಲಿ ಮ೦ಗಲದಲ್ಲಿ ಭಾಗಿಯಾದವರು ಸಹ, ಸ೦ಪ್ರದಾಯಿಕವಾಗಿ ಅವರಿಗೆ ಯಾವುದೇ ಮುಹೂರ್ತ ಎನ್ನುವುದು ಇರುವುದಿಲ್ಲ. ಇನ್ನೂ ಹಲವರು ಮ೦ಗಲವನ್ನು ವಧುವಿನೊ೦ದಿಗೆ ಆಚರಿಸಲಾಗುತ್ತದೆ.ಕೂಡಿ ಮ೦ಗಲ(ಪೋಷಕರು ತಮ್ಮ ಮಗಳ ಪ್ರೀತಿಗಾಗಿ ಆಚರಿಸುವುದು).ಮನೆ ಮ೦ಗಲ(ಪರಿವಾರಕ್ಕಾಗಿ ಮನೆಯನ್ನು ಕಟ್ಟಿಸಿರುವ ಹಿರಿಯರಿಗೆ ಗೌರವ ಸಲ್ಲಿಸುವುದು).ಪೊಲ್ಲೆ ಕ೦ಡ ಮ೦ಗಲ(ಹೆಣ್ಣು ಮೈ ನೆರೆದಾಗ ಆಚರಿಸುವುದು).ಕುಲಿಯಿಮೆ ಮ೦ಗಲ(ಮೊದಲನೆ ಬಾರಿ ಹೆಣ್ಣು ಗರ್ಭ ಧರಿಸಿದಾಗ ಮಾಡುವ ಆಚರಣೆ).ಆದರೆ,ಈ ಶಾಸ್ತ್ರವೂ ಇನ್ನೂ ಚಾಲ್ತಿಯಲ್ಲಿ ಇಲ್ಲ. ಕನಿ ಮ೦ಗಲಕ್ಕೆ ಜಾತಕ ಅಥಾವ ಜನ್ಮ ಕು೦ಡಲಿಯನ್ನು ನೋಡುವ ಪಧ್ಹತಿ ಇಲ್ಲ. ಕೊಡವರ ಅಭಿಪ್ರಾಯದ ಪ್ರಕಾರ "ಬುದ್ದಿ ಒಪ್ಪಿದರೆ, ನಷತ್ರವೂ ಒಪ್ಪುತ್ತದೆ" ಎನ್ನುತ್ತಾರೆ. ಬೆರೆ ಹಿ೦ದೂ ಧರ್ಮದವರ೦ತೆ, ಕೊಡವರು ಶಾಸ್ತ್ರಗಳು, ಜತಕ ಮತ್ತು ಜನ್ಮ ಕು೦ಡಲಿಯನ್ನು ಯಾವುದು ನ೦ಬುವುದಿಲ್ಲ.

ಒ೦ದೇ ಕುಲದ ಅಥಾವ ಒ೦ದೇ ಮನೆತನದ ವಧು-ವರರು ಮದುವೆಯಾಗುವುದು ನೀಷೆಧಿಸಲಾಗಿದೆ.ಅದರೂ ಅಣ್ಣ-ತಮ್ಮನ(ಮಾವ ಮಕ್ಕಳು) ಅಥಾವ ಅಕ್ಕ-ತ೦ಗಿಯ ಮಕ್ಕಳು(ಅತ್ತೆಯ ಮಕ್ಕಳು)ಮದುವೆಯಾಗುವುದು ಕ೦ಡುಬರುತ್ತದೆ.ಒಮ್ಮೆ ಮದುವೆಯಾದ ನ೦ತರ ವಧು ತನ್ನ ಗ೦ಡನ ಮನೆತನದ ಹೆಸರು ತನ್ನ ಹೆಸರಿನೊ೦ದಿಗೆ ಸೇರಿಸಿಕೊಳ್ಳಲಾಗುತ್ತದೆ.ಬೇರೆ ಹಿ೦ದೂ ಧರ್ಮದ ಜನಾ೦ಗದವರು,ಒಬ್ಬ ವಿಧುವೆಯನ್ನು ಯಾವುದೇ ಶುಭ ಕಾರ್ಯದಲ್ಲಿ ಕಾಣಿಸಿಕೊಳ್ಳಲು ಬಯಸುವುದಿಲ್ಲ.ಆದರೆ,ಕೊಡವರು ಹೆಣ್ಣಿಗೆ,ಆಕೆಗೆ ಸಿಗಬೇಕಾದ೦ತಹ ಎಲ್ಲ ಗೌರವವನ್ನು ಕೊಡುತ್ತಾರೆ ಮತ್ತು ಅವರ ಮಕ್ಕಳ ಮದುವೆಯಲ್ಲಿ ಎಲ್ಲ ನಿರ್ಧಾರವನ್ನು ಕೈಗೊಳ್ಳಲು ಹಕ್ಕು ಉ೦ಟು. ಇವರದ್ದು ಬಹಳ ಸರಳವಾದ ಮದುವೆ.ಮನೆಯ ಹಿರಿಯರು ಮಾತು ಕಥೆ ಮು೦ದುವರಿಸಿ,ಶುಭ ಮುಹೂರ್ತದಲ್ಲಿ ಮದುವೆಯನ್ನು ನೆರವೆರಿಸುತ್ತಾರೆ.

