ಸದಸ್ಯ:Shravya samrat/ನನ್ನ ಪ್ರಯೋಗಪುಟ

ಮಹಾಲಿಂಗದೇವ ಬದಲಾಯಿಸಿ

ಕನ್ನಡ ಸಾಹಿತ್ಯದ ಬೆಳವಣಿಗೆಯ ಮಹತ್ತ್ವದ ಘಟ್ಟಗಳಲ್ಲಿ ಪ್ರೌಢದೇವರಾಯನ ಕಾಲವೂ ಒಂದು. ಹನ್ನೆರಡನೆಯ ಶತಮಾನದ ವೀರಶೈವ ಸಿದ್ಧಾಂತಕ್ಕೆ ಒಂದು ವಿಶಾಲವಾದ ನೆಲೆಗಟ್ಟು ಪ್ರಾಪ್ತವಾದ ಕಾಲ ಇದು. ವಚನಗಳನ್ನು ಸಂಗ್ರಹಿಸುವ, ಸಂಯೋಜಿಸುವ,ಟೀಕೆ ವ್ಯಾಖ್ಯಾನಗಳನ್ನು ಬರೆಯುವ ಕೆಲಸ ಆಗ ನಡೆಯಿತು. ವೀರಶೈವಧರ್ಮದ ಪ್ರತಿಪಾದನೆ, ವಿವೇಚನೆ, ಸಮರ್ಥನೆ ಹಾಗೂ ಆ ಮೂಲಕ ಅದರ ಪುನರುಜ್ಜೀವನ ಕಾರ್ಯ ಆ ಮೂಲಕ ಅದರ ಪುನರುಜ್ಜೀವನ ಕಾರ್ಯ ಆ ಕಾಲದಲ್ಲಿ ಆಯಿತು.ಹೀಗೆ ವಚನಗಳ ಮೂಲಕ ವೀರಶೈವಧರ್ಮದ ಸಿದ್ಧಾಂತಗಳನ್ನು ವಿವರಿಸುವ ವಿನೂತನ ಕ್ರಮಕ್ಕೆ ನಾಂದಿ ಹಾಡಿದವರಲ್ಲಿ ಮಹಾಲಿಂಗದೇವ ಒಬ್ಬ.

ಇತಿವೃತ್ತ ಬದಲಾಯಿಸಿ

ಮಹಾಲಿಂಗನ ಕಾಲದ ಬಗ್ಗೆ ಹೆಚ್ಚು ಭಿನ್ನಾಭಿಪ್ರಾಯಗಳಿಲ್ಲ. ಹದಿನೈದನೆಯ ಶತಮಾನದಲ್ಲಿ (೧೪೧೯-೧೪೪೬) ಪ್ರೌಢದೇವರಾಯನ ಸಾಮ್ರಾಜ್ಯದಲ್ಲಿ ಜಕ್ಕಣಾರ್ಯ ದಂಡನಾಯಕ ಮತ್ತು ಮಂತ್ರಿಯಾಗಿದ್ದನು.ಇವನ ಪ್ರಾರ್ಥನೆಯ ಮೇರೆಗೆ ಮಹಾಲಿಂಗದೇವ ಫಲಿತಾಂಶದ ಮೇರೆಗೆ ಮಹಾಲಿಂಗದೇವ ಕೃತಿ ರಚಿಸಿದುದಾಗಿ ತಿಳಿದುಬರುವುದರಿಂದ ಈತನ ಕಾಲ ೧೪೨೫ ಎಂದು ಬಿನ್ನವಿಸಲು ಆತನಿಗೆ ಸತ್ಪ್ರೇಮದಿಂದ ನಿರೂಪಿಸಿದ ಕೃತಿ ಏಕೋತ್ತರ ಶತಸ್ಥಲ ಎಂಬುದು ಆ ಕೃತಿಯ ಆರಂಭದಲ್ಲಿ ಬಂದಿದೆ. ಅದು ಮಹಾಲಿಂಗದೇವನ ಕ್ರತಿಯೆಂಬುದರಲ್ಲಿ ಯಾವ ಭಿನ್ನಾಭಿಪ್ರಾಯಗಳಿಲ್ಲ. ಮಹಾಲಿಂಗದೇವ ತನ್ನ ಕಾಲದ ವೀರಶೈವ ತತ್ತ್ವ ಸಾಹಿತ್ಯಕ್ಕೆ