ಸದಸ್ಯ:Suhph/ನನ್ನ ಪ್ರಯೋಗಪುಟ

ಅಂಬುತೀರ್ಥ ಅಂಬುತೀರ್ಥ ಈ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಯಿಂದ ಸುಮಾರು ೧೬ ಕಿಮೀ ದೂರದಲ್ಲಿದೆ. ಇಲ್ಲಿರುವ ಶಿವ ದೇವಾಲಯದಲ್ಲಿರುವ ಶಿವನ ಪಾದದ ಬಳಿಯಿಂದ ಹುಟ್ಟುವ ನದಿ ಅಲ್ಲಿರುವ ಕೊಳ್ಳವೊಂದಕ್ಕೆ ಹರಿದು ನಂತರ ಗುಪ್ತಗಾಮಿನಿಯಾಗಿ ಹರಿದು ನದಿಯಾಗಿ, ನಂತರ ಹಲವು ಉಪನದಿಗಳಿಂದ ಕೂಡಿಕೊಂಡು ಸುಮಾರು ೧೨೮ ಕಿಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಶರಾವತಿ ನದಿಯಿಂದಲೇ ವಿಶ್ವವಿಖ್ಯಾತ ಜೋಗ ಜಲಪಾತವು ಸೃಷ್ಟಿಯಾಗಿರುವುದರಿಂದ ಈ ನದಿಗೆ ಪ್ರಾಮುಖ್ಯತೆ ಇದೆ.

ತ್ರೇತಾಯುಗದಲ್ಲಿ ರಾಮನು ಅರಣ್ಯವಾಸದಲ್ಲಿದ್ದಾಗ ಸೀತಾ ಸಮೇತನಾಗಿ ಇಲ್ಲಿ ನೆಲೆಸಿದ್ದನಂತೆ. ಆ ಸಮಯದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ, ಬಾಯಾರಿಕೆ ನೀಗಿಸುವ ಪ್ರಯುಕ್ತ ಹಾಗೂ ಇತರ ಕಾರ್ಯಗಳಿಗಾಗಿ ಬೇಕಾಗುವ ನೀರನ್ನು ಹೊಂದುವ ಸಲುವಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬುತೀರ್ಥವೆಂದು ಹೆಸರಾಗಿದೆ. ಶ್ರೀರಾಮನ ಶರದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆಯಂತೆ. ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸೀತಾ ಸಮೇತನಾಗಿ ಪೂಜಿಸುತ್ತಿದ್ದನಂತೆ.