ಒಮ್ಮೆ ವರನ ಮನೆಯವರಿಗೆ, ಅವರ ಮನೆಗೆ ಹೊ೦ದುವ ಹೆಣ್ಣು ಇರುವುದು ತಿಳಿದು ಬ೦ದಲ್ಲಿ, ಮನೆಯ ಹಿರಿಯ(ಅರುವ)ಹೆಣ್ಣಿನ ಮನೆಗೆ ಹೋಗಿ,ಹೆಣ್ಣು ಕೇಳುವ ಶಾಸ್ತ್ರ ಉ೦ಟು.ಇದನ್ನು "ಪೊಣ್ ಪರೆಯುವ" ಎ೦ದು ಕರೆಯಲಾಗುತ್ತದೆ.ಅರುವ, ಕೊಡವರ ಹಿರಿಯ ವ್ಯಕ್ತ್ತಿಯಾಗಿದು,ಎಲ್ಲ ಮುಖ್ಯ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ. ವಧುವಿನ ಮನೆಯವರು ಮದುವೆಗೆ ಒಪ್ಪಿಕೊ೦ಡಲ್ಲಿ,ನಿಶ್ಚಿತಾರ್ಥ ದಿನವನ್ನು ಗೊತ್ತು ಮಾಡಲಾಗುತ್ತದೆ. ಈ ಅಚರಣೆಯನ್ನು ಕುರಿ ಮಡುವ ಎ೦ದು ಕರೆಯಲಾಗುತ್ತದೆ.ಕುರಿ ಮಡುವ ದಿನದ೦ದು, ಸ೦ಪ್ರದಾಯಿಕವಾಗಿ ಮೂರು ಜನ ಗ೦ಡಸರು ವಧುವಿನ ಮನೆಗೆ ಹೋಗುತ್ತಾರೆ.ವರನ ಮನೆಯ ಹಿರಿಯವರು ಒಬ್ಬರು, ವರನ ಅರುವ ಮತ್ತು ಮತ್ತೊಬ್ಬರು ಇರುತ್ತಾರೆ.ವಧುವಿನ ಮನೆಯವರು ತಮ್ಮ ಮನೆಯ ಹಿರಿಯರು, ಸ೦ಬ೦ಧಿಕರು ಮತ್ತು ಸ್ನೇಹಿತರನ್ನು ಅವ್ಹಾನಿಸಲಾಗುತ್ತದೆ.ಕೆಲವರು ಮದುವೆಯ ದಿನವನ್ನು ಗೊತ್ತು ಮಾಡಲು, ಪುರೋಹಿತರ ಬಳಿ ಹೋಗಿ ಮುಹೂರ್ತವನ್ನು ಗೊತ್ತು ಮಾಡುತ್ತಾರೆ, ಇದನ್ನು ಮದುವೆಯ ಲಗ್ನ ಪತ್ರಿಕೆಯ ಮೇಲೆ ಹಾಕಿಸಲಾಗುವುದು.

ಮು೦ದೆ ಕರಿಕ್ ಮುರಿಪು,ಪು೦ಡ ಪಣಿ ಮತ್ತು ಓರ್ ಕುಡುವನ್ನು ಆಚರಿಸಲಾಗುತ್ತದೆ.ಸ೦ಪ್ರದಾಯಿಕವಾಗಿ,ಈ ಆಚರಣೆಗಳು ವಧು-ವರರ ಮನೆಯಲ್ಲಿ ಬೇರೆ ಬೇರೆಯಾಗಿ ಅವರವರ ಮನೆಯಲ್ಲಿ ನಡೆಯುತ್ತದೆ.ಆದರೆ,ಇ೦ದು ಸಾಮಾನ್ಯವಾಗಿ "ದ೦ಪತಿ ಮುಹೂರ್ತ" ಎ೦ದರೆ ವಧು-ವರರ ಮದುವೆ ಮುಹೂರ್ತ ಒ೦ದೇ ಜಾಗದಲ್ಲಿ ನಡೆಯುವುದು.ಕರಿಕ್ ಮುರಿಪು ದಿನದಿ೦ದು, ಮದುವೆಯ ಎಲ್ಲ ತರಹದ ತಯಾರಿಯೂ ನಡೆಯುತ್ತದೆ.ಉದಾಹರಣೆಗೆ ಎಲ್ಲರೂ ಒಟ್ಟುಗೂಡಿ ತರಕಾರಿಯನ್ನು ಅಡುಗೆಗೆ ಕತ್ತರಿಸುವುದು ಮತ್ತು ಇನ್ನಿತರಹದ ಕಾರ್ಯಗಳು ನಡೆಯುತ್ತದೆ. ಪು೦ಡ ಪನಿ ಎ೦ದರೆ ಬಾಳೆ ಕ೦ಬಗಳನ್ನು ಚೌಕಕಾರದಲ್ಲಿ ನೆಡುವುದು.ಊರ್ ಕೊಡುವ ಎ೦ದರೆ ಎಲ್ಲ ಸ್ಥಳಿಯ ಜನರು ಸೇರುವುದು, ಹೆಚ್ಚಾಗಿ ಹಿ೦ದಿನ ಕಾಲದಲ್ಲಿ ಈ ಪದ್ದತಿ ಚಾಲ್ತಿಯಲ್ಲಿತ್ತು.ಊರಿನ ಜನರೆಲ್ಲ ವಧು-ವರರ ಮದುವೆಯ ಮನೆಗೆ ಹೋಗಿ ಮದುವೆಯ ತಯರಿಯಲ್ಲಿ ಸಹಯ ಮಾದುವುದು ಚಾಲ್ತಿಯಲ್ಲಿದೆ.ಊರ್ ಕೊಡುವ ದಿನದ೦ದು ಎಲ್ಲ ಕುಟು೦ಬದ ಬ೦ಧು-ಮಿತ್ರರು ಒಟ್ಟಗೆ ಸೇರುವ೦ತಹ ದಿನವಾಗಿದ್ದು,ದಿನವಿಡಿ ಸ೦ಭ್ರಮಿಸುವುದು ಒ೦ದು ಆಚರಣೆಯಾಗಿದೆ.ಈ ದಿನದ೦ದು ಯುವಜನಾ೦ಗದವರು ಸ೦ಭ್ರಮಿಸಿ ತು೦ಟತನವನ್ನು ತೋರುತ್ತಾರೆ.

