ಸದಸ್ಯ:Shivaprasad Haluvalli/ನನ್ನ ಪ್ರಯೋಗಪುಟ2

ಕಳಸ ಬದಲಾಯಿಸಿ

ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕಾದ ಕಳಸವು ಧಾರ್ಮಿಕ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ಭದ್ರಾ ನದಿಯು ಕಳಸವನ್ನು ಮೂರು ದಿಕ್ಕಿನಿಂದ ಆವರಿಸಿಕೊಂಡು ಹರಿಯುತ್ತದೆ. ಇದರೊಂದಿಗೆ ದಕ್ಷಿಣದಲ್ಲಿ ದುಗ್ಗಪ್ಪನ ಕಟ್ಟೆ(ಸಣ್ಣ ಗುಡ್ಡ)ಯಿಂದ ಆವೃತವಾಗಿದೆ. ಸಮುದ್ರ ಮಟ್ಟದಿಂದ ಕಳಸವು ೮೦೭ ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿAದ ಕಳಸಕ್ಕೆ ೯೨ ಕಿಲೋ ಮೀಟರ್ ಅಂತರವಿದೆ.

ಕಳಸವು ದೇವಸ್ಥಾನಗಳ ಪಟ್ಟಣವೆನ್ನಬಹುದು. ಕಳಸೇಶ್ವರ ಸ್ವಾಮಿ ಮತ್ತು ಪರಿವಾರ ದೇವರುಗಳ ದೇವಸ್ಥಾನಗಳಲ್ಲದೆ ವಿವಿಧ ಧರ್ಮಗಳ ಹಲವಾರು ಧಾರ್ಮಿಕ ಕೇಂದ್ರಗಳನ್ನು ಕಳಸದಲ್ಲಿ ಕಾಣಬಹುದು. ತೀರ್ಥಯಾತ್ರೆಯ ದೃಷ್ಟಿಯಿಂದ ಬರುವ ಪ್ರವಾಸಿಗರಿಗೆ ಕಳಸದ ಸುತ್ತಮುತ್ತಲಿನ ಯಾತ್ರಾಸ್ಥಳಗಳಾದ ಹೊರನಾಡು, ಶೃಂಗೇರಿ ಮುಂತಾದ ಕ್ಷೇತ್ರಗಳು ಸಮೀಪದಲ್ಲಿರುವುದು ಅನುಕೂಲವಾಗಿದೆ.

ಕಳಸವು ಪುರಾಣದಲ್ಲಿ : ಬದಲಾಯಿಸಿ

ಸ್ಥಳೀಯ ಪುರಾಣಗಳ ಪ್ರಕಾರ ಸ್ಕಂದ ಪುರಾಣದ ಘಟನೆಯೊಂದನ್ನು ಕಳಸದ ಹುಟ್ಟಿಗೆ ಆಧಾರವಾಗಿ ನೀಡಲಾಗುತ್ತದೆ. ಅದರಂತೆ, ಶಿವ ಮತ್ತು ಪಾರ್ವತಿಯರ ಕಲ್ಯಾಣ ಸಮಯದಲ್ಲಿ ದೇವಾಧಿ ದೇವತೆಗಳು ಅದಕ್ಕೆ ಸಾಕ್ಷಿಯಾಗಲು ಹಿಮಾಲಯದಲ್ಲಿ ಸೇರುತ್ತಾರೆ. ಅದರಿಂದಾಗಿ ಭೂಮಿಯ ಸಮತೋಲನವು ತಪ್ಪಲು, ಆ ಭಾರವನ್ನು ಸರಿದೂಗಿಸಲು ಋಷಿವರೇಣ್ಯರಾದ ಅಗಸ್ತ್ಯಯರನ್ನು ಕೇಳಿಕೊಳ್ಳಲಾಗುತ್ತದೆ. ಆದರೆ ಅವರೂ ಕಲ್ಯಾಣಕ್ಕೆ ಸಾಕ್ಷಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪರಶಿವನು ಅಗಸ್ತ್ಯರಿಗೆ ದಿವ್ಯದೃಷ್ಟಿ ನೀಡಿ ಅವರನ್ನು ದಕ್ಷಿಣಕ್ಕೆ ಕಳಿಸುತ್ತಾನೆ. ಆಗ ಅಗಸ್ತ್ಯಯರು ಬಂದು ನೆಲೆ ನಿಂತ ಕ್ಷೇತ್ರವು ಕಳಸ ಎಂದು ನಂಬಲಾಗುತ್ತದೆ. ಜೊತೆಗೆ ಕಾಶಿ(ವಾರಣಾಸಿ)ಗಿಂತ ಹೆಚ್ಚಿನ ಪುಣ್ಯವನ್ನು ಕಳಸವನ್ನು ದರ್ಶಿಸಿದಾಗ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

ಶಿವ ಪಾರ್ವತಿಯರ ಕಲ್ಯಾಣವನ್ನು ಪ್ರತೀ ವರ್ಷವೂ ಗಿರಿಜಾ ಕಲ್ಯಾಣವೆಂದು ಕಳಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಂದು ಅಹೋರಾತ್ರಿ ಈ ಮಹೋತ್ಸವವನ್ನು ವೈಭವಯುತವಾಗಿ ಆಚರಿಸಲಾಗುತ್ತದೆ.

ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವಸಿಷ್ಠರ ಆಶ್ರಮವು ಕಳಸದ ಸಮೀಪದಲ್ಲಿ ಇದ್ದಿತೆಂದು ಹೇಳಲಾಗುತ್ತದೆ.

ವ್ಯುತ್ಪತ್ತಿ: ಬದಲಾಯಿಸಿ

ಕಳಸ ಎಂಬ ಪದವು ಸಂಸ್ಕೃತ ಮೂಲವಾದ ‘ಕಲಶ’ದಿಂದ ಬಂದಿರಬಹುದೆAದು ಹೇಳಲಾಗಿದೆ. ಕಲಶವೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ದೇಗುಲಗಳ ವಾಸ್ತುಶಿಲ್ಪದಲ್ಲಿ ಗರ್ಭಗುಡಿಯ ಮೇಲಿರುವುದು. ಸಾಮಾನ್ಯ ಅರ್ಥದಲ್ಲಿ ಕಲಶವೆಂದರೆ ಪವಿತ್ರ ಪಾತ್ರೆ ಎನ್ನಬಹುದು. ಮೂರು ಕಡೆಯಿಂದ ಆವರಿಸಿರುವ ಭದ್ರೆ ಮತ್ತು ದಕ್ಷಿಣದಲ್ಲಿರುವ ದುಗ್ಗಪ್ಪನ ಕಟ್ಟೆಯಿಂದಾಗಿ ಎತ್ತರದಿಂದ ನೋಡಿದಾಗ ಪಟ್ಟಣವು ಮಡಕೆಯನ್ನು ಹೋಲುವಂತಿರುವುದರಿAದ ಕಳಸವೆಂಬ ಹೆಸರು ಬಂದಿದೆ ಎಂ ಪ್ರತೀತಿ ಇದೆ. ಬೆಟ್ಟದ ತಳದಲ್ಲಿ ಶ್ರೀ ಕಳಸೇಶ್ವರ ಸ್ವಾಮಿಯ ದೇವಾಲಯವಿದೆ.

ಕಳಸದ ಭೌಗೌಳಿಕ ಮಾಹಿತಿಗಳು : ಬದಲಾಯಿಸಿ

ಕಳಸವು ಮೂಲಭೂತವಾಗಿ ಹೊಂದಿರುವುದು ಕೃಷಿ ಆರ್ಥಿಕತೆಯನ್ನು. ಭದ್ರಾ ನದಿಯೊಂದಿಗೆ ವಿವಿಧ ನದಿ ಮೂಲಗಳು ನೀರಿನ ಅಗತ್ಯವನ್ನು ಪೂರೈಸುತ್ತವೆ.

ಕಳಸದ ಕೃಷಿ ಮತ್ತು ಆಹಾರ ಬೆಳೆಗಳು : ಬದಲಾಯಿಸಿ

ಕೃಷಿಯನ್ನು ಕಳಸವು ಮೂಲಭೂತ ಕಾರ್ಯವಾಗಿ ಹೊಂದಿದ್ದರೂ ಆಹಾರ ಬೆಳೆಗಳನ್ನು ಜನರು ಬೆಳೆಯುವುದು ಸಣ್ಣಮಟ್ಟದಲ್ಲಿ. ಭತ್ತವು ಅದರಲ್ಲಿ ಪ್ರಮುಖವಾದುದು. ಉಳಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಅಡಿಕೆ, ಕಾಫಿ, ಕಾಳುಮೆಣಸು ಮತ್ತು ವಿವಿಧ ರೀತಿಯ ಸಾಂಬಾರ ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಆಯುರ್ವೇದ ಔಷದ ಮೂಲಿಕೆಗಳನ್ನೂ ಬೆಳೆಯಲಾಗುತ್ತದೆ.

ಪಶ್ಚಿಮ ಘಟ್ಟ ಮತ್ತು ಕಳಸ : ಬದಲಾಯಿಸಿ

ಪಶ್ಚಿಮ ಘಟ್ಟದ ಹೃದಯಭಾಗದಲ್ಲಿ ಕಳಸವಿದೆ. ವರ್ಷ ಪೂರ್ತಿ ಹಿತವಾದ ವಾತಾವರಣವಿದ್ದರೂ ಬೇಸಗೆಯಲ್ಲಿ ತಾಪ ತುಸು ಹೆಚ್ಚಿರುತ್ತದೆ.

ಕಳಸದಲ್ಲಿರುವ ದೇವಸ್ಥಾನಗಳು: ಬದಲಾಯಿಸಿ

ಕಳಸೇಶ್ವರ ದೇವಾಲಯವು ಪ್ರಮುಖವಾಗಿದ್ದು ಇದು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಉಳಿದಂತೆ ಇನ್ನೂ ಹಲವಾರು ದೇವಾಲಯಗಳು ಕಳಸದಲ್ಲಿವೆ.

-      ಗಿರಿಜಾಂಬಾ ದೇವಾಲಯ

-      ಹನುಮಾನ್ ದೇವಾಲಯ

-      ವೆಂಕಟರಮಣ ದೇವಾಲಯ

-      ಮಹಾಲಕ್ಷ್ಮಿ ದೇವಾಲಯ

-      ಶ್ರೀ ಚಂದ್ರನಾಥ ಸ್ವಾಮಿ ದೇವಾಲಯ

-      ವಸಿಷ್ಠ ಆಶ್ರಮ

ಕಳಸದ ಪಂಚ ತೀರ್ಥಗಳು : ಬದಲಾಯಿಸಿ

ಕಳಸವು ಸುತ್ತಮುತ್ತಲ ಎಂಟು ಕಿಲೋಮೀಟರ್ ವ್ಯಾಪ್ತಿಯೊಳಗೆ ಐದು ಪ್ರಮುಖ ತೀರ್ಥಗಳನ್ನು ಒಳಗೊಂಡಿದೆ. ಇವುಗಳನ್ನು ಒಟ್ಟಾಗಿ ಪಂಚ ತೀರ್ಥಗಳೆಂದು ಕರೆಯಲಾಗುತ್ತದೆ. ಪ್ರತೀ ತೀರ್ಥವೂ ಪುರಾಣದೊಂದಿಗೆ ಸಂಬಂಧವನ್ನು ಹೊಂದಿದ್ದು ಯಾತ್ರಾರ್ಥಿಗಳು ಅವುಗಳಲ್ಲಿ ಮಿಂದೆದ್ದು ಪುನೀತರಾಗುತ್ತಾರೆ.

-      ವಸಿಷ್ಠ ತೀರ್ಥ

-      ನಾಗ ತೀರ್ಥ

-      ಕೋಟಿ ತೀರ್ಥ

-      ರುದ್ರ ತೀರ್ಥ

-      ಅಂಬಾ ತೀರ್ಥ

ಊರ ಹಬ್ಬಗಳು : ಬದಲಾಯಿಸಿ

ಸಂಪ್ರದಾಯ ಮತ್ತು ಆಚರಣೆಯಲ್ಲಿ ನಡೆದುಬಂದಿರುವAತೆ ಕಳಸದಲ್ಲಿ ಊರ ಹಬ್ಬವಾಗಿ ವಿವಿಧ ಉತ್ಸವಗಳನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾAಗದ ಸಹಾಯದಿಂದ ದಿನವನ್ನು ಗುರುತಿಸಲಾಗುತ್ತದೆ. ಪ್ರತೀ ಉತ್ಸವದಲ್ಲಿಯೂ ದೇವಾಲಯದ ಉತ್ಸವ ಮೂರ್ತಿಯನ್ನು ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಮಾಡಿ ಮರಳಿ ದೇವಾಲಯಕ್ಕೆ ತರಲಾಗುತ್ತದೆ. ಉತ್ಸವಗಳಲ್ಲಿ ಪ್ರಮುಖವಾದುವೆಂದರೆ

- ಗಿರಿಜಾ ಕಲ್ಯಾಣ : ಶಿವ ಮತ್ತು ಪಾರ್ವತಿಯರ ಕಲ್ಯಾಣವನ್ನು ಆಚರಿಸಲು ಗಿರಿಜಾ ಕಲ್ಯಾಣವನ್ನು ನಡೆಸಲಾಗುತ್ತದೆ. ಅಮಾವಾಸ್ಯೆಯಿಂದ ಹರಿಹರ ಹುಣ್ಣಿಮೆಯವರೆಗೆ ಗಿರಿಜಾ ಕಲ್ಯಾಣವನ್ನು ನಡೆಸಲಾಗುತ್ತದೆ. ಇದನ್ನು ಮೂರು ಕುಟುಂಬಗಳು ನಿರ್ವಹಿಸಿಕೊಂಡು ಬರುತ್ತಿವೆ. ಅವುಗಳೆಂದರೆ ಹೊಸಕೆರೆ, ಮಾವಿನಕೆರೆ ಮತ್ತು ಕುಣಿಕೆರೆ. ಈ ಮೂರು ಕುಟುಂಬಗಳು ಅಗಸ್ತ್ಯರೊಂದಿಗೆ ಬಂದು ನೆಲೆಯಾದವುಗಳು.