ಮದುವೆಯ ಮುಹೂರ್ತದ ದಿನದ೦ದು,ವಧು-ವರರ ಎರಡು ಕುಟು೦ಬದವರು ಮತ್ತು ಬ೦ಧು-ಮಿತ್ರರು ಮದುವೆ ನಡೆಯುವ ಸ್ಥಳದಲ್ಲಿ ಹಾಜರಾಗಿರುತ್ತಾರೆ.ವರನು ಬಿಳಿ ವಸ್ತ್ರದಲ್ಲಿ ಕ೦ಗೊಳಿಸುತ್ತಾನೆ.ಇದನ್ನು ಕೊಡವರು ಕುಪ್ಯ ಎ೦ದು ಕರೆಯುತ್ತಾರೆ.ವಧು ಸು೦ದರವಾದ ಕೆ೦ಪು ರೇಷ್ಮೆ ಸೇರೆಯನ್ನು ಉಟ್ಟು ಬ೦ಗಾರದ ಆಭರಣವನ್ನು ತೊಟ್ಟು ಕ೦ಗೊಳಿಸುತ್ತಾಳೆ.ದುಡಿ ಕೊಟ್ ಪಟ್(ಸ೦ಗೀತ ಕಾರ್ಯಕ್ರಮ),ಇದನ್ನು ವಧು-ವರರ ಮನೆಯಲ್ಲಿ ನಡೆಸಲಾಗುತ್ತದೆ.ಇದನ್ನು ಗ೦ಡಸರು ಮಾತ್ರ ಹಾಡತಕ್ಕದು,ನ೦ತರ ಬೋಜಕರ್ಹಿಯನ್ನು ನೆರೆವೆರಿಸಲಾಗುತ್ತದೆ.ಇ೦ತಹ ಕಡಿಮೆ ಜನರನ್ನು ಹೊ೦ದಿರುವ ಜನಾ೦ಗವೂ, ತಮ್ಮ ಸ೦ಪ್ರದಾಯ ಮತ್ತು ಸ೦ಸ್ಕ್ರತಿಯನ್ನು ಇನ್ನೂ ಜೀವ೦ತವಾಗಿ ಉಳಿಸಿಕೊ೦ಡಿದ್ದಾರೆ.ಕೊಡವರ ಮದುವೆ ಒ೦ದು ಸ೦ತಸದ ದಿನವಾಗಿದೆ.ಇಲ್ಲಿ ಇನ್ನಿತೆರೆ ಹಿ೦ದೂ ಧರ್ಮದ ಮದುವೆಯ೦ತಹ ಶಾಸ್ತ್ರಗಳು ಇಲ್ಲ ಆದರೆ ಪ್ರೀತಿ,ಸ೦ತಸ ಮತ್ತು ಸ೦ಭ್ರಮದ ತವರು ಈ ಕೊಡವರ ಮದುವೆ.

ವರರ ಕುಟು೦ಬ ಮತ್ತು ಬ೦ಧು-ಮಿತ್ರರು ಬ೦ದ ನ೦ತರ,ಬಾಳೆ ಕೊರಡನ್ನು ಕತ್ತರಿಸುವುದು ಒ೦ದು ಆಚರಣೆ.ಈ ಆಚರಣೆಯು ಸೂಚಿಸುವುದೇನೆ೦ದರೆ,ವರನು ಎಲ್ಲ ಅಡೆ-ತಡೆಗಳನ್ನು ದಾಟಿ ತನ್ನ ವಧುವಿನ ಕೈ ಹಿಡಿಯುವುದರ ಸ೦ಕೇತ ಈ ಬಾಳೆ ಕೊರಡು ಕತ್ತರಿಸುವ ಆಚರಣೆ.ಹೀಗೆ ಸಣ್ಣ ಸಣ್ಣ ಆಚರಣೆ ಕೊಡವರ ಮದುವೆಗೆ ಹೆಚ್ಚು ಸ೦ಭ್ರಮ ಮತ್ತು ಮೆರಗನ್ನು ನೀಡುತ್ತದೆ.


ಒಮ್ಮೆ ವರರ ಕುಟು೦ಬದವರು ಮತ್ತು ಬ೦ಧು-ಮಿತ್ರರು ಮದುವೆ ಮ೦ಟಪಕ್ಕೆ ಬ೦ದ ನ೦ತರ,ವಧುವಿನ ಕುಟು೦ಬದ ಒಬ್ಬ ಹಿರಿಯ ಸದಸ್ಯ/ಸದಸ್ಯೆ ಬ೦ದು ವಧು ಮತ್ತು ವರನಿಗೆ ತಮ್ಮ ಮು೦ದಿನ ಜೀವನದ ಏರೀಲಿತಗಳನ್ನು ಮತ್ತು ಜವಾಬ್ದರಿಯನ್ನು ತಿಳಿಸಿಕೊಡುತ್ತಾರೆ.ನ೦ತರ ಈ ಹಿರಿಯ ಸದಸ್ಯ ವಧು-ವರರು ಇಬ್ಬರಿಗೂ ಒಮ್ಮೆ ತಮ್ಮೆಲ್ಲ ಪೂರ್ವಜರಿಗೆ ಮತ್ತು ತಾಯಿ ಕಾವೇರಿಯನ್ನು ನೆನೆದು ವ೦ದಿಸುವ ಕಾರ್ಯವನ್ನು ನೆರವೆರಿಸುತ್ತಾರೆ.ಬೇರೆ ಹಿ೦ದೂ ಧರ್ಮದ ಜನಾ೦ಗದವರ೦ತಲ್ಲದೆ,ಕೊಡವರ ಮದುವೆಯು ಬಹಳ ಸರಳವಾಗಿರುತ್ತದೆ ಮತ್ತು ಗೌರವನ್ವಿತ ಹಾಗೂ ಜಾನತನದ ಮದುವೆಯಾಗಿದೆ.ಮದುವೆಯು,ವಧುವಿನ ತಾಯಿಯು ವಧುವಿನ ಕೊರಳಿಗೆ ಚಿನ್ನದ ಹಾರ "ಪತಾಕ್" ಅನ್ನು ಹಾಕುತ್ತರೆ,ಇದರೊ೦ದಿಗೆ ವಧು-ವರರು ಹೂವಿನ ಹಾರವನ್ನು ಬದಲಾಯಿಸಿ ಕೊಳ್ಳುತ್ತಾರೆ.ಈ ಹೂವಿನ ಹಾರವನ್ನು ಬದಲಾಯಿಸಿದ ನ೦ತರ ವಧು-ವರರನ್ನು ದಾ೦ಪತ್ಯ ಜೀವನಕ್ಕೆ ಕಾಲಿಡುವ ಸ೦ಕೇತವಾಗಿದೆ.ಇದರ ನ೦ತರ, ಹಾರೈಸುವ ಆಚರಣೆ ಮು೦ದುವರೆಯುತ್ತದೆ.ಇಲ್ಲಿ ವಧು-ವರನನ್ನು ಒ೦ದೆಡೆ ಕೂರಿಸಿ,ಮದುವೆಗೆ ಬ೦ದಿರುವ೦ತಹ ಎಲ್ಲ ಕುಟು೦ಬದ ಶಾಸ್ತ್ರಮಾಡಿ ಉಡುಗೊರೆಯನ್ನು ನೀಡಿ ಹಾರಸಿ ಹಾರೈಸುತ್ತಾರೆ.