- ವರ್ಷಾವಧಿ ಜಾತ್ರಾ ಮಹೋತ್ಸವ

- ವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವ

ಇತರ ಜನಪದ ಆಚರಣೆಗಳು : ಬದಲಾಯಿಸಿ

ಕಳಸವು ಕರಾವಳಿ ಜಿಲ್ಲೆಗಳಿಗೆ ಸಮೀಪವಿರುವುದರಿಂದ ಸಂಸ್ಕೃತಿಯ ಕೊಡುಕೊಳ್ಳುವಿಕೆ ನಡೆದಿದೆ. ದೈವಾರಾಧನೆ, ಭೂತಕೋಲ, ಯಕ್ಷಗಾನ ಸೇರಿದಂತೆ ಹಲವಾರು ಸಂಸ್ಕೃತಿಗಳು ಕಲೆಗಳು ಜೀವನದಲ್ಲಿ ಬೆರೆತು ಹೋಗಿದೆ. ಇದರೊಂದಿಗೆ ವ್ಯಾವಹಾರಿಕವಾಗಿ ತುಳು ಭಾಷೆಯ ಬಳಕೆಯೂ ಚಾಲ್ತಿಯಲ್ಲಿದೆ.

ಕಳಸದ ಸುತ್ತ ಮುತ್ತಲುಗಳ ಊರುಗಳು : ಬದಲಾಯಿಸಿ

-      ರಾಷ್ಟ್ರೀಯ ಅಭಯಾರಣ್ಯವಾದ ಕುದುರೆಮುಖ (೨೧ಕಿಲೋಮೀಟರ್)

-      ಹೊರನಾಡು(೮ಕಿಮೀ)

-      ಹಳುವಳ್ಳಿ ( ಸುಬ್ರಹ್ಮಣ್ಯ ದೇವಾಲಯ- ೫ಕಿಮೀ)

-      ಬಾಳೆಹೊಳೆ (೧೨ಕಿಮೀ)

ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು : ಬದಲಾಯಿಸಿ

-      ಮಲೆನಾಡ ಮಡಿಲನಲ್ಲಿರುವುದರಿಂದ ಪರಿಸರ ಪ್ರವಾಸಿಗರನ್ನೂ ಕಳಸವು ಆಕರ್ಷಿಸುತ್ತಲಿದೆ. ಕುದುರೆಮುಖ, ಬಲ್ಲಾಳರಾಯನ ದುರ್ಗ, ಮೇರುತಿ ಗುಡ್ಡ, ಕ್ಯಾತನಮಕ್ಕಿ ಸೇರಿದಂತೆ ಹಲವಾರು ಸ್ಥಳಗಳು ಕಳಸದ ಸುತ್ತಮುತ್ತಲಿವೆ. ಉಳಿಯುವುದಕ್ಕೆ ತಕ್ಕಷ್ಟು ಹೋಮ್ ಸ್ಟೇ ಮತ್ತು ರೆಸಾರ್ಟ್ಗಳು ಸಹ ಲಭ್ಯವಿದೆ.

ಕಳಸ ತಾಲ್ಲೂಕು : ಬದಲಾಯಿಸಿ

ಮೂಡಿಗೆರೆ ತಾಲ್ಲೂಕಿನ ಹೋಬಳಿಯಾಗಿದ್ದ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸಬೇಕೆಂಬ ಬೇಡಿಕೆ ಕಳೆದ ಕೆಲ ದಶಕಗಳಿಂದ ಚಾಲ್ತಿಯಲ್ಲಿತ್ತು. ಅದರಂತೆ ಹಲವಾರು ಹೋರಾಟದ ಫಲವಾಗಿ ೨೦೧೯-೨೦ರ ವಾರ್ಷಿಕ ಆಯವ್ಯಯ ಮಂಡನೆಯಲ್ಲಿ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸುವ ಘೋಷಣೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾಡಿದ್ದಾರೆ.

ಇತರ ಊರುಗಳಿಂದ ಅಂತರ : ಬದಲಾಯಿಸಿ

ಕಳಸಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಸುಮಾರು ೧೧೦ಕಿಲೋಮೀಟರ್ ದೂರದಲ್ಲಿರುವ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ. ಬೆಂಗಳೂರಿನಿಂದ ಕಳಸಕ್ಕೆ ೩೧೦ ಕಿಲೋಮೀಟರ್ ದೂರವಿದೆ.