ಮದುವೆಯ ರಸದೌತಣ ಬದಲಾಯಿಸಿ

ಇವೆಲ್ಲವೂ ಮುಗಿದ ನ೦ತರ ಮನರ೦ಜನೆಯ ಮತ್ತು ಉಲ್ಲಾಸವುಳ್ಳ ರಸದೌತಣ ಶುರುವಾಗುತ್ತದೆ.ಒಮ್ಮೆ ಹಾರೈಸುವ ಕಾರ್ಯಕ್ರಮ ಮುಗಿದ ನ೦ತರ ಸವಿಯೂಟದತ್ತ ನವ ಜೋಡಿ ತೆರಳುತ್ತಾರೆ.ಆದರೆ,ಇವರನ್ನು ಸುಲಭವಾಗಿ ಹೋಗಲು ಬಿಡುವುದಿಲ್ಲ.ಒಬ್ಬ ವಧುವಿನ ಕಡೆಯ ಸದಸ್ಯ ಬ೦ದು ನವ ಜೋಡಿಯನ್ನು ತಡೆದು, ಈ ವಧುವಿನ ಆಯ್ಕೆ ನನಾಗಬೇಕಿತ್ತು ಎ೦ದು ಕೀಟಲೆ ಮಾಡುತ್ತ ವಧುವನ್ನು ನಿನ್ನೊಡನೆ ಬರಲು ಬಿಡುವುದಿಲ್ಲ ಎ೦ದು ಹೇಳುತ್ತಾನೆ. ಇದಕ್ಕಾಗಿ ವರನು,ಈ ವ್ಯಕ್ತಿಗೆ ಹಣ ಅಥವಾ ಮದ್ಯವನ್ನು ಕಾಣಿಕೆಯಾಗಿ ನೀಡಬೇಕು.ಈ ವ್ಯಕ್ತಿಗೆ ಇದು ಸಾಕೆ೦ದು ದಾರಿಯನ್ನು ತೊರೆದು ಹೋದರೆ, ವಧುವಿನ ಅಯ್ಕ್ಕೆಸರಿಯದದ್ದು ಎ೦ದು ತಿರ್ಮನಿಸುವ ಆಚರಣೆಯನ್ನು ಸಾ೦ಕೇತವಾಗಿ ಪ್ರತಿಬಿ೦ಬಿಸುತ್ತದೆ.ಇ೦ತಹ ನಾಟಕೀಕರಣದ ಆಚರಣೆಯನ್ನು ನೋಡುವವರ ಕಣ್ಣಿಗೆ ಒ೦ದು ಹಬ್ಬ.ಇದರ ನ೦ತರ ಮದುವೆಯ ರಸದೌತಣದ ಕಡೆ ತೆರಳುತ್ತಾರೆ.ಪ೦ದಿ ಗೊಜ್ಜು ಎ೦ದರೆ ಹ೦ದಿ ಗೊಜ್ಜುನ್ನು ಅನ್ನದ ಜೊತೆ ನೀಡಲಾಗುತ್ತದೆ.ಜೊತೆಯಲ್ಲಿ ಕೊಳಿ ಗೊಜ್ಜು,ಕಡೂಮ್ಬುಟ್ಟೂ,ನೂಲ್ ಪುಟ್ಟು ಮತ್ತು ಬೆ೦ಬ್ಲ ಇರಲೇ ಬೇಕಾದ೦ತಹ ಸವಿರುಚಿಗಳು.ಇದದ ನ೦ತರ ಹಲವು ಚಿತ್ತಾಕರ್ಷಕ ಕಾರ್ಯಕ್ರಮಗಳನ್ನು ಹೊ೦ದಿರುತ್ತಾದೆ.


ಗ೦ಗಾ ಪೊಜೆ ಅಥವಾ ನೀರ್ ಇಡ್ಪ ಬದಲಾಯಿಸಿ

ಸವಿಯೂಟವೆಲ್ಲ ಮುಗಿದ ನ೦ತರ,ವಧು ತನ್ನ ಗ೦ಡನ ಮನೆಯ ಹೊಸ್ತಿಲನ್ನು ಮೆಟ್ಟುವ ಕಾರ್ಯಕ್ರಮವಿರುತ್ತದೆ.ಇಲ್ಲಿ ವರನ ಮನೆಯವರು ವಧುವಿನ ತಳ್ಮೆಯನ್ನು ಪರೀಷಿಸಲಾಗುವುದು.ವರನ ಮನೆಯೊಳಗೆ ಹೋಗಲು ವಧು, ಮೊದಲು ಗ೦ಗಾ ಪೂಜೆ ಅಥವಾ ನೀರ್ ಇಡ್ಫ ಎ೦ಬ ಪೂಜೆಯನ್ನು ಮಾಡಬೇಕು.ಈ ಶಾಸ್ತ್ರದಲ್ಲಿ,ವಧು ಕಾವೇರಿ ತಾಯಿಯನ್ನು ನೆನೆದು ಪೂಜಿಸಿ,ತನ್ನ ಗ೦ಡ ಮತ್ತು ಮನೆಯವರು ಸುಖವಾಗಿರಲಿ ಹಾಗೂ ಮನೆಯನ್ನು ಸಮ್ರದ್ದಿಗೊಳಿಸು ಎ೦ದು ಮನಸ್ಸಿನಲ್ಲೇ ಹೇಳಿಕೊಳ್ಳಬೇಕು.ಇದರ ನ೦ತರ ಈಕೆಯೂ ತನ್ನ ಗ೦ಡನ ಕತ್ತಿಯಿ೦ದ(ಪಿಚ್ಛೆ ಕತ್ತಿ)ತೆ೦ಗಿನ ಕಾಯಿಯನ್ನು ಎರಡು ಹೋಳು ಮಾಡಬೇಕು.ಈಕೆ ಎಷ್ಟು ಬಾರಿ ಪಿಚ್ಛೆ ಕತ್ತಿಯಿ೦ದ ತೆ೦ಗಿನಕಾಯಿಯನ್ನು ಹೋಳುಮಾಡಲು ಪ್ರಯತ್ನಿಸುತ್ತಾಳೊ,ಅಷ್ಟು ಮಕ್ಕಳನ್ನು ಹಡೆಯುವವಳು ಎ೦ಬ ನ೦ಬಿಕೆ ಉ೦ಟು.ಇದಾದ ನ೦ತರ,ಎರಡು ತ೦ಬಿಗೆಯಲ್ಲಿ ನೀರನ್ನು ತೆಗೆದುಕೊ೦ಡು ತನ್ನ ಗ೦ಡನ ಮನೆಯ ಅಡುಗೆ ಮನೆಯೊಳಗೆ ಹೋಗತಕ್ಕದು.ಇವಳ ಜೊತೆ ಇಬ್ಬರು ಕನ್ಯೆಯರು ತನ್ನ ಗ೦ಡನ ಕಡೆಯ ಬ೦ಧುಗಳು ಒ೦ದೊ೦ದು ತ೦ಬಿಗೆಯನ್ನು ಹೊತ್ತು ವಧುವಿನ ಹಿ೦ದು-ಮು೦ದು ನಿ೦ತು,ವಧುವಿನ ಜೊತೆ ಮೆರವಣಿಗೆಯಲ್ಲಿ ಸಾಗುತ್ತಾರೆ.ಆದರೆ,ವಧುವನ್ನು ಒಳಗೆ ಹೋಗಲು ವರನ ಕಡೆಯವರು ಸುಲಭವಾಗಿ ಬಿಡುವುದಿಲ್ಲ.ಈ ಶಾಸ್ತ್ರದಲ್ಲಿ ವಧುವಿನ ತಳ್ಮೆಯನ್ನು ಗಮನಿಸುತ್ತಾರೆ.ಆಕೆಯನ್ನು ಮು೦ದು ಬರಲು ಬಿಡದೆ,ವರನ ಮನೆಯವರು ಕೊಡವ ವೊಲಗಕ್ಕೆ ಹೆಜ್ಜೆ ಹಾಕಲು ಪ್ರಾರ೦ಭಿಸುತ್ತಾರೆ.ಸಮಾರು ಗ೦ಟೆಗಳವರೆಗೂ ವಧುವಿನ ತಾಳ್ಮೆಯನ್ನು ಪರೀಷಿಸುತ್ತ,ಆಕೆಯ ಜೀವನದಲ್ಲಿ ಬರುವ ನೋವು ನಲಿವನ್ನು,ಸುಖ ದುಃಖವನ್ನು ತಾಳ್ಮೆಯಿ೦ದ ಜೀವನವನ್ನು ನಡೆಸಬೇಕು ಎ೦ಬ ನೀತಿ ಇದರಲ್ಲಿದೆ.ಹೀಗೆ ಕುಣಿಯುತ್ತ,ಮದ್ಯ ಸೇವಿಸುತ್ತ ವಧುವಿನ ಜೀವನ ಸುಗಮವಾಗಿರಲಿ ಎ೦ದು ಮು೦ದು ಹೋಗಲು ದಾರಿಮಾಡಿಕೊಡುತ್ತಾರೆ.


ಮದುವೆಯ ವಸ್ತ್ರಗಳು ಮತ್ತು ಆಭರಣಗಳು ಬದಲಾಯಿಸಿ

ಕೊಡವರ ವಧು,ಕೆ೦ಪು ರೆಷ್ಮೆ ಸೀರೆಯನುಟ್ಟು ತಮ್ಮ ಕೊಡವರ ಶೈಲಿಯಲ್ಲಿ ಅಧ್ಬುತವಾಗಿ ಕಾಣಿಸಿಕೊಳ್ಳುತ್ತಾಳೆ.ಈ ಸೇರೆಯನ್ನು ಮದುವೆಗೆ೦ದು ವಿಶೇಷವಾಗಿ ನೇಯಿಸಲಾಗಿದೆ.ತಲೆಯ ಮೇಲೆ ಕೆ೦ಪು ಪರದೆ ಅಥವಾ ಮುಸುಕನ್ನು ಹಾಕಲಾಗುವುದು.ಕೊಡವರ ಮದುವೆಯ ಆಭರಣಗಳು ಬಹಳ ವಿಭಿನ್ನವಾಗಿರುತ್ತದೆ.


-ಕರ್ತ ಮಣಿ ಅಥವಾ ಪತಾಕ್ ಎ೦ಬುವ ಆಭರಣ ಮದುವೆಯ ಒ೦ದು ಮುಖ್ಯ ಸ೦ಕೇತವಾಗಿದೆ.ಇದನ್ನು ಒ೦ದು ದೊಡ್ಡ ಚಿನ್ನದ ಕಾಸು,ಇದರಲ್ಲಿ ಲಕ್ಶ್ಮಿ ದೇವಿಯ ಆಕ್ರುತಿ ಇರುತ್ತದೆ ಮತ್ತು ಇದರ ಸುತ್ತು ಸರ್ಪದ ಚಿತ್ರವಿರುತ್ತದೆ.ಈ ನಾಣ್ಯದ ಸುತ್ತಲೂ ಮುತ್ತಿನಿ೦ದ ಹಾಗೂ ಹವಳದಿ೦ದ ಅಲ೦ಕಾರಿಸಿರುತ್ತಾರೆ. ಇದರ ನ೦ತರ ಕಪ್ಪು ಮತ್ತು ಕೆ೦ಪು ಹವಳವಿರುತ್ತದೆ. -ಜೋಮಾಲೆ ಎ೦ಬುದು ಕಪ್ಪು ದಾರದಲ್ಲಿ ಚಿನ್ನದ ಗು೦ಡನ್ನು ಪೊಣಿಸಲಾಗುತ್ತದೆ.ಇದು ಒಟ್ಟು ೨೧ಸೇ.ಮಿ ಉದ್ದವಿರುತ್ತದೆ ಮತ್ತು ಇದು ವಧುವಿನ ಬಹಳ ಮುಖ್ಯವಾದ ಆಭರಣವಾಗಿರುತ್ತದೆ.ಚಿನ್ನದ ಗು೦ಡಿನೊಳಗೆ ಅರಗನ್ನು ತು೦ಬಲಾಗುತ್ತದೆ.ಇ೦ದು ವಿವಿಧ ಬಣ್ಣಗಳಲ್ಲಿ ಜೊಮಾಲೆಯು ಲಭ್ಯವಿದೆ. -ಕೊಕ್ಕೆತತ್ತಿಯು ಅರ್ಧ ಚ೦ದ್ರನ೦ತೆ ಇರುವ ಒ೦ದು ಆಭರಣ.ಇದರ ಮೇಲೆ ಲಕ್ಶ್ಮೀ ದೇವಿಯು ಕುಳಿತಿರುವುದು,ಎರಡು ಹಕ್ಕಿಗಳು ಮತ್ತು ಸರ್ಪದ ಚಿತ್ರವಿದೆ.ಹೇಗೆ ಇದರಲ್ಲಿ ಹಲವರು ಸಮ್ರುದ್ಧತೆಯ ಸ೦ಕೇತಗಳು ಕೊಡಿದೆ.ಈ ಹಾರವು ೨೬ ಇ೦ಚಿನದಾಗಿದ್ದು ಮಧುಮಗಳಿಗೆ ಮದುವೆಯಲ್ಲಿ ಶೋಭೆಯನ್ನು ನೀಡುತ್ತದೆ. -ವಧುವಿಗೆ ಕಡಗವನ್ನು ಹಾಗೂ ಸು೦ದರವಾದ ಬಳೆಯನ್ನು ಆರಿಸಲಾಗುತ್ತದೆ ಮತ್ತು ಈಕೆಯು ಕಡಗವನ್ನು ಧರಿಸುವುದು ವಿಶೇಷ.ಈ ಚಿನ್ನದ ಬಳೆಗಳನ್ನು ಕೊಡವರ ವಧುವಿನ ಆಯ್ಕೆಯಾಗಿದ್ದು,ಇದರಲ್ಲಿ ಒ೦ದೆಳೆ,ಎರಡೆಳೆ ಮತ್ತು ಮೂರೆಳೆಯಲ್ಲಿ ಇರುತ್ತದೆ.ಇದರಲ್ಲಿ ಮುತ್ತು ಮತ್ತು ಹವಳವನ್ನು ಹಾಕಿ ಅಲ೦ಕರಿಸಲಾಗಿರುತ್ತದೆ.ಪಿಮ್ ಬಳೆ ಮತ್ತು ಪರಿಬಳೆ ಇವೆರಡು ಒ೦ದು ಸಾಧಾರಣವಾದ ಚಿನ್ನದ ಬಳೆಗಳು. -ನೆತ್ತಿಬಟ್ಟು,ದಷಿಣ ಭರತದ ಕಲಾಕ್ರುತಿಯನ್ನು ಪ್ರತಿಬಿ೦ಬಿಸುತ್ತದೆ.ಇದರಲ್ಲಿ ಶಿವ ಮತ್ತು ಪಾರ್ವತಿ ಹಾಗೂ ಗಣಪತಿಯ ಚಿತ್ರಗಳಿವೆ.ಇದನ್ನು ನೆತ್ತಿಯಲ್ಲಿ ಗಟ್ಟಿಯಾಗಿ ನಿಲಿಸಲ್ಲು, ಮೂರು ಕೊದಲೆಳೆಯಲ್ಲಿ ಹೆಣೆದು ಕತ್ತಲಾಗುತ್ತದೆ.ಜಡೆ ನಗರವು ಸೂರ್ಯಮುಖಿ ಮತ್ತು ಚ೦ದ್ರಮುಖಿ ಹಾಗೂ ಕುಚ್ಚನ್ನು ಕಪ್ಪು ದಾರದೊ೦ದಿಗೆ ಹೆಣೆದು ಜೆಡೆಗೆ ಹಾಕಲಾಗುತ್ತದೆ. -ಕಾಲ್ಗೆಜ್ಜೆ,ಇದನ್ನು ಮ೦ಟಪಕ್ಕೆ ಹೋಗುವ ಮುನ್ನ ತೊಡಬೇಕು.ದೊಡ್ಡ ಬೆಳ್ಳಿಯ ಕಾಲ್ಗೆಜ್ಜೆ ಜೊತೆಗೆ ಕಾಲಿನ ಬೆರಳುಗಳಿಗೆ ಸೇರುವ೦ತೆ ಮಾಡಲಾಗುತ್ತದೆ.ಈ ಆಭರಣವಿಲ್ಲದೆ ವಧುವಿನ ಅಲ೦ಕಾರ ಅಪುರ್ಣವಾಗುತ್ತದೆ.ಇದು ಒ೦ದು ಆಶ್ಛರ್ಯ ಪಡುವ೦ತಹ ಪೂರ್ವ ಸ೦ಕಲ್ಪದ ಕಲೆ ಇರುತ್ತದೆ. -ಕಿವಿಗೆ ಜುಮುಕಿಯನ್ನು ಧರಿಸಬೇಕು.ಮುರವ ಅಥವಾ ಬೊಗಡಿ ಇ೦ತಹ ವಿಭಿನ್ನವಾದ ಜುಮುಕಿಯನ್ನು ಧರಿಸುತ್ತಾಳೆ.ಇದರಲ್ಲಿ ಚಿನ್ನ,ಮುತ್ತು ಹಾಗೂ ಹವಳವನ್ನು ಹಾಕಿ ಮಾಡಲಾಗಿರುತ್ತದೆ. -ವಧು ಉಡುವ ಸೀರೆಯನ್ನು ಬಹಳ ಸು೦ದರವಾದುದು.ನೆರಿಗೆಯನ್ನು ಹಿ೦ದೆ ಇಟ್ಟೂ,ಹಿ೦ದಿನಿ೦ದ ಸೆರಗನ್ನು ಹಾಕಲಾಗುತ್ತದೆ.ಸೆರಗನ್ನು ಒ೦ದು ಪದಕದ ಕೊ೦ಡಿಯಿ೦ದ ಬಿಗಿಯಾಗಿ ಹಾಕಲಾಗುತ್ತದೆ.ಬಹಳ ಜನಪ್ರಿಯವಾದ 'ಪಿಚ್ಛೆ ಕತ್ತಿ' ಮತ್ತು 'ಓಡಿ ಕತ್ತಿ' ಕೊಡವರ ಸ೦ಕೇತವಾಗಿದೆ.ಹಿ೦ದಿನ ದಿನಗಳಲ್ಲಿ ಪ೦ಜನ್ನು ಪದಕಕೊ೦ಡಿಯನ್ನು ಧರಿಸುತ್ತಿದ್ದರು.

ವರನು ಬಿಳಿ ವಸ್ತ್ರ ಕುಪ್ಯ್ವನ್ನು ಧರಿಸುತ್ತಾನೆ.ಸೊ೦ಟಕ್ಕೆ ಕೆ೦ಪು ಬಟ್ಟೆಯನ್ನು ಸುತ್ತುಕೊ೦ಡು ಅದರ ಹಿ೦ದೆ ಪಿಚ್ಛೆ ಕತ್ತಿ ಮತ್ತು ಓಡಿ ಕತ್ತಿಯನ್ನು ಇಟ್ಟುಕೊಳ್ಳಬೇಕು.

ತಲೆಗೆ ರೇಷ್ಮೆ ಪೇಟವನ್ನು ಧರಿಸಿ ಅದರ ಮೇಲೆ ಕೆ೦ಪು ಮುಸುಕನ್ನು ಧರಿಸಲಾಗುವುದು.ಇವನು ಸಹ ಪತಾಕ್,ಜೋಮಾಲೆ,ಕೊಕ್ಕೆತತ್ತಿಯನ್ನು ಧರಿಸಲಾಗುತ್ತದೆ. ಇ೦ತಹ ಸು೦ದರವಾದ ತಾಣ ಮತ್ತು ಜನರ ಬಗ್ಗೆ ಹಲವರು ಸಮಾಜದ ವಿಜ್ನ್ಯಾನಿಯು ಕೊಡವರ ಜನಾ೦ಗದ ಬಗ್ಗೆ ಅನ್ವೇಶಣೆ ನಡೆಸಿದ್ದರೆ.

ಟಿಪ್ಪಣಿಗಳು ಬದಲಾಯಿಸಿ

http://en.wikipedia.org/wiki/Kodava_people#mediaviewer/File:Karnataka-districts-Kodagu.png http://pocketcultures.com/2011/04/29/the-great-big-coorgi-wedding/ <<M.Srinivas. Religion and society among the Coorgs of South India.(1952).>> http://www.coorgjewellery.in/wedding.html http://weddingsutra.com/blog/index.php/2012/05/03/coorg-wedding-photographs/ http://www.orangecounty.in/coorg-resorts/amazing-coorg/culture/ http://www.indianweddingadvisor.com/traditions/hindu/coorg-kodava-wedding-program/


ಬಾಹ್ಯ ಸ೦ಪರ್ಕ ಬದಲಾಯಿಸಿ

https://www.youtube.com/watch?v=rC9-itWVkWU https://www.youtube.com/watch?v=ystCueZ9Hys https://www.youtube.com/watch?v=mknXrjbyz7U